Showing posts with label ಎಂತಾದರೂ ಚಿಂತೆ ಬಿಡದು ನಿಶ್ಚಿಂತರಾದವರ purandara vittala ENTAADARU CHINTE BIDADU NISHCHINTARAADAVARA. Show all posts
Showing posts with label ಎಂತಾದರೂ ಚಿಂತೆ ಬಿಡದು ನಿಶ್ಚಿಂತರಾದವರ purandara vittala ENTAADARU CHINTE BIDADU NISHCHINTARAADAVARA. Show all posts

Sunday 21 November 2021

ಎಂತಾದರೂ ಚಿಂತೆ ಬಿಡದು ನಿಶ್ಚಿಂತರಾದವರ purandara vittala ENTAADARU CHINTE BIDADU NISHCHINTARAADAVARA

ರಾಗ ರೇವತಿ 


ಎಂತಾದರೂ  ಚಿಂತೆ ಬಿಡದು|

ನಿಶ್ಚಿಂತರಾದವರ ನಾನೊಬ್ಬರನು ಕಾಣೆ||


ಬ್ರಹ್ಮನಿಗೆ ಶಿರವೊಂದು ಭಿನ್ನವಾದ ಚಿಂತೆ

ರಕ್ಕಸರ ಗುರುವಿಗೆ ಕಣ್ಣಿಲ್ಲದ ಚಿಂತೆ|

ಮನ್ಮಥಗೆ ತನುಸುಟ್ಟು ಭಸ್ಮವಾದ ಚಿಂತೆ

ಮುಕ್ಕಣ್ಣ ಶಿವನಿಗೆ ತಿರಿದುಂಬೊ ಚಿಂತೆ||


ಧರ್ಮನಿಷ್ಠರಿಗೆ ಸುಖದೊಳಿರುವ ಚಿಂತೆ

ದುಷ್ಕರ್ಮಿಗಳಿಗೆ ಪರರ ಕೆಡಿಸುವ ಚಿಂತೆ|

ತಮ್ಮ ಅರ್ಜುನಗೆ ವೈರಿಯ ಕೊಲ್ಲುವ ಚಿಂತೆ

ಅಣ್ಣ ಭೀಮನಿಗೆ ಅನ್ನ ಸಾಲದ ಚಿಂತೆ||


ಭಕ್ತರಿಗೆ ಗುರುವಿನಲಿ ಮುಕ್ತಿ ಪಡೆಯುವ ಚಿಂತೆ

ಮುಕ್ತರಿಗೆ ಅನುಕ್ಷಣವು ಹರಿದರ್ಶನದ ಚಿಂತೆ|

ಯುಕ್ತಿ ಬಲ್ಲವರಿಗೆ ತತ್ತ್ವ ಹೇಳುವ ಚಿಂತೆ

ಶಕ್ತ ಪುರಂದರವಿಟ್ಠಲಗೆಮ್ಮ ಸಲಹುವ ಚಿಂತೆ||

***