..Kruti by ಸರಸಾಬಾಯಿ Sarasabai
ರಾಗ - : ತಾಳ -
ತಂದೆ ಶ್ರೀನಿವಾಸ ನೀನು ಬಂದು ಕಾಯೊ ಎನ್ನ
ಸ್ವಾಮಿ ನಿಂತು ಕಾಯೊ ಎನ್ನ ll ಪ ll
ಇಂದಿರೆ ರಮಣನೆ ಬಂಧನ ಬಿಡಿಸೆನ್ನ ತಂದೆ ಗೋವಿಂದ ll ಅ ಪ ll
ಖಗವಾಹನ ದೇವಾ ಸ್ವಾಮಿ ನಗೆಮೊಗದೊಡೆಯನೆ
ನಾಗಶಯನನೆ ಯೋಗಿಗಳರಸನೆ
ಬೇಗದಿ ಬಂದು ಕಾಯೊ ಎನ್ನನು ll ೧ ll
ಶೇಷಾಚಲ ನಿವಾಸ ಸ್ವಾಮಿ ಆಸೆಯ ಬಿಡಿಸೆನ್ನಾ
ವಾಸುದೇವ ನಿನ್ನ ಲೇಸು ಕರುಣವ ತೋರಿ
ನಿನ್ನ ದಾಸರ ಸಂಗದೊಳು ಇರಿಸೋ ಎನ್ನ ll ೨ ll
ರಾಮ ರಾಮ ಎಂಬೋ ನಿನ್ನ ನಾಮನೇಮದಿ
ನುಡಿಸೆನಗೆ ರಮಾವಲ್ಲಭವಿಟ್ಠಲ
ಭಾಮೆಯರರಸನೆ ಪ್ರೇಮವ ತೋರೋ ll ೩ ll
ಚಿತ್ರದುರ್ಗದ ಶ್ರೀಮತಿ ಸರಸಾಬಾಯಿಯವರ ರಚನೆ
***
ತಂದೆ ಶ್ರೀನಿವಾಸ ನೀನು ಬಂದು ಕಾಯೊ ಎನ್ನ
ಸ್ವಾಮಿ ನಿಂತು ಕಾಯೋ ಎನ್ನ ಪ.
ಇಂದಿರೆ ರಮಣನೆ ಬಂಧನ ಬಿಡಿಸೆನ್ನ ತಂದೆ ಗೋವಿಂದ ಅ.ಪ.
ಖಗವಾಹನ ದೇವಾ ಸ್ವಾಮಿ ನಗೆಮೊಗದೊಡೆಯನೆ
ನಾಗಶಯನನೆ ಯೋಗಿಗಳರಸನೆ
ಬೇಗದಿ ಬಂದು ಕಾಯೋ ಎನ್ನನು 1
ಶೇಷಾಚಲ ನಿವಾಸ ಸ್ವಾಮಿ ಆಸೆಯ ಬಿಡಿಸೆನ್ನಾ
ವಾಸುದೇವ ನಿನ್ನ ಲೇಸು ಕರುಣವ ತೋರಿ
ನಿನ್ನ ದಾಸರ ಸಂಗದೊಳು ಇರಿಸೋ ಎನ್ನ 2
ರಾಮ ರಾಮ ಎಂಬೋ ನಿನ್ನ ನಾಮನೇಮದಿ
ನುಡಿಸೆನೆಗೆ ರಮಾವಲ್ಲಭವಿಠಲ
ಭಾಮೆಯರರಸನೆ ಪ್ರೇಮವ ತೋರೋ 3
***