Showing posts with label ಅಂಬುಜಾಕ್ಷಿ ಸ್ತಂಭದಿಹನ್ಯಾರೇ ಸಾರೇ kamalapati vittala jagannatha dasa stutih. Show all posts
Showing posts with label ಅಂಬುಜಾಕ್ಷಿ ಸ್ತಂಭದಿಹನ್ಯಾರೇ ಸಾರೇ kamalapati vittala jagannatha dasa stutih. Show all posts

Monday 2 August 2021

ಅಂಬುಜಾಕ್ಷಿ ಸ್ತಂಭದಿಹನ್ಯಾರೇ ಸಾರೇ ankita kamalapati vittala jagannatha dasa stutih


ಅಂಬುಜಾಕ್ಷಿ ಸ್ತಂಭದಿಹನ್ಯಾರೇ - ಸಾರೇ ಪ

ನಂಬಿ ಭಜಿಸುವ ಭಕುತರ ಮನದಹಂಬಲ ನೀಡುವರೆ - ನೀರೇ ಅ.ಪ

ಸುರರೊಡೆಯನೋಲ್ ಪರಿಪರಿಯಲೈ- ಶ್ವರ್ಯದಿಂ ರಾಜಿಸುವರ್ಯಾರೇಹರಿಕಥಾಮೃತ ಗ್ರಂಥ ವಿರಚಿಸಿಧರಣಿ ಸುರರುದ್ಧರಿಸಿದವರೆ 1

ಫುಲ್ಲಲೋಚನೆ ಬಲ್ಲೆಯಾ ಇವ -ರಿಲ್ಲಿರುವ ಕಾರಣವಿದೇನೆಫುಲ್ಲನಾಭನ ಪುಡುಕುತಲೀಪ್ರಹ್ಲಾದನನುಜ ಸಹ್ಲಾದರಿವರೆ 2

ಜಲಜ ತುಳಸಿಮಣಿ ಸುಮಾಲಿಕೆಗಳದಿ ಧರಿಸಿಹನ್ಯಾರೆ - ನೀರೇಕಲಿಯುಗದಿ ಕಮಲಾಪತಿ ವಿ- ಠಲನ ಒಲಿಸಿದಿಳೆಯೊಳಗೆ ಮೆರೆವರೆ 3

****

ಅಂಬುಜಾಕ್ಷಿ ಸ್ತಂಭದಿಹನ್ಯಾರೇ , ಸಾರೇ ||ಪ||
ನಂಬಿ ಭಜಿಸುವ ಮನದ ಭಕುತರ
ಮನದ ಹಂಬಲ ನೀಡುವರೆ, ನೀರೇ ||ಅ.ಪ||

ಸುರರೊಡೆಯನೋಲ್ ಪರಿಪರಿಯಲೈಶ್ವರ್ಯದಿಂ ರಾಜಿಸುವರ್ಯಾರೇ
ಹರಿಕಥಾಮೃತ ಗ್ರಂಥ ವಿರಚಿಸಿ ಧರಣಿಸುರರುದ್ಧರಿಸಿದವರೆ ||೧||

ಫುಲ್ಲಲೋಚನೆ ಬಲ್ಲೆಯಾ ಇವರಿಲ್ಲಿರುವ ಕಾರಣವಿದೇನೆ
ಫುಲ್ಲನಾಭನ ಹುಡುಕತಲೀ ಪ್ರಹ್ಲಾದನನುಜ ಸಹ್ಲಾದರಿವರೆ ||೨||

ಜಲಜ ತುಲಸಿಮಣಿ ಸುಮಾಲಿಕೆ  ಗಳದಿ ಧರಿಸಿಹನ್ಯಾರೆ , ನೀರೇ
ಕಲಿಯುಗದಿ ಕಮಲಾಪತಿ ವಿಠಲನ ಒಲಿಸಿದಿಳೆಯೊಳಗೆ ಮೆರೆವರೆ ||೩||
***