Monday 2 August 2021

ಅಂಬುಜಾಕ್ಷಿ ಸ್ತಂಭದಿಹನ್ಯಾರೇ ಸಾರೇ ankita kamalapati vittala jagannatha dasa stutih


ಅಂಬುಜಾಕ್ಷಿ ಸ್ತಂಭದಿಹನ್ಯಾರೇ - ಸಾರೇ ಪ

ನಂಬಿ ಭಜಿಸುವ ಭಕುತರ ಮನದಹಂಬಲ ನೀಡುವರೆ - ನೀರೇ ಅ.ಪ

ಸುರರೊಡೆಯನೋಲ್ ಪರಿಪರಿಯಲೈ- ಶ್ವರ್ಯದಿಂ ರಾಜಿಸುವರ್ಯಾರೇಹರಿಕಥಾಮೃತ ಗ್ರಂಥ ವಿರಚಿಸಿಧರಣಿ ಸುರರುದ್ಧರಿಸಿದವರೆ 1

ಫುಲ್ಲಲೋಚನೆ ಬಲ್ಲೆಯಾ ಇವ -ರಿಲ್ಲಿರುವ ಕಾರಣವಿದೇನೆಫುಲ್ಲನಾಭನ ಪುಡುಕುತಲೀಪ್ರಹ್ಲಾದನನುಜ ಸಹ್ಲಾದರಿವರೆ 2

ಜಲಜ ತುಳಸಿಮಣಿ ಸುಮಾಲಿಕೆಗಳದಿ ಧರಿಸಿಹನ್ಯಾರೆ - ನೀರೇಕಲಿಯುಗದಿ ಕಮಲಾಪತಿ ವಿ- ಠಲನ ಒಲಿಸಿದಿಳೆಯೊಳಗೆ ಮೆರೆವರೆ 3

****

ಅಂಬುಜಾಕ್ಷಿ ಸ್ತಂಭದಿಹನ್ಯಾರೇ , ಸಾರೇ ||ಪ||
ನಂಬಿ ಭಜಿಸುವ ಮನದ ಭಕುತರ
ಮನದ ಹಂಬಲ ನೀಡುವರೆ, ನೀರೇ ||ಅ.ಪ||

ಸುರರೊಡೆಯನೋಲ್ ಪರಿಪರಿಯಲೈಶ್ವರ್ಯದಿಂ ರಾಜಿಸುವರ್ಯಾರೇ
ಹರಿಕಥಾಮೃತ ಗ್ರಂಥ ವಿರಚಿಸಿ ಧರಣಿಸುರರುದ್ಧರಿಸಿದವರೆ ||೧||

ಫುಲ್ಲಲೋಚನೆ ಬಲ್ಲೆಯಾ ಇವರಿಲ್ಲಿರುವ ಕಾರಣವಿದೇನೆ
ಫುಲ್ಲನಾಭನ ಹುಡುಕತಲೀ ಪ್ರಹ್ಲಾದನನುಜ ಸಹ್ಲಾದರಿವರೆ ||೨||

ಜಲಜ ತುಲಸಿಮಣಿ ಸುಮಾಲಿಕೆ  ಗಳದಿ ಧರಿಸಿಹನ್ಯಾರೆ , ನೀರೇ
ಕಲಿಯುಗದಿ ಕಮಲಾಪತಿ ವಿಠಲನ ಒಲಿಸಿದಿಳೆಯೊಳಗೆ ಮೆರೆವರೆ ||೩||
***



No comments:

Post a Comment