Showing posts with label ಏನು ಚಿಂತಿಪೆ ನೀನು ಬರಿದೆ ಜೀವ ಸಾನುರಾಗದಿ ಕಾಯೊ ರಾಘವೇಂದ್ರರು gurushyamasundara. Show all posts
Showing posts with label ಏನು ಚಿಂತಿಪೆ ನೀನು ಬರಿದೆ ಜೀವ ಸಾನುರಾಗದಿ ಕಾಯೊ ರಾಘವೇಂದ್ರರು gurushyamasundara. Show all posts

Monday 6 September 2021

ಏನು ಚಿಂತಿಪೆ ನೀನು ಬರಿದೆ ಜೀವ ಸಾನುರಾಗದಿ ಕಾಯೊ ರಾಘವೇಂದ್ರರು ankita gurushyamasundara

 ರಾಗ: [ಮಧುವಂತಿ] ತಾಳ: [ಆದಿ]


ಏನು ಚಿಂತಿಪೆ ನೀನು ಬರಿದೆ ಜೀವ

ಸಾನುರಾಗದಿ ಕಾಯೊ ರಾಘವೇಂದ್ರರು ಇಹರು


ತಂಡ ತಂಡದಿ ಬರುವ ಭಕ್ತಜನರಘವ

ತೋಂಡವತ್ಸಲನ ಕರುಣಿಪರು ತ್ವರದಿ

ಖಂಡಿಸುತ ದುರ್ವಾದಿಗಳ ಮತವ

ಬಂಡಿಕಾಲನು ಪಿಡಿದ ಶ್ರೀಕೃಷ್ಣನ ದಯದಿ 1

ಮುನ್ನ ಮಾಡಿದ ಅಘವ ತರಿದು ಜವದಲಿ ತಾವು

ಅನ್ನದಾನವ ಮಾಡಿ ಹರಿಗೆ ಅರ್ಪಿಸುತಿಹರು

ಘನ್ನ ಭೀತಿಯ ಬಿಡಿಸಿ ಚೆನ್ನಾಗಿ ಸಂತೈಸಿ

ಚಿನ್ನದಂತಹ ಸುತರ ಕರುಣಿಪರು ತ್ವರದಿ 2

ಕಾಮಕ್ರೋಧಾದಿಗಳ ಗೆಲಿಸುವರು ಬೇಗದಲಿ

ನಾಮಸ್ಮರಣೆಯ ಈವ ಕರುಣಿಗಳು ನೋಡು

ಧಾಮ ಶ್ರೀ ಹರಿ ತೋರುತಲಿ ಸುಜನರಿಗೆ ಗುರು

ಶ್ಯಾಮಸುಂದರನ ನಿಜ ಭಕ್ತರಿರಲು 3

****