Monday 6 September 2021

ಏನು ಚಿಂತಿಪೆ ನೀನು ಬರಿದೆ ಜೀವ ಸಾನುರಾಗದಿ ಕಾಯೊ ರಾಘವೇಂದ್ರರು ankita gurushyamasundara

 ರಾಗ: [ಮಧುವಂತಿ] ತಾಳ: [ಆದಿ]


ಏನು ಚಿಂತಿಪೆ ನೀನು ಬರಿದೆ ಜೀವ

ಸಾನುರಾಗದಿ ಕಾಯೊ ರಾಘವೇಂದ್ರರು ಇಹರು


ತಂಡ ತಂಡದಿ ಬರುವ ಭಕ್ತಜನರಘವ

ತೋಂಡವತ್ಸಲನ ಕರುಣಿಪರು ತ್ವರದಿ

ಖಂಡಿಸುತ ದುರ್ವಾದಿಗಳ ಮತವ

ಬಂಡಿಕಾಲನು ಪಿಡಿದ ಶ್ರೀಕೃಷ್ಣನ ದಯದಿ 1

ಮುನ್ನ ಮಾಡಿದ ಅಘವ ತರಿದು ಜವದಲಿ ತಾವು

ಅನ್ನದಾನವ ಮಾಡಿ ಹರಿಗೆ ಅರ್ಪಿಸುತಿಹರು

ಘನ್ನ ಭೀತಿಯ ಬಿಡಿಸಿ ಚೆನ್ನಾಗಿ ಸಂತೈಸಿ

ಚಿನ್ನದಂತಹ ಸುತರ ಕರುಣಿಪರು ತ್ವರದಿ 2

ಕಾಮಕ್ರೋಧಾದಿಗಳ ಗೆಲಿಸುವರು ಬೇಗದಲಿ

ನಾಮಸ್ಮರಣೆಯ ಈವ ಕರುಣಿಗಳು ನೋಡು

ಧಾಮ ಶ್ರೀ ಹರಿ ತೋರುತಲಿ ಸುಜನರಿಗೆ ಗುರು

ಶ್ಯಾಮಸುಂದರನ ನಿಜ ಭಕ್ತರಿರಲು 3

****


No comments:

Post a Comment