Showing posts with label ವೇದವ್ಯಾಸರ ದಿವ್ಯಪಾದ ಪದುಮ karpara narahari vedavyasa stutih. Show all posts
Showing posts with label ವೇದವ್ಯಾಸರ ದಿವ್ಯಪಾದ ಪದುಮ karpara narahari vedavyasa stutih. Show all posts

Friday 27 December 2019

ವೇದವ್ಯಾಸರ ದಿವ್ಯಪಾದ ಪದುಮ ankita karpara narahari vedavyasa stutih

ವೇದವ್ಯಾಸರ ದಿವ್ಯಪಾದ ಪದುಮಯುಗಲ
ಆರಾಧಿಸುತಿರು ಮನುಜಾ ||pa||

ವೇದಗಳಿಗೆ ಸಮ್ಮತವಾದ ಪುರಾಣಗಳ
ಸಾದರದಲಿ ರಚಿಸಿ ಮೋದವ ಬೀರಿದ ||a.pa||

ಧರಿಯೊಳು ಸುಜನರಿಗೆ ವರಧರ್ಮ ತಿಳಿಸೆಂದು
ಸುರಮುನಿ ಪ್ರಾರ್ಥನದಿ
ಪರಮ ಮಂಗಲ ವೀರವರ ಭಾಗವತ ಗ್ರಂಥ
ವಿರಚಿಸಿ ಶುಕಮುನಿಗೆ ಕರುಣದಿಂದರುಹಿದ ||1||

ವಾಸಿಪ ಮುನಿಗುಣ ಭೂಷಿತ ಬದರಿಯೋಳ್
ತೋಷ ತೀರ್ಥರ ಕರೆದು
ಭೂಸುರ ಜನರಿಗೆ ಮೋಕ್ಷದಾಯಕ ಸೂತ್ರ
ಭಾಷ್ಯವರಚಿಸೆಂದಾದೇಶವ ನೀಡಿದ||2||

ಅರಿದರಾದ್ಯಯುಧ ಧರಿಸಿ ಷೋಡಶಸಂಖ್ಯ
ಕರಗಳಿಂದಲಿ ಶೋಭಿತ
ಶರಣು ಜನಕೆ ಸುರತರು ವೆನಿಸಿ ಧರೆಯೊಳು
ಮೆರೆವ ಕಾರ್ಪರ ನರಹರಿ ರೂಪಾತ್ಮಕನಾದ ||3||
******