Showing posts with label ರುದ್ರಕುಮಾರನ ಚರಣಕೆ bheemesha SHUKRAVARA SONG SAMPRADAYA. Show all posts
Showing posts with label ರುದ್ರಕುಮಾರನ ಚರಣಕೆ bheemesha SHUKRAVARA SONG SAMPRADAYA. Show all posts

Friday 27 December 2019

ರುದ್ರಕುಮಾರನ ಚರಣಕೆ ವಂದನೆ ಮಾಡಿ ಶ್ರಾವಣ ಸಂಪತ್ತು ಶುಕ್ರವಾರದ ಹಾಡು shravana sampattu shukarvara haadu ankita bheemesha krishna SAMPRADAYA


                                                            


also CHECK FOLLOWING TOO
 click below to listen/learn to




kruti: Harapanahalli Bheemavva
shravana sampattu shukarvara haadu 

ಶ್ರಾವಣ ಸಂಪತ್ತು ಶುಕ್ರವಾರದ ಹಾಡು

ರುದ್ರಕುಮಾರನ ಚರಣಕೆ ವಂದನೆ ಮಾಡಿ

ವಿದ್ಯಾಭಿಮಾನಿ ವಾಣಿಯ
ಸುಪದ್ಮ ಪಾದಗಳಿಗೆ ಎರಗಿ ನಾ ಪೇಳುವೆ
ಶುದ್ದಾಗಿ ಕೊಡು ಮತಿಯ

ಶ್ರಾವಣಮಾಸ ಶುಕ್ಕುರುವಾರ ಶುಭಮುಹೂರ್ತ

ಕಾಲದಿ ಕಮಲಾಕ್ಷಿಯನು
ಆಲಯದೊಳಗೆ ಇಟ್ಟು ಆದರದಿಂದ ಪೂಜಿಸಿ
ಬೇಡಿದ ಅಭೀಷ್ಟ ನೀಡುವಳು

ಇರುತಿರಲು ಒಂದು ಪಟ್ಟಣದಲ್ಲಿ ರಾಜನು

ತನಯರು ಇಲ್ಲದ ಕಾರಣವು
ವಿವಾಹದ ಉತ್ಸವಕೆಂದು ತೆರಳೋ ಪತಿಯ ಕಂಡು
ತೆಗೆದಿಟ್ಟಳು ಆತನ ಆಯುಧವ

ಪಟ್ಟದ ಕತ್ತಿಯ ಬಿಟ್ಟು ಬಂದೆನೆಂದು

ಅಟ್ಟಿಹ ತನ್ನ ದೂತರನು
ನೆಟ್ಟನೆ ಎರಡು ಕಾಲು ಚಾಚಿ ಕುಳ್ಳಿರಲು ಆಗ
ತಟ್ಟನೆ ದಾಟಿ ನಡೆದನು

ಮೂರು ತಿಂಗಳು ಗರ್ಭವಾಸಕ್ಕಾಗಿ ಬಂದಿತು

ನೀನು ಈಗ ದಾಟಿ ಪೋಗುವರೆ
ಕೇಳಿ ಸಂಭ್ರಮದಿಂದ ಹೇಳೆ ರಾಜಗೆ ಬಂದು
ತಾಳಿದ ಪರಮ ಹರುಷವನು

ಸದ್ದು ಮಾಡದೆ ಸೂಲಗಿತ್ತಿಯ ಕರೆಸಿ

ತಾನು ಇದ್ದ ವಾರ್ತೆಗಳ ಹೇಳಿದಳು
ಮುದ್ದುಕೂಸಿನ ತಂದು ಕೊಟ್ಟರೆ ನಿನಗೀಗ
ಮುತ್ತಿಲು ತುಂಬ ಹೊನ್ನು ಕೊಡುವೆ

ಹುಡುಕುತ ಬಂದಳು ಕಡೆಯ ಬಜಾರಕ್ಕೆ

ಬಡವ ಬ್ರಾಹ್ಮಣನ ಮಂದಿರದಿ
ಬಡದಿಗೆ ಮೂರು ತಿಂಗಳು ಗರ್ಭವಾಗಿದೆ
ಕಡೆಹಾಯಿಸಲು ಎನ್ನ ಕರೆಸೆಂದಳು

ಮೂರು ತಿಂಗಳ ರಾಜನರಸಿಗೆ ಮೊಗ್ಗೆಯು

ಏಳುತಿಂಗಳು ಹೂವ ಮುಡಿಸಿ
ಎಂಟು ತಿಂಗಳಿಗೆ ಸೀಮಂತದ ಉತ್ಸವ ಮಾಡಿ
ಬಂತಾಗ ನವಮಾಸಗಳು

ವಿಪ್ರನ ಮಡದಿಗೆ ಒತ್ತಿ ಬಂದವು ಬ್ಯಾನೆ

ಕಟ್ಟಿ ಕಣ್ಣುಗಳ ನಿಚ್ಚಣಿಕೆ
ಹತ್ತಿ ಇಳಿದು ಹಡೆದಳು ಗಂಡುಕುಮಾರನ
ಎತ್ತಿಕೊಂಡು ಒಯ್ದಳು ಆ ಕ್ಷಣವೆ

ಕಲ್ಲುಗುಂಡನೆ ಹಡೆದಿಯೆ ನೀನು ಎಂಬಂಥ

ಸೊಲ್ಲು ಕೇಳುತಲೆ ತಲ್ಲಣಿಸಿ
ಎಲ್ಲಿದ್ದರೆನ್ನ ಕುಮಾರನು ಸುಖದಿ
ಬಾಳಲೆಂದಲ್ಲಿ ನೇಮವ ನಡೆಸಿದಳು

ಇತ್ತ ಕೂಸಿಗೆ ಮಧುವಿಟ್ಟು ಜಾತಕ ಬರೆಸಿ

ಸಕ್ಕರೆ ಸಗಟದಿಂದ ಹಂಚಿ
ದಕ್ಷಿಣೆ ತಾಂಬೂಲ ಸಹಿತ ಬ್ರಾಹ್ಮಣರಿಗೆಲ್ಲಾ
ಇಟ್ಟು ಭೋಜನವ ಮಾಡಿಸಿದ

ನಾಮಕರಣ ಜಾವಳ ಜುಟ್ಟು ಉಪನಯನ

ಪ್ರೇಮದಿಂದ ವಿದ್ಯವ ಕಲಿಸಿ
ಸೋಮನಂದದಿ ಹೊರಗೆ ಹೊರಟ ತಮ್ಮಮ್ಮನ
ನೋಡಿ ಮೋಹಿಸಿದನಾಕ್ಷಣದಿ

ಕತ್ತಲೊಳಗೆ ಬರುತಿರಲು ಬಾಗಿಲ ಮುಂದೆ

ಕಟ್ಟಿದ್ದ ಗೋವು ಕಾಣದಲೆ
ವತ್ಸದ ಕಾಲು ತುಳಿಯಲಾಗ ಅದು ಬಾಯಿ
ಬಿಟ್ಟು ಒದರಿತು ಭಯದಿಂದ

ಅಮ್ಮ ನೀ ಬಾರೆ ತಮ್ಮ ಅಮ್ಮನ ಅರಿಯದವ

ನಮ್ಮನ್ನು ಬಲ್ಲನೆ
ಒಮ್ಮೆ ಅಲ್ಲದೆ ಎರಡು ಬಾರಿ ಆಲಿಸಿ ಅದರ ಮಾತು
ತಮ್ಮ ಹಿರಿಯರನ್ನು ಕೇಳಿದನು

ಮಂದಾಕಿನಿಯ ಸ್ನಾನವ ಮಾಡಿ ಬಂದರೆ

ಸಂದೇಹ ಪರಿಹಾರವಾಗುವುದು ಹಾಗೆಂದು
ಹೇಳಿದ ಹಿರಿಯರ ವಾಕ್ಯವ ಕೇಳಿ
ಗಂಗಾಯಾತ್ರೆಗೆ ತೆರಳಿದನು

ನಡೆದು ಬಂದನು ನಡುಮಾರ್ಗದಿ ಪಟ್ಟಣ

ಹಡೆದ ಮನೆಯ ಬಾಗಿಲಲ್ಲಿ
ಕೊಡಬೇಕು ನಮಗೆ ಇಷ್ಟು ಸ್ಥಳಗಳೆಂದೆನುತಲಿ
ನುಡಿದು ಪವಡಿಸಿದ ತಾನಲ್ಲಿ

ಹೊರಗಿಂದ ಬಂದ ಶೆಟವಿ ಬಂದಳು ಮಹಾಲಕ್ಷುಮಿ

ಒಳಗಿಂದ ಬಂದಳು
ಎನ್ನ ವರಪುತ್ರ ಇವನ ದಾಟಲು ನಿನ್ನ ಶಿರವು
ಸಿಡಿದು ಸಹಸ್ರ ಹೋಳಾಗೋದೆನಲು

ಅದು ಕೇಳಿ ಶೆಟವಿ ತಾ ತಿರುಗಿ ಪೋಗುತಲಿರೆ

ಬದಿಯಲ್ಲಿ ಬದುಕಿದ್ದ ಶಿಶುವು
ಇದು ನಿನ್ನ ಪುಣ್ಯದಿಂದ ಉಳಿದಿತೆಂದು ಎನುತಲಿರೆ
ಅಧಿಕ ಸಂತೋಷವಾಗಿ ಹೊರಟು

ಭಾಗೀರಥಿಯ ಸ್ನಾನವ ಮಾಡಿ ತಾನು

ಪ್ರಯಾಗಕ್ಕೆ ನಡೆತರಲು
ಬ್ಯಾಗ ಮಾಡಿದ ದಾನ ಧರ್ಮಕಾರ್ಯಗಳ
ತಾನಾಗ ಕಂಡನು ಚತುರ್ಹಸ್ತ

ನಾಲ್ಕು ಹಸ್ತಗಳ ಕಂಡ ಕಾರಣ ಏನೆಂದು

ವ್ಯಾಕುಲದಿಂದ ಕೇಳಿದನು
ಸಾಕಿದವರು ಹಡೆದವರು ಉಂಟು ನಿನಗೆಂದು
ವಿವೇಕ ಬುದ್ಧಿ ಅವರು ಹೇಳಿದರು

ಗೊತ್ತಿಲೆ ಬಂದನು ಪಟ್ಟಣದೊಳಗೊಂಡು

ಹೆತ್ತ ಆರುದಿನದ ಮಂದಿರದಿ
ಹೊಸ್ತಿಲೊಳಗೆ ಅಡ್ಡ ಮಲಗಿದ್ದ ಕಾಲಕ್ಕೆ
ಮತ್ತಾಗ ಬಂದಳು ಶೆಟವಿ

ಚೊಚ್ಚಿಲ ಮಗನ ದಾಟಲು ನಿನ್ನ ಶಿರವು

ಬಿಚ್ಚಿ ಸಹಸ್ರ ಹೋಳಾಗೋದು ಎನಲು
ಲಕ್ಷ್ಮೀ ಮಾತಿಗೆ ತಿರುಗಿದಳೆನ್ನ ತುತ್ತಿಗೆ
ಮಿರ್ತ್ಯಾದ ಪಾಪಿ ಎಂದೆನುತ

ಸತ್ಯವಂತನೆ ನಿನ್ನ ಪುಣ್ಯದಿಂದ ಇಬ್ಬರು

ಪುತ್ರರು ಉಳಿದರೆಂತಿಹರು
ಅರ್ಥಿಯಿಂದವರ ಮಾತುಗಳ ಕೇಳುತ
ತನ ಪಟ್ಟಣಕ್ಕೆ ನಡೆತಂದ

ಗಂಗಾಸ್ನಾನವ ಮಾಡಿಕೊಂಡು ಕಾವಡಿ ಹೊತ್ತು

ಬಂದ ಶ್ರಾವಣಮಾಸದಲ್ಲಿ
ಅಂದಿನಾರಭ್ಯ ಬ್ರಾಹ್ಮಣರಿಗೆ ಮೃಷ್ಟಾನ್ನ
ಕುಟುಂಬ ಭೋಜನವ ಮಾಡಿಸಿದ

ನಿತ್ಯ ನಿತ್ಯದಿ ಭಕ್ಷ್ಯ ತುಪ್ಪ ಮಂಡಿಗೆ ಕ್ಷೀರ

ಸಕ್ಕರೆ ಸೂರೆ ಮಾಡುತಲಿ
ಗೊತ್ತಾಗದೆನ್ನ ಕಾರ್ಯಗಳು ಪಟ್ಟಣದೊಳು
ಮತ್ತ್ಯಾರು ಉಳಿದವರೆಂದ

ಪಟ್ಟಣದೊಳು ಬಡ ಬ್ರಾಹ್ಮಣನರಸಿಯು

ನಿಷ್ಟೆಲಿ ವ್ರತದಿಂದ ಇರುವಳು
ಎಷ್ಟು ಕರೆದರು ಬಾರಳಾಕೆ ಶ್ರೀಗೌರಿಯ
ಶುಕ್ರವಾರದ ವ್ರತವಂತೆ

ನಾನೆ ಬರಲೊ ತನ್ನ ಮಂದಿರಕಾಗಲೆ

ತಾನೆ ಬರುವಳೊ ನಮ್ಮ ಮನೆಗೆ
ಮಾಡಿದ ಅಪ್ಪಣೆ ಜುಲುಮಾನೆಯ ಕೊಡುವೊಳೆ
ಕೇಳಿ ಬನ್ನಿ ಎಂದು ಕಳಿಸಿದನು

ಇಷ್ಟು ಛಲಗಳು ಯಾತಕೆ ಈಗ ಬರುವೆನೆಂದು

ಲಕ್ಷ್ಮೀದೇವೇರ ಪೂಜೆ ಮಾಡಿ
ಭಕ್ತಿಯಿಂದ ಆರತಿ ಮಟಿಗೆಯನೆ ಉಡಿಕಟ್ಟಿ
ಬಂದಳು ಭಾಗ್ಯಶಾಲಿ

ಬರುತಿರಲು ಆಗ ಅಂಗನೆ ಅರಮನೆಯಿಂದ

ಹರಿದ ಅಕ್ಕಿ ಕಚ್ಚು ಕಾಣುತಲಿ
ಸ್ಥಿರವಾಗಲಿ ಎನ್ನ ಕುಮಾರಗೆ ಆಯುಷ್ಯಗಳೆಂದು
ಬದಲು ಮಾರ್ಗದಲಿ ನಡೆದಳು

ಮೂರುಕಾಲಿನ ಮಣೆ ಮುಂದೆ ತಂದಿಟ್ಟರೆ

ಕೂಡಲಾಗದು ನಮ್ಮ ವ್ರತವು
ಹಾಗಲಹಂದರ ಪೋಗಲು ಹಸಿರು ಬಳೆಯ ಬಿಟ್ಟು
ನೀಲನಿಟ್ಟಳು ಕರದಲ್ಲಿ

ಹಸಿರು ಪೀತಾಂಬರ ಹಸನಾದ ಕುಡಿ ಎಲೆ

ಹೊಸಮೊರದೊಳಗೆ ಅನ್ನವನು
ಬಿಸಿ ಬಿಸಿ ಮೊಗೆಯಲಿ ಸಾರು ತಂದು ಹಾಕಲು
ಶಶಿಮುಖಿ ಅದು ಒಲ್ಲೆನೆನುತಲಿ

ಕಂದು ಕೆಂಪಿನ ಪೀತಾಂಬರವ ಉಡುಕೊಟ್ಟು

ಛಂದವಾದೆಲೆಯ ಹಾಕಿದರು
ಬಂಗಾರ ಹರಿವಾಣದೊಳಗೆ ಅನ್ನವು ಬೆಳ್ಳಿ
ತಂಬಿಗೆ ಸಾರು ಬಡಿಸಿದರು

ಬಡವನ ಮಡದಿಯ ಬಡಿವಾರ ನೋಡಿರೆ

ಸಡಗರ ಬಂತೇನು ಇವತ್ತೇ
ಪಡೆದಳಾ ಅರಸಿನ ಐಶ್ವರ್ಯವೆನುತಲಿ
ನುಡಿದರು ಜನರು ಹಾಸ್ಯದಲಿ

ಉಟ್ಟ ಪೀತಾಂಬರ ಕಟ್ಟಿದ ಉಡಿದಾರ

ರತ್ನದ ಕಡಗ ಕೈಯಲ್ಲಿ
ಪಚ್ಛದ ಪದಕ ಮುತ್ತಿನ ಕಂಠಿ ಕೊರಳಲ್ಲಿ
ಪುತ್ಥಳಿ ಸರ ಹೊಳೆಯುತಲಿ

ನೀಲ ಮಾಣಿಕ್ಯದ ವಜ್ರದ ಹರಳಿನ ಉಂಗುರಗಳು

ಆಣಿ ಮುತ್ತಿಟ್ಟು ಕಿವಿಯಲ್ಲಿ
ಪಾಣಿಯ ಮುಗಿದು ಬ್ರಾಹ್ಮಣರಿಗೆ
ಭೋಜನಕೆ ಉಪಚಾರ ಮಾಡುತಲಿ ತಾ ಬಂದ

ದೊರೆಯು ತುಪ್ಪವ ಬಡಿಸುತಲಿ

ಸಾಲೆಡೆಯಲ್ಲಿ ಬರುತಿರೆ
ತಾಯಿಸ್ತನಗಳು ಭರದಿಂದ ಉಕ್ಕೇರಿ ಬಂದವು
ಕ್ಷೀರಮುಖದಲ್ಲಿ ತೊರೆದು ಚಿಮ್ಮಿದವು ಆ ಕ್ಷಣದಿ

ಹಾಲು ಬಿದ್ದರೆ ತನ್ನ ಶಾಲಿನಿಂದ ಒರೆಸುತ್ತಾ

ಮಹಲಿನ ಮ್ಯಾಲೆ ನಡೆದನು
ಆಲಯಕ್ಕೆ ಅವರನು ಬಿಡದಂತೆ ಅಪ್ಪಣೆ ಮಾಡಿ
ತಾ ಮಲಗಿದ ಮಂಚದಲ್ಲಿ

ಹುಟ್ಟಾ ಬಡವಿಯ ದೌಲತ್ತನೆ ನೋಡಿರೆ

ಉಟ್ಟಳು ಪೀತಾಂಬರವ
ಗಟ್ಟಿಯಾಗಿ ಸೆರಗೊ ಹೊದಿಯದೆ ತನ್ನ ಮಾನವ
ಬಿಟ್ಟಳೆಂದು ಆಡಿಕೊಂಬುವರು

ಎತ್ತನೋಡಿದರಿಲ್ಲ ಚಿತ್ತ ಚಂಚಲವಾಗಿ

ಮತ್ತೆಲ್ಲೂ ಮಗನ ಕಾಣದಲೆ
ಹತ್ತಿ ಬಂದಳು ಮಹಲಿನಲ್ಲೇ ಮಂಚದಿ
ಮಲಗಿಪ್ಪೋ ಸುತನ ಕಂಡಳಾಗ

ಏನು ಕಾರಣ ಮಲಗಿದಿ ಮಾತನಾಡೆಂದು

ಲಾಲಿಸಿ ಮಗನ ಮುದ್ದಿಸುತ
ಬಾಲಕ ನೀನಿಷ್ಟು ಬಳಲುವುದು ಯಾಕೆಂದು
ಕೇಳಿದಳು ಅತಿ ಮೋಹದಿಂದ

ಹಡೆವರು ಯಾರೆ ಎನ್ನೊಡನೆ ನೀ ಹೇಳೆಂದು

ಬಿಡು ಭಯ ಬೇಡವೆಂದೆನುತ
ಹಡೆಯಲಿಲ್ಲವೋ ಎನ್ನ ಮ್ಯಾಲೆ ರಾಜನು ಒಬ್ಬ
ಮಡದಿಯ ತರುವೋನೆಂದೆನುತ

ಹೊನ್ನು ಹಣವ ಕೊಟ್ಟು ನಿನ್ನನು ತರಿಸಿದೆ

ಎನ್ನ ಕೂಸೆಂದು ಸಾಕಿದೆನು
ಇನ್ನ್ಯಾರ ಮಗನೋ ನಾನರಿಯೆನೆಂದೆನುತಲಿ
ಮನ್ನಿಸಿ ಮಾತನಾಡಿದಳು

ಆದರೇನಮ್ಮಯ್ಯ ರಾಜಸಿಂಹಾಸನ

ಏರಿದೆ ನಿನ್ನ ಪುಣ್ಯದಲಿ ನೀ ಮಾಡಿದ
ಉಪಕಾರ ಮರೆಯಲಾರೆನೆಂದು
ಪಾದಕ್ಕೆ ಬಂದೆರಗಿದನು

ಬಣ್ಣದ ಅಂದಣ ಕಳಿಸಿದ ಸೂಲಗಿತ್ತಿಗೆ

ಮನ್ನಿಸಿ ಮಣೆಯನು ಹಾಕಿದರು
ಅಣ್ಣಯ್ಯ ಕರೆಸಿದ ಕಾರಣೇನೆಂದು
ಬಣ್ಣಿಸಿ ಬಂದು ಕುಳಿತಳು

ಎತ್ತಣಿಂದಲಿ ಎನ್ನ ತಂದೆ ವಾರ್ತೆಗಳನು

ಸತ್ಯವಾಗಿ ಹೇಳಬೇಕೆನುತ ವಿಪ್ರಸುತ
ನಿನ್ನಿಲ್ಲಿಗೆ ತಂದುಕೊಟ್ಟೆನೋ
ಮುತ್ತಿಲು ಹೊನ್ನಿಗೆ ಆಸೆ ಮಾಡಿ

ಹಾಕಿದೆ ಕಲ್ಲುಗುಂಡನು ನಿಮ್ಮಮ್ಮಗೆ

ಹಾಕ್ಯಾ ಮಾತುಗಳ ಆಡಿದೆನು
ಗೋಕುಲಕೊಳು ಕೃಷ್ಣ ಬಂದಂತೆ ನಿನ್ನ ತಂದೆ
ಸಾಕಿದಳು ಯಶೋಧೆಯಂತೆ

ಮಕ್ಕಳನಗಲಿ ದೇವಕ್ಕಿಯಂದದಿ ನಿನ್ನ

ಹೊಸ್ತಿಲೊಳಗೆ ಕುಳಿತಿಹರು
ಅಕ್ಕರದಿಂದ ಅವರ ಕೂಡೆಂದುನುತಲಿ
ಹಸ್ತವ ಮುಗಿದು ಹೇಳಿದಳು

ಮುದುಕಿ ಮಾತನು ಕೇಳಿ ಪದಕ ಮುತ್ತಿನ ಸರ

ನಗುತ ಹಾಕಿ ಕೊರಳಲ್ಲೇ
ಜರತಾರಿ ಸೀರೆ ಕುಪ್ಪುಸ ಉಡುಗೊರೆ ಕೊಟ್ಟು
ಕರೆಸಿದ ತಾಯಿ ತಂದೆಯರ

ಕರೆದರು ಎಂದರೆ ಕಂಪ ಹುಟ್ಟಿತು ದೇಹದಿ

ಸುರಿಸುತ ಕಣ್ಣ ಜಲಗಳ
ದೊರೆತನಕ್ಕೆದುರು ನಾವೇನೆಂದು ಮನದಲ್ಲಿ
ಮರಗುತ ಯೋಚನೆಯ ಮಾಡಿದಳು

ಬಡಿಸೋನೋ ಬೈದು ಬಿಡುವನೋ ಕೈಯಿಂದಲಿ

ಕೊಡಿಸೋನೊ ಜುಲುಮಾನವ
ಇಡಿಸೋನೋ ಸೆರೆಮನೆ ಒಳಗೆ ನಮ್ಮಿಂದಲಿ
ನುಡಿಸಿ ಬಿಡುವನೋ ತಪ್ಪೆನುತಾ

ಏನು ಮಾಡುವನೋ ಬಂದ ಜನರೊಳು ನಮ್ಮ

ಮಾನವ ಕಳೆದು ಬಿಡುವನೋ
ಮಾನಾಭಿಮಾನ ನಿನ್ನದು
ಮಹಲಕ್ಷುಮಿ ಪಾದವೇ ಗತಿ ಎಂದರಾಗ

ನಡುಗುತ ಬಂದರು ಮುಡಿಯ ಮುಂದಕೆ ಬಾಗಿ

ಕಡು ಚಿಂತೆಯಿಂದ ನಿಂತಿರಲು
ಹಡೆದ ತಾಯಿ ತಂದೆ ನೀವೇ ಏನು ಎಂದು
ನುಡಿದು ತಾ ಚರಣಕ್ಕೆರಗಿದನು

ಕಂದ ನಾನೆಂದರೆ ಸಂಭ್ರಮವಾದ

ಆನಂದ ಬಾಷ್ಪಗಳು ಉದುರಿದವು
ತಂದೆ ತಾಯಿ ಮಕ್ಕಳೊಂದಾದರೆನುತಲಿ
ದುಂದುಭಿ ಭೇರಿ ಬಡಿದವು

ಹರುಷದಿಂದ ಇಬ್ಬರೂ ಒಂದಾಗಿ ತಾಯಂದಿರು

ಬರೆಸಿದರಾಗ ಪತ್ರಿಕವ
ಕರೆಸಿದರು ಬಂಧು ಬಳಗ ನಿಬ್ಬಣವನ್ನು
ಅರಸ ಮದುವೆ ಸಂಭ್ರಮದಿ

ಹಾದಿಗೆ ಹಂದರ ಹಾಕಿ ಮೇಲೆ ತೋರಣ ಕಟ್ಟಿ

ಬೀದಿ ನೌಬತ್ತು ವಾಲಗವು
ಬ್ರಾಹ್ಮಣರೆಲ್ಲರು ನೆರೆದರು ನಾಲ್ಕು
ವೇದವ ಹೇಳುತ ಮಂಗಳಾಷ್ಟಕವ

ವಲ್ಲಭನೆದುರಿಗೆ ಚೆಲ್ವ ಸತಿಯ ತಂದು

ಚೆಲ್ಲುತ ಮಂತ್ರಾಕ್ಷತೆಯ
ಮಲ್ಲಿಗೆ ಬಾಸಿಂಗವನು ಕಟ್ಟಿ ಕೊರಳ
ಮಾಂಗಲ್ಯ ಬಂಧನ ಮಾಡಿದರು

ಹಾಗಲ ಹಂದರದೊಳಗೆ ಹಸಿರು ಪತ್ತಲ ಕೊಟ್ಟು

ಆಗ ನೇಮ ಬಿಡಿಸಿದರು
ಡಾಗುಕುಡಿಬಾಳೆ ಎಲೆಯ ಭೂಮವನುಂಡು
ನಾಗವಲಿಗಳ ಮಾಡಿದರು

ಮುತ್ತಿನ ಪಲ್ಲಕ್ಕಿ ಒಳಗೆ ಶ್ರೀಗೌರಿಯ

ಪಟ್ಟಣದೊಳು ಮೆರೆಸುತಲಿ
ಅರ್ಥಿಯಿಂದಲಿ ಬಂದು ಅರಸು ಸಿಂಹಾಸನಕ್ಕೆ
ಒಪ್ಪಿದಳು ಆಗ ಮಹಲಕ್ಷ್ಮೀ

ಅರಿಷಿಣ ಕುಂಕುಮ ಅರಳು ಮಲ್ಲಿಗೆ ಗಂಧ

ಪರಿಪರಿ ಭಕ್ಷ್ಯ ಪಾಯಸವು
ನರಸಿಂಹನರಸಿಗೆ ಅರ್ಪಿಸುತ ಆರತಿ ಮಾಡೆ
ಹರುಷದಿಂದ ವರವ ನೀಡುವಳು

ಮಂಗಳ ಜಯವೆನ್ನಿ ಮಂಗಳ ಶುಭವೆನ್ನಿ

ಮಂಗಳಾಂಗನೆ ಮಹಾಲಕ್ಷ್ಮೀ
ಕಂಗಳು ತೆರೆದು ಕಟಾಕ್ಷದಿ ನೋಡಲು
ಹಿಂಗೋದು ಸಕಲ ಪಾಪಗಳು

ಬಿತ್ತಿದ ಬೆಳೆರಾಸಿ ಒಕ್ಕುವ ಧಾನ್ಯವು

ಉಕ್ಕುವ ಕ್ಷೀರದಂದದಲಿ
ಲೆಕ್ಕವಿಲ್ಲದೆ ಮಕ್ಕಳಾಗೋರು ಮನೆತುಂಬ
ಮುತ್ತೈದೆತನವ ನೀಡುವಳು

ತಾ ಸುರಕಾಮಧೇನುವಿನಂತೆ ಬಂದು

ಭೀಮೇಶಕೃಷ್ಣನ ಸಹಿತಾಗಿ
ಲೇಸಾದ ಸಕಲ ಸಂಪತ್ತನೆ ಕೊಟ್ಟು ತಾ
ವಾಸ ಮಾಡೋಳು ಮನೆಯಲ್ಲಿ
***


rudrakumArana caraNake vandane mADi
vidyABimAni vANiya
supadma pAdagaLige eragi nA pELuve
SuddAgi koDu matiya

SrAvaNamAsa SukkuruvAra SuBamuhUrta
kAladi kamalAkShiyanu
AlayadoLage iTTu Adaradibda pUjisi
bEDida aBIShTa nIDuvaLu

irutiralu obdu paTTaNadalli rAjanu
tanayaru illada kAraNavu
vivAhada utsavakeMdu teraLO patiya kabDu
tegediTTaLu Atana Ayudhava

paTTada kattiya biTTu bandenebdu
aTTiha tanna dUtaranu
neTTane eraDu kAlu cAci kuLLiralu Aga
taTTane dATi naDedanu

mUru tingaLu garBavAsakkAgi banditu
nInu Iga dATi pOguvare
kELi saMBramadinda hELe rAjage bandu
tALida parama haruShavanu

saddu mADade sUlagittiya karesi
tAnu idda vArtegaLa hELidaLu
muddukUsina tandu koTTare ninagIga
muttilu tuMba honnu koDuve

huDukuta bandaLu kaDeya bajArakke
baDava brAhmaNana mandiradi
baDadige mUru tingaLu garBavAgide
kaDehAyisalu enna karesendaLu

mUru tingaLa rAjanarasige moggeyu
ELutingaLu hUva muDisi
eMTu tingaLige sImaMtada utsava mADi
bantAga navamAsagaLu

viprana maDadige otti bandavu byAne
kaTTi kaNNugaLa niccaNike
hatti iLidu haDedaLu ganDukumArana
ettikoMDu oydaLu A kShaNave

kallugunDane haDediye nInu eMbantha
sollu kELutale tallaNisi
elliddarenna kumAranu suKadi
bALalendalli nEmava naDesidaLu

itta kUsige madhuviTTu jAtaka baresi
sakkare sagaTadinda hanci
dakShiNe tAMbUla sahita brAhmaNarigellA
iTTu BOjanava mADisida

nAmakaraNa jAvaLa juTTu upanayana
prEmadinda vidyava kalisi
sOmanandadi horage horaTa tammammana
nODi mOhisidanAkShaNadi

kattaloLage barutiralu bAgila munde
kaTTidda gOvu kANadale
vatsada kAlu tuLiyalAga adu bAyi
biTTu odaritu Bayadinda

amma nI bAre tamma ammana ariyadava
nammannu ballane
omme allade eraDu bAri Alisi adara mAtu
tamma hiriyarannu kELidanu

mandAkiniya snAnava mADi bandare
sandEha parihAravAguvudu hAgendu
hELida hiriyara vAkyava kELi
gangAyAtrege teraLidanu

naDedu bandanu naDumArgadi paTTaNa
haDeda maneya bAgilalli
koDabEku namage iShTu sthaLagaLendenutali
nuDidu pavaDisida tAnalli

horaginda banda SeTavi bandaLu mahAlakShumi
oLaginda bandaLu
enna varaputra ivana dATalu ninna Siravu
siDidu sahasra hOLAgOdenalu

adu kELi SeTavi tA tirugi pOgutalire
badiyalli badukidda SiSuvu
idu ninna puNyadinda uLiditendu enutalire
adhika santOShavAgi horaTu

BAgIrathiya snAnava mADi tAnu
prayAgakke naDetaralu
byAga mADida dAna dharmakAryagaLa
tAnAga kanDanu caturhasta

nAlku hastagaLa kanDa kAraNa Enendu
vyAkuladinda kELidanu
sAkidavaru haDedavaru unTu ninagendu
vivEka buddhi avaru hELidaru

gottile bandanu paTTaNadoLagonDu
hetta Arudinada mandiradi
hostiloLage aDDa malagidda kAlakke
mattAga bandaLu SeTavi

coccila magana dATalu ninna Siravu
bicci sahasra hOLAgOdu enalu
lakShmI mAtige tirugidaLenna tuttige
mirtyAda pApi endenuta

satyavantane ninna puNyadinda ibbaru
putraru uLidarentiharu
arthiyindavara mAtugaLa kELuta
tana paTTaNakke naDetanda

gangAsnAnava mADikonDu kAvaDi hottu
banda SrAvaNamAsadalli
andinAraBya brAhmaNarige mRuShTAnna
kuTuMba BOjanava mADisida

nitya nityadi BakShya tuppa manDige kShIra
sakkare sUre mADutali
gottAgadenna kAryagaLu paTTaNadoLu
mattyAru uLidavarenda

paTTaNadoLu baDa brAhmaNanarasiyu
niShTeli vratadinda iruvaLu
eShTu karedaru bAraLAke SrIgauriya
SukravArada vratavante

nAne baralo tanna mandirakAgale
tAne baruvaLo namma manege
mADida appaNe julumAneya koDuvoLe
kELi banni endu kaLisidanu

iShTu CalagaLu yAtake Iga baruvenendu
lakShmIdEvEra pUje mADi
Baktiyinda Arati maTigeyane uDikaTTi
bandaLu BAgyaSAli

barutiralu Aga angane aramaneyinda
harida akki kaccu kANutali
sthiravAgali enna kumArage AyuShyagaLendu
badalu mArgadali naDedaLu

mUrukAlina maNe munde tandiTTare
kUDalAgadu namma vratavu
hAgalahandara pOgalu hasiru baLeya biTTu
nIlaniTTaLu karadalli

hasiru pItAMbara hasanAda kuDi ele
hosamoradoLage annavanu
bisi bisi mogeyali sAru tandu hAkalu
SaSimuKi adu ollenenutali

kandu keMpina pItAMbarava uDukoTTu
ChandavAdeleya hAkidaru
bangAra harivANadoLage annavu beLLi
taMbige sAru baDisidaru

baDavana maDadiya baDivAra nODire
saDagara bantEnu ivattE
paDedaLA arasina aiSvaryavenutali
nuDidaru janaru hAsyadali

uTTa pItAMbara kaTTida uDidAra
ratnada kaDaga kaiyalli
pacCada padaka muttina kanThi koraLalli
putthaLi sara hoLeyutali

nIla mANikyada vajrada haraLina unguragaLu
ANi muttiTTu kiviyalli
pANiya mugidu brAhmaNarige
BOjanake upacAra mADutali tA banda

doreyu tuppava baDisutali
sAleDeyalli barutire
tAyistanagaLu Baradinda ukkEri bandavu
kShIramuKadalli toredu cimmidavu A kShaNadi

hAlu biddare tanna SAliniMda oresuttA
mahalina myAle naDedanu
Alayakke avaranu biDadaMte appaNe mADi
tA malagida maMcadalli

huTTA baDaviya daulattane nODire
uTTaLu pItAMbarava
gaTTiyAgi serago hodiyade tanna mAnava
biTTaLendu ADikoMbuvaru

ettanODidarilla citta chancalavAgi
mattellU magana kANadale
hatti bandaLu mahalinallE mancadi
malagippO sutana kanDaLAga

Enu kAraNa malagidi mAtanADendu
lAlisi magana muddisuta
bAlaka nIniShTu baLaluvudu yAkeMdu
kELidaLu ati mOhadinda

haDevaru yAre ennoDane nI hELendu
biDu Baya bEDaveMdenuta
haDeyalillavO enna myAle rAjanu obba
maDadiya taruvOnendenuta

honnu haNava koTTu ninnanu tariside
enna kUsendu sAkidenu
innyAra maganO nAnariyenendenutali
mannisi mAtanADidaLu

AdarEnammayya rAjasiMhAsana
Eride ninna puNyadali nI mADida
upakAra mareyalArenendu
pAdakke banderagidanu

baNNada andaNa kaLisida sUlagittige
mannisi maNeyanu hAkidaru
aNNayya karesida kAraNEnendu
baNNisi bandu kuLitaLu

ettaNindali enna tande vArtegaLanu
satyavAgi hELabEkenuta viprasuta
ninnillige tandukoTTenO
muttilu honnige Ase mADi

hAkide kallugunDanu nimmammage
hAkyA mAtugaLa ADidenu
gOkulakoLu kRuShNa bandante ninna tande
sAkidaLu yaSOdheyante

makkaLanagali dEvakkiyandadi ninna
hostiloLage kuLitiharu
akkaradinda avara kUDendunutali
hastava mugidu hELidaLu

muduki mAtanu kELi padaka muttina sara
naguta hAki koraLallE
jaratAri sIre kuppusa uDugore koTTu
karesida tAyi tandeyara

karedaru endare kaMpa huTTitu dEhadi
surisuta kaNNa jalagaLa
doretanakkeduru nAvEnendu manadalli
maraguta yOcaneya mADidaLu

baDisOnO baidu biDuvanO kaiyindali
koDisOno julumAnava
iDisOnO seremane oLage nammindali
nuDisi biDuvanO tappenutA

Enu mADuvanO baMda janaroLu namma
mAnava kaLedu biDuvanO
mAnABimAna ninnadu
mahalakShumi pAdavE gati eMdarAga

naDuguta bandaru muDiya mundake bAgi
kaDu cinteyinda nintiralu
haDeda tAyi tande nIvE Enu endu
nuDidu tA caraNakkeragidanu

kaMda nAnendare saMBramavAda
Ananda bAShpagaLu uduridavu
tande tAyi makkaLondAdarenutali
dunduBi BEri baDidavu

haruShadinda ibbarU ondAgi tAyandiru
baresidarAga patrikava
karesidaru bandhu baLaga nibbaNavannu
arasa maduve saMBramadi

hAdige handara hAki mEle tOraNa kaTTi
bIdi naubattu vAlagavu
brAhmaNarellaru neredaru nAlku
vEdava hELuta maMgaLAShTakava

vallaBanedurige celva satiya taMdu
celluta maMtrAkShateya
mallige bAsiMgavanu kaTTi koraLa
mAMgalya baMdhana mADidaru

hAgala handaradoLage hasiru pattala koTTu
Aga nEma biDisidaru
DAgukuDibALe eleya BUmavanunDu
nAgavaligaLa mADidaru

muttina pallakki oLage SrIgauriya
paTTaNadoLu meresutali
arthiyiMdali baMdu arasu siMhAsanakke
oppidaLu Aga mahalakShmI

ariShiNa kuMkuma araLu mallige gandha
paripari BakShya pAyasavu
narasiMhanarasige arpisuta Arati mADe
haruShadinda varava nIDuvaLu

mangaLa jayavenni mangaLa SuBavenni
mangaLAngane mahAlakShmI
kangaLu teredu kaTAkShadi nODalu
hingOdu sakala pApagaLu

bittida beLerAsi okkuva dhAnyavu
ukkuva kShIradandadali
lekkavillade makkaLAgOru manetuMba
muttaidetanava nIDuvaLu

tA surakAmadhEnuvinante bandu
BImESakRuShNana sahitAgi
lEsAda sakala saMpattane koTTu tA
vAsa mADOLu maneyalli
***

just scroll down for other devaranama 



another version


ಶ್ರಾವಣ ಶುಕ್ರವಾರ ಗೌರೀ ಹಾಡು

ಹರನ ಕುಮಾರನ ಚರಣಕಮಲಗಳಿಗೆರಗಿ
ಶಾರದೆಗೆ ವಂದಿಸುತ
ಶರಧಿಶಯನಗೆ ಸೆರಗೊಡ್ಡಿ ಬೇಡಿಕೊಂಬೆ
ಶರಧಿಸುತೆಯ ಕಥೆಗೆ ವರವ

ಸಾಕ್ಷಾತ ಶ್ರೀಹರಿ ವಕ್ಷಸ್ಥಳ ವಾಸಿಯೇ
ಇಕ್ಷುಚಾಪದವನ ಪಡೆದ
ಮೋಕ್ಷದಾಯಕಳೇ ಮಾ ಲಕ್ಷುಮಿ ಕರುಣಾ-
ಕಟಾಕ್ಷದಿ ನೋಡಬೇಕೆನ್ನ

ಶ್ರಾವಣಮಾಸದಿ ಮೊದಲ ಶುಕ್ಕುರವಾರ
ಮಾಧವನರಸಿ ಮಾಲಕ್ಷ್ಮೀ ದೇವೇರ
ಮಹಿಮೆ ಕೊಂಡಾಡುವೋದೀ ಕಥೆ
ಕಿವಿಗೊಟ್ಟು ಕೇಳೋದು ಜನರು

ಬಡವ ಬ್ರಾಹ್ಮಣನೊಂದು ಪಟ್ಟಣದೊಳಗಿದ್ದ
ಮಡದಿ ಮಕ್ಕಳ ಸಹಿತಾಗಿ
ಹಿಡಿದು ತಂಬೂರಿ ತಂಬಿಗೆಯ ಗೋಪಾಳಕ್ಕೆ
ಬಿಡದೊಂದು ಮನೆಯ ತಿರುಗುತಲಿ

ಸೊಸೆಯರು ನಾಲ್ಕು ಮಂದಿಯು ಗಂಡುಮಕ್ಕಳೂ
ಹಸುಗೂಸುಗಳು ಮನೆತುಂಬಾ
ಅಶನ ವಸನವಿಲ್ಲ ಹಸಿದ ಮಕ್ಕಳಿಗೆ ಹಾಲು
ಮೊಸರು ಅನ್ನವು ಮೊದಲಿಲ್ಲ

ಅತಿಗುಣವಂತರು ಗತಿಯಿಲ್ಲ ಗ್ರಾಸಕ್ಕೆ
ಮಿತಭೋಜನವ ಮಾಡುವರು
ವ್ರತನೇಮ ನಿಷ್ಠೆ ನಿರುತ ದರಿದ್ರವನು
ಶ್ರೀಪತಿ ಸತಿ ದಯದಿ ನೋಡಿದಳು

ಒಂದು ದಿನದಿ ಬಂದ ಮಂದಿ ಮಂದಿರದಲ್ಲಿ
ಚೆಂದಾದ ಸುಣ್ಣ ಸಾರಣೆಯು
ರಂಗವಲ್ಲಿ ಚಿತ್ರ ಬಣ್ಣಕಾರಣೆ ಮನೆ ಮುಂದೆ ತೋರಣ ಕಟ್ಟುತಿರಲು

ಮನೆಮನೆಯಲ್ಲಿ ಮಾಲಕ್ಷ್ಮೀದೇವೇರ ಚಟ್ಟಿಗೆ ಬರೆವುದನು
ತಾ ಕಂಡು ಇದು ಏನು ನೋವಿ
ಎನಗೆ ಹೇಳಬೇಕೆಂದು ಘನಭಕ್ತಿಯಿಂದ ಕೇಳಿದನು

ಕ್ಷೀರಸಾಗರದಲ್ಲಿ ಹುಟ್ಟಿದ ಮಾಲಕ್ಷ್ಮೀ ದೇವಿ
ದೇವರ ಪಟ್ಟದರಸಿ
ಶ್ರಾವಣಮಾಸ ಸಂಪತ್ತು ಶುಕ್ಕುರವಾರ
ನಾವು ಪೂಜೆಯ ಮಾಡಬೇಕು

ಎನಗೊಂದು ಚಟ್ಟೆಗೆ ಬರೆದುಕೊಟ್ಟರೆ ಎನ್ನ
ಮನೆಯಲ್ಲಿ ಇಟ್ಟು ಪೂಜಿಪೆನು
ವಿನಯದಿಂದ ಹೇಳಿಕೊಂಡರೆ ಒಂದು ಚಟ್ಟಿಗೆ
ಬರೆದುಕೊಟ್ಟರು ಬಲಗೈಲಿ

ಸಿರಿದೇವಿ ಚಟ್ಟಿಗೆ ಹಿಡಿದು ಗೋಪಾಳಕ್ಕೆ
ಹೋದನು ಮನೆ ಮನೆಯಲ್ಲಿ
ಗೋಧಿ ಅಕ್ಕಿ ಬ್ಯಾಳಿ ಬೆಲ್ಲ ತುಪ್ಪವ ತಂದು
ನೀಡೋರು ಹಿಡಿ ಹಿಡಿರೆಂದು

ಕ್ಯಾದಿಗೆ ಕುಸುಮ ಮಲ್ಲಿಗೆ ಪತ್ರಫಲಗಳು
ಪೂಜಾ ಸಾಧನ ಪದಾರ್ಥಗಳು
ಆದಿಲಕ್ಷ್ಮಿ ದಯ ಆದ ಕಾರಣದಿಂದ
ಆದರದಿಂದ ಕೊಡುವರು

ತಂದ ಪದಾರ್ಥ ತನ್ನ ಹೆಂಡತಿ ಕರೆದು
ಮುಂದಿಟ್ಟು ವಾರ್ತೆಗಳ ಹೇಳಿದನು
ಇಂದಿರಾದೇವೇರ ಇಂದು ಪೂಜೆಯ ಮಾಡು
ಆನಂದವ ಕೊಡುವಳು ನಮಗೆ

ಕಬ್ಬು ಬಿಲ್ಲು ಹಿಡಿವೋ ಕಾಮನ ಮಾತೆ ಮಾಲಕ್ಷ್ಮೀ
ಉರ್ವಿಯೊಳು ಉತ್ತಮಳೀಕೆ
ಹಬ್ಬದೂಟಕೆ ಹೇಳಿ ಬಂದೆ ಬ್ರಾಹ್ಮಣಗೆ
ಮತ್ತೊಬ್ಬ ಮುತ್ತೈದೆಗೆ ಹೇಳೆಂದ

ಚಿಕ್ಕ ಸೊಸೆ ಎಣ್ಣೆ ಕುಂಕುಮ ಕೈಯಲ್ಲಿ
ತಕ್ಕೊಂಡು ನಡೆದಳು ಹಾದಿಯಲಿ
ಚೊಕ್ಕ ಚಿನ್ನದ ಗೊಂಬೆಯಂಥ ಮುತ್ತೈದೆ ತಾ
ಗಕ್ಕನೆ ಬಂದು ಕೇಳಿದಳು

ಹುಡುಗೀ ನೀ ಎತ್ತ ಪೋಗುವಿಯೇ ನಿಮ್ಮ ಮನೆ ಎಲ್ಲೆ
ಅಡಿಗೆ ಏನೇನು ಮಾಡುವರು
ಹಿಡಿದೆಣ್ಣೆ ಕುಂಕುಮ ಕೊಡುವುದು ಇನ್ಯಾರಿಗೆ
ಕೊಡಬಾರದೇನೆ ನೀ ಎನಗೆ

ದಾರಾದರೇನಮ್ಮ ದಾರಿ ನೋಡದ ಮುಂಚೆ
ನೀನೇ ಬಾ ನಮ್ಮ ಮಂದಿರಕೆ
ಹೇಳಿ ಮುತ್ತೈದೆಗೆ ಹಿಗ್ಗಿಲೆ ಬಂದು ಅತ್ತೆ
ಮಾವನ ಮುಂದೆ ಅರುಹಿದಳು

ಮನೆಯ ಸಾರಿಸಿ ಸುಣ್ಣ ಕಾರಣೆ ರಂಗೋಲಿಯ
ಬರೆದು ಬಾಗಿಲಿಗೆ ಬಣ್ಣವನು
ತಳಿರು ತೋರಣ ಕಟ್ಟಿ ಸರ್ವ ಸಂಭ್ರಮದಿಂದ
ಎರೆದುಕೊಂಡರು ಎಲ್ಲರೂ ಬೇಗ

ಕಮಲ ಕ್ಯಾದಿಗೆ ಕಬ್ಬು ಕದಳಿ ಕಂಬವು
ಬಾಳೆಗೊನೆ ಕಟ್ಟಿ ಚಿತ್ರ ಮಂಟಪವ
ಎಡಬಲದಲ್ಲಿ ನಾಲ್ಕು ನಂದಾದೀವಿಗೆ ಹಚ್ಚಿ
ನಡುವೆ ಹಾಕಿ ಪದ್ಮ ಪೀಠಗಳ

ಚಟ್ಟಿಗೆಯೊಳಗೆ ಅಕ್ಕಿ ಐದು ಫಲವ ತುಂಬಿ
ಮುತ್ತೈದೆಯರೆಲ್ಲಾ ನೆರೆದು ಕಟ್ಟಿದರು
ಕೊರಳ ಮಾಂಗಲ್ಯ ಮಾಲಕ್ಷ್ಮೀ ಪ್ರತಿಷ್ಠೆ
ಮಾಡಿದರು ಸಂಭ್ರಮದಿ

ಅರಿಷಿಣ ಕುಂಕುಮ ಗಂಧ ಬುಕ್ಕಿಟ್ಟು
ಗೆಜ್ಜೆವಸ್ತ್ರವು ಪಾರಿಜಾತ ಸಂಪಿಗೆಯು
ಮುಡಿಸಿ ಮಲ್ಲಿಗೆ ದಂಡೆ ಒಡೆಸಿ ತೆಂಗಿನಕಾಯಿ
ಉಡಿ ತುಂಬಿ ಉತ್ತತ್ತಿ ಫಲಗಳು

ಭಕ್ಷ್ಯ ಶ್ಯಾವಿಗೆ ಪರಮಾನ್ನ ಚಿತ್ರಾನ್ನ ಸಣ್ಣಕ್ಕಿ
ಶಾಲ್ಯಾನ್ನ ಸೂಪಗಳು
ಚಕ್ಕುಲಿ ಗಿಲಗಂಜಿ ಚೆಂದ ಚಿರೋಟಿ
ಹಪ್ಪಳ ಸಂಡಿಗೆ ಆಂಬೋಡೆಗಳು

ಸಕ್ಕರೆ ಘೃತ ಕ್ಷೀರ ಸಕಲ ಪಕ್ವಾನ್ನ
ಮಂಡಿಗೆ ಬೀಸೋರಿಗೆ ಗುಳ್ಳೋರಿಗೆಯು
ಚಂದ್ರನಂತೆ ಹೊಳೆವ ಶ್ಯಾವಿಗೆಯ ಫೇಣಿಯು
ದಿವ್ಯ ಬುಂದ್ಯ ಬುರುಬುರಿ ಅನಾರಸವು

ಬೇಕಾದ ಬೇಸನ್ನು ಬಿಳಿಯಾದ ಅರಳಿನುಂಡೆ
ಮೋತಿಚೂರು ಚೂರ್ಮಲಾಡು
ಸೇತು ಬಿಳುಪಿನ ಚಕ್ರದಂಥ ಜಿಲೇಬಿ
ಸುಕಿಯದುಂಡೆ ಮುಖವಿಲಾಸಗಳು

ಹೋಳಿಗೆ ಎಣ್ಣೋರಿಗೆ ಹೊಯ್ಗಡವು ಗೇಹೂರಿ ಕಾಯಿಹಾಲು
ಕರಿದ ಹೂರಣ ಕಡುಬು
ತೇಂತೋಳಿ ತಿರುವಿದ ಉದ್ದಿನಬೇಳೆ ಮೆಣಸು ಜೀರಿಗೆ
ಇಂಗು ಹಾಕಿದ ಉಪ್ಪಿನ ಕಡುಬು

ಸಾರು ಸಾಂಬಾರ ಪಡುವಲಕಾಯಿ ಪಳದ್ಯ ಉಪ್ಪೇರಿ
ಉಪ್ಪಿನಕಾಯಿರಸವು
ಖೀರು ಮಾಲತಿ ಗೌಲಿ ಪರಡಿ ಪರಮಾನ್ನ
ಮುಕ್ ಸೌರಿ ಚಟ್ಟಣಿ ಕೋಸಂಬರಿಯು

ಹಾಗಲವು ಹೀರೆ ಸೌತೆ ಹಂದರದ ಅವರೆ ಚೌಳಿ
ಬಾಳೆ ಬೆಂಡೆ ಕುಂಬಳವು
ಮಾಗಿದ ಹಲಸಿನ ಕಾಯಿ ಕಲಸಿ ಮೇಲೋಗರ
ಗೆಣಸು ಗುಳ್ಳದಕಾಯಿ ಬಜ್ಜಿಗಳು

ಸಬ್ಜಿಭಾತು ಸೌತೆಭಾತು ಕೇಸರೀ ಭಾತು
ಕೆನೆಕೆನೆ ಮೊಸರು ಒಗ್ಗರಣೆ
ಹಸಿ ಅಲ್ಲ ಬಿಸಿ ಹಾಲು ಹೊಸಬೆಣ್ಣೆ ಇಂಗುಪ್ಪು
ಕಲಸಿ ಬಕಾಳ ಭಾತುಗಳು
ಮುದ್ದು ಮಾಲಕ್ಷ್ಮೀ ನೈವೇದ್ಯ ಮಾಡಿದರು
ಅನಿರುದ್ಧ ಮೂರುತಿ ಸಹಿತಾಗಿ
ಶುದ್ಧ ಸುಣ್ಣವು ಎಲೆ ಅಡಿಕೆ ಏಲಕ್ಕಿ
ಪತ್ತರಿ ಕಾಯಿ ಕಾಚು ಲವಂಗ

ಹಚ್ಚಿಕೊಂಡರು ಎಲ್ಲ ಅರಿಷಿಣ ಗಂಧ ಕುಂಕುಮ
ಎತ್ತಿ ಚಾಮರವ ಬೀಸುವರು
ಅಚ್ಯುತನ ಅರಸಿ ಅನುಗ್ರಹದಿ ನೋಡಿದಳು
ಮೆಚ್ಚಿ ಮುಚ್ಚಿದ ಕಣ್ಣ ತೆಗೆದು

ಅಮರಾದಿ ಸುರರ ಒಡೆಯನ ರಾಣಿ ಲಕ್ಷ್ಮಿಗೆ
ಸರ್ವವ ಸಮರ್ಪಣ ಮಾಡಿ
ನಮೋ ನಮೋ ಎಂದು ಕೈಮುಗಿದು ಮಂತ್ರಾಕ್ಷತೆ
ಶಿರದಲ್ಲಿ ಹಾಕಿ ವರವ ಬೇಡುವರು

ಹಾಡುತ ಪಾಡುತ ಮಾಡುತಲಾರತಿ
ಬೇಡುತ ಮುಡಿದ ಮಲ್ಲಿಗೆಯ
ನೋಡುತ ನಲಿನಲಿದಾಡುತ ತಾ
ದಯಮಾಡುತ ಕೊಟ್ಟಳು ವರವ

ಹೊತ್ತು ಬಹಳವಾಯ್ತು ಮುತ್ತೈದೆ ಬರಲಿಲ್ಲ
ಮತ್ತೇನು ಇದಕೆ ಉಪಾಯ
ಅಷ್ಟು ಅಡಿಗೆ ಎಲೆ ಬಡಿಸಿ ಕುಂಕುಮ ವೀಳ್ಯವಿಟ್ಟು
ಪುಟ್ಟಿಯನು ಮುಚ್ಚಿದರು

ಗಂಡ ಹೆಂಡಿರು ಬಂದ ಬ್ರಾಹ್ಮಣರೊಡಗೂಡಿ
ಉಂಡು ವೀಳ್ಯವನೆ ತಕ್ಕೊಂಡು
ಇಂದು ನಮಗೆ ಜಯಶುಭಕಾಲ ಬಂದಿತೀಗ
ಎಂದು ಆನಂದ ಹೊಂದಿದರು

ಮರುದಿನ ಸಂಪತ್ತು ಶನಿವಾರ ಹಿಟ್ಟಿನ ಕಡುಬು
ಅಂಬಲಿ ಪರಮಾನ್ನ ತಿಳಿ ತಿಳಿದೆಣ್ಣೆ
ಹಿಂಡಿಯ ಪಲ್ಯ ಗೌರೀಪೂಜೆಯ ಮಾಡಿ ಇಟ್ಟರು ನೈವೇದ್ಯವನು

ಎರಡನೇ ಶುಕ್ಕುರುವಾರ ಮುತ್ತೈದೆಗೆ
ಧೃಢವಾಗಿ ಹೇಳಿ ಬಾರೆನಲು
ಎಡಗೈಯ ಮುಚ್ಚಿಕೊಂಡು ಎಣ್ಣೆ ಕುಂಕುಮವನು
ನಡೆದಳು ಆಗ ಇನ್ನೊಬ್ಬ ಸೊಸೆಯು

ಬಾಜಾರ ಬಿಟ್ಟು ಬದಲು ಮಾರ್ಗ ಹಿಡಿಯಲು
ಹಾದಿಗೆ ಬಂದು ಅಡ್ಡಗಟ್ಟಿ
ಆದಿ ಶುಕ್ಕುರುವಾರ ಹೇಳಿ ಎನ್ನನ್ನು ಬಿಟ್ಟು
ನೀ ದಾರಿಗೆ ಹೇಳುವಿಯೇ ಭೋಜನಕೆ

ನಮ್ಮ ಗೊಡವೆ ಯಾತಕಮ್ಮ ನಿನಗೆ ಸುಮ್ಮನೆ ಹೋಗು
ಶುಕ್ಕುರುವಾರದಲಿ ನಿನ್ನ
ಎಲೆಯ ಬಡಿಸಿಟ್ಟಿದ್ದು ಇಂದಿಗೆ ಅದೆ
ಉಣಬೇಕಾದರೆ ಹೋಗಮ್ಮ

ತಂಗಳೂಟವನು ಉಂಬೋ ಕಂಗಾಲಿ ನಾನಲ್ಲ
ಬಂಗಾರದಂಥ ಮುತ್ತೈದೆ
ತಿಂಗಳಾಗಲಿ ಹಂಗುನೂಲು ಕಟ್ಟಿ ನಿನ್ನೆಲೆ
ತಂಗಳು ನಿನಗೆ ಉಣಿಸುವೆನು

ಬಡಿವಾರ ಮಾತು ಯಾಕೆ ಬಡಸಿಟ್ಟ ಎಲೆ ಉಂಬೋ
ಬಡವಿ ಅಲ್ಲ ನಾ ಭಾಗ್ಯವಂತೆ
ತಡೆಯದೆ ಬರುವೆನು ತಾ ಎಣ್ಣೆ ಕುಂಕುಮ
ಹಿಡಿದೆಳಕೊಂಡು ನಡೆದಳು

ಕೊಟ್ಟೆಣ್ಣೆ ಕುಂಕುಮ ತಟ್ಟನೆ ಬಂದಳು
ಅಷ್ಟು ವಾರ್ತೆಗಳ ಹೇಳಿದಳು
ದಿಟ್ಟ ಮುತ್ತೈದೆ ದೇಶದ ಮ್ಯಾಲೆ ಕಾಣೆನೆಂದು
ಎಷ್ಟು ಹೇಳಲಿ ಆಕೆಯ ಚೆಲ್ವಿಕೆಯ

ಅಡಿಗೆಯಾದವು ಗೌರೀಪೂಜೆಗಳಾದವು
ಬಡಿದವು ಮೂರು ಗಂಟೆಗಳು
ಉಡಿ ಕುಂಕುಮ ಅರಿಷಿಣ ಬಡಿಸಿಟ್ಟರು ಒಂದೆಲೆ
ಸಡಗರದಿಂದ ಉಂಡರಾಗ

ಮೂರನೇವಾರ ಮುತ್ತೈದೆಗೆ ಹೇಳುವರು
ಮತ್ತ್ಯಾರೆಂದು ವಿಚಾರ ಮಾಡುವರು
ಮಾವನವರೆ ಎನ್ನ ಮಾತು ನೋಡಿರಿ ಎಂದು ತಾ
ಹೋದಳು ಇನ್ನೊಬ್ಬ ಸೊಸೆಯು

ಮುಡಿಬಾಗಿ ಮುಚ್ಚಿ ಕೊಂಡೆಣ್ಣೆ ಕುಂಕುಮವನ್ನು
ಹಿಡಿದಳೂ ಇನ್ನೊಂದು ಓಣಿಯನು
ಬಡ ಬಡ ಬಂದು ಹಿಡಿದೆಣ್ಣೆ ಕುಂಕುಮ
ಕೊಡುವುದು ಇನ್ಯಾರಿಗೆ ಔತಣವ

ಔತಣವಲ್ಲಮ್ಮ ಅತಿ ಬಡವರು ನಾವು
ಗತಿಯಿಲ್ಲ ಗೌರಿ ಹಬ್ಬಕ್ಕೆ
ಸುತರು ಆಡ ಹೋಗ್ಯಾರ ಹುಡುಕುತಾ ಬಂದೆ
ಬಿಡು ದಾರಿ ಈ ಪರಿ ಬಯ್ಯುವರು ಎನ್ನ ಮನೆಯಲಿ

ಉಗುಲುತಗಲಿನ ಮಾತಿನ ಬಗೆಯ ನಾ ಬಲ್ಲೆನೆ
ಹಗರಣಗಿತ್ತಿ ನೀ ಹೌದೆ
ಮೊದಲ ಶುಕ್ಕುರುವಾರ ಹೇಳಿ ಎನ್ನನು ಬಿಟ್ಟು
ಬದಲು ಮುತ್ತೈದೆಗೆ ಹೇಳುವರೆ

ಎರಡು ವಾರ ಔತಣ ಬುರುಡಿ ಊಟಾಯಿತು
ಬರಡು ಎಮ್ಮೆ ಹೈನ ಉಂಡಂತೆ
ಕಡಲೆ ಹೂರಣ ಕಡುಬು ಕಟದಬೆಣ್ಣೆ
ಕಾಸಿ ತುಪ್ಪವ ಬಡಿಸು ಎನಗೆ

ಮೆಚ್ಚಿ ಕೊಂಡು ಆಕೆ ಮಾತಿಗೆ ಮರುಳಾದಳೂ
ಹಚ್ಚಿ ಕುಂಕುಮ ಎಣ್ಣೆ ಕೊಟ್ಟು
ನಿಶ್ಚಯವೇನಮ್ಮಾ ನೀ ಬರುವುದು ಎಂದರೆ
ಈ ಕ್ಷಣ ಬರುವೆನು ಹೋಗೆಂದಳು

ಬಂದು ಹೇಳಿದಳಾಕೆ ಚೆಂದ ಚೆಲ್ವಿಕೆ ಮಾತು
ಒಂದೊಂದು ಮಾಡಿ ವರ್ಣಿಸುತಾ
ಇಂದಾಕೆ ಮನಕೆ ಬಂದಂತೆ ಅಡಿಗೆ
ಮಾಡೋಣೆಂದು ಸಂತೋಷ ಪಡುವರು

ಕಡಲೆ ಹೂರಣ ಗಸಗಸೆ ಕೊಬ್ಬರಿ ಏಲಕ್ಕಿ
ಪುಡಿ ದ್ರಾಕ್ಷಿ ಉತ್ತತ್ತಿ ಹಳಕು
ಕಲಸಿ ಕಲ್ಲುಸಕ್ಕರೆ ಕರಿಗಡುಬು ಬೆಣ್ಣೆ ಕಾಸೀ
ತುಪ್ಪವು ಸೋಸಿಲಿಂದ

ಸಿರಿದೇವಿ ಪೂಜೆ ನೈವೇದ್ಯಗಳಾದವು
ಹೊರಗೆ ಹತ್ತು ತಾಸು ಮೀದವು
ಬರಲಿಲ್ಲ ಮುತ್ತೈದೆ ಎಂದು ಎಲೆ ಬಡಿಸಿಟ್ಟು
ಸರ್ವರೂ :ಊಟವನು ಮಾಡಿದರು

ಹುಟಿದ ಮ್ಯಾಲೆ ಇಂಥ ಕಡುಬು ಕಂಡಿದ್ದಿಲ್ಲ
ನಮ್ಮ ಹೊಟ್ಟೆಗೆ ಉಂಡವರು ನಾವಲ್ಲ
ಮುತ್ತೈದೆ ಪುಣ್ಯದಿಂದ ಈ ಊಟ ದೊರಕಿತು
ಎಂದು ಅಷ್ಟರೂ ನಗುತ ನುಡಿದರು

ನಾಲ್ಕನೇವಾರ ನಾ ಹೇಳಿ ಬರುವೆನೆಂದು
ಆಕೆ ಹೋದಳು ಹಿರಿಮಗನ ಅರಸಿ
ಬೇಕಾದವರು ಬಂದು ಹಾಕ್ಯಾಡಲಿ ಎನ ಕೂಡ
ಯಾಕೆ ಎನಗೆ ಒಬ್ಬರ ಭಿಡೆಯ

ದೊಡ್ಡ ಅಗಸೆಯ ಬಿಟ್ಟು ದಿಡ್ಡಿ ಬಾಗಿಲ ಮುಂದೆ
ಸದ್ದು ಮಾಡದೆ ಬರುತಿರಲು
ವಜ್ರದ ಗೊಂಬೆಯಂತೆ ಹೊಳೆವೋ ಮುತ್ತೈದೆ
ನಿಂತಿದ್ದಳಾಗ ಎದುರಿಗೆ ಬಂದು

ಸರ್ವರೊಳಗೆ ಹಿರಿಸೊಸಿಯು ನಾ ಎಂಬಂಥ
ಗರ್ವ ಅಹಂಕಾರದಿ ನೀನು
ಸರಿಯಾಗಿ ಮೂರುವಾರ ಹೇಳಿ ಬಿಟ್ಟು ಎನ್ನ
ಕರೆಯದೆ ಉಂಬುವ ಕಾರಣ ಏನೆ

ಕರಿಲಿಕ್ಕೆ ಬರಲಿಕ್ಕೆ ಕಾಣೆ ನಿಮ್ಮ ಮನೆ ನಾನು
ತಿರುಗೂವಿ ನಾರದರಂತೆ
ಇರುವ ಮಂದಿರವ ತೋರಿದರೆ ಈಗ ನಾ ಬಂದು
ಕರೆದುಣಿಸುವೆನು ನಿಮ್ಮನ್ನು

ದೂರುಂಟು ನಮ್ಮ ಮನೆ ದಾರಿ ಅಸಾಧ್ಯವು
ನೋಡಿ ಬಂದವರು ದಾರಿಲ್ಲ
ಆಹಾರ ನಿದ್ರೆ ಸಂಸಾರ ಸಮುದ್ರವ
ಮೀರಿದವರಿಗೆ ಕಾಂಬುವುದು

ಮಧ್ಯಾಹ್ನದ ಹೊತ್ತಿಗೆ ಸಿದ್ಧಾಗಿ ಬರುವೆನು
ಭದ್ರವಾಗಿ ವಚನ ಕೊಡುವೆನು
ಶುಭವಾದಂಥ ಕೊಬ್ಬರಿ ಭಾರೀ ಬಟ್ಟಲು
ತರಿಸಿ ಹುರಿಗಡಲೆ ತುಂಬು ಉಡಿಯ

ಆಗರದೊಳಗಿನ ಅರಗಿಣಿ ಮರನೇರಿ
ಮಾಗಿದ ಫಲವ ಮೆದ್ದಂತೆ
ಬ್ಯಾಗ ಬಂದು ಈಗ ನಿಮ್ಮನೆಯಲ್ಲಿ ಊಟವನುಂಡು
ತೇಗುತ ತೃಪ್ತ್ಯಾಗಿ ಬರುವೆ

ಮಾಯಾದೇವಿಯ ಮಾಯಾ ಮಾತಿಗೆ ಮರುಳಾಗಿ
ತಾ ಕೊಟ್ಟೆಳೆಣ್ಣೆ ಕುಂಕುಮವ
ನಾ ಹೋದ ಕಾರ್ಯ ಕಾಯಿ ಆಗೋದೇ ಹಣ್ಣೆಂದು
ಹೇಳಿಕೊಂಡಳು ಹೇಳಿ ಕೊಂಡಳು ಶಿಫಾರಸ್ಸು

ವರಗೌರಿ ಪೂಜೆ ನೈವೇದ್ಯಗಳಾದವು
ಹೊರಗೆ ಆರು ಗಂಟೆ ಬಡಿದವು
ಬರಿಯ ಭರಾಸು ಮಾತಿನ ಜಾಣೆ ಮುತ್ತೈದೆ
ಬರಲಿಲ್ಲವೆಂದು ನುಡಿದರು

ಮತ್ತೊಂದು ಎಲೆ ಬಡಿಸಿಟ್ಟು ಮೃಷ್ಟಾನ್ನಗಳ ಅಷ್ಟರೂ
ಊಟವನು ಮಾಡಿದರು
ಕರ್ಪೂರದ ಅಡಿಕೆ ವೀಳ್ಯಗಳ ತಕ್ಕೊಂಡರು
ಅತ್ಯಂತ ಹರುಷದಿಂದ ಇರುವರು

ಬಂದಿತೀಗ ಐದನೇವಾರ ಮುತ್ತೈದೆಗೆ
ಇಂದು ನೀ ಹೇಳಿಬಾರೆನುತಾ
ಹೆಂಡತಿ ಕರೆದು ಹೇಳಿದ ಕುಂಕುಮ ಎಣ್ಣೆ
ತಕ್ಕೊಂಡು ತಾ ನಡೆದಳು ಬ್ಯಾಗ

ಬೀದಿ ಬಿಟ್ಟು ಬದಲು ಹಾದಿಗೆ ಬಂದಳಾ
ಹಾದಿಗೆ ಬಂದು ಅಡ್ಡಗಟ್ಟಿ
ನೀ ದಯ ಮಾಡಿ ಬಂದೆ ಎನಗೆ ಔತಣವ
ಆದರದಿಂದ ಹೇಳುವುದಕೆ

ಜಪ್ಪಿಸಿಕೊಂಡು ಔತಣವ ತಕ್ಕೊಂಡು ನೀ
ತಪ್ಪಿಸಿಕೊಂಡು ಹೋಗುತಿರೆ
ಒಪ್ಪತ್ತಾದರೂ ಊಟ ಮಾಡದವರ ಮಾತಿಗೆ
ಒಪ್ಪಿಕೊಂಬುವುದು ಹ್ಯಾಗೆ ಹೇಳಮ್ಮಾ

ಬಂದ ಔತಣ ಗಂಡ ಮಕ್ಕಳು ಭಾಗ್ಯ
ಒಲ್ಲೆ ಎಂಬುವರು ಉಂಟೆ ಲೋಕದಲಿ
ಕಂಡಲ್ಲಿ ಔತಣ ಹೇಳಿ ಕರೆಯದೆ ಇರುವುದೇನು
ಚೆಂದವೇ ನಿಮ್ಮ ನಡತೆ

ಲಕ್ಷಣವಂತೆ ನಾ ಎದುರಿಗೆ ಬಂದರೆ
ಲಕ್ಷಣ ಶುಭ ಶಕುನಗಳು
ಇಕ್ಷು ಮ್ಯಾಲೆ ಜೇನು ಇಟ್ಟಂತೆ ಬಂದು ಈಗ
ಲಕ್ಷ್ಮೀ ಸರಿಗೆ ನಾ ಕೂಡುವೆನು

ಅವಕಾಶ ಕೊಡುವೆನು ಸಾವಕಾಶ ಅಡಿಗೆ ಮಾಡು
ದಿವಾಕರ ಮುಣುಗೋ ಕಾಲದಲಿ
ದನಕರು ಬರುವೋ ವ್ಯಾಳ್ಯಕ್ಕೆ ನಾ ಬರುವೆನು
ಮನಕೆ ಸಂದೇಹ ಬ್ಯಾಡಮ್ಮಾ

ಅಂಗಳ ಸಾರಿಸಿ ರಂಗು ಕಾರಣೆ ಕೊಟ್ಟು
ರಂಗವಲ್ಲಿಯ ಚಿತ್ರ ಬರೆದು
ಅಂಬರೂದಿನ ಕಡ್ಡಿ ಅರಮನೆ ಬಾಗಿಲ
ಮುಂದೆ ಒಂದು ಹಚ್ಚಿಡಿಸು ಹಿಲಾಲು

ಮಡಿಪೀತಾಂಬರವುಟ್ಟು ಮಡಿಸೀರೆಯನು ಬಿಟ್ಟು
ಕಡಗ ಕಂಕಣ ಕೈಯಲ್ಲಿಟ್ಟು
ಧೃಢವಾದ ಮುಕುರ ಒಂದಡ್ಡಿಕೆ ಬುಗುಡಿ
ಬಾವುಲಿ ಹೊಳೆಯುತಲಿ

ಕಂಚು ಕಳಶ ಕದಲಾರತಿ ತಕ್ಕೊಂಡು
ಮುಂಚೆ ಬಂದು ಎದುರುಗೊಂಡರೆ ಎನ್ನ
ಮಿಂಚಿನಂತೆ ಹೊಳೆವೋ ಚಿನ್ನದ ಹಲಗೆಯ ತೂಗೋ
ಮಂಚದಿ ಬಂದು ಕೂಡುವೆನು

ಅರಮನೆಯಲ್ಲಿ ನಾವಿರುವೋ ಮೂರಂಕಣ ಮನೆ ಮುಂದೆ
ಮುರುಕು ಚಪ್ಪರವು
ಮರದ ಮಣೆಯು ನಮ್ಮಲ್ಲಿರುವೋದು ಚಿನ್ನದ ಹಲಗೆ
ಮಂಚ ಎಲ್ಲಿ ತರುವೋಣ

ಮಡಿಸೀರೆ ಬಿಟ್ಟರೆ ಇನ್ನೊಂದು ಕೋರಿಗಳಿಲ್ಲ
ಮಡಿ ಪೀತಾಂಬರ ನಾ ಕಂಡಿಲ್ಲ
ಹರಡಿ ಕಂಕಣವೆಲ್ಲೆ ಕರಿಯ ಕಾಜಿನ ಬಳೆ
ಇರಲಮ್ಮ ನಿಮ್ಮ ದಯ ನಮಗೆ

ಬಂಗಾರದ ಬಾಳೆಲಿ ಬೆಳ್ಳಿ ಬಟ್ಟಲು
ಮಂಡಿಗೆ ಹಾಲು ತುಪ್ಪಗಳು
ಉಂಡು ಕೂಡುವೆನು ಕುಂದಣ ಕೆತ್ತಿದ ತಬಕಿನಲಿ
ತಂದು ನೀಡೆನಗೆ ತಾಂಬೂಲ

ಹುಟ್ಟಿದ ಮೇಲೆ ಈ ಬೆಟ್ಟಿಲಿ ಎಲೆಯ ಸುಣ್ಣ ಹಚ್ಚಿ
ಹಾಕಿಕೊಂಡು ನಾನರಿಯೆ
ಕರ್ಪೂರದ ಅಡಿಕೆ ಮುತ್ತಿನ ಸುಣ್ಣ ಎಳೆ ಎಲೆಗೆ ಹಚ್ಚಿ
ನೀ ಮಡಚಿ ಕೊಡು ಎನಗೆ

ಬಂಗಾರ ಎಂಬುದು ನಮ್ಮ ಕಂಗಳು ಕಂಡಿಲ್ಲ
ಮಂಗಳ ಸೂತ್ರದ ಒಂದು ಹೊರತು
ಕುಂದಣ ತಬಕು ಎಲ್ಲಿ ಒಡಕೊಂದು ಹಿತ್ತಾಳೆ
ತುಂಡಾದ ತಾಟೊಂದು ಇರುವುದು

ಬುಟ್ಟದಾರಿ ಬುಗುಡಿ ಅಂಚು ಜರತಾರಿ
ಅಚ್ಚು ಚಿನ್ನದ ಥಳಕಿರವೋ
ಕುಪ್ಪುಸ ಹೊಲಿಸಿಕೊಟ್ಟರೆ ಒಂದರೆ ಕ್ಷಣ
ತೊಟ್ಟು ನಿನಗೆ ಕೊಟ್ಟು ಬರುವೆ

ಹುಟ್ಟಾ ಬಡವರು ನಾವು ಅಷ್ಟದರಿದ್ರರು
ನಿತ್ಯ ಯಾತ್ರೆಯಲಿ ಬದುಕುವರು
ಚಿತ್ತಕ್ಕೆ ತಂದು ನೀವು ದಯಮಾಡಿ ಬರುವೋದು
ಎಂದು ಹಸ್ತವ ಮುಗಿದು ಹೇಳಿದಳು

ಕಡೆಯ ವಾರವು ಕಾಮಧೇನುವಿನಂತೆ ಬರುವೆನು
ಪಡೆದುಕೋ ಮನದ ಇಷ್ಟಾರ್ಥ
ನಡೆದು ಬರುವೆ ನಾಲ್ಕುವಾರದ ದಕ್ಷಿಣಿ
ಕೊಡು ನಾ ಬಿಡುವವಳಲ್ಲ

ಒಂದೊಂದು ಮಾತನಾಡವಳು ಮುತ್ತೈದೆ
ಬಾಯಿಂದ ಮುತ್ತು ಉದುರುವಂದದಲಿ
ಆನಂದದಿಂದ ಹಚ್ಚಿ ಕುಂಕುಮ ಎಣ್ಣೆ ಕೋಟ್ಟಾಗ
ಬಂದಳು ತನ್ನ ಮಂದಿರಕೆ

ಸಾಧ್ಯವಲ್ಲವು ಭಾಳ ಅಸಾಧ್ಯ ಮುತ್ತೈದೆ
ನಿಂತಿದ್ದಳು ಎನ್ನ ಎದುರಿಗೆ ಬಂದು
ನಿದ್ರೆಯೋ ಕನಸೋ ಎಚ್ಚರಿದ್ದಿಲ್ಲ ಎನಗೊಂದು
ನಿರ್ಧಾರವಾಗಿ ತಿಳಿಯದು

ಗತ್ತಿನ ಮಾತು ಚಮತ್ತು ಚಾತುರ್ಯ
ಸಂಪತ್ತಿನ ಸೌಭಾಗ್ಯವಂತೆ
ಎಷ್ಟು ಹೇಳಲಿ ಆಕೆ ಚೆಲ್ವಿಕೆ ಚೆಂದ
ಸಾಕ್ಷಾತ ವಿಷ್ಣುವನ್ನಾದರೂ ಮೋಹಿಸುವಳು

ನಮ್ಮ ಪುಣ್ಯದ ಫಲ ಒದಗಿ ಬಂದಿದ್ದರೆ
ಮನ್ನಿಸಿ ಮನೆಗೆ ಬರುವಳು
ಇನ್ನೇನು ಮಾಡೋಣ ಇದಕೆ ಎಂದು ಆಲೋಚಿಸಿ
ಇನ್ನೊಬ್ಬ ಮುತ್ತೈದೆಗೆ ಹೇಳಿದರು

ಪಾಲು ಸಕ್ಕರೆ ಪಂಚಭಕ್ಷ್ಯ ಪರಮಾನ್ನವು
ಸಾರು ಶಾಕಗಳು ಶಾಲ್ಯಾನ್ನ
ಮಾಲಕ್ಷ್ಮೀ ಪೂಜೆ ನೈವೇದ್ಯ ಮಾಡಿ
ಮಂಗಳಾರತಿ ಬೆಳಗುವರು

ಪಕ್ಷಿವಾಹನ ಪುರುಷೋತ್ತಮನಾದ ಅಧೋಕ್ಷಜ
ಆ ಪರಮಾತ್ಮ ನ ಅಕ್ಷದ ಸುತ ಅಡಗುವ ಕಾಲವನ್ನು
ನಿರೀಕ್ಷಿಸಿ ನೋಡುತಿಹರು

ಅತ್ತ ಮಾಲಕ್ಷ್ಮೀ ತಾ ಪಚ್ಚಕರ್ಪೂರ ಪುನುಗಿನ
ಎಣ್ಣೆ ಸಂಪಿಗೆ ತೈಲ
ಕಸ್ತೂರಿ ಬೆರೆಸಿದ ಬಿಸಿನೀರು ಅರಿಷಿಣ
ಹಚ್ಚಿ ತಾ ಎರಕೊಂಡಳಾಗ

ಸುಳಿಗುರುಳು ಹಿಕ್ಕೆ ಬೈತಲೆ ತಿದ್ದಿ ತಳಪು ಹಾಕಿ
ಚೌರಿ ರಾಗಟೆ ಚಂದ್ರ ಗೊಂಡ್ಯ
ಗಿಳಿಗಿಜ್ಜೆ ಹೆರಳು ಬಂಗಾರ ಕ್ಯಾದಿಗೆ ಮ್ಯಾಲೆ
ಅರಳು ಮಲ್ಲಿಗೆ ಮಾಲೆ ಮುಡಿದು

ಬಿಚ್ಚಿ ನಾನುಟ್ಟಳು ಬಿಳಿಯ ಪೀತಾಂಬರ
ಅಚ್ಚ ಜರದ ಸೆರಗ ಹೊದ್ದು
ಕುತ್ತಣಿ ಕುಬುಸ ಮುತ್ತಿನ ಗೊಂಡ್ಯ ತೋಳಿಗೆ
ಕಟ್ಟುತಿದ್ದಳು ಬಾಜು ಬಂದು

ವಜ್ರದ ವಂಕಿಯು ನಾಗಮುರಿಗೆ ನಾಗಡ್ಡಿಕೆ
ಗೆಜ್ಜಡ್ಡಿಕೆಯು ಕೊರಳಲ್ಲಿ
ದೊಡ್ಡ ಸರಿಗೆ ಮ್ಯಾಲೆ ಅಡ್ಡಿಕೆ ಮುತ್ತಿನ ಕೆಂಪು
ಥಳಕು ಜಳಕು ಹೊಳೆಯುತಲಿ

ಪುತ್ಥಳಿಸರ ಏಕಾವಳಿ ಚಂದ್ರಹಾರ
ಕಟ್ಟಿದಳಾಗ ಕಂಠಿ ಕಟ್ಟಾಣಿ
ಪಚ್ಚ ಮಾಣಿಕ ರತ್ನಪದಕ ನಿರಿಗಳಲಿ
ಜತ್ತಾಗಿ ನಲಿದಾಡುತಿರಲು

ಪರಡಿ ಕಂಕಣ ಹಸ್ತಕಡಗ ಕಮಲದ್ವಾರ್ಯ
ನಡುವಿಗೆ ನವರತ್ನ ಪಚ್ಚೆ
ಬಿಡಿಮುತ್ತು ಬಿಗಿದ ವಜ್ರದ ವಾಲೆ ಬುಗುಡಿ
ಚಂದ್ರಮುರುವು ಮುತ್ತಿನ ಸರಪಳಿಯು

ಸಾಲುಕುಂದಣದ ಆಣಿ ಮುತ್ತಿನ ಮುಕುರ್ಯ
ಬುಲಾಕು ಬಲಕೆ ವಜ್ರದ ಹರಳು
ತೀಡಿ ಕಾಡಿಗೆ ಹಚ್ಚಿ ತಿದ್ದಿ ಕುಂಕುಮವ
ಹಣೆ ಮ್ಯಾಲೆ ಹಚ್ಚಿ ಜೋಳದಕುಡಿಯಂತೆ

ಪಿಲ್ಯ ಕಾಲುಂಗುರ ಲುಲ್ಲು ಪೈಜಣ ರುಳಿ
ಘಲ್ಲು ಘಲ್ಲೆಂತ ಹೆಜ್ಜೆನಿಡುತ
ಗೆಲ್ಲು ಮಿಂಚುಗಳಂತೆ ಥಳಥಳಿಸುತ ಬೀದಿಯಲ್ಲಿ
ಬಂದಳು ಗಜಗಮನೆ

ಬೆಳ್ಳನೆ ಬೆಳ್ಳಿಯ ಮಿಳ್ಳೆ ತನ್ನ ಉಂಗುರ
ಬೆರಳಿನಿಂದ ಹಿಡಿದು ಬೀಸುತಲಿ
ತೆಳ್ಳನೆ ಪಾದ ಪುತ್ಥಳಿಯಂತೆ ಹೊಳೆಯುತ
ಚಿನ್ನ ಬಳ್ಳಿಯಂದದಿ ಬಳುಕುತಲಿ

ರಾಜಾಧಿರಾಜರೆಲ್ಲರು ನಿಂತು ನೋಡುತ
ಲಾಜಾವರದ ಗೊಂಬೆಯಂತೆ
ಭೋಜನಕೆತ್ತ ಪೋಗುವಳೋ ನೋಡುವಣೆಂದು
ಬಹು ಜನರು ಹಿಂದೆ ನಡೆದರು

ದಾವಲೋಕದಿಂದ ಇಳಿದಿಲ್ಲಿ ಬಂದಳು
ದಾರ ಸತಿಯೋ ದಾರ ಸುತಳೋ
ಮೋರೆ ನೋಡಲು ಮೂರ್ಛೆ ಬರುವುದು ಒಯ್ಯಾರಿ
ಮುಂಗಾರು ಮಿಂಚುಗಳಂತೆ ತೋರುವಳು

ಇಂದ್ರನ ಶಚಿಯೋ ಚಂದ್ರಮನ ರೋಹಿಣಿಯೋ
ಸುಂದರ ಸೂರ್ಯನರಸಿ ಸಂಜ್ಞೆಯೋ
ಗಾಂಧರ್ವರರಸಿಯೋ ಗಗನದಿಂದ ಇಳಿದಂಥ
ಗಂಗಾ ಶ್ಯಾಮಲ ಸೀತಾಂಗನೆಯೋ

ರತಿಯೋ ರೇವತಿಯೋ ಅರುಂಧತಿಯೋ ಪಾರ್ವತಿಯೋ ಭಾರತಿ
ಭಾಗ್ಯವಂತೆ ಸರಸ್ವತಿಯೋ
ಪತಿಗಳು ಐವರು ಸತ್ಯ ಪಾಂಡವರರ ಅರಸಿ
ದ್ರೌಪದಿ ಬಂದಳಿಲ್ಲಿಗೆ ಎಂಬುವರು

ಸತ್ಯಭಾಮೋ ರುಕ್ಮಣೀ ಜಾಂಬವಂತೀ ಆಷ್ಟಮ
ಸ್ತ್ರೀಯರೊಳಿಗಿದಾರೋ ಇವತ್ತು
ಸಂಪತ್ತು ಶುಕ್ಕುರುವಾರ ಸಾಕ್ಷಾತ
ಲಕ್ಷ್ಮಿಯೇ ಬಂದಳು ಎಂಬುವರು

ಹಸ್ತವ ಮುಗಿವರು ಸಾಷ್ಟಾಂಗಕ್ಕೆರಗೋರು
ಇತ್ತ ಬನ್ನಿ ಎಂದು ಕರೆವರು
ಶ್ರೇಷ್ಠ ವೈಕುಂಠ ಮೋಕ್ಷಪುರ ಮಾಲಕ್ಷ್ಮೀ
ಬಿಟ್ಟಿಲ್ಲೆ ಬಂದಳೆಂಬುವರು

ಮುಡಿಬಾಗಿ ನಡೆಯುತ ಮುಡಿದ ಹೂವು ಉದುರುತಾ
ಮುಗುಳ್ನಗೆಯಿಂದ ತಾ ನಗುತಾ
ಎಡಬಲದಲಿ ಓರೆನೋಟವ ನೋಡುತಾ
ನಡೆದಳು ಬಡವರ ಮನೆಗೆ

ಸಿರಿ ಬಂದು ತಾ ಕಣ್ಣ ತೆರೆದು ನೋಡುತಲಿರೆ
ಅರಮನೆ ಆಯಿತು ಆ ಕ್ಷಣದಿ
ಸುರಗಿ ಮಲ್ಲಿಗೆ ಶ್ಯಾವಂತಿಗೆ ನಾನಾ ಫಲಗಳಿದ್ದ
ವನವಾಯಿತು ಆ ಮನೆ ಸುತ್ತ

ಗಚ್ಚಿನಂಗಳ ವೃಂದಾವನ ಕಟ್ಟೆ ಕಾರಂಜಿ
ಹಚ್ಚನೆ ಗಿಳಿ ಹಂಸ ಗರುಡ ಪಕ್ಷಿ
ನವಿಲು ಪಾರಿವಾಳ ಪಾಂಚಾಲಿ ವೃಕ್ಷ ಅಶ್ವತ್ಥಗಿಡಗಳು

ಪಚ್ಚದಂತೆ ಹೊಳೆವೋ ಶ್ರೀ ತುಳಸಿದೇವಿಯರಲ್ಲಿ
ಅಚ್ಚ ವಜ್ರದ ಗೊಂಬೆಯಂತೆ
ಲಕ್ಷ್ಮಿ ತಾ ನಲಿನಲಿಯುತಲಿ ರಚಿತವಾದ
ಕುರ್ಚಿಯಲಿ ಬಂದು ಕೂಡುವಳು

ಬಡವನ ಮಡದಿಗೆ ಒಡವೆ ವಸ್ತ್ರವಾದವು
ಹರಡಿ ಕಂಕಣವು ಕೈಯಲ್ಲಿ
ಮಡಿಸೀರೆ ಉಟ್ಟಿದ್ದು ಹೋಗಿ ಮಡಿಪೀತಾಂಬರವಾಯ್ತು
ಅಡಿಗೆರಗಿ ಎದುರುಗೊಂಬುವರು

ಗಂಧ ಕುಂಕುಮ ಅರಿಷಿಣ ದಿವ್ಯ ಬುಕ್ಕಿಟ್ಟು
ತಂದು ಹಚ್ಚಿ ಕಾಲ ಜಾವಡಿಯ
ದುಂಡು ಮಲ್ಲಿಗೆ ಪಾರಿಜಾತ ಸಂಪಿಗೆ ಮಾಲೆ
ದಂಡೆ ಮುಡಿಸಿ ಜಡೆಮುಡಿಗೆ

ಕದಳಿ ಫಲಗಳು ಕೊಬ್ಬರಿಬಟ್ಟಲೊಳಗೆ ಹುರಿಗಡಲೆ
ಹಾಕಿ ಉಡಿಯ ತುಂಬುವರು
ಹಿಡಿದು ಕುಂದಣದ ಹರಿವಾಣದೊಳು ಹಾಡಿ
ಪಾಡುತ ಮಾಡಿ ಮುತ್ತಿನಾರತಿಯ

ಇಂದಿರಾದೇವಿ ಆನಂದದಿ ಕುಳಿತಿರೆ
ಇಂದ್ರಾದಿ ಸುರರು ನೋಡುತಲಿ
ಮಂದಾರ ಮಲ್ಲಿಗೆ ಮಳೆಯ ಕರೆದರಾಗ
ದುಂದುಭಿ ಭೇರಿ ಬಡಿದವು

ಎಡಬಲದಲ್ಲಿ ಚಾಮರವನ್ನು ಬೀಸೋರು
ಹಿಡಿದು ಹಿಲಾಲು ನೋಡುವರು
ಬಿಡಿಮಲ್ಲಿಗೆ ತಂದು ನಡೆಮುಡಿ ಹಾಸೋರು
ಸಡಗರದಿಂದ ಎದ್ದಳಾಗ

ಲಕ್ಕುಮಿದೇವಿ ತಾ ಗಕ್ಕನೆ ಬಂದಳು
ಹೊಕ್ಕಳು ದೇವರ ಮನೆಯ
ಚೊಕ್ಕ ಚಿನ್ನದ ಕೊಡವಾಗಿ ತಾ ತೂಗೋ
ಮಾಣಿಕ್ಯ ಮಂಚದಲು ಕೂಡುವಳು

ರನ್ನ ಮಾಣಿಕ್ಯ ರತ್ನ ಹೊನ್ನಹಣವು ಚೊಕ್ಕ
ಚಿನ್ನದ ಮೊಹರ ವರಾಹಗಳು
ಬಣ್ಣದ ಹವಳ ಮುತ್ತು ಭಾರಿ ಬಂಗಾರದಂದಿಗೆಯ
ಬಿಂದಿಗೆ ನೋಡುತಿಹರು

ಶುಕ್ಕುರುವಾರ ಶುಭಕಾಲ ಇವರಿಗೆ
ಸಿಕ್ಕಳು ಸಿಂಧುನಂದನೆಯು
ಬೊಕ್ಕಸದ ಭಾಗ್ಯ ಭಂಡಾರದ ಜಯಲಕ್ಷ್ಮೀ
ದಕ್ಕಿದಳು ಇವರಿಗೆ ಎಂಬುವರು

ಕರ್ಪೂರದಾರತಿ ಮಾಡಿ ಕಾಯಿ ಒಡೆದು
ಬುಕ್ಕಿಟ್ಟು ಕುಂಕುಮ ಹಚ್ಚುವರು
ಪಟ್ಟಣದ ಜನರು ಪತ್ತಲ ಸೀರಿ ಕುಪ್ಪುಸ
ಲಕ್ಷ್ಮಿಗೆ ಉಡುಗೊರೆಯ ಕೊಡುವರು

ನಾಲ್ಕುವಾರದ ಎಲೆ ತೆಗೆದು ನೋಡುತಲಿರೆ
ಹಾಕಿದ ಅನ್ನವು ಆಣಿಮುತ್ತು
ಶಾಕ ಪಾಕವು ಪಲ್ಯ ಪರಮಾನ್ನ ಭಕ್ಷ್ಯ
ಬಂಗಾರ ರಜತ ಬಾಳೆಯೆಲೆಯು

ಬಂದು ನೋಡುತ ನಾಲ್ಕು ಮಂದಿ ಸೊಸೆಯರು
ಹಂಚಿಕೊಂಡರು ಆಗ ಒಂದೊಂದು ಎಲೆಗಳ
ಹಿಂದೆ ಮಾಡಿದ ಪುಣ್ಯ ಒಂದು ಒದಗಿತು ನಮಗೆಂದು
ಸಂತೋಷ ಪಡುವರು

ಬಂದ ಮುತ್ತೈದೆ ಬ್ರಾಹ್ಮಣರೊಡಗೂಡಿ ಕೊಂಡುಂಡು
ವೀಳ್ಯವನೆ ತಕ್ಕೊಂಡು
ಮಂದಗಮನೆ ಲಕ್ಷ್ಮೀ ಮಹಿಮೆ ಕೊಂಡಾಡುತ
ಆನಂದವಾಗಿ ಇರುತ್ತಿದರವರು

ಮುದದಿಂದ ಮೂರ್ಜಗದ ಒಡೆಯ ನಾರಾಯಣನ
ಎದೆಯಲ್ಲಿ ಇರವೋ ಲಕ್ಷ್ಮೀ ನಮ್ಮ
ಸದನಕೆ ಬಂದು ಸಂಪತ್ತು ಶುಕ್ಕುರುವಾರ
ಸಮ ದೃಷ್ಟಿಯಿಂದ ನೋಡುವಳು

ಕಿವುಡಗೆ ಕಿವಿ ಕುರುಡಗೆ ಕಣ್ಣು ಬರುವುದು
ಬರಡು ಆಕಳು ಹೈನವಾಗುವುದು
ಹಡೆಯದ ಬಂಜೆ ಹೊಟ್ಟೆ ಮಕ್ಕಳಾಗೋರು
ಪಡೆವರೋ ಇಷ್ಟಫಲಗಳ

ದನಕರು ತಳಿಯಾಗಿ ಧನಧಾನ್ಯ ಬೆಳೆಯಾಗಿ
ಸದಾಕಾಲ ಶುಭಕಾರ್ಯವಾಗಿ
ಬಳೆ ಕುಂಕುಮ ಅರಿಷಿಣ ಮಾಂಗಲ್ಯ ಮುತ್ತೈದೆತನವ
ಕೊಟ್ಟು ವರವ ನೀಡುವಳು
ಬಡವರ ಮನೆಗೆ ನಡೆದು ಬಂದು ಭಾಗ್ಯದ
ಕೊಡವಾಗಿ ಕೂತಂತ ಕಥೆಯು
ಧೃಢಭಕ್ತಿಯಿಂದ ಹೇಳಿ ಕೇಳಿದ ಜನರಿಗೆ
ಕೊಡುವಳು ಸಕಲ ಸಂಪತ್ತು

ಸಾಮಜವರದ ಸುಧಾಮನ ಸಖನಾದ
ಸ್ವಾಮಿ ಶ್ರೀಹರಿ ಮೋಹದ ಅರಸಿ
ಶ್ರೀಮಹಾಲಕ್ಷ್ಮೀ ಪೂಜೆಯ ಮಾಡಿದವರಿಗೆ
ಭೀಮೇಶಕೃಷ್ಣ ತಾ ಒಲಿವ
ಶ್ರೀ ಕೃಷ್ಣಾರ್ಪಣಮಸ್ತು
***
  please scroll down for other devaranama