Showing posts with label ಪಂಥ ಬೇಡಿ ಪ್ರಾಣಿಗಳಿರ ಸಂತತ ಹರಿದಾಸರಾಗಿ purandara vittala. Show all posts
Showing posts with label ಪಂಥ ಬೇಡಿ ಪ್ರಾಣಿಗಳಿರ ಸಂತತ ಹರಿದಾಸರಾಗಿ purandara vittala. Show all posts

Friday 6 December 2019

ಪಂಥ ಬೇಡಿ ಪ್ರಾಣಿಗಳಿರ ಸಂತತ ಹರಿದಾಸರಾಗಿ purandara vittala

ಉದಯರಾಗ ಆದಿತಾಳ

ಪಂಥ ಬೇಡಿ ಪ್ರಾಣಿಗಳಿರ ||ಪ||
ಸಂತತ ಹರಿದಾಸರಾಗಿ ಅಂತಕಪುರ ಸುಖವಿಲ್ಲ ಯಮನು ಬಹು ಹೊಲ್ಲ ||ಅ||

ಕಡೆಯ ಝಾಮದಲೆದ್ದು ಹರಿಯ ಸ್ಮರಣೆಯ ಮಾಡಿ
ನುಡಿ ಹರಿಯ ಕೀರ್ತನೆ ಒಡನೆ ಮಾಡಿ
ಕಡುಸ್ನೇಹದಲ್ಲಿ ಕರವ ಪಾದಕಮಲದಲಿಟ್ಟು
ಬಿಡದೆ ಸೇವೆಯ ಮಾಡೋ ಚಿತ್ತವಲ್ಲಿಡೊ ||

ಮಧ್ವಮತವನೆ ಭಜಿಸೊ ಮದನನಯ್ಯನ ಒಲಿಸೊ
ಉದ್ಧರಿಸೊ ನಿನ್ನ ಕುಲವ ಛಲವು ಬೇಡ
ಸಿದ್ಧಾಂತನೆಂದೆನಿಸೊ ಸಜ್ಜನ ಸಂಗವ ಬಯಸೊ , ಅ-
ಬದ್ಧ ಮಾತನೆ ತ್ಯಜಿಸೊ ಹರಿಯ ಭಜಿಸೊ ||

ಪ್ರೇಮದಲಿ ಘನಸುಖ ನೇಮದಲಿ ಹರಿಸಖ
ದುರ್ಮತಗಳ ಬಿಟ್ಟು ದುಷ್ಟರ ಸಂಗ ಅಟ್ಟು
ಅಮರಪತಿ ಗಣಪ್ರಿಯ ಪುರಂದರವಿಠಲನ್ನ
ಕ್ರಮದಿಂದ ಮೊರೆಹೊಕ್ಕು ನಂಬಿ ಸುಖದಕ್ಕೊ ||
*******