Showing posts with label ಇತ್ತಿತ್ತ ಬಾರೆಂದು ಕರೆಯುವವರಿಲ್ಲದಿರೆ gopalakrishna vittala ITTITTA BAARENDU KAREYUVAVARILLADIRE. Show all posts
Showing posts with label ಇತ್ತಿತ್ತ ಬಾರೆಂದು ಕರೆಯುವವರಿಲ್ಲದಿರೆ gopalakrishna vittala ITTITTA BAARENDU KAREYUVAVARILLADIRE. Show all posts

Sunday 1 August 2021

ಇತ್ತಿತ್ತ ಬಾರೆಂದು ಕರೆಯುವವರಿಲ್ಲದಿರೆ ವ್ಯರ್ಥವಲ್ಲವೆ ಜನ್ಮವು ankita gopalakrishna vittala ITTITTA BAARENDU KAREYUVAVARILLADIRE VYARTHAVALLAVE JANMAVU


 

ಲೋಕನೀತಿ

ಇತ್ತಿತ್ತ ಬಾರೆಂದು ಕರೆಯುವವರಿಲ್ಲದಿರೆ

ವ್ಯರ್ಥವಲ್ಲವೆ ಜನ್ಮವು ಪ.


ಅತ್ತತ್ತ ಹೋಗೆಂಬ ನುಡಿ ಕೇಳಿ ಜಗದೊಳಗೆ

ಮತ್ತೆ ಇರಬಹುದೆ ಹರಿಯೆ ಅ.ಪ.


ಆರಿಗಾರಾಗುವರೊ ಪ್ರಾರಬ್ಧ ನೀಗದಲೆ

ಶೌರಿ ದಾರಿಯ ತೋರನು

ಈ ರೀತಿಯರಿತು ಹೇ ದುರ್ಮನವೆ ನರಹರಿಯ

ಆರಾಧನೆಯನೆ ಮಾಡೊ 1

ಏಕಾದಶ್ರೇಂದ್ರಿಯವ ಶ್ರೀ ಕಳತ್ರನೊಳಿಟ್ಟು

ಏಕ ಮನದಲ್ಲಿ ಭಜಿಸು

ಏಕೆ ತಲ್ಲಣಿಸುವೆ ಶೋಕಕ್ಕೆ ಒಳಗಾಗಿ

ನೂಕು ಭವತಾಪ ಜಗದಿ 2

ಗೋಪಾಲಕೃಷ್ಣವಿಠ್ಠಲನೆ ಗತಿ ಎಂತೆಂದು

ಈ ಪರಿಯಿಂದ ಭಜಿಸು

ಶ್ರೀ ಪರಮ ಕಾರುಣ್ಯ ಗುರುಗಳಂತರ್ಯಾಮಿ

ತಾಪ ಹರಿಸುವನು ಭವದಿ 3

****