Showing posts with label ದಾಸರಾಯರ ದಿವ್ಯ ಚರಣ ಭಜಿಸಿ varadesha vittala pranesha dasa stutih. Show all posts
Showing posts with label ದಾಸರಾಯರ ದಿವ್ಯ ಚರಣ ಭಜಿಸಿ varadesha vittala pranesha dasa stutih. Show all posts

Sunday 1 August 2021

ದಾಸರಾಯರ ದಿವ್ಯ ಚರಣ ಭಜಿಸಿ ankita varadesha vittala pranesha dasa stutih

 ..

kruti by ವರದೇಶ ವಿಠಲರು varadesha vittala dasaru

ಪ್ರಾಣೇಶದಾಸರಾಯರ ಸ್ತೋತ್ರ


ದಾಸರಾಯರ ದಿವ್ಯ ಚರಣ ಭಜಿಸಿ

ಶ್ರೀ ಪ್ರಾಣೇಶದಾಸಾರ್ಯ ಗುರುವರ್ಯಾ ಪ


ದಾಸರಾಯರ ಪಾದ ಭಜಿಪ ಸದ್ಭಕ್ತರ

ಏಸುಜನುಮದ ಪಾಪರಾಶಿ ಪರಿಹರವು

ಶ್ರೀಶನಲಿ ಸದ್ಭಕ್ತಿ ಲೇಸಾಗಿ ಪುಟ್ಟುವದು

ಲೇಶ ಸಂಶಯವಿಲ್ಲ ಆಲಸವು ಸಲ್ಲ 1


ಮರುತಮತ ತತ್ವದ ತೆರೆಗಳಿಂ ಸೂಸುತ

ಧರಣಿಸುರರಿಗೆ ರಾಮನಾಮಾಮೃತ

ನಿರುತಭಜಿಸಲು ಜ್ಞಾನವೈರಾಗ್ಯ ತರುಮಣಿಯ

ಹರಿಭಕುತಿ ಧೇನುವನ್ನೀವÀ ಪಾಲ್ಗಡಲೆನಿಪ 2


ಸುಜ್ಞಾನವೆಂಬಂಥ ಕಿರಣಗಳ ಪಸರಿಸುವ

ಅಜ್ಞಾನತಿಮಿರವನು ದೂರೋಡಿಪ

ಸೂಜ್ಞರೆಂಬುವ ತಾವರೆಗಳರಳಿಸುವಂಥ

ಅಜ್ಞಕುಮುದುಗಳ ಬಾಡಿಸುವ ಭಾಸ್ಕರನೆನಿಪ 3


ನಮಿಪಜನ ಭವತಾಪಕಳೆದು ಸದ್ಭಕ್ತಿಯಂ -

ಬಮಿತ ಅಹ್ಲಾದವನು ಬೀರುವಂಥ

ಶಮದಮಾದಿಗಳ ಚಂದ್ರಿಕೆಯಿಂದ ಶೋಭಿಸುವ

ವಿಮಲ ಹರಿಜನ ಚಕೋರಕೆ ಚಂದ್ರನೆಂದೆನಿಪ 4


ದಾಸಕುಲತಿಲಕ ಪ್ರಾಣೇಶರಾಯನ ಕವನ

ಶ್ರೀಶಕಥೆಗಳ ರಾಶಿಮೀಸಲಾಗಿರಲು

ಆ ಸುಭಕ್ತರಿಗೆ ಸಂತೋಷಗೊಳಿಸುಲು ಸರ್ವ

ದೇಶದಲಿ ಮೆರೆಸಿ ಸತ್ಕೀರ್ತಿಯನು ಪಡೆದಂಥ5


ಈ ಗುರುಗಳ ಪಾದಕೆರಗಿದ್ದ ಶಿರಧನ್ಯ

ಈ ಗುರುಗಳೀಕ್ಷಿಸಿದ ನೇತ್ರ ಧನ್ಯ

ಈ ಗುರುಗಳ ವಾಣಿ ಕೇಳಿದ್ದ ಕಿವಿ ಧನ್ಯ

ಈ ಗುರುಗಳನು ಮನದಿ ನೆನೆವÀನರ ಧನ್ಯ 6


ರಾಗದ್ವೇಷಾದಿಗಳ ಗೆದ್ದು ಸದ್ಭಕ್ತಿಯಿಂ

ಶ್ರೀಗುರುಪ್ರಾಣೇಶ ಭಜಕರೆನಿಪ

ನಾಗಪರಿಯಂತ ವರದೇಶ ವಿಠಲನ ಪ್ರೀಯ

ಯೋಗಿ ವರದೇಂದ್ರ ಮುನಿಗಳ ಪಾದ ಭೃಂಗ 7

***