Showing posts with label ಜಯ ಜಯ ಜಯ ರಾಮಚಂದ್ರ ಜಯ ರಾಮಭದ್ರ ಸರ್ವೇಶ prasannashreenivasa. Show all posts
Showing posts with label ಜಯ ಜಯ ಜಯ ರಾಮಚಂದ್ರ ಜಯ ರಾಮಭದ್ರ ಸರ್ವೇಶ prasannashreenivasa. Show all posts

Thursday 5 August 2021

ಜಯ ಜಯ ಜಯ ರಾಮಚಂದ್ರ ಜಯ ರಾಮಭದ್ರ ಸರ್ವೇಶ ankita prasannashreenivasa

 ..

kruti by ಪ್ರಸನ್ನ ಶ್ರೀನಿವಾಸದಾಸರು prasanna shreenivasaru

 ರಾಮಾಯಣ ಸುಂದರಕಾಂಡ

ಜಯ ಜಯ ಜಯ ರಾಮಚಂದ್ರ
ಜಯ ರಾಮಭದ್ರ ಸರ್ವೇಶ
ಜಯ ಜಯ ಜಯ ರಾಮ ಸ್ವರತ ಆಹ
ಜಯ ಸೀತಾರಮಣ ನೀ ಭಯಬಂಧ ಮೋಚಕ
ಜಲ ಸಂಭವಮುಖ ಸುರಸೇವ್ಯ ನಮೋ ನಮೋ ಪ

ಶಾಶ್ವತ ಸುಗುಣಾಬ್ಧಿ ರಾಮ
ಸವೇಶ್ವರನೆ ಬಲವೀರ್ಯ
ಸಂಪೂರ್ಣಾರ್ಣವ ನಿನ್ನ ನಮಿಸಿ ಆಹ
ಶೀಘ್ರ ಆ ಗಿರಿಯೆತ್ತಿ ಹನುಮ ಹಾರಲು ಆಗ
ಸಾಗರ ಸರ್ವವು ಕಲಕಿ ಓಡಿತು ಕೂಡ 1
ಹಿಂದೆ ಪರ್ವತಗಳ ಪಕ್ಷ
ಹನನ ಕಾಲದಿ ವಾಯು ತನ್ನ
ಹಿತದಿ ರಕ್ಷಿಸಿದನು ಎಂದು ಆಹ
ಹಿಮಗಿರಿಸುತ ಮೈನಾಕನು ಮೇಲೆ ಬಂದಾಗ
ಹನುಮಗೆ ನಮಿಸಿ ವಿಶ್ರಮಿಸಿಕೊಳ್ಳೆಂದ2
ಶ್ರಮರಹಿತನು ಎಂದೂ ಹನುಮ
ಶ್ರಮ ನಿವಾರಣ ಅನಪೇಕ್ಷ
ಆಶ್ಲೇಷಿಸಿ ನಗವರನ ಆಹ
ನಿಸ್ಸೀಮ ಪೌರುಷ ಬಲಯುತ ಹನುಮನು
ನಿಲ್ಲದೆ ಮುಂದೆ ತಾ ಸುರಸೆಯೊಳ್ ಹೊಕ್ ಹೊರಟ 3
ಪವನಜನ ನಿಜಬಲವ
ಪರೀಕ್ಷಿಸೆ ಸುರಸೆಯ ಸುರರು
ಪ್ರೇರಿಸಿ ವರವನ್ನು ಕೊಡಲು ಆಹ
ಫಣಿಗಳ ತಾಯಿ ಅವಳು ಬಾಯಿ ತೆರೆಯಲು
ಪೊಕ್ಕು ಲೀಲೆಯಿಂ ಹನುಮ ಹೊರಹೊರಟ4
ಸುರರು ಆನಂದದಿ ಆಗ
ಸ್ತುತಿಸಿ ಹನುಮನ ಕೊಂಡಾಡಿ
ಸುರಿಯಲು ಪುಷ್ಪದ ಮಳೆಯ ಆಹ
ಶೀಘ್ರ ಪವನಜನು ಮುಂದೆ ತಾ ಹೋಗುತ್ತ
ಸಿಂಹಿಕಾ ರಾಕ್ಷಸಿ ಛಾಯಾಗ್ರಹವ ಕಂಡ 5
ಸರಸಿಜಾಸನ ವರಬಲದಿ
ಸಿಂಹಿಕಾ ಲಂಕಾ ಪೋಗುವರ
ಸೆಳೆದು ತಾ ನಿಗ್ರಹಿಸುವಳು ಆಹ
ಸೆಳೆಯೆ ಆ ರಾಕ್ಷಸಿ ಹನುಮನ ಛಾಯೆಯ
ಸೀಳಿದ ಹನುಮ ಅವಳ ಶರೀರದಿ ಪೊಕ್ಕು 6
ತನ್ನ ನಿಸ್ಸೀಮ ಬಲವನು
ತೋರಿಸಿ ಈ ರೀತಿ ಹನುಮ
ಧುಮುಕಿದ ಲಂಬ ಪರ್ವತದಿ ಆಹ
ತೋರ್ಪುದು ಲಂಕಾ ಪ್ರಕಾರದೊಲï ಈ ಗಿರಿ
ತನ್ನ ರೂಪವ ಸಣ್ಣ ಹನುಮ ಮಾಡಿದನಾಗ 7
ಆಗಿ ಬಿಡಾಲದೊಲ್ ಸಣ್ಣ
ಅಸಿತ ಕಾಲದಿ ಪೋಗೆ ಪುರಿಗೆ
ಅಲ್ಲಿದ್ದ ಲಂಕಿಣಿ ತಡೆಯೆ ಆಹ
ಅವಳ ಹನುಮ ಮುಷ್ಟಿಯಿಂದ ಕುಟ್ಟಿ ಜಯಿಸಿ
ಅನುಮತಿಯಿಂದಲ್ಲೆ ಲಂಕೆಯೊಳ್ ಪೋದ 8
ಶ್ರೀಘ್ರ ಅಶೋಕ ವನದಲಿ
ಶಿಂಶುಪಾವೃಕ್ಷ ಮೂಲದಲಿ
ಸೀತಾ ಅಕೃತಿಯನು ಕಂಡ ಆಹ
ಸೀತೆಗೆ ಏನೇನು ಭೂಷಣ ಉಂಟೋ
ಸೀತಾ ಆಕೃತಿಗೂ ಸಹ ಅದರವೊಲಿತ್ತು 9
ಅವನಿಯೋಳು ನಿನ್ನ ವಿಡಂಬ
ಅರಿತು ಅನುಸರಿಸಿ ಹನುಮ
ಅದರಂತೆ ಪರಿಪಂಥಾವಳಿಗೆ ಆಹ
ಅವಶ್ಯ ಮಾತುಗಳಾಡಿ ಅಂಗುಲೀಯಕವೀಯೆ
ಆಕೆ ಚೂಡಾಮಣಿ ನಿನಗೆಂದು ಕೊಟ್ಟಳು 10
ಅರಿಯರು ರಾಕ್ಷಸರಿದನು
ಅಮರರು ಕಲಿಮುಖರೆಲ್ಲ
ಅವಲೋಕಿಸಿದರು ಈ ಕಾರ್ಯ ಆಹ
ಅಮರರು ಲೋಕವಿಡಂಬವಿದೆಂದರಿಯೆ
ಅಧಮ ಕಲ್ಯಾದಿಗಳ್ ಮೋಹಿತರಾದರು 11
ಕೃತಕೃತ್ಯವಾಗಿ ತಾ ಹನುಮ
ಕೋವಿದೋತ್ತಮ ಬಲವಂತ
ಕಾಣಿಸಿಕೊಳ್ಳುವ ಮನದಿ
ಕಿಂಚಿತ್ತೂ ಭಯವೇನೂ ಇಲ್ಲದೆ ವನವನು
ಕಡಿದು ಧ್ವಂಸವ ಗೈದ ಆ ಶಿಂಶುಪವ ಬಿಟ್ಟು 12
ಕುಜನ ರಾಕ್ಷಸರನು ಕೊಲ್ಲೆ
ಕೂಗಿ ಆರ್ಭಟಮಾಡೆ ಹನುಮ
ಕೇಳಿ ಚೇಷ್ಟೆಗಳ ರಾವಣನು ಆಹ
ಕಪ್ಪು ಕಂಠನ ವರ ಆಯುಧಯುತರು
ಕೋಟಿ ಎಂಬತ್ತರ ಮೇಲ್ ಭೃತ್ಯರ ಕಳುಹಿದ 13
ಆರ್ಭಟದಿಂದ ಘೋಷಿಸುತ
ಅವರು ಆವರಿಸಿ ಹನುಮನ
ಆಯುಧಗಳ ಪ್ರಯೋಗಿಸಲು ಆಹ
ಅತಿ ಬಲಯುತ ಪವನಜ ಮುಷ್ಟಿಪ್ರಹರದಿ
ಆ ವೀರರೆಲ್ಲರ ಹಿಟ್ಟು ಮಾಡಿದ ಬೇಗ 14
ಕಡುಕೋಪದಿಂದ ರಾವಣನು
ಕಳುಹಿದನು ಏಳು ಮಂತ್ರಿ
ಕುವರರ ವರ ಬಲಯುತರ ಆಹ
ಖಳರು ಈ ಏಳ್ವರ ಮೆಟ್ಟಿ ಷಿಷ್ಟವ ಮಾಡೆ
ಕುಮತಿ ರಾಕ್ಷಸ ಸೈನ್ಯ ತೃತೀಯ ಭಾಗವು ಹೋಯ್ತು 15
ಅನುಪಮ ಬಲಕಾರ್ಯಕೇಳಿ
ಅಧಮ ರಾವಣ ತನ್ನ ಸುತನ
ಅಕ್ಷನ ಕಳುಹಲು ಹನುಮ ಆಹ
ಅಕ್ಷನ ಚಕ್ರಾಕಾರದಿ ಎತ್ತಿ ಸುತ್ತಾಡಿ
ಅವನ ಅಪ್ಪಳಿಸಿ ನೆಲದಿ ಚೂರ್ಣ ಮಾಡಿದ 16
ಅತಿ ದುಃಖದಿಂದ ರಾವಣನು
ಅಕ್ಷನಗ್ರಜ ಇಂದ್ರಜಿತನ
ಅಜಿತ ಹನುಮನಲಿ ಕಳುಹೆ ಆಹ
ಇಂದ್ರಜಿತನ ಅಸ್ತ್ರಗಳ ವ್ಯರ್ಥಮಾಡಿ ತಾ
ಒಡಂಪಟ್ಟ ಸ್ವೇಚ್ಛದಿ ಹನುಮ ಬ್ರಹ್ಮಾಸ್ತ್ರಕೆ 17
ರಾವಣನಲಿ ಕೊಂಡು ಪೋಗೆ
ರಾವಣ ಪ್ರಶ್ನೆಯ ಮಾಡೆ
ರಾಮಗೆ ನಮಿಸಿ ಹನುಮನು ಆಹ
ರಘುವರ ರಾಮ ದುರಂತ ವಿಕ್ರಮ ಹರಿ
ರಾಕ್ಷಸಾಂತಕ ದೂತ ಮಾರುತಿ ತಾನೆಂದ 18
ರಘುವರ ಪ್ರಿಯೆಯನು ಬೇಗ
ರಾಮಗರ್ಪಿಸಲೊಲ್ಲೆ ಎನ್ನೆ
ಹನುಮ ಪ್ರಕೋಪದಿ ಅವನ ಆಹ
ರಾಜ್ಯ ಮಿತ್ರ ಬಂಧು ಸರ್ವನಾಶ
ರಾಘವ ಮಾಡುವನೆಂದು ಪೇಳಿದನು 19
ಅಜ ಶಿವ ಮೊದಲಾದ ಸರ್ವ
ಅಮರೇಶ್ವರರು ತಾವು ತಡೆಯ
ಆಶಕ್ತರು ರಾಮಬಾಣವನು ಆಹ
ಅಂಥ ಬಾಣವ ಅಲ್ಪಶಕ್ತ ರಾವಣ ತಾಳೆ
ಅಸಮರ್ಥನೆಂದ ಪ್ರಭಂಜನ ಸುತನು 20
ಪ್ರಭಂಜನ 1 ಸುತ ಮಾತು ಕೇಳಿ
ಪ್ರಕುಪಿತನಾಗಿ ರಾವಣನು
ಪ್ರಯತ್ನಿಸೆ ಹನುಮನ ಕೊಲ್ಲೆ ಆಹ
ಪ್ರಕೃಷ್ಟ ಮನದಿ ವಿಭೀಷಣ ಬುದ್ಧಿ ಪೇಳಲು
ಪುಚ್ಛಕ್ಕೆ ಬೆಂಕಿ ಹಚ್ಚೆಂದ ರಾಕ್ಷಸರಾಜ21
ಆತಿಭಾರ ವಸ್ತ್ರ ಕಟ್ಟುಗಳಿಂ
ಅಧಮರು ಸುತ್ತಿ ಬಾಲವನು
ಅಗ್ನಿಯ ತೀವ್ರದಿ ಹಚ್ಚೆ ಆಹ
ಅಗ್ನಿಯ ಪರಸಖ ವಾಯು ಆದುದರಿಂದ
ಅಂಜನಾಸುತ ನಿರಾಮಯನ ಸುಡಲೇ ಇಲ್ಲ 22
ಅಧಮ ರಾಕ್ಷಸರ ಚೇಷ್ಟೆಗಳ
ಅಸಮ ಬಲಾಢ್ಯನು ಹನುಮ
ಅನುಭವಿಸಿ ಕುತೂಹಲದಿ ಆಹ
ಅಲ್ಲಲ್ಲಿ ಹಾರಿ ಆ ಲಂಕಾಪುರಿಯ ಸುಟ್ಟು
ಅತಿ ಮುದದಲಿ ಗರ್ಜಿಸಿದ ರಾಮದೂತ 23
ಅಧಮ ಸಪುತ್ರ ರಾವಣನ
ಅಲ್ಪ ತೃಣೋಪಮ ಮಾಡಿ
ಅವರೆದುರಿಗೆ ಪುರಿ ಸುಟ್ಟು ಆಹ
ಅಬ್ಧಿಯ ದಾಟೆ ವಾನರರು ಪ್ರಪೂಜಿಸೆ
ಉತ್ತಮ ಮಧುವುಂಡು ಪ್ರಭುವೇ ನಿನ್ನಲಿ ಬಂದ 24
ಸಮಸ್ತ ವಾನರ ವರರೊಡನೆ
ಸಮರ್ಥ ಹನುಮ ಧೀರ ಬಂದು
ಶುಭಸೂಚಕ ಚೂಡಾಮಣಿಯ ಆಹ
ಶ್ರೀಶ ನಿನ್ನಯ ಪಾದದ್ವಂದ್ವದಿ ಇಟ್ಟು ತಾ
ಸನ್ನಮಿಸಿದ ಭಕ್ತಿಭರಿತ ಸವಾರ್ಂಗದಿ 25
ಭಕ್ತಿ ಸವೈರಾಗ್ಯ ಜ್ಞಾನ
ಪ್ರಜ್ಞಾ ಮೇಧಾ ಧೃತಿ ಸ್ಥಿತಿಯು
ಪ್ರಾಣ ಯೋಗ ಬಲ ಇಂಥಾ ಆಹ
ಪ್ರಕೃಷ್ಟ ಸುಗುಣಗಳು ತುಂಬಿ ಇರುವುವು ಈ
ಪ್ರಭಂಜನ ವಾಯು ಹನುಮನಲಿ ಸರ್ವದಾ 26
ಸರ್ವೇಶ ರಾಮ ಅಗಾಧ
ಸದ್ಗುಣಾರ್ಣವ ನೀ ಹನುಮನ
ಸಂಪೂರ್ಣ ಭಕ್ತಿಗೆ ಮೆಚ್ಚಿ ಆಹ
ಸಮ ಯಾವುದೂ ಇಲ್ಲದೆ ನಿನ್ನನ್ನೇ ನೀ ಕೊಟ್ಟೆ
ಸುಪ್ರಮೋದದಿ ಹನುಮನ ಆಲಿಂಗನ ಮಾಡಿ27
ನೀ ನಿಂತು ನುಡಿಸಿದೀ ನುಡಿಯು
ನಿನ್ನಡಿಗಳಿಗೆ ಅರ್ಪಣೆಯು
ನಮ್ಯ ಮಾರುತಿ ಮನೋಗತನೆ ಆಹ
ನೀರಜಾಸನ ತಾತ ಪ್ರಸನ್ನ ಶ್ರೀನಿವಾಸ
ನಿನಗೆ ಪ್ರೀತಿಯಾಗಲೊ ಸುಹೃದ ಸಂತೃಪ್ತ 28
***