Showing posts with label ಬಾಗಿ ಭಜಿಸಿರೊ ರಾಘವೇಂದ್ರ ಯತಿಯ ಕೊಡುವನು ಸನ್ಮತಿಯ abhinava janardhana vittala. Show all posts
Showing posts with label ಬಾಗಿ ಭಜಿಸಿರೊ ರಾಘವೇಂದ್ರ ಯತಿಯ ಕೊಡುವನು ಸನ್ಮತಿಯ abhinava janardhana vittala. Show all posts

Monday 6 September 2021

ಬಾಗಿ ಭಜಿಸಿರೊ ರಾಘವೇಂದ್ರ ಯತಿಯ ಕೊಡುವನು ಸನ್ಮತಿಯ ankita abhinava janardhana vittala

 ರಾಗ: ಯದುಕುಲ ಕಾಂಬೋಜಿ ತಾಳ: ಆದಿ

ಬಾಗಿ ಭಜಿಸಿರೊ ರಾಘವೇಂದ್ರ ಯತಿಯ ಕೊಡುವನು ಸನ್ಮತಿಯ ಪ.


ಯೋಗಿಕುಲವರ್ಯ ಭಾಗವತರಪ್ರಿಯ ಸತ್ಕವಿಕುಲಗೇಯ ಅ.ಪ


ಯತಿಸುಧೀಂದ್ರಕರಸುತಾದ್ಭುತಚರಿಯ ಪುಸಿಯಲ್ಲವು ಖರಿಯ

ಶ್ರಿತಜನನುತ ಕಾಮಿತತರು ಸುರಧೇನು ಚಿಂತಾಮಣಿ ತಾನು

ಶತಪರ್ವತವತ್ಸರ ವೃಂದಾವನದಿ ನಲಿವನು ಮುದದಿ

ಚತುರವಿಧಸುಪುರುಷಾರ್ಥಗಳನೆ ಕೊಡುವ ನಂಬಿದವರಘ ತಡೆವ 1

ವರಮಂತ್ರಾಲಯ ಸುರುಚಿರ ಗೃಹದಲ್ಲಿ ವರಹಜತೀರದಲಿ

ಮೆರೆವ ಮಂದರನು ಕರೆದು ಪಾಪ ಕಳೆವ ಮನದಲಿ ತಾ ಪೊಳೆವ

ಸರ್ವಜ್ಞರು ಮೊದಲಾದ ಮುನಿಗಳಲ್ಲಿ ಇಪ್ಪರು ಮುದದಲ್ಲಿ

ದುರಭಿಮಾನದಲಿ ಬಾರದವನೆ ಕೆಟ್ಟ ಬರಲವ ಸುಶ್ರೇಷ್ಠ 2

ಮಧ್ವಮುನಿಯಸುಮತಾಬ್ಧಿಪೂರ್ಣಚಂದ್ರ ಸದ್ಗುಣಸಾಂದ್ರ

ಸದ್ವೈಷ್ಣವಗುರು ಕುಮತಾದ್ರಿಗೆಕುಲಿಶ ಕಾಷಾಯವಾಸ

ಸಿದ್ಧಾಂತಸುಧೆಗೆ ಪರಿಮಳಾಖ್ಯ ಗ್ರಂಥ ಮಾಡಿದ ದಯವಂತ

ಮುದ್ದು ಅಭಿನವಜನಾರ್ದನವಿಠಲನ್ನ ಸದ್ಭಕ್ತವರೇಣ್ಯ 3

***