Showing posts with label ನಾರಾಯಣನೆಂದು ಸಾರೋ ಮುಕುತಿಯನು shreekrishna. Show all posts
Showing posts with label ನಾರಾಯಣನೆಂದು ಸಾರೋ ಮುಕುತಿಯನು shreekrishna. Show all posts

Wednesday 1 September 2021

ನಾರಾಯಣನೆಂದು ಸಾರೋ ಮುಕುತಿಯನು ankita shreekrishna

 ರಾಗ : ಕಾಂಬೋಧಿ            ತಾಳ : ಝ೦ಪೆ


ನಾರಾಯಣನೆಂದು ಸಾರೋ ಮುಕುತಿಯನು ।
ಹಾರಲೊದಿಯೋ ಸಂಸಾರವ ಮನುಜ                 ।। ಪಲ್ಲವಿ ।।

ಲೋಕದ ಗುರು ಬ್ರಹ್ಮ ವೈಜಯಂತದಲ್ಲೀ ।
ಯೇಕಾಂತದಿ ಹರಿ ಧ್ಯಾನದಲ್ಲೀ ।
ಶ್ರೀಕಾಂತನ ದಿವ್ಯ ನಾಮ ಜಪಿಸೆಂದೂ । ಸಿ ।
ತೀಕಂಠಗೆ ಅಂದೊರದ ಗಡ                            ।। ಚರಣ ।।

ಕೈಲಾಸದಲಿ ವಟ ಮೂಲದಿ ಶಂಕರ ।
ವ್ಯೂಲಾಡುತ ಹರಿ ಧ್ಯಾನದಲ್ಲೀ ।
ಶ್ರೀಲೋಲನ ದಿವ್ಯ ನಾಮವ ಜಪಿಸೆಂದು ।
ಪೇಳಿದಾನಂದು ಪಾರ್ವತೀದೇವಿಗೆ                    ।। ಚರಣ ।।

ನಾರದ ಮುನಿ ತನ್ನ ವೀಣೆಯ ಮ್ಯಾಳೈಸಿ ।
ಶ್ರೀರಮಣ ಕೃಷ್ಣನೆಂದು ಪಾಡುತ ।
ನಾರಾಯಣನೆಂದು ಚೀರಿರೋ ನೀವೆಂದೂ ।
ಸಾರಿದನೆಂದು ಸಕಲ ಜನರಿಗ್ಯಲ್ಲ                      ।। ಚರಣ ।।
***