Showing posts with label ಹರಿಗುರು ಕರುಣದಿ ದೊರಕಿದುದೆನಗೀ gopalakrishna vittala. Show all posts
Showing posts with label ಹರಿಗುರು ಕರುಣದಿ ದೊರಕಿದುದೆನಗೀ gopalakrishna vittala. Show all posts

Monday 2 August 2021

ಹರಿಗುರು ಕರುಣದಿ ದೊರಕಿದುದೆನಗೀ ankita gopalakrishna vittala

ಹರಿಗುರು ಕರುಣದಿ ದೊರಕಿದುದೆನಗೀ

ಪರಮ ಪಾವನ ತಂಬೂರಿ ಪ.


ನರÀಹರಿ ಭಕ್ತರು ಒಲಿದೆನಗಿತ್ತರು

ಸುಲಲಿತ ನಾದದ ತಂಬೂರಿ ಅ.ಪ.


ತಂದೆ ಮುದ್ದುಮೋಹನರು ಸ್ವಪ್ನದಿ

ತಂದು ತೋರಿದಂಥ ತಂಬೂರಿ

ನಂದ ಕಂದನ ಗುಣ ಅಂದದಿ ಸ್ತುತಿಸೆ ಆ-

ನಂದವ ತೋರುವ ತಂಬೂರಿ

ಇಂದಿರೇಶನ ಭಕ್ತರಂದದಿ ಧರಿಸುವ

ರೆಂದೆಂದಿಗು ಈ ತಂಬೂರಿ

ನೊಂದು ಭವದೊಳು ತಪ್ತರಾದವರಿಗೆ

ಬಂಧನ ಬಿಡಿಸುವ ತಂಬೂರಿ 1

ಅಂತರಭಕ್ತರು ಹರುಷದಿ ನುಡಿಸುವ

ಕಂತುಪಿತಗೆ ಪ್ರೀತಿ ತಂಬೂರಿ

ಸಂತತ ಮಾನಾಭಿಮಾನವ ತೊರೆದು ಏ-

ಕಾಂತದಿ ಸುಖಿಸುವ ತಂಬೂರಿ

ಶಾಂತದಿ ನಾರದಾದಿಗಳು ವೈಕುಂಠದಿ

ನಿಂತು ನುಡಿಸುವಂಥ ತಂಬೂರಿ

ಪಂಥದಿ ಹರಿಪಾದಂಗಳ ಭಜಿಸೆ ನಿ-

ಶ್ಚಿಂತೆಯ ಮಾಳ್ಪಂಥ ತಂಬೂರಿ2

ಬಲು ಬಲು ಪರಿಯಲಿ ಹರಿದಾಸತ್ವಕೆ

ಬರುವಂತೆ ಮಾಡಿದ ತಂಬೂರಿ

ಛಲದಿಂದಲಿ ಶ್ರೀ ಹರಿ ತಾನಿಡ್ಹಿಸಿದ

ಒಲುಮೆಯಿಂದಲಿ ಈ ತಂಬೂರಿ

ನೆಲೆಯಾದೆನು ಹರಿದಾಸರ ಮಾರ್ಗದಿ

ಕಲುಷವ ಕಳೆದಿತು ತಂಬೂರಿ

ಸುಲಭದಿಂದ ಶ್ರೀ ಗುರುಗಳು ಕರುಣಿಸಿ

ನೆಲೆಗೆ ನಿಲಿಸಿದಂಥ ತಂಬೂರಿ 3

ಶ್ರೀನಿವಾಸನು ತಾ ಕೊಡಿಸಿದನು

ಏನೆಂಬೆನು ಈ ತಂಬೂರಿ

ಮಾನಾಭಿಮಾನವ ತೊಲಗಿಸುವುದಕೆ

ಕಾರಣವಾಗಿಹ ತಂಬೂರಿ

ಶ್ರೀನಿಧಿ ಸೊಸೆ ಬಹು ಆನಂದದಲಿ

ತಾ ನುಡಿಸುವಳೀ ತಂಬೂರಿ

ಗಾನಲೋಲ ಕೃಷ್ಣ ತಾನೊಲಿವುದಕೆ

ಕಾರಣ ಮಾಡಿಹ ತಂಬೂರಿ 4

ಬೆಟ್ಟದೊಡೆಯ ತಾನಿಷ್ಟು ಹಟವ ಮಾಡಿ

ಕೊಟ್ಟೀ ಕೊಟ್ಟನು ತಂಬೂರಿ

ಎಷ್ಟು ನಾಚಿಕೆಪಟ್ಟರು ಬಿಡದಲೆ

ಕಷ್ಟ ಕಳೆಯಲಿತ್ತ ತಂಬೂರಿ

ಬಿಟ್ಟು ಹೋಯಿತು ಭವ ಕಟ್ಟು ಇಂದೆನ್ನನು

ಮುಟ್ಟಿಸಿತ್ಹರಿಪುರ ತಂಬೂರಿ

ಎಷ್ಟು ಹೇಳಲಿ ಶ್ರೀನಿಧಿ ಗೋಪಾಲ

ಕೃಷ್ಣವಿಠ್ಠಲನಿತ್ತ ತಂಬೂರಿ 5

***