Showing posts with label ಚರಣ ಕಮಲವನ್ನು ನೆನೆವೆ ನಾ gopala vittala CHARANA KAMALAVANNU NENEVE NAA VIJAYADASA STUTIH. Show all posts
Showing posts with label ಚರಣ ಕಮಲವನ್ನು ನೆನೆವೆ ನಾ gopala vittala CHARANA KAMALAVANNU NENEVE NAA VIJAYADASA STUTIH. Show all posts

Wednesday 25 November 2020

ಚರಣ ಕಮಲವನ್ನು ನೆನೆವೆ ನಾ ankita gopala vittala CHARANA KAMALAVANNU NENEVE NAA VIJAYADASA STUTIH

 

Audio by Mrs. Nandini Sripad

ಶ್ರೀ ಗೋಪಾಲದಾಸರ ಕೃತಿ 


 ರಾಗ ಕಲ್ಯಾಣಿ             ಆದಿತಾಳ 


ಚರಣ ಕಮಲವನ್ನು ನೆನೆವೆ ನಾ । ಗುರು 

ಚರಣ ಕಮಲವನ್ನು ನೆನೆವೆ ನಾ ॥ ಪ ॥

ಚರಣ ಕಮಲವನ್ನು ನೆನೆದು ನೆನೆದು । ಹರಿ

ಚರಣ ಕಮಲವ ಅರ್ಚಿಸುವೆ ನಾ ॥ ಅ ಪ ॥


ಸುರದ್ವಿಜ ವೇಷದಿಂದಲಿ ತನ್ನ । ತ್ರೀಣಿ

ಸುರಗಂಗೆಯನ್ನು ಸೇವಿಸಿದನ್ನ ॥

ಸುರಮುನಿಯಿಂದುಪದೇಶನ್ನ । ಭೂ

ಸುರರ ಕರುಣ ಸಂಪಾದಿಸುವನ್ನ ॥ 1 ॥


ಪರಮತಗಳನ್ನು ಖಂಡಿಸಿದನ್ನ । ಸತ್ಯ

ಹರಿಪರನೆಂದು ಸ್ಥಾಪಿಸಿದನ್ನ ॥

ಪರತತ್ವವನ್ನು ಅರುಪಿದನ್ನ । ತನ್ನ

ವರ ಗುರುಮಧ್ವಮತ ಪೊಂದಿದಾತನ್ನ ॥ 2 ॥


ಪರಿಪರಿ ವ್ರತಾಚರಿಸಿದನ್ನ । ಮನೋ

ದುರ್ವ್ಯಸನ ಸಂಹರಿಸಿದನ್ನ ॥

ಪರಿಪರಿ ಯಾತ್ರೆ ಚರಿಸಿದನ್ನ । ನಮ್ಮ

ಗುರುವರ ಶಿರೋರತುನನ್ನ ॥ 3 ॥


ಶುದ್ಧ ಸಂಪ್ರದಾಯಕನನ್ನ । ತತ್ವ

ತಿದ್ದಿ ಮುದ್ದಿ ಮಾಡಿದಾತನ್ನ ॥

ಅದ್ವೈತ ಮತವ ದೂಷಿಸಿ ತನ್ನ । ಸಿರಿ

ಮಧ್ವಮತಕೆ ಭೂಷಿತನ್ನ ॥ 4 ॥


ಪರಸತಿ ಪರಧನ ತೊರೆದನ್ನ । ತನ್ನ

ಪರಿಚಾರಕರಿಗ್ಹಿತ ವರದನ್ನ ॥

ಹರಿನಾಮಾಮೃತವನ್ನು ಸುರಿದನ್ನ । ತನ್ನ

ಸರಿ ಬಂದ ಶಿಷ್ಯರ ಪೊರೆದನ್ನ ॥ 5 ॥


ದೂರ ಧರಿಸಿ ಸರ್ವ ಕಂಡನ್ನ । ನಿಜ

ಪ್ರಾರಬ್ಧ ಭೋಗವ ಉಂಡನ್ನ ॥ ತನ್ನ

ಆರಾಧಿಪರ ಅಘ ಖಂಡನ್ನ । ನಮ್ಮ

ನಾರಾಯಣನ ನಿಜ ತೋಂಡನ್ನ ॥ 6 ॥


ವೈಷ್ಣವ ಸಿದ್ಧಾಂತ ವರದನ್ನ । ಅ -

ವೈಷ್ಣವಾಚಾರವು ತೊರದನ್ನ ॥ ವರ

ವೈಷ್ಣವರಿಗುಪದೇಶನ್ನ । ವೀರ

ವೈಷ್ಣವರ ದಾಸವರ್ಯನ್ನ ॥ 7 ॥


ತಪಸೇ ಸಂಸಾರವೆಂದರಿದನ್ನ । ತನ್ನ

ಸ್ವಪನದಿ ಬಂದು ತೋರಿದನ್ನ ॥

ಉಪದೇಶ ಬಲಿಕೆ ಮಾಡಿದನ್ನ । ನಿಜ

ಉಪದೇಶ ಜಪಿಸಿ ಪೇಳಿದನ್ನ ॥ 8 ॥


ವಿಜಯವಿಠಲನ ದಾಸನ್ನ । ತನ್ನ

ಭಜಿಸುವರಿಗೆ ವರದಾತನ್ನ ॥ ಸಿರಿ

ಅಜ ಗೋಪಾಲವಿಠಲ ದೂತನ್ನ । ನಿತ್ಯ

ಭಜಿಸಿ ಬದುಕುವೆ ಪುಣ್ಯಾತ್ಮನ್ನ ॥ 9 ॥

*******