Showing posts with label ಮರೆತು ಇರುವರೆ ಸರ್ವಜ್ಞನೆನಿಸಿ narahari P. Show all posts
Showing posts with label ಮರೆತು ಇರುವರೆ ಸರ್ವಜ್ಞನೆನಿಸಿ narahari P. Show all posts

Thursday 5 August 2021

ಮರೆತು ಇರುವರೆ ಸರ್ವಜ್ಞನೆನಿಸಿ ankita narahari P

 ..

kruti by pradyumna teertha ಪ್ರದ್ಯುಮ್ನತೀರ್ಥರು


ಮರೆತು ಇರುವರೆ ಸರ್ವಜ್ಞನೆನಿಸಿ ಪ


ಮರೆತು ಇರುವರೇನೋ ಕರುಣಾ

ವಾರಿಧಿ ನರಹರಿಯೆ ಬಾಲನ

ದುರುಳತನಗಳೆಣಿಸಿದೊಡೆ ನೀ

ಕರೆದು ಮುಂದಕೆ ಪೊರೆವರ್ಯಾರು 1


ಕಲ್ಲು ಕೊಟ್ಟ ಬಿಲ್ಲಿಲಿಟ್ಟ

ಕ್ಷುಲ್ಲಕ ಮಾತಾಡಿ ಬಿಟ್ಟ

ಕಳ್ಳ ಸುಳ್ಳ ಜಾರನೆಂದ

ಗೊಲ್ಲತಿಯರನೆಲ್ಲ ಪೊರೆದಿ 2


ತರಳ ನಿನ್ನ ಪೂಜಿಸಲಾರದೆ

ಕರವ ಶಿರದಿ ಇರಿಸೆ ಕೂತು

ಕರದಿ ಗುಂಜವಿರಿಸಿ ಸಿರಿಯ

ಮರೆತು ಇರುವವರಂತೆ 3

ವರ ಸುಮೌನೀಗಣಕೆ ಬಲ ನಾ

ನರಿಯಿರೆಂದು ಬೀರಿ ಚರಣ

ಚರಣದರ ಮನೆಯೊಳಿರಿಸಿ ಪೊರೆವಿ

ತರಳನ ನೀ ಜರಿವರೇನೊ 4


ಧರಣಿಯೊಳಗೆ ಇರುವ ಕ್ಷೇತ್ರದಿ

ವರ ಸುಕ್ಷೇತ್ರವಿದೆಂದು

ಅರುಹಿ ಬರುವ ಸಜ್ಜನರನು ಪೊರೆವಿ

ಭಾರ ನಾನೊಬ್ಬನೇ ಪೇಳೋ 5

ಶ್ರೀ ನರಹರಿಯೆ ಇನಿತು

ಜ್ಞಾನ ಶೂನ್ಯನ ಮಾಡಿ

ನಿನ್ನ ಕಾಣಿಸುವರೊಡನೆ

ಕಾಣುವ ಬಗೆಗಾಣೆನೋ ಮಾಧವ 6

***