Showing posts with label ವಂದಿಸು ಶ್ರೀ ಹರಿಯ krishnavittala. Show all posts
Showing posts with label ವಂದಿಸು ಶ್ರೀ ಹರಿಯ krishnavittala. Show all posts

Monday 2 August 2021

ವಂದಿಸು ಶ್ರೀ ಹರಿಯ ankita krishnavittala

 ವಂದಿಸು ಶ್ರೀ ಹರಿಯ ಪ


ಇಂದಿರೆನಾಥ ಮಹೇಂದ್ರ ಪರಾತ್ವರ

ಸುಂದರ ಜಗಪಿತ ನಂದ ಮಹೋದಧಿ

ಕಂದರ ನಾಯಕ ಸಿಂಧು ಶಯನ ಅರ-

ವಿಂದ ಸುನಾಭ ಮುಕುಂದ ಮುರಾರಿಯ ಅ.ಪ.


ವೇದಸುಗೋಚರ _ ಖೇದವಿವರ್ಜಿತ _ ಸಾದರನುತಿಪರ

ಮೋದಸುದಾಯಕ _ ಮೇದಿನಿವರಭವ _

ಖೇದವಿಮೋಚಕ

ಮಾಧವ ಗೀತಾ _ ಬೋಧಕ ವಿಧಿಗುರು 1


ಅಕ್ಷರ ನಿಖಿಳಾ _ ಧ್ಯಕ್ಷ ನಿರಂಜನ _ ಪಕ್ಷಿ ಧ್ವಜ ಜಗ

ಕುಕ್ಷಿ ಪರಾಮೃತ _ ರಕ್ಷಿಸಿ ಜಗವಂ

ಭಕಿÀ್ಷಪಧೋಕ್ಷಜ _ ಸಾಕ್ಷಿ ನಿರಪೇಕ್ಷ ಸುಪಕ್ಷನ2


ಸತ್ಯಾಧಾರ ವಿಚಿತ್ರ ಗುಣಾರ್ಣವ _ ಸತ್ಯವ್ರತ ಪುರು

ಷೋತ್ತಮ ನಿರ್ಮಲ_ ಸತ್ಯವತೀಸುತ _ ನಿತ್ಯತೃಪ್ತ ಮ

ಹಾತ್ಮಜಗಾತತ _ ಭೂತಿದ ಹೃಸ್ಥನ 3


ಸೋಮಕರಿಪು ಸುರಸ್ತೋಮ ಸಹಾಯಕ _

ಭೂಮಿಯ ವರಜಯ

ಕ್ಷೇಮದ ವಾಮನ _ ಭೀಮ ಪರಾಕ್ರಮ _

ಭೂಮಿಜೆನಾಥಸು

ಧಾಮಸಖಖಳಭ್ರಾಮಕ ಕಲ್ಕಿಯೆ4


ಶಿಷ್ಠ ಸುಪೋಷಕ &shಥಿ;&shಥಿ;&shಥಿ;&shಥಿ;&shಥಿ;&shಥಿ; _ ದುಷ್ಟವಿನಾಶಕ _

ತುಷ್ಠಿ ಮಾಯಾ ಪರ-

ಮೇಷ್ಠ ಜನಕ- ಶ್ರೀ ಕೃಷ್ಣವಿಠಲಪದ

ನಿಷ್ಠರ ಸೇರಿ ವಿಶಿಷ್ಠ ಸಮರ್ಪಿಸಿ 5

***