Showing posts with label ಮಂತ್ರಾಲಯದಿ ಇರುವ ಶ್ರೀ ರಾಘವೇಂದ್ರ nagashayana. Show all posts
Showing posts with label ಮಂತ್ರಾಲಯದಿ ಇರುವ ಶ್ರೀ ರಾಘವೇಂದ್ರ nagashayana. Show all posts

Monday 6 September 2021

ಮಂತ್ರಾಲಯದಿ ಇರುವ ಶ್ರೀ ರಾಘವೇಂದ್ರ ankita nagashayana

ankita ನಾಗೇಶಶಯನ 

ರಾಗ: [ಷಣ್ಮುಖಪ್ರಿಯ] ತಾಳ: [ಆದಿ]


ಮಂತ್ರಾಲಯದಿ ಇರುವ ಶ್ರೀ ರಾಘವೇಂದ್ರ


ಬೃಂದಾವನದಿ ಮೆರೆವ ಮಂತ್ರಾಲಯದಿ ಇರುವ

ಅಂತಃಕರಣದಿ ಕರೆಯೆ ನಿಂತಲ್ಲೆ ಒದಗುವ ಅ.ಪ


ಕೃತಯುಗದಲ್ಲಿ ದೈತ್ಯಪತಿಯಲ್ಲಿ ಜನಿಸಿದ

ಅತುಳಮಹಿಮ ನರಹರಿಯನ್ನು ಭಜಿಸಿದ 1

ವ್ಯಾಸರಾಜರೆನಿಸಿ ಶ್ರೀಕೃಷ್ಣನ್ನ ಕುಣಿಸಿ

ದಾಸಜನರಿಗೆ ಉಪದೇಶಗ್ರಂಥಗಳ ರಚಿಸಿ 2

ಮಂತ್ರಾಲಯದಿ ನಿಂತು ಕಂತುಪಿತನ ಪಾದಾ-

ಕ್ರಾಂತರಾಗಿ ಬರುವ ಸಂತರಸಲಹುತ 3

ಯತಿಯು ತಾನಾಗಲು ಸತಿಯು ಬಹು ದುಃಖದಿ

ಮೃತಿಪೊಂದೆ ಕೂಪದಿ ಗತಿಯಿತ್ತು ಸಲಹಿದೆ 4

ಹನುಮಭೀಮಮಧ್ವರನು ಶ್ರದ್ಧೆಯಿಂದಲಿ

ಅನುದಿನ ಸೇವಿಸಿ ಘನಜ್ಞಾನಪೊಂದುತ 5

ಸುಧೀಂದ್ರಯತಿ ಕರಪದುಮಸಂಭವನಾಗೆ

ಮುದತೀರ್ಥ ಮತವನ್ನು ಹದನಾಗಿ ಸಾರುತ 6

ಸಿರಿರಾಮ ನರಹರಿ ಸಿರಿಕೃಷ್ಣ ವೇದವ್ಯಾಸ

ವರಮೂರ್ತಿಗಳ ಮನದಿ ನಿರುತದಿ ಜಪಿಸುತ 7

ಭೂತಪ್ರೇತಪಿಶಾಚಿ ಭಯಗಳೆಂಬ

ಪಾತಕಗಳಕಳೆದು ದೂತರಸಲಹುತ 8

ವರಮಧ್ವಶಾಸ್ತ್ರಗಳ ಮರ್ಮಗಳನ್ನೆ ತಿಳಿದು

ಪರಿಮಳ ಗ್ರಂಥವ ಹರುಷದಿ ಬೋಧಿಸುತ 9

ಮೂಕ ಬಧಿರ ಅಂಧರ ವ್ಯಾಕುಲಗಳ ಕಳೆದು

ಶ್ರೀಕಾಂತ ಹರಿಯಲ್ಲಿ ಏಕಾಂತಭಕ್ತಿ ಕೊಡುತ 10

ಬೃಂದಾವನದಿ ಸಕಲವೃಂದಾರಕರಸಹಿತ

ನಂದನಂದನನ ನಿಲಿಸಿ ಛಂದದಿ ಸೇವಿಸುತ 11

ತುಂಗತರಂಗಿಣಿ ಮಂಗಳತೀರದಿ

ಶೃಂಗಾರ ಸದನದಿ ರಂಗನ್ನ ಪೂಜಿಸುತ 12

ಸಂತಾನ ಸಂಪತ್ತು ಸುಜ್ಞಾನ ಮತಿಯಿತ್ತ-

ನಂತ ಕಾಲಗಳಲ್ಲಿ ಸಂತರ ಪೊರೆಯುತ 13

ದೇಶದೇಶದಿ ಬಂದ ದಾಸಜನರ ಬಹು

ದೋಷವ ಕಳೆದು ಸಂತೋಷವ ನೀಡುತ 14

ರಾಗದ್ವೇಶಗಳ ನೀಗಿ ನಿರ್ಮಲರಾಗಿ

ನಾಗೇಶಶಯನನ ಯೋಗಾದಿ ನೋಡುತ 15

***