Showing posts with label ವಂದನೆಯ ಮಾಡುವೆ ಬಂಧನ ಬಿಡಸೋ tirumaleshahari vittala ರಾಘವೇಂದ್ರ ಸ್ತವನ raghavendra stavana. Show all posts
Showing posts with label ವಂದನೆಯ ಮಾಡುವೆ ಬಂಧನ ಬಿಡಸೋ tirumaleshahari vittala ರಾಘವೇಂದ್ರ ಸ್ತವನ raghavendra stavana. Show all posts

Monday 6 September 2021

ವಂದನೆಯ ಮಾಡುವೆ ಬಂಧನ ಬಿಡಸೋ ankita tirumaleshahari vittala ರಾಘವೇಂದ್ರ ಸ್ತವನ raghavendra stavana

 ankita ತಿರುಮಲೇಶಹರಿವಿಠಲ 

ಶ್ರೀರಾಘವೇಂದ್ರ ಸ್ತವನ - ಜಾನಪದ ಧಾಟಿ


ವಂದನೆಯ ಮಾಡುವೆ ಬಂಧನ ಬಿಡಸೋ

ತಂದೆ ಗೋವಿಂದಗತಿಪ್ರಿಯಾ

ತಂದೆ ಗೋವಿಂದಗತಿಪ್ರಿಯ ರಾಘವೇಂದ್ರ

ನಂದ ಕಂದಾನ ಒಮ್ಮೆ ತೋರಿಸೋ 


ಸ್ವಚ್ಚವಾದ ತುಂಗಭದ್ರೆ ಮಂಚಾಲೆ ಗ್ರಾಮ

ಅಚ್ಯುತದೇವನ ಪೂಜಾರ್ಯ

ಅಚ್ಯುತದೇವನ ಪೂಜಾರ್ಯ ರಾಘವೇಂದ್ರ

ಸ್ವಚ್ಚಮನಸಿಗೆ ಒಲಿಯುವನೂ  1

ಹೊಚ್ಚ ಹೊನ್ನಿನ ಬಣ್ಣ ಅಚ್ಚ ವೈಷ್ಣವನೀತ

ಬಿಚ್ಚು ಮನಸೀನ ಗುರುಗಳೂ

ಬಿಚ್ಚು ಮನಸೀನ ಗುರುಗಳು ರಾಘವೇಂದ್ರ

ತುಚ್ಚ ಮನಸೀಗೆ ನಿಲುಕರೋ  2

ಅರವಿಂದ ನಯನ ಸುಂದರ ವದನ

ಅಂದದ ಮೂರುತಿ ಗುರುರಾಯ

ಅಂದದ ಮೂರುತಿ ಗುರುರಾಯ ರಾಘವೇಂದ್ರ

ಬಂದ ಭಕುತರ ಸಲಹುವನೂ  3

ತುಂಬಿದ ಕಡಲಿಗೆ ಅಂಬೀಗನೀತ

ಹಂಬಲ ತುಂಬುವ ಕರುಣಾಳು

ಹಂಬಲ ತುಂಬುವ ಕರುಣಾಳು ರಾಘವೇಂದ್ರ

ನಂಬೀದ ಭಕುತರ ಕೈಬಿಡನೂ  4

ಶುದ್ಧಶಿಲೆಯಾ ಮುದ್ದು ಬೃಂದಾವನ

ಕದ್ದು ಕೃಷ್ಣನಾ ಕುಣಿಸುವನು

ಕದ್ದು ಕೃಷ್ಣನಾ ಕುಣಿಸುವ ರಾಘವೇಂದ್ರ

ಸದ್ದು ಮಾಡದೆ ಸಲಹುವನು  5

ತಿರುಮಲೇಶಹರಿವಿಠಲರಾಯನ

ನಿರುತದಿ ಭಜಿಸುವ ಮಹನೀಯ

ನಿರುತದಿ ಭಜಿಸುವ ಮಹನೀಯ ರಾಘವೇಂದ್ರ

ಹರಿಪುರ ದಾರಿಯ ತೋರುವನು  6

***