Showing posts with label ಎಚ್ಚರಾದರು ದೇವಗಣರಿಂದು ನಮ್ಮ venkata. Show all posts
Showing posts with label ಎಚ್ಚರಾದರು ದೇವಗಣರಿಂದು ನಮ್ಮ venkata. Show all posts

Monday, 1 November 2021

ಎಚ್ಚರಾದರು ದೇವಗಣರಿಂದು ನಮ್ಮ ankita venkata

 ತುಪಾಕಿ ವೆಂಕಟರಮಣಾಚಾರ್ಯ

ಎಚ್ಚರಾದರು ದೇವಗಣರಿಂದು ನಮ್ಮ

ಲಕ್ಷ್ಮೀರಮಣ ಕೃಷ್ಣ ರಥವನೇರುವನೆಂದು ಪ.


ಶಿಂಶುಮಾರ ಚಕ್ರದಂಶಮಕರ ತಿ-

ಗ್ಮಾಂಶು ಸಂಕ್ರಮಿಸುವ ಸಮಯದಲಿ

ಕಂಸಮರ್ದನ ಯದು ವಂಶಾಬ್ಧಿ ಚಂದ್ರ-

ವಿಪಾಂಗಗಮನನಾಗಿ ವೀಧಿಗೆ ಬಹನೆಂದು 1


ಕಂದನ ಸಂಭ್ರಮ ತಂದೆಗೆ ಸುಖಕರ-

ವೆಂದು ಪೇಳುವ ಮಾತ ನಿಜವ ದೋರಿ

ಮಂದರಧರ ಮನ್ಮಥನ ಕೇತು ಬೆಳಗುವಾ-

ನಂದದಿ ರಥವೇರುತ್ತಿಂದು ಬರುವನೆಂದು 2


ಮೋಕ್ಷದಾಯಕ ಕಮಲಾಕ್ಷ ಕೃಷ್ಣನ ಸ-

ತ್ಕಟಾಕ್ಷ ಸಂಪಾದಿಪಪೇಕ್ಷೆಯಲಿ

ತ್ರ್ಯಕ್ಷಾಧ್ಯಕ್ಷಲೋಕಾಧ್ಯಕ್ಷರೆಲ್ಲರು ಕೂಡಿ

ಪಕ್ಷಿವಾಹನನನ್ನು ಈಕ್ಷಿಪ ತವಕದಿ 3


ಪೃಥೆಯ ಕುಮಾರನ ರಥವ ನಡಸುತತಿ-

ರಥರನು ಗೆಲಿಸಿ ಸಾಮ್ರಾಜ್ಯವಿತ್ತ

ಕಥೆಯ ಕೇಳ್ಪರ ಮನೋರಥಗಳ ಕೊಡುವ ಮ-

ನ್ಮಥನ ಜನಕ ಮುಕ್ತಿ ಪಥವ ತೋರುವನೆಂದು 4


ಸಿದ್ಧಿ ವಿಘ್ನಮುಖ ದೋಷಭೇಷಜ ಭಕ್ತಿ

ಸಿದ್ಧ ಜಪರಿಗೆ ಸಿದ್ಧಿಸುವನೆಂದು

ಮಧ್ವಮುನಿಯು ತಂದಿಲ್ಲಿರಿಸಿ ಪೂಜಿಸಿದಂಥ

ಸಿದ್ಧಾಂತವೇದ್ಯನಿರುದ್ಧನಿಲ್ಲಿಹನೆಂದು 5


ಧಾರುಣಿಯೊಳಗಿನ ವಿಷ್ಣುಭಕ್ತರ ಸಂಘ

ಸೇರಿ ಸಂತೋಷದಿ ಜಯವೆನಲು

ಪಾರಿವ್ರಾಜರು ಕೂಡಿ ಪರತತ್ವ ನುಡಿಯೆ ಸ-

ರ್ಪಾರಿಯನೇರಿ ಸಮೀರೇಡ್ಯಬಹನೆಂದು 6


ಮಾಯಿಜನರ ಮುರಿದೊತ್ತುತ ತತ್ವರ-

ಸಾಯನ ಸುಧೆಯ ಸಜ್ಜನರಿಗಿತ್ತು

ವಾಯುಮುನಿಯು ಪ್ರತಿಷ್ಠೆಯ ಗೈದ ಪುರುಷಾರ್ಥ

ದಾಯಕ ವೆಂಕಟರಾಯನೀತನೆಯೆಂದು 7

***