Showing posts with label ಅತಿ ಮಧುರವದನ ಪಂಕೇಜ ದ್ವಿಜರಾಜ ಶ್ರೀ ankita vaikunta vittala. Show all posts
Showing posts with label ಅತಿ ಮಧುರವದನ ಪಂಕೇಜ ದ್ವಿಜರಾಜ ಶ್ರೀ ankita vaikunta vittala. Show all posts

Friday 6 August 2021

ಅತಿ ಮಧುರವದನ ಪಂಕೇಜ ದ್ವಿಜರಾಜ ಶ್ರೀ ankita vaikunta vittala

 ..

kruti by ಬೇಲೂರು ವೈಕುಂಠ ದಾಸರು belur vaikunta dasaru


ಅತಿಮಧುರವದನ ಪಂಕೇಜ ದ್ವಿಜರಾಜ ಶ್ರೀ

ಪತಿ ಪದಾಂಬುಜ ಮಧುಕರವಾದಿ ವಾದಿರಾಜಾ ಪ


ಸಾರತರವಹ ವೇದಶಾಸ್ತ್ರದರ್ಥಗಳ [ನೆಲ್ಲ

ಸೋರಿ] ಕ್ಕಿ ತದರ್ಥವನೆಲ್ಲ ಕೆಡಿಸೀ

ಧಾರುಣಿಯ ಜನರಮತಿಗುಂದಿಸುವ ಖಳ ಮತ್ತ

ವಾರಣ ಮೃಗೇಂದ್ರ ಭಳಿರೇ ವಾದಿರಾಜಾ 1


[ಚರಿತ]ವರ್ಣ ಧರ್ಮಾಶ್ರಯಗಳೆನಿಪ ಯೀ

ಪರಿ ತಾರತಮ್ಯವನೆಲ್ಲ ಕೆಡಿಸೀ

ಧರೆಯ ಸುಜನರ [ಮೋಹಿ]ಸುವ ಶೂನ್ಯ ಜನನಿಕರ

ನಿರು[ತಪಾಲಿಪ] ಭಾಪುರೇ ವಾದಿರಾಜಾ 2


ಮೃಡಮುಖ್ಯ ಸುರನುತ ಪದಾಂಭೋಜ ನಿಖಿಳ ಜಗ

ದೊಡೆಯ ವೈಕುಂಠ ಲಕ್ಷ್ಮೀ[ಕೇಶವ]

ಉಡುಪಿಯಧಿಪತಿಕೃಷ್ಣನಂಘ್ರಿ ಪಂಕೇರುಹವ

ವಿಡಿದೆ ದೃಢವಾಗಿ ಮಝರೇ ವಾದಿರಾಜಾ 3

***