Showing posts with label ಶ್ರೀಮದ್ವಿಶ್ವಗ್ರೀವ ನೂಲುಮಿಗೆ hks phala stuti ಹರಿಕಥಾಮೃತಸಾರ ಫಲ ಸ್ತುತಿ kamalapati vittala. Show all posts
Showing posts with label ಶ್ರೀಮದ್ವಿಶ್ವಗ್ರೀವ ನೂಲುಮಿಗೆ hks phala stuti ಹರಿಕಥಾಮೃತಸಾರ ಫಲ ಸ್ತುತಿ kamalapati vittala. Show all posts

Wednesday 1 September 2021

ಶ್ರೀಮದ್ವಿಶ್ವಗ್ರೀವ ನೂಲುಮಿಗೆ hks phala stuti ಹರಿಕಥಾಮೃತಸಾರ ಫಲ ಸ್ತುತಿ ankita kamalapati vittala

" ಶ್ರೀ ಕಮಲಾಪತಿವಿಠಲರ - ಹರಿಕಥಾಮೃತಸಾರ ಫಲ ಸ್ತುತಿ - ( 9 ಪದ್ಯಗಳು ) "


ಶ್ರೀಮದ್ವಿಶ್ವಗ್ರೀವ ನೂಲುಮಿಗೆ ।

ಧಾಮರೆನಿಪ ಶ್ರೀ ವಾದಿರಾಜರು ।

ಸ್ವಾಮಿ ವ್ಯಾಸಾರ್ಯ -

ವಿಠಲೋಪಾಸ್ಯ ಸ್ವಪ್ನದಲಿ ।।

ಶ್ರೀ ಮನೋರಮನೆನಿಪ ತತ್ತ್ವ । ಸು ।

 ಸೌಮನದ ಮಾಲಿಕೆಯನಿತ್ತು ।

ದ್ಧಾಮ ಗ್ರಂಥವ ರಚಿಸೆನುತಲಿ-

 ನುಡಿದ ಕಾರಣದಿ ।। 1 ।।

ಭಾರತ ಸು ಭಾಗವತ ವಾಮನ ।

ಗಾರುಡ ಭವಿಶೋತ್ತರ ಪದವು ।

ಚಾರು ವಿಷ್ಣುರಹಸ್ಯ -

ವಾಯು ಪಂಚರಾತ್ರಾಗಮ ।।

ಸಾರ ಗುರು ವೃತ್ತ ಪ್ರವೃತ್ತ ।

ಈರ ಸಂಹಿತಾದಿತ್ಯ ವಾಗ್ನೆಯ ।

ಪಾರ ರಸಗಳ ತೋರ್ಪ -

ಶ್ರೀಗುರುಮಧ್ವ ಶಾಸ್ತ್ರವು ।। 2 ।।

ಸಾರ ಕ್ರೋಢೀಕರಿಸಲನುದಿನ ।

ಸಾರೆ ವರ್ಣಾಭಿಮಾನಿ । ದೀನೋ ।

ದ್ಧಾರಗೋಸುಗ ಹರಿಕ-

ಥಾಮೃತಸಾರವನು ರಚಿಸಿ ।।

ಸ್ಥೈರ್ಯ ಮಾನಸದಿಂದ । ಭಾವಿ ।

ಭಾರತಿಪತಿ ವಾದಿರಾಜರ ।

ಭೂರಿ ಕೋಶಕೆ ವೊಪ್ಪಿಸುತ-

ಲಾಪಾರ ಮುದ ಪಡೆದ ।। 3 ।।

ಸಾಸಿರಾರ್ಥದೊಳೊಂದು । ಪಾದಕವ ।

ಕಾಶ ವಿರುವೊ ಶ್ರೀದ ಬೃಹತೀ ।

ಸಾಸಿರದ ನಾಮವನು -

ಯೋಚಿಸಿ ಇವರು ಗ್ರಂಥದಲ್ಲಿ ।।

ಈ ಸುರಹಸ್ಯವನರಿತು ಪಠಿಪಗೆ ।

ಯೇಸು ದೂರವೋ ಮುಕ್ತಿ । ಬರಿದಾ ।

ಯಾಸ ಬಟ್ಟದರಿಂದ -

ಫಲವೇನಿಲ್ಲವೀ ಜಗದಿ ।। 4 ।।

" ಹ " ಯೆನಲು ಹರಿಯೊಲಿವನು ತಾ ।

" ರಿ " ಯೆನಲು ರಿಕ್ತತ್ವ ಹರಿಯುವ ।

" ಕ " ಯೆನಲು ಕತ್ತಲೆಯ -

ಅಜ್ಞಾನವನು ಪರಿಹರಿಪ ।।

" ಥಾ " ಯೆನಲು ಸ್ಥಾಪಿಸುವ ಜ್ಞಾನವ ।

" ಮೃ " ಯೆನಲು ಮೃತಿ ಜನಿಯ ಬಿಡಿಸುವ ।

" ತ " ಯೆನಲು ಹರಿ ತನ್ನ -

ಮೂರುತಿಯ ತೋರುವನು ನಿತ್ಯ ।। 5 ।।

" ಸಾ " ಯೆನಲು ಸಾಧಿಸುವ ಮುಕ್ತಿ ।

" ರ " ಯೆನಲು ರತಿಯಿತ್ತು ರಮಿಪನು ।

ಕಾಯ ವಾಗ್ಜ್ಮಯದೆಂಟು -

ಅಕ್ಕರ ನುಡಿದರದರೊಳಗೆ ।।

ಶ್ರೀಯರಸ ವಿಶ್ವಾದಿ । ಅಷ್ಟೈ ।

ಶ್ವರ್ಯ ರೂಪದಿ ನಿಂತು ತಾ । ಪರ ।

ಕೀಯ ನೆನಿಸದೆ ಇವನ -

ಮನದೊಳು ರಾಜಿಪನು ಬಿಡದೆ ।। 6 ।।

ಹರಿಯೆನಿಪಗನಿರುದ್ಧ ಧರ್ಮವು ।

ದೊರಕಿಸುವನವು ಪರಮ ಹರುಷದಿ ।

ತ್ವರ ಕಥಾಯನೆ ಕೃತಿ-

ರಮಣನರ್ಥಿಗಳ ಹನಿಗರೆವ ।।

ವರ ಅಮೃತ ಯೆನಲಾಗ । ಶ್ರೀ ಸಂ ।

ಕರುಷಣನೇ ಕಾಮಹನು ಯೋಜಿಪ ।

ಸರಸಸಾರನೆ ವಾಸುದೇವನು -

ಮೋಕ್ಷ ಕೊಡುತಿಪ್ಪ ।। 6 ।।

ಈ ರಹಸ್ಯವನರಿತು ಪ್ರತಿದಿನ ।

ಸಾರಸಾಕ್ಷನ ಪದಕಮಲಕೆ ।

ಆರು ಪದನಂತಿರುವ -

ಸುಜನಕೆ ಮೇಲೆ ನುಡಿದ ಫಲ ।।

ಸಾರಿ ಸಾರಿಗೆ ಒದಗಿ ಬರುತಲೆ ।

ಸೇರಿಸುವರೈ ವಿಷ್ಣು ಮಂದಿರ ।

ತೋರುವರು ನಿಂದಕರ -

ನಿಕರಕೆ ನಿರಯವನು ನಿತ್ಯ ।। 8 ।।

ಚಾರುತನದಿ ಹರಿಕಥಾಮೃತ ।

ಸಾರ ಕೃತ ಋಷಿ ಭಾರದ್ವಾಜರ ।

ಸಾರ ಹೃದಯದಿ ನಿಂತ -

ಸಕಲ ಸು ಶಾಸ್ತ್ರದಾ ಲೋಕಾ ।।

ಸಾರಿಸಾರಿಗೆ ಮಾಡಿ ಮಾಡಿಸಿ ।

ಸೂರೆಗೊಟ್ಟಾನಂದ ಚಿನ್ಮಯ ।

ಪಾರವಾರಶಯನ -

ಶ್ರೀ ಕಮಲಾಪತಿ ವಿಠ್ಠಲಾ ।। 9 ।।

****