Wednesday 1 September 2021

ಶ್ರೀಮದ್ವಿಶ್ವಗ್ರೀವ ನೂಲುಮಿಗೆ hks phala stuti ಹರಿಕಥಾಮೃತಸಾರ ಫಲ ಸ್ತುತಿ ankita kamalapati vittala

" ಶ್ರೀ ಕಮಲಾಪತಿವಿಠಲರ - ಹರಿಕಥಾಮೃತಸಾರ ಫಲ ಸ್ತುತಿ - ( 9 ಪದ್ಯಗಳು ) "


ಶ್ರೀಮದ್ವಿಶ್ವಗ್ರೀವ ನೂಲುಮಿಗೆ ।

ಧಾಮರೆನಿಪ ಶ್ರೀ ವಾದಿರಾಜರು ।

ಸ್ವಾಮಿ ವ್ಯಾಸಾರ್ಯ -

ವಿಠಲೋಪಾಸ್ಯ ಸ್ವಪ್ನದಲಿ ।।

ಶ್ರೀ ಮನೋರಮನೆನಿಪ ತತ್ತ್ವ । ಸು ।

 ಸೌಮನದ ಮಾಲಿಕೆಯನಿತ್ತು ।

ದ್ಧಾಮ ಗ್ರಂಥವ ರಚಿಸೆನುತಲಿ-

 ನುಡಿದ ಕಾರಣದಿ ।। 1 ।।

ಭಾರತ ಸು ಭಾಗವತ ವಾಮನ ।

ಗಾರುಡ ಭವಿಶೋತ್ತರ ಪದವು ।

ಚಾರು ವಿಷ್ಣುರಹಸ್ಯ -

ವಾಯು ಪಂಚರಾತ್ರಾಗಮ ।।

ಸಾರ ಗುರು ವೃತ್ತ ಪ್ರವೃತ್ತ ।

ಈರ ಸಂಹಿತಾದಿತ್ಯ ವಾಗ್ನೆಯ ।

ಪಾರ ರಸಗಳ ತೋರ್ಪ -

ಶ್ರೀಗುರುಮಧ್ವ ಶಾಸ್ತ್ರವು ।। 2 ।।

ಸಾರ ಕ್ರೋಢೀಕರಿಸಲನುದಿನ ।

ಸಾರೆ ವರ್ಣಾಭಿಮಾನಿ । ದೀನೋ ।

ದ್ಧಾರಗೋಸುಗ ಹರಿಕ-

ಥಾಮೃತಸಾರವನು ರಚಿಸಿ ।।

ಸ್ಥೈರ್ಯ ಮಾನಸದಿಂದ । ಭಾವಿ ।

ಭಾರತಿಪತಿ ವಾದಿರಾಜರ ।

ಭೂರಿ ಕೋಶಕೆ ವೊಪ್ಪಿಸುತ-

ಲಾಪಾರ ಮುದ ಪಡೆದ ।। 3 ।।

ಸಾಸಿರಾರ್ಥದೊಳೊಂದು । ಪಾದಕವ ।

ಕಾಶ ವಿರುವೊ ಶ್ರೀದ ಬೃಹತೀ ।

ಸಾಸಿರದ ನಾಮವನು -

ಯೋಚಿಸಿ ಇವರು ಗ್ರಂಥದಲ್ಲಿ ।।

ಈ ಸುರಹಸ್ಯವನರಿತು ಪಠಿಪಗೆ ।

ಯೇಸು ದೂರವೋ ಮುಕ್ತಿ । ಬರಿದಾ ।

ಯಾಸ ಬಟ್ಟದರಿಂದ -

ಫಲವೇನಿಲ್ಲವೀ ಜಗದಿ ।। 4 ।।

" ಹ " ಯೆನಲು ಹರಿಯೊಲಿವನು ತಾ ।

" ರಿ " ಯೆನಲು ರಿಕ್ತತ್ವ ಹರಿಯುವ ।

" ಕ " ಯೆನಲು ಕತ್ತಲೆಯ -

ಅಜ್ಞಾನವನು ಪರಿಹರಿಪ ।।

" ಥಾ " ಯೆನಲು ಸ್ಥಾಪಿಸುವ ಜ್ಞಾನವ ।

" ಮೃ " ಯೆನಲು ಮೃತಿ ಜನಿಯ ಬಿಡಿಸುವ ।

" ತ " ಯೆನಲು ಹರಿ ತನ್ನ -

ಮೂರುತಿಯ ತೋರುವನು ನಿತ್ಯ ।। 5 ।।

" ಸಾ " ಯೆನಲು ಸಾಧಿಸುವ ಮುಕ್ತಿ ।

" ರ " ಯೆನಲು ರತಿಯಿತ್ತು ರಮಿಪನು ।

ಕಾಯ ವಾಗ್ಜ್ಮಯದೆಂಟು -

ಅಕ್ಕರ ನುಡಿದರದರೊಳಗೆ ।।

ಶ್ರೀಯರಸ ವಿಶ್ವಾದಿ । ಅಷ್ಟೈ ।

ಶ್ವರ್ಯ ರೂಪದಿ ನಿಂತು ತಾ । ಪರ ।

ಕೀಯ ನೆನಿಸದೆ ಇವನ -

ಮನದೊಳು ರಾಜಿಪನು ಬಿಡದೆ ।। 6 ।।

ಹರಿಯೆನಿಪಗನಿರುದ್ಧ ಧರ್ಮವು ।

ದೊರಕಿಸುವನವು ಪರಮ ಹರುಷದಿ ।

ತ್ವರ ಕಥಾಯನೆ ಕೃತಿ-

ರಮಣನರ್ಥಿಗಳ ಹನಿಗರೆವ ।।

ವರ ಅಮೃತ ಯೆನಲಾಗ । ಶ್ರೀ ಸಂ ।

ಕರುಷಣನೇ ಕಾಮಹನು ಯೋಜಿಪ ।

ಸರಸಸಾರನೆ ವಾಸುದೇವನು -

ಮೋಕ್ಷ ಕೊಡುತಿಪ್ಪ ।। 6 ।।

ಈ ರಹಸ್ಯವನರಿತು ಪ್ರತಿದಿನ ।

ಸಾರಸಾಕ್ಷನ ಪದಕಮಲಕೆ ।

ಆರು ಪದನಂತಿರುವ -

ಸುಜನಕೆ ಮೇಲೆ ನುಡಿದ ಫಲ ।।

ಸಾರಿ ಸಾರಿಗೆ ಒದಗಿ ಬರುತಲೆ ।

ಸೇರಿಸುವರೈ ವಿಷ್ಣು ಮಂದಿರ ।

ತೋರುವರು ನಿಂದಕರ -

ನಿಕರಕೆ ನಿರಯವನು ನಿತ್ಯ ।। 8 ।।

ಚಾರುತನದಿ ಹರಿಕಥಾಮೃತ ।

ಸಾರ ಕೃತ ಋಷಿ ಭಾರದ್ವಾಜರ ।

ಸಾರ ಹೃದಯದಿ ನಿಂತ -

ಸಕಲ ಸು ಶಾಸ್ತ್ರದಾ ಲೋಕಾ ।।

ಸಾರಿಸಾರಿಗೆ ಮಾಡಿ ಮಾಡಿಸಿ ।

ಸೂರೆಗೊಟ್ಟಾನಂದ ಚಿನ್ಮಯ ।

ಪಾರವಾರಶಯನ -

ಶ್ರೀ ಕಮಲಾಪತಿ ವಿಠ್ಠಲಾ ।। 9 ।।

****


No comments:

Post a Comment