Showing posts with label ಮಾಣೆದೆ ಅನುದಿನ ಸಾನುರಾಗದಿ ಸಲಹೋ ವಾನರೋತ್ತಮ ಮಾರುತಿ shyamasundara. Show all posts
Showing posts with label ಮಾಣೆದೆ ಅನುದಿನ ಸಾನುರಾಗದಿ ಸಲಹೋ ವಾನರೋತ್ತಮ ಮಾರುತಿ shyamasundara. Show all posts

Wednesday 1 September 2021

ಮಾಣೆದೆ ಅನುದಿನ ಸಾನುರಾಗದಿ ಸಲಹೋ ವಾನರೋತ್ತಮ ಮಾರುತಿ ankita shyamasundara

 ..

ಮಾಣೆದೆ ಅನುದಿನ ಸಾನುರಾಗದಿ ಸಲಹೋ

ವಾನರೋತ್ತಮ ಮಾರುತಿ ಪ


ವಾಣಿಯ ಮುದಕೆ ಕ್ಷೋಣಿ ಕುಮುದಕೆÉ

ಏಣಿಲಾಂಛನನೆನಿಸಿ ಗಾಣಧಾಳದಿ ತಾಣಗೈದಿಹ ಪ್ರಾಣದೇವನೆ ಅ.ಪ

ಯುಗಯುಗದಲಿ ಜನಿಸಿ | ರಘುಕುಲೇಶನ ಸ್ತುತಿಸಿ

ಜಿಗಿದು ವಾರಿಧಿ ಲಂಘಸಿ ||

ಜಗದ ಜನನಿಗೆ ಕ್ಷೇಮತಿಳುಹಿದ ಒದೆದು

ದಶಾನನನ ನಗರ ದಹಿಸಿದ | ಸುಗುಣ ನಾಲ್ಮೊಗ

ಪದಾರ್ಹನೆ ಮುಗಿವೆ ಕರವನು ಅಘವ ಓಡಿಸಿ 1


ದ್ವಾಪರದಲ್ಲಿ ಬಹುಪಾಪಾತ್ಮಕರಾದ

ಭೂಪಾಲರ ಧುರದಿ | ಕೋಪದಿ ಸಂಹರಿಸಿ

ಸತಿಮಣಿ ದ್ರೌಪದಿಗೆ ಮುದವಿತ್ತು ಸೇವೆಯನು

ಗೋಪತಿ ಶ್ರೀಕೃಷ್ಣ ಸಲಹಿದ ಭಾಪು ಭಾಪು ಪರಾಕ್ರಮಶಾಲಿ 2


ಬಂದು ಈ ಯುಗದಿ ಮಧ್ಯಮಂದೀರಾತ್ಮಜನಾಗಿ

ಮಂದರ ಮತವ ಮುರಿದು ||

ನಂದಕಂದ ಮುಕುಂದ ಶಾಮಸುಂದರನೆ ಪರ |

ನೆಂದು ವಿಜಯದಿ ದುಂದುಭಿ ಮೊಳಗಿಸಿದ

ಕಾರಣ ಗುರುಗಂಧವಾಹನ 3

***