Showing posts with label ಆಗದಿರುವಂಥ ಕೃತಿ ಆಗಿ ಹೋಗುವುದು hanumesha vittala. Show all posts
Showing posts with label ಆಗದಿರುವಂಥ ಕೃತಿ ಆಗಿ ಹೋಗುವುದು hanumesha vittala. Show all posts

Tuesday 1 June 2021

ಆಗದಿರುವಂಥ ಕೃತಿ ಆಗಿ ಹೋಗುವುದು ankita hanumesha vittala

 ಶ್ರೀ ಹರಿಯ ಸ್ತುತಿ

ಆಗದಿರುವಂಥ ಕೃತಿ ಆಗಿ ಹೋಗುವುದು

ಜಗದೀಶನಾಕೃತಿಯು ಅಗಾಧವಿಹುದೈಯ್ಯ ಪ


ಮಂದರೋದ್ಧರನಾಜ್ಞೆಯಿಂದ ಬ್ರಹ್ಮನು ತಾನು

ಇಂದಿಗೆ ಸೃಷ್ಟಿ ಮಾಡುವುದಿಲ್ಲವೇನು

ಇಂದೀವರಾಕ್ಷ ಮುಕುಂದನ ದಯದೀ

ಪಾಂಡುನಂದನನು ಅಶ್ವಮೇಧವ ಮಾಡಲಿಲ್ಲೇ 1


ಹರಿಯ ಕೃಪೆಯಿಂದಲಿ ವರದಂಜನೇಯ ಸುತನು

ಗುರು ರಾಮನಾ ಸತಿಯ ಅರಸುವುದಕ್ಕಾಗಿ

ಪರಮ ದುರ್ಲಭವಾದ ಶರಧಿಯನು ಹರುಷದಲಿ

ಸಿರಿನಾಮ ಸ್ಮರಿಸಿ ಹಾರಲಿಲ್ಲೇನೋ2


ಧನಭೂಮಿ ಕನ್ಯಾಗ್ರಹದಾನ ಕೊಡಲದಕೆ ಹರಿ

ಅನುಕೂಲವಾದಷ್ಟೇ ಫಲಕೊಡುವನು

ಮನವನೊಪ್ಪಿಸಿ ಗತಿ ಎಂದು ನೆನೆದವರಿಗೆ

ಘನ ಮುಕ್ತಿಯನು ಕೊಡುವ ಹನುಮೇಶವಿಠಲ 3

****