Showing posts with label ದಾಸರ ಭಜಿಸುತ ಕ್ಲೇಶವ ಕಳೆಯಿರೊ kamalanabha vittala purandaradasa stutih. Show all posts
Showing posts with label ದಾಸರ ಭಜಿಸುತ ಕ್ಲೇಶವ ಕಳೆಯಿರೊ kamalanabha vittala purandaradasa stutih. Show all posts

Thursday, 5 August 2021

ದಾಸರ ಭಜಿಸುತ ಕ್ಲೇಶವ ಕಳೆಯಿರೊ ankita kamalanabha vittala purandaradasa stutih

 ..

ಗುರುಸ್ತುತಿ

kruti by Nidaguruki Jeevubai


ದಾಸರ ಭಜಿಸುತ ಕ್ಲೇಶವ ಕಳೆಯಿರೊ

ವಾಸುದೇವನ ಭಕ್ತರಾದ ಶ್ರೀಪುರಂದರ ಪ


ಮೀಸಲ ಮನದಲಿ ಕೇಶವನಡಿಗಳ

ಆಸೆಲಿ ಪೂಜಿಪ ದಾಸರೊಳಗೆ ಶ್ರೇಷ್ಠ ಅ.ಪ


ಪುರಂದರ ಗಡದೊಳು ಹಿರಿಯನೆಂದೆನಿಸಿದ

ವರದಪ್ಪನಿಗೆ ವರಕÀುವರ ನೆಂದೆನಿಸಿದೀ

ಧರೆಯೊಳು ತನಗ್ಯಾರು ಸರಿಯಿಲ್ಲದಂತೆ ಮೆರೆಯೆ

ಸಿರಿಯರಸನು ಶೀಘ್ರದಲಿ ತಾನರಿಯುತ 1

ಬಂದನು ಮಗನಿಗೆ ಮುಂಜಿಯೆಂದೆನುತಲಿ

ಚಂದದಿಂದಲಿ ಬೇಡಲು ಧಣಿಯ

ಬಂದೆಯಾತಕೆ ನಮ್ಮ ಚಂದದ ಬೀದಿಲಿ

ಹಿಂದಕೆ ತೆರಳೆನೆ ಬಂದನು ಬಾರಿ ಬಾರಿ 2


ಹರಿಯೆಂದು ತಿಳಿಯದೆ ಜರಿಯುತ ನುಡಿಯಲು

ಮರಳಿ ಮರಳಿ ಯಾಚಿಸೆ ಬಿಡದೆ

ತೆರಳನು ಈ ವೃದ್ಧ ತೆರಳಿಪೆನೆನುತಲಿ

ಸರಸರ ತೆಗೆಯುತ ಸುರಿದನು ನಾಣ್ಯವ 3


ನೋಡುತ ಶ್ರೀಹರಿ ಗಾಡದಿ ಕೈನೀಡೆ

ನೀಡಿದ ಸವೆದ ರೊಕ್ಕವ ನೋಡೀ

ಗಾಡನೆ ಬಂದು ನಾಯಕನ ಸತಿಯಳನು

ಬೇಡಿದ ಪುಣ್ಯವು ಬಾಹೋದೆನುತಲಿ 4


ಏನು ನೀಡಲಿ ಎನಗೇನಿಹುದೆನ್ನಲು

ಮಾನಿನಿ ಮೂಗುತಿ ನೀಡೆಂದೆನಲು

ಶ್ರೀನಿಧಿಗರ್ಪಣೆ ಮಾನಿನಿ ಮಾಡಲು

e್ಞÁನಿಗಳರಸನು ಗಾಡ ಹಿಂತಿರುಗುತ 5


ಗಾಡನೆ ಮೂಗುತಿ ನೀಡುತ ದ್ರವ್ಯವ

ಬೇಡಲು ಬೇಗದಿ ನೀಡುತ ನುಡಿದನು

ನೋಡುತ ವಡವೆಯ ನೀಡಿದ ಭರಣಿಲಿ

ಓಡುತ ಬಂದು ನೋಡಿದ ಸತಿ ಮುಖವಾ 6


ಮೂಗುತಿ ಎಲ್ಲೆನೆ ಬೇಗದಿ ನಡುಗುತ

ನಾಗವೇಣಿಯು ಪ್ರಾರ್ಥಿಸಿ ಹರಿಯ

ಆಗ ಕುಡಿವೆ ವಿಷವೆನ್ನುತ ಕರದಲಿ

ನಾಗವಿಷದ ಬಟ್ಲಲಿ ಇರಲು 7

ತೋರಿದಳಾಗಲೆ ತನ್ನಯ ರಮಣಗೆ

ತೋರದಿರಲು ಮುಂದಿನ ಕಾರ್ಯ

ಭಾರಿ ಆಲೋಚನೆಯ ಮಾಡುತ ಮನದಲಿ

ಸಾರಿದ ತನ್ನ ವ್ಯಾಪಾರದ ಸ್ಥಳಕೆ 8


ತೆರೆದು ನೋಡಲು ಆ ವಡವೆಯ ಕಾಣದೆ

ಮಿಗೆ ಚಿಂತೆಯು ತಾಳುತ ಮನದಿ

ನಗಧರನ ಬಹು ಬಗೆಯಲಿ ಪೊಗಳುತೆ

ತೆಗೆದ ಅಸ್ಥಿರ ರಾಜ್ಯದಿ ಮನವ 9

ಕಳವಳ ಪಡುತಲಿ ಆ ಲಲನೆಯ ಸಹಿತದಿ

ತನುಮನ ಧನ ಹರಿಗರ್ಪಿಸುತಾ

ಕ್ಷಣ ಬಿಡದಲೆ ಹರಿ ಚರಣವ ಸ್ಮರಿಸುತ

ಕಮಲನಾಭ ವಿಠ್ಠಲನೆನ್ನುವ ಹರಿ 10

***