Showing posts with label ಐಜಿ ಆಚಾರ್ಯರ ಕಥಾಮೃತವನು others vyasatatwajna teertha stutih. Show all posts
Showing posts with label ಐಜಿ ಆಚಾರ್ಯರ ಕಥಾಮೃತವನು others vyasatatwajna teertha stutih. Show all posts

Saturday 1 May 2021

ಐಜಿ ಆಚಾರ್ಯರ ಕಥಾಮೃತವನು ankita others vyasatatwajna teertha stutih

 ಐಜಿ ಆಚಾರ್ಯರ ಕಥಾಮೃತವನು । ಜ ।

ಲಜನಾಭನ ದಯದಿ ಪೇಳುವೆನು ।

ಸುಜನರೆಲ್ಲರು ಕೇಳಿ ಸಾವಧಾನದಿ ।। ಪಲ್ಲವಿ ।।


ಪ್ರಥಮದಿ ನೀ ವ್ಯಾಸಮುನಿ ಶಿಷ್ಯ ಗೋವಿಂದಒಡೆಯ ।

ದ್ವಿತೀಯದಿ ನೀ ಕೃಷ್ಣದ್ವೈಪಾಯನ ನೆನಿಸಿ ।

ತೃತೀಯದಿ ನೀ ವ್ಯಾಸತತ್ತ್ವಜ್ಞನಾಗಿ ಮೆರೆದು ।

ತತ್ತ್ವಮತ ಜ್ಞಾನವ ಕೊಟ್ಟು ಉದ್ಧರಿಸೋ ಗುರುವೇ ।। ಚರಣ ।।


ವೇದಪ್ರತಿಪಾದ್ಯನ ಕಥೆಗೆ ।

ಮಂದನಂದಿನಿಯ ರಚಿಸಿ ।

ವೇದೋದ್ಭವೆಯ ಪತಿಯಿಂದ ।

ವೇದ ಮತ ತತ್ತ್ವವನು ತಿಳಿದ ಗುರುವೇ ।। ಚರಣ ।।


ವೇದೋದ್ಭವೆ ಅನುಜನೇ ಸಲಹೋ ।

ವೇದ ಪೂಜಿತ ರಾಮನ ಮುಟ್ಟಿದ ಧೀರಾ ।

ವೇದವ್ಯಾಸ ಶಿಷ್ಯನ ಪೀಠದಿ ರಾಜಿಸಿ ।

ವೇದವತೀ ಪತಿಯನು ಮುದದಿಂದರ್ಚಿಸಿದ ।। ಚರಣ ।।

****


ವಿವರಣೆ :


ತತ್ತ್ವಮತ = ವೈಷ್ಣವ ಮತ


ವೇದೋದ್ಭವೆ = ಯಜ್ಞವೇದಿಯಿಂದ ಉದಿಸಿದ ದ್ರೌಪದಿ


ವೇದೋದ್ಭವೆಯ ಪತಿ = ದ್ರೌಪದೀ ಪತಿ ಶ್ರೀ ಭೀಮಸೇನದೇವರು


ವೇದೋದ್ಭವೆ ಅನುಜ = ಧೃಷ್ಟದ್ಯುಮ್ನ


ವೇದ ಪೂಜಿತ ರಾಮ = ಶ್ರೀ ಚತುರ್ಮುಖ ಬ್ರಹ್ಮದೇವರಿಂದ ಪೂಜಿತನಾದ ಶ್ರೀ ಮೂಲರಾಮ


ವೇದವ್ಯಾಸ ಶಿಷ್ಯನ ಪೀಠ =


ಸಾಕ್ಷಾತ್ ಹಂಸನಾಮಕ ಪರಮಾತ್ಮನಿಂದ ಅವಿಚ್ಛಿನ್ನವಾಗಿ ನಡೆದು ಬಂದ ಜಗದ್ಗುರು ಶ್ರೀಮನ್ಮಧ್ವಾಚಾರ್ಯರ ಸಂಸ್ಥಾನಾಧೀಶ್ವರರಾದ ಶ್ರೀ ರಾಘವೇಂದ್ರಸ್ವಾಮಿಗಳವರ ವೇದಾಂತ ದಿಗ್ವಿಜಯ ವಿದ್ಯಾ ಸಾಮ್ರಾಜ್ಯದಲ್ಲಿ ಶ್ರೀ ಭುವನೇಂದ್ರತೀರ್ಥರ ಆಶ್ರಮ ಶಿಷ್ಯರಾಗಿ ಪೀಠದಲ್ಲಿ ಪಟ್ಟಾಭಿಷಿಕ್ತರಾಗಿ ರಾಜಿಸಿದ್ದರು.


ವೇದವತೀ ಪತಿಯನು ಮುದದಿಂದ ಅರ್ಚಿಸಿದ =


ಶ್ರೀ ಅಗ್ನಿದೇವರ ಪುತ್ರಿ ವೇದವತಿ ಪತಿ = ಪದ್ಮಾವತೀ ಪತಿಯಾದ ತಿರುಮಲೆಯ 

 ಚೆಲುವನಾದ ಶ್ರೀ ಶ್ರೀನಿವಾಸನನ್ನು ಭಕ್ತಿ ಶ್ರದ್ಧೆಗಳಿಂಗ ಅರ್ಚಿಸಿದ ಪೂತಾತ್ಮರು!!

by ಆಚಾರ್ಯ ನಾಗರಾಜು ಹಾವೇರಿ

ಗುರು ವಿಜಯ ಪ್ರತಿಷ್ಠಾನ

*****