Showing posts with label ವಾಯು ನಂದನ ವಾರಿಧಿ ಬಂಧನ kamalesha vittala. Show all posts
Showing posts with label ವಾಯು ನಂದನ ವಾರಿಧಿ ಬಂಧನ kamalesha vittala. Show all posts

Saturday 1 May 2021

ವಾಯು ನಂದನ ವಾರಿಧಿ ಬಂಧನ ankita kamalesha vittala

" ಶ್ರೀ ಪಂಚಮುಖಿ ಪ್ರಾಣದೇವರ ಸನ್ನಿಧಿಯಲ್ಲಿ ಶ್ರೀ ಆನಂದದಾಸರು..... "

ರಾಗ : ದೇವಗಾಂಧಾರಿ ತಾಳ : ಆದಿ


ವಾಯುನಂದನ ವಾರಿಧಿ ಬಂಧನ ।। ಪಲ್ಲವಿ ।।


ಸಿರಿಯರಸನ ಗುಣ ಗಾಯನಲೋಲ । ತದೀ ।

ಯರ ಸೇವೆ ದಯವನು ಸೂಸಿ ।। ಚರಣ ।।


ಮರ್ಕಟವರ ತರುಣಾರ್ಕನಿಭಾನನ ।

ಶರ್ಕರಾಕ್ಷ ದೇವರ್ಕಳ ವಂದ್ಯನ ।। ಚರಣ ।।

ರಾಕ್ಷಸರೊಳಗಧ್ಯಕ್ಷ ಕುಮಾರನ ।

ಮೋಕ್ಷಗೈದು ಬಲಾದಕ್ಷ ನೆನಿಸಿದ ।। ಚರಣ ।।


ದುರ್ಯೋಧನನ ಕಾರ್ಯಾವ ಮಾಡಿಸಿ ।

ವೀರ್ಯವಂತರೊಳು ವರಯ ನೆನಿಸಿದ ।। ಚರಣ ।।


ಅದ್ವೈತಿಗಳ ಧ್ವಂಸ ಮಾಡಿದ ।

ಮಧ್ವ ಮತಾಬ್ಧಿ ವಿವರ್ಧನ ಚಂದ್ರ ।। ಚರಣ ।।


ಈಶಾದ್ಯಮರರ ಮಹಾ ಸುಖದ । ಶ್ರೀ ಕಮ ।

ಲೇಶವಿಠ್ಠಲ ದಾಸೋತ್ತಮ ।। ಚರಣ ।।

*****