Showing posts with label ಮಧ್ವಮತದ ಸಿದ್ಧಾಂತದ ಪದ್ಧತಿ ಬಿಡಬ್ಯಾಡಿ purandara vittala MADHWAMATADA SIDDHAANTADA PADDHATI BIDABYAADI. Show all posts
Showing posts with label ಮಧ್ವಮತದ ಸಿದ್ಧಾಂತದ ಪದ್ಧತಿ ಬಿಡಬ್ಯಾಡಿ purandara vittala MADHWAMATADA SIDDHAANTADA PADDHATI BIDABYAADI. Show all posts

Saturday 4 December 2021

ಮಧ್ವಮತದ ಸಿದ್ಧಾಂತದ ಪದ್ಧತಿ ಬಿಡಬ್ಯಾಡಿ purandara vittala MADHWAMATADA SIDDHAANTADA PADDHATI BIDABYAADI



ಮಧ್ವಮತದ ಸಿದ್ಧಾಂತದ ಪದ್ಧತಿ | 
ಬಿಡಬ್ಯಾಡಿ ಬಿಟ್ಟು ಕೆಡಬ್ಯಾಡಿ || ಪ ||

ಹರಿ ಸರ್ವೋತ್ತಮನಹುದೆಂಬೊ ಜ್ಞಾನವ | 
ತಾರತಮ್ಯದಿಂದ ತಿಳಿವೊ ಸನ್ಮಾರ್ಗ ||೧||

ಘೋರ ಯಮನ ಭಯ ದೂರ ಮಾಡಿ | 
ಮುರಾರಿಯ ಚರಣವ ಸೇರೋ ಸನ್ಮಾರ್ಗ ||೨||

ಭಾರತೀಶ ಮುಖ್ಯಪ್ರಾಣಂತರ್ಗತ | 
ನೀರಜಾಕ್ಷ ನಮ್ಮ ಪುರಂದರ ವಿಠಲನ ||೩||
***

ರಾಗಾ ಪೂರ್ವಿ. ಆದಿ ತಾಳ (raga tala may differ in audio)

madhvamatada siddhAMtada paddhati | 
biDabyADi biTTu keDabyADi || pa ||

hari sarvOttamanahudeMbo j~jAnava | 
tAratamyadiMda tiLivo sanmArga ||1||

GOra yamana Baya dUra maaDi | 
murAriya caraNava sErO sanmArga ||2||

BAratISa muKyaprANaMtargata | 
nIrajAkSha namma puraMdara viThalana ||3||
***

pallavi

madhva madada siddhAntada baddhati biDabEDa biDbEDa biTTu keDabEDa keDabEDa

anupallavi

biTTare yama benneTTuva mUDha

caraNam 1

hari sarvOttamanahudemba jnAnavanaridu bALvudake parataravAda mata

caraNam 2

ghOra yamana bhaya dUra Odisi murAriya caraNava sErO sanmArgava

caraNam 3

bhAratIsha mukhya prANAntargata nIrajAkSa purandara viTTala
***

ಮಧ್ವಮತದ ಸಿದ್ಧಾಂತದ ಪದ್ಧತಿ ಬಿಡಬೇಡ
ಬಿಡಬೇಡ ಬಿಟ್ಟು ಕೆಡಬೇಡ ಕೆಡಬೇಡ ||ಪ||

ಬಿಟ್ಟರೆ ಯಮ ಬೆನ್ನೆಟ್ಟುವ ಮೂಢ ||ಅ.ಪ||


ಹರಿ ಸರ್ವೋತ್ತಮನಹುದೆಂಬ ಜ್ಞಾನವ-

ನರಿತು ಬಾಳ್ವುದಕೆ ಪರತರವಾದ ಮತ ||1||

ಘೋರ ಯಮನ ಭಯ ದೂರ ಓಡಿಸಿ ಮು-

ರಾರಿಯ ಚರಣವ ಸೇರೋ ಸನ್ಮಾರ್ಗವ ||2||

ಭಾರತೀಶ ಮುಖ್ಯ ಪ್ರಾಣಾಂತರ್ಗತ

ನೀರಜಾಕ್ಷ ಪುರಂದರ ವಿಠಲನ ||3|
******


ಮಧ್ವ ಮತದ ಸಿದ್ಧಾಂತದ ಪದ್ಧತಿ 

ಬಿಡಬ್ಯಾಡಿ ಬಿಡಬ್ಯಾಡಿ - 

ಬಿಟ್ಟು ಕೆಡಬ್ಯಾಡಿ ಕೆಡಬ್ಯಾಡಿ ।। ಪಲ್ಲವಿ ।।


ಹರಿ ಸರ್ವೋತ್ತಮ-

ನಹುದೆಂಬೋ ಜ್ಞಾನದ ।

ತಾರತಮ್ಯವನೆ ತಿಳಿವ 

ಮಾರ್ಗವಿದು ।। ಚರಣ ।।


ಘೋರ ಯಮನ ಭಯ 

ದೂರಕೆ ಮಾಡಿ । ಮು ।

ರಾರಿಯ ಚರಣವ ಸೇರುವ 

ಮಾರ್ಗವು ।। ಚರಣ ।।


ಭಾರತೀಶ ಮುಖ್ಯ-

ಪ್ರಾಣಾಂತರ್ಗತ ।

ನೀರಜಾಕ್ಷ ನಮ್ಮ 

ಪುರಂದರವಿಠ್ಠಲನ ।। ಚರಣ ।।

****


" ಶ್ರೀ ಮಧ್ವ ಮಾರ್ಗವೇ - ಮೋಕ್ಷ ಮಾರ್ಗ = ಬಿಟ್ಟವ ಕೆಟ್ಟ "

" ಮಧ್ವ ಮತದ ಸಿದ್ಧಾಂತದ ಪದ್ಧತಿ [ ಪದ್ಧತಿ = ಮಾರ್ಗ ] "

ಶ್ರೀಮದಾಚಾರ್ಯರಿಂದ ಸ್ಥಾಪಿತವಾದ - ಪಂಚಭೇದ ತಾರತಮ್ಯ ಸಹಿತವಾದ ಶ್ರೀ ಹರಿ ಸರ್ವೋತ್ತಮತ್ವ - ಶ್ರೀ ವಾಯು ಜೀವೋತ್ತಮತ್ವಗಳನ್ನು ನಿರ್ಣಯಿಸುವ ಸಿದ್ಧಾಂತದ ಮಾರ್ಗವನ್ನು

" ಬಿಡಬ್ಯಾಡಿ ಬಿಡಬ್ಯಾಡಿ "

ನಿತ್ಯ ಸುಖ ಸಾಧನ ಚ್ಯುತರಾಗಬೇಡಿರಿ. 

ಅಂದರೆ... 

ನಷ್ಟ ಮಾಡಿ ಕೊಳ್ಳಬೇಡಿ - ದುರ್ಲಭ ಮನುಷ್ಯ ದೇಹವನ್ನು ವ್ಯರ್ಥಗೊಳಿಸಬೇಡಿರಿ. 

" ತಾರತಮ್ಯವನೆ ತಿಳಿವ "

ತರತಮಗಳ ಜ್ಞಾನದಿಂದಲೇ ಶ್ರೀ ಮಹಾವಿಷ್ಣುವು - ರಮಾ  - ಬ್ರಹ್ಮಾದಿಗಳಿಗಿಂತ ಅನಂತ ಮಾಡಿ ಅಧಿಕನು [ ಕಲ್ಯಾಣ ಗುಣಪೂರ್ಣನು ] ಎಂಬ ಉತ್ಕೃಷ್ಟತೆಯ ಜ್ಞಾನವೂ - ಅದರೊಡನೆಯೇ ಅಭಿವೃದ್ಧಿಗೊಳ್ಳುವ ಭಕ್ತಿಯೂ ದೊರೆಯುವ ದಾರಿಯಿದು = ಈ ಮಧ್ವಮತ!

ಭಕ್ತಿಯೇ ಮುಕ್ತಿಗೆ ಪ್ರಧಾನ ಸಾಧನವು - ಅದರಿಂದಲೇ ಶ್ರೀ ಮಹಾವಿಷ್ಣು ಪ್ರಸಾದವು ಲಭ್ಯ. 

ಶ್ರೀ ಹರಿ ಪರಮಾತ್ಮನು ಪ್ರಸನ್ನ ಚಿತ್ತನಾಗಿ.... 

" ಏನಂ ಮೋಚಯಾಮಿ "

ಈ ಜೀವನನ್ನು ಸಂಸಾರದಿಂದ ಮೋಚನೆ ಮಾಡುತ್ತಾನೆ ಎಂದು ಇಚ್ಛಿಸಿದರೆ ಮಾತ್ರ " ಮೋಕ್ಷ " ವಾಗಬಲ್ಲದೆಂಬ ವೇದಗಳ ನಿರ್ಣಯವನ್ನು ಈ ಮಾತ್ರ - ಸ್ಥಾಪಿಸಿ ಉಪದೇಶಿಸುತ್ತದೆ. 

" ಮುರಾರಿಯಾ ಚರಣವ ಸೇರೋ [ ತೋರೋ ] ಮಾರ್ಗವ "

ಶ್ರೀ ಹರಿ ಪರಮಾತ್ಮನ ಪಾದ ದರ್ಶನ ಮಾಡಿಸುವ ಮಾರ್ಗವನ್ನು......

ಅಂದರೆ... 

ಅಪರೋಕ್ಷ ಜ್ಞಾನವನ್ನು ದೊರಕಿಸುವ - ಶ್ರೀ ವಿಷ್ಣುವಿನ ಪ್ರತ್ಯಕ್ಷ ದರ್ಶನವನ್ನು - ಅದರಿಂದ ಮೋಕ್ಷವನ್ನು ದೊರಕಿಸುವ ದಾರಿಯನ್ನು 

" ಭಾರತೀಶ ಮುಖ್ಯಪ್ರಾಣಾಂತರ್ಗತ ನೀರಜಾಕ್ಪ "

ಶ್ರೀ ಭಾರತೀದೇವಿಯರ ಪತಿ ಶ್ರೀ ವಾಯುದೇವರಲ್ಲಿ ನಿತ್ಯ ಪ್ರಕಟನಾಗಿ ವಿರಾಜಮಾನನಾದ ಕಮಲ ನೇತ್ರ ಶ್ರೀ ಹರಿ ಪರಮಾತ್ಮನನ್ನು..... 

ಶ್ರೀ ಹರಿಯು ಸರ್ವಾಂತರ್ಗತನಾದರೂ - ಪವನಾಂತರ್ಗತನಂತೆ ಎಲ್ಲ ವಸ್ತುಗಳಲ್ಲಿ ಮೋಕ್ಷ ಪ್ರದನಾಗಿ ಸ್ಥಿತನಲ್ಲ - ಸರ್ವತ್ರ ಅವ್ಯಕ್ತನಾಗಿಯೇ ಇದ್ದರೂ - ಶ್ರೀ ವಾಯುದೇವರಲ್ಲಿ ತನ್ನ ಮೋಕ್ಷರಪ್ರದ ಮಹಿಮೆಯನ್ನು ಸದಾ ಪ್ರಕಟಿಸಿರುತ್ತಾನೆ. 

ಆದ್ದರಿಂದ ಹಾಗೆ ಸೌಕರ್ಯ ಮಾಡಿಕೊಟ್ಟು - ಉದ್ಧರಿಸುವ ಶ್ರೀ ಮಧ್ವರ ಈ ಮತವನ್ನು ಬೇಡಬೇಡಿರಿ - ಬಿಟ್ಟು ಕೆಡಬೇಡಿರಿ !!

****