Saturday 4 December 2021

ಮಧ್ವಮತದ ಸಿದ್ಧಾಂತದ ಪದ್ಧತಿ ಬಿಡಬ್ಯಾಡಿ purandara vittala MADHWAMATADA SIDDHAANTADA PADDHATI BIDABYAADI



ಮಧ್ವಮತದ ಸಿದ್ಧಾಂತದ ಪದ್ಧತಿ | 
ಬಿಡಬ್ಯಾಡಿ ಬಿಟ್ಟು ಕೆಡಬ್ಯಾಡಿ || ಪ ||

ಹರಿ ಸರ್ವೋತ್ತಮನಹುದೆಂಬೊ ಜ್ಞಾನವ | 
ತಾರತಮ್ಯದಿಂದ ತಿಳಿವೊ ಸನ್ಮಾರ್ಗ ||೧||

ಘೋರ ಯಮನ ಭಯ ದೂರ ಮಾಡಿ | 
ಮುರಾರಿಯ ಚರಣವ ಸೇರೋ ಸನ್ಮಾರ್ಗ ||೨||

ಭಾರತೀಶ ಮುಖ್ಯಪ್ರಾಣಂತರ್ಗತ | 
ನೀರಜಾಕ್ಷ ನಮ್ಮ ಪುರಂದರ ವಿಠಲನ ||೩||
***

ರಾಗಾ ಪೂರ್ವಿ. ಆದಿ ತಾಳ (raga tala may differ in audio)

madhvamatada siddhAMtada paddhati | 
biDabyADi biTTu keDabyADi || pa ||

hari sarvOttamanahudeMbo j~jAnava | 
tAratamyadiMda tiLivo sanmArga ||1||

GOra yamana Baya dUra maaDi | 
murAriya caraNava sErO sanmArga ||2||

BAratISa muKyaprANaMtargata | 
nIrajAkSha namma puraMdara viThalana ||3||
***

pallavi

madhva madada siddhAntada baddhati biDabEDa biDbEDa biTTu keDabEDa keDabEDa

anupallavi

biTTare yama benneTTuva mUDha

caraNam 1

hari sarvOttamanahudemba jnAnavanaridu bALvudake parataravAda mata

caraNam 2

ghOra yamana bhaya dUra Odisi murAriya caraNava sErO sanmArgava

caraNam 3

bhAratIsha mukhya prANAntargata nIrajAkSa purandara viTTala
***

ಮಧ್ವಮತದ ಸಿದ್ಧಾಂತದ ಪದ್ಧತಿ ಬಿಡಬೇಡ
ಬಿಡಬೇಡ ಬಿಟ್ಟು ಕೆಡಬೇಡ ಕೆಡಬೇಡ ||ಪ||

ಬಿಟ್ಟರೆ ಯಮ ಬೆನ್ನೆಟ್ಟುವ ಮೂಢ ||ಅ.ಪ||


ಹರಿ ಸರ್ವೋತ್ತಮನಹುದೆಂಬ ಜ್ಞಾನವ-

ನರಿತು ಬಾಳ್ವುದಕೆ ಪರತರವಾದ ಮತ ||1||

ಘೋರ ಯಮನ ಭಯ ದೂರ ಓಡಿಸಿ ಮು-

ರಾರಿಯ ಚರಣವ ಸೇರೋ ಸನ್ಮಾರ್ಗವ ||2||

ಭಾರತೀಶ ಮುಖ್ಯ ಪ್ರಾಣಾಂತರ್ಗತ

ನೀರಜಾಕ್ಷ ಪುರಂದರ ವಿಠಲನ ||3|
******


ಮಧ್ವ ಮತದ ಸಿದ್ಧಾಂತದ ಪದ್ಧತಿ 

ಬಿಡಬ್ಯಾಡಿ ಬಿಡಬ್ಯಾಡಿ - 

ಬಿಟ್ಟು ಕೆಡಬ್ಯಾಡಿ ಕೆಡಬ್ಯಾಡಿ ।। ಪಲ್ಲವಿ ।।


ಹರಿ ಸರ್ವೋತ್ತಮ-

ನಹುದೆಂಬೋ ಜ್ಞಾನದ ।

ತಾರತಮ್ಯವನೆ ತಿಳಿವ 

ಮಾರ್ಗವಿದು ।। ಚರಣ ।।


ಘೋರ ಯಮನ ಭಯ 

ದೂರಕೆ ಮಾಡಿ । ಮು ।

ರಾರಿಯ ಚರಣವ ಸೇರುವ 

ಮಾರ್ಗವು ।। ಚರಣ ।।


ಭಾರತೀಶ ಮುಖ್ಯ-

ಪ್ರಾಣಾಂತರ್ಗತ ।

ನೀರಜಾಕ್ಷ ನಮ್ಮ 

ಪುರಂದರವಿಠ್ಠಲನ ।। ಚರಣ ।।

****


" ಶ್ರೀ ಮಧ್ವ ಮಾರ್ಗವೇ - ಮೋಕ್ಷ ಮಾರ್ಗ = ಬಿಟ್ಟವ ಕೆಟ್ಟ "

" ಮಧ್ವ ಮತದ ಸಿದ್ಧಾಂತದ ಪದ್ಧತಿ [ ಪದ್ಧತಿ = ಮಾರ್ಗ ] "

ಶ್ರೀಮದಾಚಾರ್ಯರಿಂದ ಸ್ಥಾಪಿತವಾದ - ಪಂಚಭೇದ ತಾರತಮ್ಯ ಸಹಿತವಾದ ಶ್ರೀ ಹರಿ ಸರ್ವೋತ್ತಮತ್ವ - ಶ್ರೀ ವಾಯು ಜೀವೋತ್ತಮತ್ವಗಳನ್ನು ನಿರ್ಣಯಿಸುವ ಸಿದ್ಧಾಂತದ ಮಾರ್ಗವನ್ನು

" ಬಿಡಬ್ಯಾಡಿ ಬಿಡಬ್ಯಾಡಿ "

ನಿತ್ಯ ಸುಖ ಸಾಧನ ಚ್ಯುತರಾಗಬೇಡಿರಿ. 

ಅಂದರೆ... 

ನಷ್ಟ ಮಾಡಿ ಕೊಳ್ಳಬೇಡಿ - ದುರ್ಲಭ ಮನುಷ್ಯ ದೇಹವನ್ನು ವ್ಯರ್ಥಗೊಳಿಸಬೇಡಿರಿ. 

" ತಾರತಮ್ಯವನೆ ತಿಳಿವ "

ತರತಮಗಳ ಜ್ಞಾನದಿಂದಲೇ ಶ್ರೀ ಮಹಾವಿಷ್ಣುವು - ರಮಾ  - ಬ್ರಹ್ಮಾದಿಗಳಿಗಿಂತ ಅನಂತ ಮಾಡಿ ಅಧಿಕನು [ ಕಲ್ಯಾಣ ಗುಣಪೂರ್ಣನು ] ಎಂಬ ಉತ್ಕೃಷ್ಟತೆಯ ಜ್ಞಾನವೂ - ಅದರೊಡನೆಯೇ ಅಭಿವೃದ್ಧಿಗೊಳ್ಳುವ ಭಕ್ತಿಯೂ ದೊರೆಯುವ ದಾರಿಯಿದು = ಈ ಮಧ್ವಮತ!

ಭಕ್ತಿಯೇ ಮುಕ್ತಿಗೆ ಪ್ರಧಾನ ಸಾಧನವು - ಅದರಿಂದಲೇ ಶ್ರೀ ಮಹಾವಿಷ್ಣು ಪ್ರಸಾದವು ಲಭ್ಯ. 

ಶ್ರೀ ಹರಿ ಪರಮಾತ್ಮನು ಪ್ರಸನ್ನ ಚಿತ್ತನಾಗಿ.... 

" ಏನಂ ಮೋಚಯಾಮಿ "

ಈ ಜೀವನನ್ನು ಸಂಸಾರದಿಂದ ಮೋಚನೆ ಮಾಡುತ್ತಾನೆ ಎಂದು ಇಚ್ಛಿಸಿದರೆ ಮಾತ್ರ " ಮೋಕ್ಷ " ವಾಗಬಲ್ಲದೆಂಬ ವೇದಗಳ ನಿರ್ಣಯವನ್ನು ಈ ಮಾತ್ರ - ಸ್ಥಾಪಿಸಿ ಉಪದೇಶಿಸುತ್ತದೆ. 

" ಮುರಾರಿಯಾ ಚರಣವ ಸೇರೋ [ ತೋರೋ ] ಮಾರ್ಗವ "

ಶ್ರೀ ಹರಿ ಪರಮಾತ್ಮನ ಪಾದ ದರ್ಶನ ಮಾಡಿಸುವ ಮಾರ್ಗವನ್ನು......

ಅಂದರೆ... 

ಅಪರೋಕ್ಷ ಜ್ಞಾನವನ್ನು ದೊರಕಿಸುವ - ಶ್ರೀ ವಿಷ್ಣುವಿನ ಪ್ರತ್ಯಕ್ಷ ದರ್ಶನವನ್ನು - ಅದರಿಂದ ಮೋಕ್ಷವನ್ನು ದೊರಕಿಸುವ ದಾರಿಯನ್ನು 

" ಭಾರತೀಶ ಮುಖ್ಯಪ್ರಾಣಾಂತರ್ಗತ ನೀರಜಾಕ್ಪ "

ಶ್ರೀ ಭಾರತೀದೇವಿಯರ ಪತಿ ಶ್ರೀ ವಾಯುದೇವರಲ್ಲಿ ನಿತ್ಯ ಪ್ರಕಟನಾಗಿ ವಿರಾಜಮಾನನಾದ ಕಮಲ ನೇತ್ರ ಶ್ರೀ ಹರಿ ಪರಮಾತ್ಮನನ್ನು..... 

ಶ್ರೀ ಹರಿಯು ಸರ್ವಾಂತರ್ಗತನಾದರೂ - ಪವನಾಂತರ್ಗತನಂತೆ ಎಲ್ಲ ವಸ್ತುಗಳಲ್ಲಿ ಮೋಕ್ಷ ಪ್ರದನಾಗಿ ಸ್ಥಿತನಲ್ಲ - ಸರ್ವತ್ರ ಅವ್ಯಕ್ತನಾಗಿಯೇ ಇದ್ದರೂ - ಶ್ರೀ ವಾಯುದೇವರಲ್ಲಿ ತನ್ನ ಮೋಕ್ಷರಪ್ರದ ಮಹಿಮೆಯನ್ನು ಸದಾ ಪ್ರಕಟಿಸಿರುತ್ತಾನೆ. 

ಆದ್ದರಿಂದ ಹಾಗೆ ಸೌಕರ್ಯ ಮಾಡಿಕೊಟ್ಟು - ಉದ್ಧರಿಸುವ ಶ್ರೀ ಮಧ್ವರ ಈ ಮತವನ್ನು ಬೇಡಬೇಡಿರಿ - ಬಿಟ್ಟು ಕೆಡಬೇಡಿರಿ !!

****

No comments:

Post a Comment