Showing posts with label ಶ್ರೀನಾಥ ಪಾರ್ವತಿಯ ನಾಥ ಶರಣೆಂಬೆ hayavadana SRINATHA PARVATIYA NAATHA SHARANEMBE VAANI ಗಜೇಂದ್ರ ಮೋಕ್ಷ GAJENDRAMOKSHA. Show all posts
Showing posts with label ಶ್ರೀನಾಥ ಪಾರ್ವತಿಯ ನಾಥ ಶರಣೆಂಬೆ hayavadana SRINATHA PARVATIYA NAATHA SHARANEMBE VAANI ಗಜೇಂದ್ರ ಮೋಕ್ಷ GAJENDRAMOKSHA. Show all posts

Thursday 23 December 2021

ಶ್ರೀನಾಥ ಪಾರ್ವತಿಯ ನಾಥ ಶರಣೆಂಬೆ ankita hayavadana SRINATHA PARVATIYA NAATHA SHARANEMBE VAANI ಗಜೇಂದ್ರ ಮೋಕ್ಷ GAJENDRAMOKSHA




 from para 45 till end


ನಾರಾಯಣ ಕೃಷ್ಣ

ಶ್ರೀನಾಥ ಪಾರ್ವತಿಯ ನಾಥ ಶರಣೆಂಬೆ |
ವಾಣಿ ಭಾರತಿಯ ಗಜಮುಖನ ಬಲಗೊಂಬೆ ||
ನಾನು ಬಲ್ಲಷ್ಟು ಪೇಳುವೆನು ಈ ಕಥೆಯ |
ಶ್ರೀನಾಥ ಗಜರಾಜಗೊಲಿದ ಸಂಗತಿಯ || ೧ ||

ಭಪನ್ನ ದೇಶ ದೇಶದ ರಾಯರೊಳಗೆ |
ಉತ್ತಮದ ದೇಶ ಗೌಳಾದೇಶದಲ್ಲಿ ||
ವಿಷ್ಣು ಭಕ್ತರೊಳು ಇಂದ್ರದ್ಯುಮ್ನ ನೃಪನು |
ಮತ್ತೆ ಭೂಸುರರ ಪಾಲಿಸುತ್ತಿದ್ದ ತಾನು || ೨ ||

ಚಿತ್ತದಲ್ಲಿ ನರಹರಿಯ ನೆನೆದು ಚಿಂತಿಸುತ |
ಪುತ್ರಮಿತ್ರಾದಿ ಬಂಧುಗಳ ವರ್ಜಿಸುತ ||
ಧ್ಯಾನದಲಿ ನರಹರಿಯ ನೆನೆದು ಚಿಂತಿಸುತ |
ಆನೆಕುದುರೆಯ ರಾಜ್ಯಗಳನು ತ್ಯಜಿಸುತ್ತ || ೩ ||

ಸರ್ಪಶಯನನ ಧ್ಯಾನದಲ್ಲಿದ್ದ ತಾನು |
ಮತ್ತೆ ತ್ರಿಕೊಟಪರ್ವತಕಾಗಿ ಬಂದು ||
ನಾಗಶಯನನ ಧ್ಯಾನದಲ್ಲಿದ್ದ ತಾನು |
ಮೇರುಮಂದರದ ಸಮೀಪಕ್ಕೆ ಬಂದು ||೪ ||

ಸಿದ್ದ ಕಿನ್ನರರು ಗಂಧರ್ವರಿಗೆ ಸ್ಥಾನ |
ಎದ್ದೆದ್ದು ಕುಣಿವ ಮೃಗಖಗಗಳ ಸೀಮ ||
ಎತ್ತ ನೋಡಲು ನಾಲ್ಕು ದೇಶ ವಿಸ್ತೀರ್ಣ |
ಸುತ್ತ ಸುವರ್ಣಮಯ ವಸ್ತುಗಳ ಧಾಮ || ೫ ||

ಹಲವು ನದಿ ಹಲವು ಕೊಳ ಹಲವು ಸರೋವರದಿ |
ಹಲವು ಪರಿ ಪುಷ್ಪಗಳು ಮೆರೆವ ಅಳಿಕುಲದಿ ||
ಚೆಲುವ ಗಂಧರ್ವ ಕಿನ್ನರಿಯರ ಸ್ಥಾನ |
ಕುಣಿವ ನವಿಲುಗಳ ಗಿಳಿಕೋಗಿಲೆಯ ಗಾನ || ೬ ||

ಬಂದು ನದಿಯಲ್ಲಿ ಸ್ನಾನವನ ಮಾಡಿದನು |
ಚಂದ ದಿಕ್ಕಿದನು ದ್ವಾದಶ ನಾಮಗಳನು ||
ಸಂಧ್ಯಾವಂದನೆ ಮಾಡಿ ಪದ್ಮ ಆಸನದಿ |
ಇಂದಿರಾಪತಿಯ ಮನದೊಳಗಿರಿಸಿ ತಾನು || ೭ ||

ಅಂದಾಗ ಆಯೆಡೆಗೆ ಅಗಸ್ತ್ಯಮುನಿ ಬಂದ |
ನಿಂದಿರ್ದು ವಂದನೆಯ ಮಾಡಲಿಲ್ಲೆಂದ ||
ಎಂದೆನುತ ಮನದಿ ಕೋಪಿಸುತ ಶಾಪಿಸಿದ |
ಕುಂಜರದ ರೂಪಾಗಿ ಜನಿಸು ಹೋಗೆಂದ || ೮ ||

ತಪ್ಪುಂಟು ಮಹರ್ಷಿಯೆ ಕೇಳು ಬಿನ್ನಪವ |
ವಿಶ್ಯಾಪ ಎಂದಿಗಾಗುವುದೆನುತ ಪೇಳು ||
ವಿಷ್ಣು ಚಕ್ರವು ಬಂದು ನಿನ್ನ ಸೋಕುತಲೆ |
ವಿಶ್ಯಾಪ ಅಂದಿಗಾಗುವುದೆಂದು ಪೇಳೆ ||
ವಿಷ್ಣು ಚಕ್ರವು ಬಂದು ನಿನ್ನ ಸೋಕುತಲೆ |
ವಿಶ್ಯಾಪ ಅಂದಿಗಾಗುವುದೆಂದು ಪೇಳೆ || ೯ ||

ಜ್ಞಾನವಡಗಿದವು ಅಜ್ಞಾನ ವಾವರಿಸೆ |
ಸೂರ್ಯ ಮುಳುಗಿದನು ಕತ್ತಲೆ ಮುಸುಕಂತೆ ||
ಧ್ಯಾನಿಸುತ ಹಿಂದುಮುಂದಾಗ ಕುಳಿತಿರಲು |
ಅನೆಯಾದನು ನೃಪನು ಆ ಕ್ಷಣದಿ ತಾನು || ೧೦ ||

ಮೇರುಪರ್ವತ ಕದಲಿ ಇಳಿದು ಬರುವಂತೆ |
ಮೇಲುಮದ ಕೀಳು ಮದ ಸುರಿಯೆ ಕುಂಭದಲಿ |
ಕಾಡಾನೆ ಕರಿಯಾನೆ ಮರಿಯಾನೆ ಸಹಿತ |
ಕೂಡಿಕೊಂಡೆಲ್ಲ ಒಂದಾಗಿ ಸಂಭ್ರಮಿಸಿ ||
ಕಾಡಾನೆಯಾಳಗ್ಹಲವು ಮಕ್ಕಳನೆ ಪಡೆದು |
ಕಾನನದೊಳಗೆ ಸಂಚರಿಸುತ್ತಿದ್ದ ತಾನು || ೧೧ ||

ಘಟ್ಟ ಬೆಟ್ಟಗಳ ಹತ್ತುತಲೆ ಇಳಿಯುತಲೆ |
ಹಿಟ್ಟು ಹಿಟ್ಟಾಗಿ ಕಲ್ಮರವ ತುಳಿಯುತಲೆ ||
ದಟ್ಟ ಡವಿಯೊಳಗೆ ಸಂಚರವ ಮಾಡುತಲೆ |
ಬತ್ತಿದವು ಕೆರೆತೊರೆಯು ಬೇಸಗೆಯು ಬರಲು || ೧೨ ||

ಕಂಡಕಂಡಲ್ಲಿ ಏರುತಲಿ ಇಳಿಯುತಲಿ |
ತುಂಡುತುಂಡಾಗಿ ಗಿಡಮರವ ಮುರಿಯುತಲಿ ||
ತಂಡತಂಡದಲ್ಲಿದ ತನ್ನ ಸತಿ ಸುತರು |
ಬೆಂಡಾಗಿ ಹಸಿವು ತೃಷೆಯಿಂದ ಬಳಲಿದರು || ೧೩ ||

ಬಾಳೆ ಕಿತ್ತಳೆನಿಂಬೆ ಚೂತ ಮಾದಲವು
ದಾಳಿಂಬ ದ್ರಾಕ್ಷಿಖರ್ಜೂರ ಪೇರಳೆಯು ||
ಮೇಲಾದ ಫಲಪುಷ್ಪದಿಂದ ಶೋಭಿಸಲು |
ತಾವರೆ ಕೊಳವೊಂದ ಕಂಡ ಗಜರಾಜ || ೧೪ ||

ನವರತ್ನ ಮುತ್ತು ಮಾಣಿಕ್ಯ ಸೋಪಾನ |
ಕೊಳದ ಸುತ್ತಲು ಮುತ್ತಿ ಚಕ್ರವಾಕಗಳು ||
ನಲಿಯುತಿವೆ ಹಲುವ ಹಕ್ಕಿಗಳು ಹಂಸಗಳು |
ಪರಿಮಳಿಸುವಾ ಕೊಳವೆ ಹೊಕ್ಕ ಗಜರಾಜ ||೧೫ ||

ಹೊಡೆಯುತಲಿ ಬಡೆಯುತಲಿ ಕುಡಿಯುತಲಿ ನೀರ |
ಮಡುವಿನಲ್ಲಿ ಚೆಲ್ಲುತಲಿ ನಲಿದುವೊಂದಾಗಿ ||
ಕಾಡಾನೆ ಕರಿಯಾನೆ ಮರಿಯಾನೆ ಸಹಿತ |
ಕೂಡಿದೋಂಡಿರಲಿಂತು ಸಮ್ಭ್ರದುದಿ ಜಲದಿ || ೧೬ ||

ಮುನಿಯು ಶಾಪದಲೊಂದು ಮಕರಿ ಮಡುವಿನೊಳು |
ಹಲವುಕಾಲದಿ ತಪಿಸಿ ಜೀವಿಸುತ್ತಿರಲು ||
ಮದಗಜವು ಪೊಕ್ಕು ಮಡುವನೆ ಕಲುಕು ತಿರಲು
ತಡೆಯದಾ ಮಕರಿ ಹಿಡಿಯಿತು ಕರಿಯ ಕಾಲು || ೧೭ ||

ಅತ್ತಿತ್ತ ನೋಡಿದನು ಸುತ್ತ ನೋಡಿದನು |
ಎತ್ತ ನೋಡಿದರೂ ಬಿಡದು ಆ ಮಕರಿ ಕಾಲು ||
ಎಳೆದೊಮ್ಮೆ ನೋಡಿದನು ಸೆಳದೊಮ್ಮೆ ನೋಡಿದನು |
ಹೇಗೆ ನೋಡಿದರು ಬಿಡದು ಆ ಮಕರಿ ಕಾಲು || ೧೮ ||

ತನ್ನ ಸತಿ ಸುತರೆಲ್ಲ ಸೆಳದರೊಂದಾಗಿ |
ತಮ್ಮ ಕೈಲಾಗದೆಂದೆನುತ ತಿರುಗಿದರು |
ಎನ್ನ ಪುಣ್ಯದ ಫಲವು ಹೋಗಿ ನೀವೆಂದ |
ದುಮ್ಮಾನದಿಂದ ದೊರದಲ್ಲಿದ್ದರವರು || ೧೯ ||

ಕಚ್ಚುತಲಿ ಸೆಳೆಯುತಲಿ ಆ ಮಕರಿ ಕಾಲು |
ರಕ್ತಮಯವಾಗಿ ತುಂಬಿತು ಕೊಳದ ನೀರು |
ಅಕ್ಕಟಾ ಎನಗಿನ್ನು ಗತಿಯಾರು ಎನುತ
ದಿಕ್ಕುಗೆಟ್ಟಂತೆ ಮೊರೆಯಿಟ್ಟ ಗಜರಾಜ || ೨೦ ||

ಅಚ್ಯುತಾನಂತ ಶ್ರೀಹರಿಯೆನ್ನ ಕಾಯೋ |
ಸಚ್ಚಿದಾನಂದ ಸರ್ವೇಶ್ವರನೆ ಕಾಯೋ ||
ಭಕ್ತವತ್ಸಲನೆ ಭವಭಂಜನನೆ ಕಾಯೋ |
ಕಷ್ಟಪಡುತೇನೆ ಕರುಣಿಸಿ ಕರುಣಿ ಕಾಯೋ || ೨೧ ||

ಎಂಭತ್ತು ನಾಲ್ಕು ಲಕ್ಷ ಜೀವರಾಶಿಗಳಾ |
ಇಂಬಿಟ್ಟ್ ಸಲಹೋ ಜಗದೀಶ್ವರನ ಕಾ ಯೋ |
ಜಂಗಮ ಸ್ಥಾವರಗದೊಳಗೆ ಪರಿಪೂರ್ಣ |
ಎಂಬಂಥ ನೀ ಎನ್ನ ಬಂಧನ ಬಿಡಿಸೊ || ೨೨ ||

ಈರೇಳು ಭುವನವನು ಹೃದಯದೊಳಗಿಟ್ಟೆ |
ಕಾದುಕೋ ಎಂದು ಗಜರಾಜ ವೊರೆಯಿಟ್ಟ |
ಅಹಾರ ನಿದ್ರೆ ಇಲ್ಲದೆ ಸಾವಿರ ವರುಷ|
ಬಹಳ ನೊದೆನೆ ಸ್ವಾಮಿ ಕಾಯೋ ಬಾಯೆಂದ || ೨೩ ||

ವೇದಗಳ ಕದ್ದು ಕೊಂಡೊಯ್ದ ದಾನವನ |
ಸಾಧಿಸಿದೆ ಭೇಧಿಸಿದೆ ಅವನ ಛೇದಿಸಿದೆ ||
ಆದಿ ನಿಗಮವ ತಂದು ಕಮಲಜನಿಗಿತ್ತೆ |
ವೇದಾಂತವೇದ್ಯ ಮತ್ಸ್ಯಾವತಾರ ಶರಣು || ೨೪ ||

ಸುರಾಸುರರು ಪಾಲ್ಗಡಲ ಮಥಿಸುತಿರಲು |
ಮರವೈರಿ ಹಾಸಿಗೆಯ ಹುರಿ ಮಾಡಿಕೊಂಡು |
ಭರದಿ ಮಂದರಗಿರಿಯು ಇಳಿಯುತಿರೆ ಬಂದು |
ಗಿರಿಯನೆತ್ತಿದ ಕೂರ್ಮ ಹರಿ ನಿನಗೆ ಶರನು || ೨೫ ||

ಸುರುಳಿ ಸುತ್ತಿದ ಭೂಮಿ ದಾಡೆಯಲಿ ತಂದೆ |
ದುರುಳ ಹಿರಣ್ಯಾಕ್ಷನನು ಬೇಗದಲಿ ಕೊಂದೆ |
ಧರಣಿದೇವಿಯನು ಸದಮಲದೊಳು ಗೆದ್ದೆ |
ವರಹಾವತಾರ ಶ್ರೀಹರಿ ನಿನಗೆ ಶರಣು || ೨೬ ||

ಬಾಲಕನು ಕರೆಯಲಿಕೆ ಕಂಬದಲಿ ಬಂದೆ |
ಸೀಳಿ ರಕ್ಕಸನ ಕರುಳಿನ ಮಾಲೆ ಹಾಕಿದೆ ||
ಶೀಲ ಪ್ರಲ್ಹಾದನಿಗೆ ಅಭಯವನು ಇತ್ತೆ |
ಶ್ರೀಲಕ್ಷ್ಮಿಪೊಡನಿದ್ದ ನರಸಿಂಹ ಶರನು || ೨೭ ||

ಬಲಿಯ ದಾನವ ಬೇಡಿ ಬ್ರಹ್ಮಚಾರಿಯಾಗಿ |
ನೆಲವನೆಲ್ಲವ ಮೂರು ಅಡಿಮಾಡಿ ಅಳೆದೆ ||
ಅಲೆದ ಪಾದದಲಿ ಭಾಗಿರಥಿಯ ತಂದೆ |
ಚೆಲುವೆ ವಾಮನಮೂರ್ತಿ ತ್ರಿವಿಕ್ರಮನೆ ಶರನು || ೨೮ ||

ದುಷ್ಟ ಕ್ಷತ್ರಿಯ ನೃಪರ ಕುಲವ ಸಂಹರಿಸಿ |
ರಕ್ತದಲಿ ಸ್ನಾನತರ್ಪಣವ ನೀ ಕೋಟ್ಟೆ
ಮತ್ತೆ ವೇದಾಂತ ಶಾಸ್ತ್ರಗಳ ನೆರೆ ಓದಿ |
ವಿಪ್ರ ಭಾರ್ಗವರಾಮ ಹರಿ ನಿನಗೆ ಶರಣು || ೨೯ ||

ಹರನ ಬಿಲ್ಲನೆ ಮುರಿದು ಧರಣಿಜೆಯ ತಂದೆ |
ದುರುಳ ರಾವಣಶಿರಗಳ ಹತ್ತು ತರಿದೆ |
ವರ ವಿಭೀಷಣಗವನ ರಾಜ್ಯ ಗಳನಿತ್ತೆ ||
ಶರಣರಕ್ಷಕ ಸೀತಾಪತಿ ರಾಮ ಶರಣು || ೩೦ ||

ಮಧುರೆಯಲಿ ಹುಟ್ಟಿ ಗೋಕುಲದಲಿ ಬೆಳೆದೆ |
ತರಳತನದಲಿ ಹಾಲು ಬೆಣ್ಣೆಗಳ ಮೆದ್ದೆ |
ತರುವ ಕಾಯುತ ಕೊಂದೆ ಹಲವು ರಕ್ಕಸರ |
ಬಲರಾಮಕೃಷ್ಣ ಗೋಪಾಲಕನೆ ಶರಣು || ೩೧ ||

ತ್ರಿಪುರಸತಿಯರ ವ್ರತ ಅಪಹರಿಸಿದವನೆ |
ಪೃಥವಿಯುಳು ಅಶ್ವತ್ಥನಾಗಿ ಮೆರೆದವನೆ ||
ಬಿಸಿಗಣ್ಣ ಹರಗೆ ಅಂಬಾಗಿ ನಿಂತವನೆ ||
ಪಶುಪತಿಪ್ರೀಯ ಬೌದ್ಧ ಅವತಾರ ಶರಣು || ೩೨ ||

ವರ್ಣಾಶ್ರಮಗಳೆಲ್ಲ ಒಂದಾಗಿ ಇರಲು |
ಬಿನ್ನಾಣದಿಂದ ತುರುಗವನೇರಿಕೊಂಡು ||
ಬನ್ನ ಪಡಿಸುತ ಹಲವು ಪಾತಕರ ಕೊಂದೆ |
ಬ್ರಹ್ಮಸ್ವರೂಪ ಕಲ್ಕ್ಯವತಾರ ಶರಣು || ೩೩ ||

ಅರಿಯದಂತಿರದೆ ಅಚ್ಯುತ ರಕ್ಶಿಸೆನ್ನ |
ಮರೆಯೆ ದೆಂದಿರದೆ ಮಾಧವ ರಕ್ಷಿಸೆನ್ನ ||
ಕೆಳೆನೆಂದೆನದೆ ಕೇಶವ ರಕ್ಷಿಸೆನ್ನ |
ಕಾಣಿನೆಂದೆನದೆ ಕರುಣಿಸಿ ರಕ್ಷಿಸೆನ್ನ || ೩೪ ||

ಕಾಯಕಂಜದ ಪ್ರಾಣ ಹೋಗುತಿದೆ ಮುನ್ನ |
ಯಾವಾಗ ಹರಿಬಂದು ಕಾಯ್ವನೋ ಎನ್ನ |
ಚೇರಿದನು ಕೂಗಿ ಮೊರೆಯಿಟ್ಟ ಗಜರಾಜ |
ದಾನವಾಂತಕನು ಕಿವಿಗೋಟ್ಟು ಕೇಳಿದನು || ೩೫ ||

ಕ್ಷಿರಾಬ್ಧಿಯಲಿ ವೈಕುಂಠ ನೆಲಸಿದ್ಧ |
ಶೇಷನಾ ಹಾಸಿಗೆಯ ಮೇಲೆ ಕುಳ್ಳಿರ್ದ ||
ಶ್ರೀಲಕ್ಷ್ಮೀ ಸಮ್ಮೇಳನದಿಂದ ಒಪ್ಪಿರಲು |
ಆಲಯಿಸಿ ಕೇಳಿದನೆ ಅಜನನೆ ಅಜನ ಪೆತ್ತವನು || ೩೬ ||

ಶಂಕಚಕ್ರಗಳಿಲ್ಲವೆಂದು ಶಂಕಿಸದೇ |
ಬಿಂಕದಿಂ ಗರುಡನ್ನ ಪಗಲೇರಿಸಿಕೊಳದೆ ||
ಪಂಕಜಾಕ್ಷಿಯ ಕೂಡ ತಾನು ಉಸಿರಿಸದೆ ||
ಪಂಕಜನಾಭ ಬಂದನು ಕೊಳದ ಕಡೆಗೆ || ೩೭ ||

ಸಜ್ಜೆ ಉಪ್ಪರಿಗೆಯಿಂದಿಳಿದು ಬರುವಾಗ |
ವಜ್ರಕುಂಡಲ ಕದಪು ಹಾರಗಳು ಹೊಳೆಯೆ |
ಹೊದ್ದ ಪೀತಾಂಬರವು ನೆಲಕೆ ಅಲೆಯುತಲಿ |
ಎದ್ದು ಬಂದನು ದಯಾಸಮುದ್ರ ಬಂದಂತೆ || ೩೮ ||

ಸಿಂಧುಸುತೆ ಪತಿಯೆಲ್ಲಿ ಪೋದನೋ ಎನುತ |
ಮಂದಗಮನೆಯು ಬರಲು ಪುರವೆಲ್ಲ ತೆರಳೆ ||
ವಂದಿಸದ ಗರುಡ ಗಂಧರ್ವರೊಗ್ಗಿನಲಿ |
ಅಂದಾಗ ಶಖಚಕ್ರವು ಕೂಡಿ ಬರಲು || ೩೯ ||

ಹರಿಯು ಗರುಡನನೇರಿ ಕರಿಯತ್ತ ಬರಲು |
ಹರ ಪಾರ್ವತಿಯರು ನಂದಿಯನರಿಕೊಳುತ ||
ಶಿರವ ಮೇಲಿನ ಗಂಗೆ ತುಳುಕಾಡುತಿರಲು |
ಹರ ಬಂದ ಕೈಲಾಸಪುರದಿಂದ ಇಳಿದು || ೪೦ ||

ತೊಡೆಯ ಮೇಲಿನ ಗೌರಿದೇವಿಯಳ ಸಹಿತ |
ಮುಡಿಯ ಮೇಲಿನ ಗಂಗೆ ತುಳುಕಾಡು ತಿರಲು |
ಹರಪಾರ್ವ ತಿದೇವಿ ವೃಷಭವನ್ನೇರಿ |
ಹರ ಬಂದ ಕೈಲಾಸಪುರದಿಂದ ಇಳಿದು || ೪೧ ||

ದೇವರ್ಷಿ ಬ್ರಹ್ಮರ್ಷಿ ರಾಜರ್ಷಿ ಸಹಿತ |
ದೇವಪುತ್ರಾದಿ ಸನಕಾದಿಗಳು ಕೂಡಿ ||
ಸುಮ್ಮನೇ ನಾರದನಂದು ನಡೆತಂದ |
ಧರ್ಮ ಸ್ವರೂಪವೆಲ್ಲಾ ನೆರೆದರಂದು || ೪೨ ||

ಬಂದ ಚಕ್ರವನು ಕರಕಮಲದಲಿ ತೆಗೆದು |
ಸಂಧಿಸಿಟ್ಟನು ಮಕರಿ ಹಲ್ಲು ಮುರಿವಂತೆ |
ಅಂದಾಗ ಅವನ ಶಾಪ ವಿಶ್ಯಾಪವಾಗಿ |
ಗಂಧರ್ವ ರೂಪಿನಲಿ ನಿಂತಿತಾ ಮಕರಿ || ೪೩ ||

ಹರಿಯ ಸಂದರ್ಶನವು ಮದಗಜಕೆ ಸೋಕುತಲೆ |
ಒದಗಿದವು ಶಂಖ ಚಕ್ರ ನಾಲ್ಕು ಕೈಗಳಲಿ |
ಉತ್ತ ಪಿತಾಂಬರವು ಕಿರೀಟ ಕುಂಡಲವು |
ಎಳೆತುಳಸಿಮಾಲೆಗಳು ಕೊರಳೊಳೊಪ್ಪಿದವು || ೪೪ ||

ಜಯಜಯ ಜಗನ್ನಾಥ ಜಯ ವಿಶ್ವಮೂರ್ತಿ |
ಜಯ ಜಯ ಜನಾರ್ಧನ ಜಯ ವಿಶ್ವರೂಪ |
ಜಯತು ಸರ್ವೋತ್ತಮನೆ ಕ್ಷಿರಾಬ್ಧಿಶಯನ |
ಜಯವೆಂದು ಪದಗಳಿಗೆ ಬಂದು ಎರಗಿದನು || ೪೫ ||

ಇಂದಿವನ ಭಾಗ್ಯವನು ನೋಡುವರು ಕೆಲರು |
ಇಂದಿರಾ ಪತಿಯ ಕೊಂಡಾಡುವರು ಕೆಲರು |
ಮಂದಾರ ಹೊಮಳೆಯ ಕರೆಯುತ್ತ ಸುರರಂ |
ದುಂದುಭಿ ವಾದ್ಯಗಳ ವೈಭವ ಗಳಿರಲು || ೪೬ ||

ಸಿರಿಸಹಿತ ಹರಿಯು ಗರುಡ ನೇರಿಕೊಂಡು
ಕರಿರಾಜನೊಡನೆ ವೈಕುಂಠಕ್ಕೆ ಬರಲು ||
ಹರಪಾರ್ವತಿಯರು ಕೈಲಾಸಕೆ ತೆರಳೆ |
ತರತರದ ವಾಹನಾದಿ ಸುರರು ತೆರಳಿದರು || ೪೭ ||

ಹೊತ್ತಾರೆ ಎದ್ದು ಈ ಕಥೆ ಹೇಳಿ ಕೇಳಿದವರಿಗೆ |
ದುಃಸ್ವಪ್ನ ದುರ್ಬುಧಿ ದುರ್ವ್ಯಸನ ಕಳೆವದು ||
ಸರ್ಪಾರಿ ವಾಹನನ ಧ್ಯಾನ ದೊಳಗಿರಲು |
ಸತ್ಸಂಗ ಸಾಯುಜ್ಯ ಪದವಿ ದೊರಕುಪುದು || ೪೮ ||

ಹರಿಯ ನೆನೆ ಹರಿಯ ನೆನೆ ಹರಿಯ ನೆನೆ ಮನವೆ
ಮರೆಯದಲೆ ಮಾಧವನ ನೆನೆ ಕಂಡ್ಯ ಮನವೆ |
ಹರಿಯ ನೆನೆದವರಿಗೆ ಪರಮ ಪದವಿಯು ಉಂಟು |
ಕರಿರಾಜವರದನ್ನ ಶರಣೆಂದು ಭಜಿಸು || ೪೯ ||

ಜಯತು ದ್ರುವರಾಯನಿಗೆ ವರವಿತ್ತ ದೇವ |
ಜಯತು ಪ್ರಲ್ಹಾದಭಯವಿತ್ತ ದೇವ |
ಜಯತು ದ್ರೌಪದಿಯಭಿಮಾನ ಕಾಯ್ದು ದೇವಾ
ಜಯತು ಜಯ ಹಯವದನ ಶ್ರೀವಾಸುದೇವ || ೫೦ ||
***

nArAyaNa kRuShNa

SrInAtha pArvatiya nAtha SaraNeMbe |
vANi BAratiya gajamuKana balagoMbe ||
nAnu ballaShTu pELuvenu I katheya |
SrInAtha gajarAjagolida sangatiya || 1 ||

Bapanna dESa dESada rAyaroLage |
uttamada dESa gauLAdESadalli ||
viShNu BaktaroLu indradyumna nRupanu |
matte BUsurara pAlisuttidda tAnu || 2 ||

cittadalli narahariya nenedu cintisuta |
putramitrAdi bandhugaLa varjisuta ||
dhyAnadali narahariya nenedu cintisuta |
Anekudureya rAjyagaLanu tyajisutta || 3 ||

sarpaSayanana dhyAnadallidda tAnu |
matte trikoTaparvatakAgi bandu ||
nAgaSayanana dhyAnadallidda tAnu |
mErumandarada samIpakke bandu ||4 ||

sidda kinnararu gandharvarige sthAna |
eddeddu kuNiva mRugaKagagaLa sIma ||
etta nODalu nAlku dESa vistIrNa |
sutta suvarNamaya vastugaLa dhAma || 5 ||

halavu nadi halavu koLa halavu sarOvaradi |
halavu pari puShpagaLu mereva aLikuladi ||
celuva gandharva kinnariyara sthAna |
kuNiva navilugaLa giLikOgileya gAna || 6 ||

bandu nadiyalli snAnavana mADidanu |
canda dikkidanu dvAdaSa nAmagaLanu ||
sandhyAvandane mADi padma Asanadi |
indirApatiya manadoLagirisi tAnu || 7 ||

andAga AyeDege agastyamuni banda |
nindirdu vandaneya mADalillenda ||
endenuta manadi kOpisuta SApisida |
kunjarada rUpAgi janisu hOgenda || 8 ||

tappunTu maharShiye kELu binnapava |
viSyApa endigAguvudenuta pELu ||
viShNu cakravu bandu ninna sOkutale |
viSyApa aMdigAguvudendu pELe ||
viShNu cakravu bandu ninna sOkutale |
viSyApa andigAguvudendu pELe || 9 ||

j~jAnavaDagidavu aj~jAna vAvarise |
sUrya muLugidanu kattale musukante ||
dhyAnisuta hindumundAga kuLitiralu |
aneyAdanu nRupanu A kShaNadi tAnu || 10 ||

mEruparvata kadali iLidu baruvante |
mElumada kILu mada suriye kuMBadali |
kADAne kariyAne mariyAne sahita |
kUDikonDella ondAgi saMBramisi ||
kADAneyALag~halavu makkaLane paDedu |
kAnanadoLage sancarisuttidda tAnu || 11 ||

GaTTa beTTagaLa hattutale iLiyutale |
hiTTu hiTTAgi kalmarava tuLiyutale ||
daTTa DaviyoLage sancarava mADutale |
battidavu keretoreyu bEsageyu baralu || 12 ||

kanDakanDalli Erutali iLiyutali |
tunDutunDAgi giDamarava muriyutali ||
tanDatanDadallida tanna sati sutaru |
benDAgi hasivu tRuSheyinda baLalidaru || 13 ||

bALe kittaLeniMbe cUta mAdalavu
dALiMba drAkShiKarjUra pEraLeyu ||
mElAda PalapuShpadiMda SOBisalu |
tAvare koLavonda kanDa gajarAja || 14 ||

navaratna muttu mANikya sOpAna |
koLada suttalu mutti cakravAkagaLu ||
naliyutive haluva hakkigaLu haMsagaLu |
parimaLisuvA koLave hokka gajarAja ||15 ||

hoDeyutali baDeyutali kuDiyutali nIra |
maDuvinalli cellutali naliduvondAgi ||
kADAne kariyAne mariyAne sahita |
kUDidOnDiralintu samBradudi jaladi || 16 ||

muniyu SApadalondu makari maDuvinoLu |
halavukAladi tapisi jIvisuttiralu ||
madagajavu pokku maDuvane kaluku tiralu
taDeyadA makari hiDiyitu kariya kAlu || 17 ||

attitta nODidanu sutta nODidanu |
etta nODidarU biDadu A makari kAlu ||
eLedomme nODidanu seLadomme nODidanu |
hEge nODidaru biDadu A makari kAlu || 18 ||

tanna sati sutarella seLadarondAgi |
tamma kailAgadendenuta tirugidaru |
enna puNyada Palavu hOgi nIvenda |
dummAnadiMda doradalliddaravaru || 19 ||

kaccutali seLeyutali A makari kAlu |
raktamayavAgi tuMbitu koLada nIru |
akkaTA enaginnu gatiyAru enuta
dikkugeTTante moreyiTTa gajarAja || 20 ||

acyutAnanta SrIhariyenna kAyO |
saccidAnanda sarvESvarane kAyO ||
Baktavatsalane BavaBanjanane kAyO |
kaShTapaDutEne karuNisi karuNi kAyO || 21 ||

eMBattu nAlku lakSha jIvarASigaLA |
iMbiTT salahO jagadISvarana kA yO |
jangama sthAvaragadoLage paripUrNa |
eMbantha nI enna baMdhana biDiso || 22 ||

IrELu Buvanavanu hRudayadoLagiTTe |
kAdukO endu gajarAja voreyiTTa |
ahAra nidre illade sAvira varuSha|
bahaLa nodene svAmi kAyO bAyenda || 23 ||

vEdagaLa kaddu konDoyda dAnavana |
sAdhiside BEdhiside avana CEdiside ||
Adi nigamava tandu kamalajanigitte |
vEdAntavEdya matsyAvatAra SaraNu || 24 ||

surAsuraru pAlgaDala mathisutiralu |
maravairi hAsigeya huri mADikonDu |
Baradi mandaragiriyu iLiyutire bandu |
giriyanettida kUrma hari ninage Saranu || 25 ||

suruLi suttida BUmi dADeyali taMde |
duruLa hiraNyAkShananu bEgadali koMde |
dharaNidEviyanu sadamaladoLu gedde |
varahAvatAra SrIhari ninage SaraNu || 26 ||

bAlakanu kareyalike kaMbadali bande |
sILi rakkasana karuLina mAle hAkide ||
SIla pralhAdanige aBayavanu itte |
SrIlakShmipoDanidda narasiMha Saranu || 27 ||

baliya dAnava bEDi brahmacAriyAgi |
nelavanellava mUru aDimADi aLede ||
aleda pAdadali BAgirathiya taMde |
celuve vAmanamUrti trivikramane Saranu || 28 ||

duShTa kShatriya nRupara kulava saMharisi |
raktadali snAnatarpaNava nI kOTTe
matte vEdAnta SAstragaLa nere Odi |
vipra BArgavarAma hari ninage SaraNu || 29 ||

harana billane muridu dharaNijeya tande |
duruLa rAvaNaSiragaLa hattu taride |
vara viBIShaNagavana rAjya gaLanitte ||
SaraNarakShaka sItApati rAma SaraNu || 30 ||

madhureyali huTTi gOkuladali beLede |
taraLatanadali hAlu beNNegaLa medde |
taruva kAyuta konde halavu rakkasara |
balarAmakRuShNa gOpAlakane SaraNu || 31 ||

tripurasatiyara vrata apaharisidavane |
pRuthaviyuLu aSvatthanAgi meredavane ||
bisigaNNa harage aMbAgi nintavane ||
paSupatiprIya bauddha avatAra SaraNu || 32 ||

varNASramagaLella ondAgi iralu |
binnANadinda turugavanErikoMDu ||
banna paDisuta halavu pAtakara koMde |
brahmasvarUpa kalkyavatAra SaraNu || 33 ||

ariyadantirade acyuta rakSisenna |
mareye dendirade mAdhava rakShisenna ||
keLenendenade kESava rakShisenna |
kANinendenade karuNisi rakShisenna || 34 ||

kAyakanjada prANa hOgutide munna |
yAvAga haribandu kAyvanO enna |
cEridanu kUgi moreyiTTa gajarAja |
dAnavAntakanu kivigOTTu kELidanu || 35 ||

kShirAbdhiyali vaikuMTha nelasiddha |
SEShanA hAsigeya mEle kuLLirda ||
SrIlakShmI sammELanadiMda oppiralu |
Alayisi kELidane ajanane ajana pettavanu || 36 ||

SankachakragaLillavendu SankisadE |
binkadiM garuDanna pagalErisikoLade ||
pankajAkShiya kUDa tAnu usirisade ||
pankajanABa bandanu koLada kaDege || 37 ||

sajje upparigeyindiLidu baruvAga |
vajrakunDala kadapu hAragaLu hoLeye |
hodda pItAMbaravu nelake aleyutali |
eddu bandanu dayAsamudra baMdaMte || 38 ||

sindhusute patiyelli pOdanO enuta |
mandagamaneyu baralu puravella teraLe ||
vandisada garuDa gandharvarogginali |
andAga SaKacakravu kUDi baralu || 39 ||

hariyu garuDananEri kariyatta baralu |
hara pArvatiyaru nandiyanarikoLuta ||
Sirava mElina gange tuLukADutiralu |
hara baMda kailAsapuradinda iLidu || 40 ||

toDeya mElina gauridEviyaLa sahita |
muDiya mElina gange tuLukADu tiralu |
harapArva tidEvi vRuShaBavannEri |
hara baMda kailAsapuradinda iLidu || 41 ||

dEvarShi brahmarShi rAjarShi sahita |
dEvaputrAdi sanakAdigaLu kUDi ||
summanE nAradanaMdu naDetaMda |
dharma svarUpavellA neredaraMdu || 42 ||

banda cakravanu karakamaladali tegedu |
sandhisiTTanu makari hallu murivante |
andAga avana SApa viSyApavAgi |
gaMdharva rUpinali nintitA makari || 43 ||

hariya saMdarSanavu madagajake sOkutale |
odagidavu SanKa chakra nAlku kaigaLali |
utta pitAMbaravu kirITa kuMDalavu |
eLetuLasimAlegaLu koraLoLoppidavu || 44 ||

jayajaya jagannAtha jaya viSvamUrti |
jaya jaya janArdhana jaya viSvarUpa |
jayatu sarvOttamane kShirAbdhiSayana |
jayaveMdu padagaLige baMdu eragidanu || 45 ||

indivana BAgyavanu nODuvaru kelaru |
indirA patiya konDADuvaru kelaru |
mandAra homaLeya kareyutta suraraM |
duMduBi vAdyagaLa vaiBava gaLiralu || 46 ||

sirisahita hariyu garuDa nErikoMDu
karirAjanoDane vaikunThakke baralu ||
harapArvatiyaru kailAsake teraLe |
taratarada vAhanAdi suraru teraLidaru || 47 ||

hottAre eddu I kathe hELi kELidavarige |
duHsvapna durbudhi durvyasana kaLevadu ||
sarpAri vAhanana dhyAna doLagiralu |
satsanga sAyujya padavi dorakupudu || 48 ||

hariya nene hariya nene hariya nene manave
mareyadale mAdhavana nene kanDya manave |
hariya nenedavarige parama padaviyu uMTu |
karirAjavaradanna SaraNendu Bajisu || 49 ||

jayatu druvarAyanige varavitta dEva |
jayatu pralhAdaBayavitta dEva |
jayatu draupadiyaBimAna kAydu dEvA
jayatu jaya hayavadana SrIvAsudEva || 50 ||
***

 ಶ್ರೀನಾಥ ಪಾರ್ವತೀ ನಾಥ ಶರಣೆಂಬೆ |

ವಾಣಿ ಭಾರತೀ ಗಜಮುಖನ ಬಲಗೊಂಬೆ ||

ನಾನು ಬಲ್ಲಷ್ಟು ಹೇಳುವೆನು ಈ ಕಥೆಯ |

ಶ್ರೀನಾಥ ಗಜರಾಜಗೊಲಿದ ಸಂಗತಿಯ || ೧ ||

ಛಪ್ಪನ್ನ ದೇಶದ ರಾಜರುಗಳೊಳಗೆ |

ಉತ್ತಮದ ದೇಶ ಗೌಳದೇಶದಲಿ||

ವಿಷ್ಣು ಭಕ್ತರೊಳು ಇಂದ್ರದ್ಯುಮ್ನ ನೃಪನು |

ಮತ್ತೆ ಭೂಸುರರ ಪಾಲಿಸುತ್ತಿದ್ದ ತಾನು || ೨ ||

ಚಿತ್ತದಲಿ ನರಹರಿಯ ನೆನೆದು ಚಿಂತಿಸುತ |

ಪುತ್ರಮಿತ್ರಾದಿ ಬಂಧುಗಳ ವರ್ಜಿಸುತ ||

ಸರ್ಪಶಯನನ ಧ್ಯಾನದೊಳಿದ್ದ ತಾನು |

ಮತ್ತೆ ತ್ರಿಕೊಟ ಪರ್ವತಕಾಗಿ ಬಂದ ||೩||

ಧ್ಯಾನದಲಿ ನರಹರಿಯ ನೆನೆದು ಚಿಂತಿಸುತ |

ಆನೆಕುದುರೆ ರಾಜ್ಯಗಳ ತ್ಯಜಿಸುತ್ತ || 

ನಾಗಶಯನನ ಧ್ಯಾನದೊಳಿದ್ದ ತಾನು |

ಮೇರುಮಂದರದ ಸಮೀಪಕ್ಕೆ ಬಂದ ||೪ ||

ಸಿದ್ದ ಕಿನ್ನರರು ಗಂಧರ್ವರಿಗೆ ಸ್ಥಾನ |

ಎದ್ದೆದ್ದು ಕುಣಿವ ಖಗಮೃಗಗಳ ನಿಸ್ಸೀಮ ||

ಎತ್ತ ನೋಡಲು ನಾಲ್ಕು ದೇಶಗಳ ವಿಸ್ತೀರ್ಣ |

ಸುತ್ತ ಸುವರ್ಣಮಯ ವಸ್ತುಗಳ ಧಾಮ || ೫ ||

ಹಲವು ನದಿ ಹಲವು ಕೊಳ ಹಲವು ಸರೋವರದಿ |

ಹಲವು ಪರಿ ಪುಷ್ಪಗಳು ನಲಿವ ಅಳಿಕುಲದಿ ||

ಕುಣಿವ ನವಿಲು ಗಿಳಿ ಕೋಗಿಲೆಗಳ ಗಾನ |

ಚೆಲುವ ಗಂಧರ್ವ ಕಿನ್ನರರಿಗೆ ಸ್ಥಾನ || ೬ ||

ಬಂದು ನದಿಯಲ್ಲಿ ಸ್ನಾನವನು ಮಾಡಿ |

ಛಂದಕಿಕ್ಕಿದನೆ ದ್ವಾದಶ ನಾಮಗಳನು ||

ಸಂಧ್ಯಾವಂದನೆ ಮಾಡಿ ಪದ್ಮಾಸನದಿ ಕುಳಿತು|

ಇಂದಿರಾಪತಿಯ ಧ್ಯಾನದೊಳರಸಿ ತಾನು || ೭ ||

ಅಂದಾಗ ಆಯೆಡೆಗೆ ಅಗಸ್ತ್ಯಮುನಿ ಬಂದು|

ನಿಂದೆದ್ದು ವಂದನೆಯ ಮಾಡಲಿಲ್ಲೆಂದು ||

ಎಂದೆನುತ ಕೋಪಿಸುತ ಶಾಪಿಸಿದ |

ಕುಂಜರದ ರೂಪಾಗಿ ಜನಿಸು ಹೋಗೆಂದ || ೮ ||

ತಪ್ಪುಂಟು ಮಹ ಋಷಿಯೆ ಬಿನ್ನಪವ ಕೇಳು|

ಉಶ್ಯಾಪ ಎಂದಿಗಾಗುವುದೆನುತ ಪೇಳು ||

ವಿಷ್ಣು ಚಕ್ರವು ಬಂದು ನಿನ್ನ ಸೋಕುತಲಿರೆ |

ಉಶ್ಯಾಪ ಅಂದಿಗಾಗುವುದೆನುತ ಪೇಳೆ  || ೯ ||

ಜ್ಞಾನವಡಗಿದವು ಅಜ್ಞಾನವಾವರಿಸೆ |

ಸೂರ್ಯ ಮುಳುಗಿದರೆ ಕತ್ತಲೆ ಮುಸುಕಿದಂತೆ ||

ಧ್ಯಾನಿಸುತ ಹಿಂದುಮುಂದಾಗಿ ಕುಳಿತಿರಲು |

ಆನೆ ಆದನು ನೃಪನು ಆ ಕ್ಷಣದಿ ತಾನು || ೧೦ ||

ಮೇರು ಮಂದರವು ಜರಿದಿಳಿದು ಬರುವಂತೆ |

ಮೇಲುಮದ ಕೀಳು ಮದ ಸುರಿಯೆ ಕುಂಭದಲಿ |

ಕಾಡಾನೆಯಲಿ ಹಲವು ಮಕ್ಕಳನೆ ಪಡೆದು |

ಕಾನನದೊಳಗೆ ಸಂಚರಿಸುತ್ತಿದ್ದ ತಾನು || ೧೧||

ಘಟ್ಟ ಬೆಟ್ಟಗಳ ಹತ್ತುತಲೆ ಇಳಿಯುತಲೆ |

ಹಿಟ್ಟು ಹಿಟ್ಟಾಗಿ ಗಿಡ ಮರವ ತುಳಿಯುತಲೆ ||

ದಟ್ಟಡವಿಯಲಿ ಸಂಚಾರವ ಮಾಡುತಲಿರೆ |

ಬತ್ತಿದವು ಕೆರೆತೊರೆಯು ಬೇಸಿಗೆಯು ಬರಲು || ೧೨ ||

ಕಂಡ ಕಂಡಲ್ಲಿ ಏರುತಲಿ ಇಳಿಯುತಲಿ |

ತುಂಡುತುಂಡಾಗಿ ಗಿಡಮರವ ಮುರಿಯುತಲಿ ||

ತಂಡ ತಂಡದಲಿದ್ದ ತನ್ನ ಸತಿ ಸುತರೆಲ್ಲ|

ಬೆಂಡಾಗಿ ಹಸಿವು ತೃಷೆಯಿಂದ ಬಳಲಿದರು || ೧೩ ||

ಬಾಳೆ ಕಿತ್ತಳೆ ನಿಂಬೆ ಚೂತ ಮಾದಲವು

ದಾಳಿಂಬ ದ್ರಾಕ್ಷಿ ಖರ್ಜೂರ ಪೇರಳೆಯು ||

ಮೇಲಾದ ಫಲಪುಷ್ಪದಿಂದ ಶೋಭಿಸುವ

ತಾವರೆಯ ಕೊಳವೊಂದ ಕಂಡ ಗಜರಾಜ || ೧೪ ||

ನವರತ್ನ ಮುತ್ತು ಮಾಣಿಕದ ಸೋಪಾನ |

ಕೊಳದ ಸುತ್ತಲು ಮುತ್ತಿ ಚಕ್ರವಾಕಗಳು ||

ನಲಿಯುತಿರೆ ಹಲವು ಹಕ್ಕಿಗಳು ಹಂಸಗಳು |

ಪರಿಮಳಿಸುವಾ ಕೊಳವ ಹೊಕ್ಕ ಗಜರಾಜ ||೧೫ ||

ಹೊಡೆಯುತಲಿ ಬಡೆಯುತಲಿ ಕುಡಿಯುತಲಿ ನೀರ |

ಮಡುವಿನಲಿ ಚೆಲ್ಲುತಲಿ ನಲಿದವೊಂದಾಗಿ ||

ಕಾಡಾನೆ ಕರಿಯಾನೆ ಮರಿಯಾನೆ ಸಹಿತ |

ಕೂಡಿಕೊಂಡಿರಲಿಂತು ಸಂಭ್ರಮದಿ ಜಲದಿ || ೧೬ ||

ಮುನಿಯ ಶಾಪದಳೊಂದು ಮಕರಿ ಮಡುವಿನಲಿ|

ಹಲವುಕಾಲದಿ ತಪಿಸಿ ಜೀವಿಸುತ್ತಿರಲು ||

ಮದಗಜವು ಪೊಕ್ಕು ಮಡುವನೆ ಕಲಕುತಿರಲು

ತಡೆಯದಾ ಮಕರಿ ಹಿಡಿಯಿತು ಕರಿಯ ಕಾಲ || ೧೭ ||

ಅತ್ತಿತ್ತ ನೋಡಿದನು ಸುತ್ತ ನೋಡಿದನು |

ಎತ್ತ ನೋಡಿದರೂ ಬಿಡದಾ ಮಕರಿ ಕಾಲು ||

ಎಳೆದೊಮ್ಮೆ ನೋಡಿದನು ಸೆಳದೊಮ್ಮೆ ನೋಡಿದನು |

ಸೆಳೆದು ಖೊಡವಿದರು ಬಿಡದಾ ಮಕರಿ ಕಾಲು || ೧೮ ||

ತನ್ನ ಸತಿ ಸುತರೆಲ್ಲ ಸೆಳದರೊಂದಾಗಿ |

ತಮ್ಮ ಕೈಲಾಗದೆಂದೆನುತ ತೆರಳಿದರು |

ನಿಮ್ಮ ಪುಣ್ಯದ ಫಲವು ಹೋಗಿ ನೀವೆಂದ |

ದುಮ್ಮಾನದಲಿ ದೂರದಲಿದ್ದರವರು || ೧೯ ||

ಕಚ್ಚುತಲಿ ಸೆಳೆಯುತಲಿ ಆ ಮಕರಿ ಕಾಲು |

ರಕ್ತಮಯವಾಗಿ ತುಂಬಿತು ಕೊಳದ ನೀರು |

ಅರ್ಕಟಾ! ಎನಗಿನ್ನು ಗತಿಯಾರು ಎಂದೆನುತ|

ದಿಕ್ಕುಗೆಟ್ಟಂತೆ ಮೊರೆಯಿಟ್ಟ ಗಜರಾಜ || ೨೦ ||

ಅಚ್ಯುತಾನಂತ ಶ್ರೀಹರಿಯೆನ್ನ ಕಾಯೋ |

ಸಚ್ಚಿದಾನಂದ ಸರ್ವೇಶ್ವರನೆ ಕಾಯೋ ||

ಭಕ್ತವತ್ಸಲನೆ ಭವಭಂಜನನೆ ಕಾಯೋ |

ಕಷ್ಟಪಡುತೇನೆ ಕರುಣಿಸಿ ಕರುಣಿ ಕಾಯೋ || ೨೧ ||

ಎಂಭತ್ತು ನಾಲ್ಕು ಲಕ್ಷ ಜೀವರಾಶಿಗಳಾ |

ಇಂಬಿಟ್ಟು ಸಲಹುವ ಜಗದೀಶ್ವರನೆ ಕಾಯೋ |

ಜಂಗಮ ಸ್ಥಾವರಗಳೊಳಗೆ ಪರಿಪೂರ್ಣನೆನಿಸಿ |

ನೀ ಎನ್ನ ಬಂಧನವ ಬಿಡಿಸಿ ಕಾಯೋ || ೨೨ ||

ಈರೇಳು ಲೋಕವನು ಹೃದಯದೊಳಗಿಟ್ಟೆ |

ಕಾದುಕೋ ಎಂದು  ಮೊರೆಯಿಟ್ಟ ಗಜರಾಜ  |

ಅಹಾರ ನಿದ್ರೆ ಇಲ್ಲದೆ ಸಾವಿರ ವರುಷ|

ಬಹಳ ನೊಂದೆನೊ ಸ್ವಾಮಿ ಕಾಯೋ ಬಾಯೆಂದ || ೨೩||

ವೇದವನು ಕದ್ದೊಯ್ದ ದಾನವನ ಛೇದಿಸಿ |

ಛೇದಿಸೀ ಅವನ ಭೇದಿಸಿದೆ ||

ಆದಿ ನಿಗಮವ ತಂದು ಕಮಲಜಂಗಿತ್ತೆ |

ವೇದಾಂತ ವೇದ್ಯ ಮತ್ಸ್ಯಾವತಾರ ಶರಣು || ೨೪ ||

ಸುರಾಸುರರು ಪಾಲ್ಗಡಲ ಮಥಿಸುತಿರಲು |

ಮುರವೈರಿ ಹಾಸಿಗೆಯ ಹುರಿ ಮಾಡಿಕೊಂಡು |

ಭರದಿ ಮಂದರಗಿರಿಯು ಇಳಿಯುತಿರೆ ಬಂದು |

ಗಿರಿಯನೆತ್ತಿದ ಕೂರ್ಮ ಹರಿ ನಿನಗೆ ಶರಣು || ೨೫ ||

ಸುರುಳಿ ಸುತ್ತಿದ ಭೂಮಿ ದಾಡೆಯಿಂದಲಿ ತಂದೆ |

ದುರುಳ ಹಿರಣ್ಯಾಕ್ಷನನು ಬೇಗದಲಿ ಕೊಂದೆ |

ಧರಣಿದೇವಿಯ ಸದಮಲದಲಿ ಗೆದ್ದೆ |

ವರಹಾವತಾರ ಶ್ರೀಹರಿ ನಿನಗೆ ಶರಣು || ೨೬ ||

ಬಾಲಕನು ಕರೆಯಲಿಕೆ ಕಂಬದಿಂದಲಿ ಬಂದೆ |

ಸೀಳಿ ರಕ್ಕಸನ ಕರುಳಿನ ಮಾಲೆ ಹಾಕಿದೆ ||

ಶೀಲ ಪ್ರಲ್ಹಾದನಿಗಭಯವನಿತ್ತ |

ಶ್ರೀಲಕ್ಷ್ಮಿ ಒಡನಿದ್ದ ನರಸಿಂಹ ಶರಣು || ೨೭ ||

ಬಲಿಯ ದಾನವ ಬೇಡಿ ಬ್ರಹ್ಮಚಾರಿಯಾಗಿ |

ನೆಲವನೆಲ್ಲವ ಮೂರು ಅಡಿಮಾಡಿ ಅಳೆದೆ ||

ಅಳೆದ ಪಾದದಲಿ ಭಾಗಿರಥಿಯ ತಂದೆ |

ಚೆಲುವ ವಾಮನ ತ್ರಿವಿಕ್ರಮನೆ ಶರಣು || ೨೮ ||

ದುಷ್ಟ ಕ್ಷತ್ರಿಯರ ಕುಲವ ಸಂಹರಿಸಿ |

ರಕ್ತದಲಿ ಸ್ನಾನ ತರ್ಪಣವ ನೀ ಕೊಟ್ಟೆ ||

ಮತ್ತೆ ವೇದಾಂತ ಶಾಸ್ತ್ರಗಳ ನೆರೆ ಓದಿದ |

ವಿಪ್ರ ಭಾರ್ಗವ ರಾಮ ಹರಿ ನಿನಗೆ ಶರಣು || ೨೯ ||

ಹರನ ಬಿಲ್ಲನೆ ಮುರಿದು ಧರಣಿಜೆಯ ತಂದೆ |

ದುರುಳ ರಾವಣನ ಹತ್ತು ಶಿರಗಳನು ತರಿದೆ |

ವರ ವಿಭೀಷಣನಿಗೆ ರಾಜ್ಯವನಿತ್ತ ದೇವ ||

ಶರಣು ರಕ್ಷಕ ಸೀತಾಪತಿ ರಾಮ ಶರಣು || ೩೦ ||

ಮಥುರೆಯಲಿ ಹುಟ್ಟಿ ಗೋಕುಲದಲಿ ಬೆಳೆದೆ |

ತರಳತನದಲಿ ಹಾಲು ಬೆಣ್ಣೆಗಳ ಕದ್ದೆ |

ತುರುವ ಕಾಯುತ ಕೊಂದೆ ಹಲವು ಪಾತಕರ |

ಬಲರಾಮಕೃಷ್ಣ ಗೋಪಾಲಕನೆ ಶರಣು || ೩೧ ||

ತ್ರಿಪುರ ಸತಿಯರ ವ್ರತವ ಅಪಹರಿಸಿದವನೆ |

ಪೃಥುವಿಯಲಿ ಅಶ್ವತ್ಥ ಗಿಡದಡಿ ಮೆರೆದವನೆ ||

ಬೆಸಗಣ್ಣ ಹರಗೆ ಅಂಬಾಗಿ ನಿಂತವನೆ ||

ಪಶುಪತಿವಂದ್ಯ ಬೌದ್ಧಾವತಾರ ಶರಣು || ೩೨ ||

ವರ್ಣಾಶ್ರಮಗಳೆಲ್ಲ ಒಂದಾಗಿ ಇರಲು |

ಬಿನ್ನಾಣದಿಂದ ತುರುಗವನೇರಿಕೊಂಡು ||

ಬನ್ನ ಬಡಿಸುತ  ಕೊಂದೆ ಹಲವು ಪಾತಕರ  |

ಬ್ರಹ್ಮಸ್ವರೂಪ ಕಲ್ಕ್ಯಾವತಾರ ಶರಣು || ೩೩ ||

ಅರಿಯೆನೆಂದೆನದೆ ಅಚ್ಯುತ ರಕ್ಷಿಸೆನ್ನ |

ಮರೆತೆನೆಂದೆನದೆ ಮಾಧವ ರಕ್ಷಿಸೆನ್ನ ||

ಕೇಳನೆಂದೆನದೆ ಕೇಶವ ರಕ್ಷಿಸೆನ್ನ |

ಕಾಣನೆಂದೆನದೆ ಕರುಣಿಸಿ ರಕ್ಷಿಸೆನ್ನ || ೩೪ ||

ಕಾಯೊ ಕಂಜರ ಎನ್ನ ಪ್ರಾಣ ಹೋಗುತಿದೆ  |

ಯಾವಾಗ ಹರಿಬಂದು ಕಾಯ್ವನೋ ಎನುತ |

ಕೂಗಿದನು ಚೀರಿ ಮೊರೆಯಿಟ್ಟ ಗಜರಾಜ |

ದಾನವಾಂತಕನು ಕಿವಿಗೊಟ್ಟು ಕೇಳಿದನು || ೩೫ ||

ಕ್ಷೀರಾಬ್ಧಿಯಲಿ ವೈಕುಂಠದಲಿ  ನೆಲಸಿದ್ದ|

ಶೇಷನಾ ಹಾಸಿಗೆಯ ಮೇಲೆ ಕುಳ್ಳಿರ್ದ ||

ಶ್ರೀಲಕ್ಷ್ಮೀ ಸಮ್ಮೇಳನದಿಂದ ಒಪ್ಪಿರಲು |

ಆಲಯಿಸಿ ಕೇಳಿದನೆ ಅಜನ ಪೆತ್ತವನು || ೩೬ ||

ಶಂಖ ಚಕ್ರಗಳಿಲ್ಲವೆಂದು ಶಂಕಿಸದೇ |

ಬಿಂಕದಿಂ ಗರುಡನ್ನ ಹೆಗಲೇರಿ ಕೊಳ್ಳದೆ ||

ಪಂಕಜಾಕ್ಷಿಯ ಕೂಡ ತಾನು ಉಸುರದೆ ||

ಪಂಕಜನಾಭ ಬಂದನೆ ಕೊಳದ ಕಡೆಗೆ || ೩೭ ||

ಸಜ್ಜೆ ಉಪ್ಪರಿಗೆಯಿಂದಿಳಿದು ಬರುವಾಗ |

ವಜ್ರಕುಂಡಲ ಪದಕ ಹಾರಗಳು ಹೊಳೆಯೆ |

ಹೊದ್ದ ಪೀತಾಂಬರವು ನೆಲಕೆ ಅಲೆಯುತಲಿರೆ |

ಎದ್ದು ಬಂದನೆ ದಯಾಸಮುದ್ರ ಬಂದಂತೆ || ೩೮ ||

ಸಿಂಧುಸುತೆ ತನ್ನ ಪತಿಯೆಲ್ಲಿ ಪೋದನೋ ಎನುತ |

ಮಂದಗಮನೆಯು ಬಂದು ಪುರವೆಲ್ಲ ತೆರಳೆ ||

ಹೊಂದಿಸುತ  ಗರುಡನ್ನ ಹೆಗಲೇರಿಕೊಳ್ಳಲು|

ಅಂದಾಗ ಶಂಖಚಕ್ರವು ಕೂಡಿ ಬರಲು || ೩೯ ||

ಹರಿಯು ಗರುಡವನೇರಿ ಕರಿಯತ್ತ ಬರಲು |

ಹರ ಪಾರ್ವತಿಯರು ನಂದಿಯನೇರಿ ಕೊಳುತ ||

ಶಿರದ ಮೇಲಿನ ಗಂಗೆ ತುಳುಕಾಡುತಿರಲು |

ಹರ ಬಂದ ಕೈಲಾಸ ಗಿರಿಯಿಂದಲಾಗ || ೪೦ ||

ತೊಡೆಯ ಮೇಲಿನ ಗೌರಿದೇವಿಯಳ ಸಹಿತ |

ಮುಡಿಯ ಮೇಲಿನ ಗಂಗೆ ತುಳುಕಾಡು ತಿರಲು |

ಹರಪಾರ್ವತಿದೇವಿ ವೃಷಭವನ್ನೇರಿ |

ಹರ ಬಂದ ಕೈಲಾಸಪುರದಿಂದ ಇಳಿದು || ೪೧ ||

ದೇವ ಋಷಿ ಬ್ರಹ್ಮ ಋಷಿ ರಾಜ ಋಷಿ ಸಹಿತ |

ದೇವ ಪುತ್ರಾದಿ ಸನಕಾದಿಗಳು ಕೂಡಿ ||

ಸುಮ್ಮನೇ ನಾರದರಂದು ನಡೆತರಲು |

ಬ್ರಹ್ಮ ಸ್ವರೂಪರೆಲ್ಲ ನೆರೆದರಂದು || ೪೨ ||

ಬಂದು ಚಕ್ರವನು ಕರಕಮಲದಲಿ ತೆಗೆದು |

ಬಂಧಿಸಿಟ್ಟನು ಮಕರಿ ಹಲ್ಲು ಮುರಿವಂತೆ |

ಅಂದಿಗವನ ಶಾಪ ಉಶ್ಯಾಪವಾಗಿ |

ಗಂಧರ್ವ ರೂಪಿನಲಿ ನಿಂತಿತಾ ಮಕರಿ || ೪೩ ||

ಹರಿಯ ಸುದರ್ಶನವು ಮದಗಜಕೆ ಸೋಕುತಲೆ |

ಒದಗಿದವು ನಾಲ್ಕು ಕೈಗಳು ಶಂಖ ಚಕ್ರ  |

ಉಟ್ಟ ಪಿತಾಂಬರವು ಕಿರೀಟ ಕುಂಡಲವು |

ಎಳೆತುಳಸಿಮಾಲೆಗಳು ಕೊರಳೊಳೊಪ್ಪಿದವು || ೪೪ ||

ಜಯಜಯ ಜಗನ್ನಾಥ ಜಯ  ವಿಶ್ವರೂಪ|

ಜಯ ಜಯ ಜನಾರ್ಧನ ಜಯ ವಿಶ್ವಮೂರ್ತಿ |

ಜಯತು ಸರ್ವೋತ್ತಮನೆ ಕ್ಷಿರಾಬ್ಧಿಶಯನ |

ಜಯವೆಂದು ಪದಗಳಿಗೆ ಬಂದು ಎರಗಿದನು || ೪೫ ||

ಇಂದಿವನ ಭಾಗ್ಯವನು ನೋಡುವರು ಕೆಲರು |

ಇಂದಿರಾ ಪತಿಯ ಕೊಂಡಾಡುವರು ಕೆಲರು |

ಮಂದಾರ ಪೂಮಳೆಯ ಕರೆಯುತ್ತ ಸುರರು|

ದುಂದುಭಿ ವಾದ್ಯಗಳ ವೈಭವಗಳಿರಲು || ೪೬ ||

ಸಿರಿಸಹಿತ ಹರಿಯು ಗರುಡವನೇರಿಕೊಂಡು

ಕರಿರಾಜನೊಡನೆ ವೈಕುಂಠಕ್ಕೆ ಬರಲು ||

ಹರಪಾರ್ವತಿಯರು ಕೈಲಾಸಕೆ ತೆರಳೆ |

ತರತರದ ವಾಹನದಿ ಸುರರು ತೆರಳಿದರು || ೪೭ ||

ಹೊತ್ತಾರೆ ಎದ್ದು ಈ ಕಥೆ ಹೇಳಿ ಕೇಳ್ದವರಿಗೆ |

ದುಃಸ್ವಪ್ನ ದುರ್ಬುದ್ಧಿ ದುರ್ವ್ಯಸನ ಕಳೆಯುವುದು ||

ಸರ್ಪಾರಿ ವಾಹನನ ಧ್ಯಾನದೊಳಿರಲು |

ಸತ್ಸಂಗ ಸಾಯುಜ್ಯ ಪದವಿ ದೊರಕುವುದು || ೪೮ ||

ಹರಿಯ ನೆನೆ ಹರಿಯ ನೆನೆ ಹರಿಯ ನೆನೆ ಮನವೆ

ಮರೆಯದಲೆ ಮಾಧವನ ನೆನೆ ಕಂಡ್ಯ ಮನವೆ |

ಹರಿಯ ನೆನೆದವರಿಗೆ ಪರಮ ಪದವಿ ಉಂಟು |

ಕರಿರಾಜವರದನ್ನ ಶರಣೆಂದು ಭಜಿಸು || ೪೯ ||

ಜಯತು ಧ್ರುವರಾಯನಿಗೆ ವರವಿತ್ತ ದೇವ |

ಜಯತು ಪ್ರಲ್ಹಾದಗೆ ಅಭಯವಿತ್ತ ದೇವ |

ಜಯತು ದ್ರೌಪದಿಯ ಅಭಿಮಾನ ಕಾಯ್ದ ದೇವಾ|

ಜಯತು ಜಯ ಹಯವದನ ಶ್ರೀವಾಸುದೇವ || ೫೦ ||

***