Showing posts with label ನಮಿಸುವೆನು ಸುವ್ರತೀಂದ್ರ ಯತಿಗಳಿಗೆ ಸತತ lakumeesha suvrateendra teertha stutih. Show all posts
Showing posts with label ನಮಿಸುವೆನು ಸುವ್ರತೀಂದ್ರ ಯತಿಗಳಿಗೆ ಸತತ lakumeesha suvrateendra teertha stutih. Show all posts

Saturday 1 May 2021

ನಮಿಸುವೆನು ಸುವ್ರತೀಂದ್ರ ಯತಿಗಳಿಗೆ ಸತತ ankita lakumeesha suvrateendra teertha stutih

 suvrateendra teertha rayara mutt 1933 yati stutih

ರಚನೆ : ಶ್ರೀ ಕುರುಡಿ ರಾಘವೇಂದ್ರಾಚಾರ್ಯರು 

ಅಂಕಿತ : ಶ್ರೀ ಲಕುಮೀಶ 

ಧಾಟಿ : ನಮೋ ನಮೋ ಶ್ರೀ ರಾಘವೇಂದ್ರ 


ನಮಿಸುವೆನು ಸುವ್ರತೀಂದ್ರ 

ಯತಿಗಳಿಗೆ ಸತತ ।। ಪಲ್ಲವಿ ।।


ಭ್ರಮಿಸಿ ತ್ರಯ ಮೋಹದಲಿ ।

ಶ್ರಮಿಸಿ ಶ್ರೀ ಹರಿ ಪದವ ।    

ನಮಿಸಿ ನಾ ತುತಿಸದಲೆ -

ಕೆಟ್ಟೆ ಕೈಪಿಡಿಯೆಂದು ।। ಅ ಪ ।।


ಹುಲಿ ಹನುಮಂತರ 

ಚಲ್ವ ಭವರಿವರಲ್ಲಿ ।

ಸಲ್ಲಿಸುತ ವೇದಾಂತ ನ್ಯಾ

ಯಶಾಸ್ತ್ರದ ಕಲಿತೂ ।

ಕಲಿತನದಿ ತಿರುಪತಿಲಿ 

ಪ್ರೌಢಾಧ್ಯಾಪಕರಾಗಿ ।

ಇಳೆಯೊಳಗೆ ಬಹು ಕೀರ್ತಿ 

ಪಡೆದಂಥ ಮಹಿಮರಿಗೆ ।। ಚರಣ ।।


ಒಲುಮೆ ಗಳಿಸಿ ಶ್ರೀ ಸುಶೀಲೇಂದ್ರ 

ಯತಿಗಳಲಿ ।

ಹುಲಿ ಕೃಷ್ಣರಿವರೀಗ 

ಒಲಿದಾಶ್ರಮ ನೀಡಿ ।

ಬಲಗೊಂಡು ಶ್ರೀ ಮೂಲರಾಮಾದಿ 

ಪೂಜೆಯಲಿ ।

ನಲಿದು ದಕ್ಷಿಣ ಯಾತ್ರೆ 

ಹರುಷದಲಿ ಗೈದರಿಗೆ ।। ಚರಣ ।।


ಶ್ರೀ ಕುಂಭಕೋಣದಲಿ 

ಮಹಾ ಸಮಾರಾಧನೆಗೆ ।

ಜೋಕೆಯಲಿ ಸಮೀರಾ 

ಸಮಯ ಸಭದೀ ।

ಆ ಕೃಷ್ಣ ಎಲತ್ತೂರು 

ಕಪಿಸ್ಥಲಂ ದೇಶಿಕಾರ್ಯ ।

ಚಕ್ರವರ್ತಿ ಅಯ್ಯಂಗಾರ್ರಿವರ

ಬರ ಮಾಡ್ದರಿಗೆ ।। ಚರಣ ।\


ಕೂಡಲಿ ಶೃಂಗೇರಿ ಮಠದ 

ಸ್ವಾಮಿಯವರು ।

ಸಡಗರದಿ ಬಂದ 

ಅಭಿನವ ಭಟ್ಟಾರ್ಯರು ।

ದೊಡ್ಡ ಬಳ್ಳಾಪುರದ 

ವಾಸುದೇವಾಚಾರ್ಯರು ।

ಬಿಡದೆ ವಿರೂಪಾಕ್ಷ 

ಕೋವಿದರ್ಕರಿಸಿದರಿಗೆ ।। ಚರಣ ।।


ವೈದ್ಯನಾಥಶಾಸ್ತ್ರಿ 

ತಿರುವಾದಿ ವಿಜಯೀ೦ದ್ರ ।

ಮುದದಿಂದ ಬಂದ  

ಕೋವಿದ ಕೃಷ್ಣಮೂರ್ತಿ ।

ಒದಗೆ ವಾಕ್ಯಾರ್ಥ 

ಪಶೂನಾ ಯಜೇತಕ್ಕೆ ।

ತುದಿ ನಿರ್ಣಯ ನೀಡಿ 

ಗೆದ್ದಂತ ಯತಿಗಳಿಗೆ ।। ಚರಣ ।।


ದೇಶಿಕಾರ್ಯರು ಇವರ 

ಭಾಸುರ ವಿದ್ವತ್ತಿಗೆ ।

ಸೋಶಿಲಾಕ್ಷಣದಲ್ಲಿ 

ಕವನವನು ನೀಡೆ ।

ತೋಷದಲಿ ಪೂಜೆಗೈದು 

ವಿಜಯೀ೦ದ್ರರಡಿಗಿಟ್ಟು ।

ರಾಶಿ ಧನ ಕನಕಾದಿಗಳ 

ಪಂಡಿತರಿಗಿತ್ತಂಥ ।। ಚರಣ ।।

ವ್ಯಾಸತತ್ತ್ವಜ್ಞರ 

ದರ್ಶನಾದಿ ಗೈದು ।

ಸಂಸ್ಥಾನ ಗದ್ವಾಲಿನಲ್ಲಿ 

ಚಾತುರ್ಮಾಸ್ಯ ಕುಳಿತೂ ।

ಹಾಸದಲಿ ಆಶ್ರಮದಿ 

ಸುಯಮೀ೦ದ್ರರಿಗೆಯಿತ್ತು ।

ವಾಸ ಮಂತ್ರಾಲಯದಿ 

ಲಕುಮೀಶ್ನ ಧ್ಯಾನಿಪರ ।। ಚರಣ ।।

****