Showing posts with label ಭಾರತೀ ರಮಣ ಸುರವಿನುತ ಚರಣ karpara narahari. Show all posts
Showing posts with label ಭಾರತೀ ರಮಣ ಸುರವಿನುತ ಚರಣ karpara narahari. Show all posts

Monday 2 August 2021

ಭಾರತೀ ರಮಣ ಸುರವಿನುತ ಚರಣ ankita karpara narahari

ಭಾರತೀ ರಮಣ ಸುರವಿನುತ ಚರಣ

ಶಾರದಾ ಪುರ ಶರಣ ಪ


ನೂರು ಯೋಜನಮಿರ್ದವಾರಿಧಿ ಲಂಘಿಸಿ ಬೇಗ

ಧಾರುಣಿ ಸುತೆಯ ಕಂಡು ದೂರ ನಮಿಸಿ

ಸಾರಿ ಮುದ್ರಿಕೆಯ ನಿತ್ತು ತೋರಿರಾಕ್ಷಸಗೆ ಭಯ

ಶ್ರೀರಾಮಗೆ ಬಂದು ಕ್ಷೇಮ ವಾರುತಿಯ ಪೇಳಿದಂಥ 1


ಇಂದು ಕುಲದಲ್ಲಿ ಪಾಂಡುನಂದನನೆನಿಸಿ ಜರಾ

ಸಂಧ ಮುಖರನು ಗದೆಯಿಂದವರಸಿ

ಅಂದುರಣದಲ್ಲಿ ಕರುವೃಂದವ ಮಥಿಸಿ ಆ

ನಂದ ಕಂದನೊಲಿಮೆಯ ಛಂದದಿ ಪಡೆದು ಗುರು 2


ಶ್ರೀಧನಾಜ್ಞೆಯಿಂದ ಪುಟ್ಟಿ ಮೇದಿನಿ ಸುರ ಗೃಹದಿ

ಮೋದ ತೀರ್ಥರೆಂದೆನಿಸಿ ವಾದದಿಂದಲಿ

ವಾದಿ ಮತ್ತ ವಾರಣ ಮೃಗಾಧಿಪರೆನಿಸಿ ಪಂಚ

ಬೇಧ ಬೋಧಿಸುವ ಶಾಸ್ತ್ರ ಸಾದರದಿ ವಿರಚಿಸಿದ 3


ಕಾಲಕಾಲದಲಿ ದ್ವಿಜರಾಲಯದಿ ಬಂದು ನಿನ್ನ

ಬಾಲವನಿತೆರ ಸಹ ಶೇವಿಸುವರು

ಪಾಲಿಕಿ ಉತ್ಸವದಲ್ಲಿ ಶೇರುವದು ಪೌರಜನ

ಪಾಲಿಸಬೇಕಯ್ಯ ಪಾಂಚಾಲಿರಮಣನೆ ನಮೊ 4


ನೀರಜಾಸನಾದಿ ವಂದ್ಯ ಪಾರುಮಾಡೋ ಭವ ಕೂ

ಪಾರ ನಾವಿಕನೆ ಎಂದು ಪ್ರಾರ್ಥಿಸುತಲಿ

ಸೇರಿದ ಸಜ್ಜನರಘ ದೂರಮಾಡಿ ಪೊರೆವಂಥಕಾರ್ಪರ 

ನಿಲಯ ಸಿರಿನಾರಸಿಂಹ ನೊಲಿಸಿದ 5

****