Showing posts with label ನೀನೇ ದೀನಜನ ಬಂಧೂ ದಯಾರಸ ಸಿಂಧೂ vijaya vittala. Show all posts
Showing posts with label ನೀನೇ ದೀನಜನ ಬಂಧೂ ದಯಾರಸ ಸಿಂಧೂ vijaya vittala. Show all posts

Thursday 17 October 2019

ನೀನೇ ದೀನಜನ ಬಂಧೂ ದಯಾರಸ ಸಿಂಧೂ ankita vijaya vittala

ವಿಜಯದಾಸ
ನೀನೆ ದೀನಜನ ಬಂಧೂ ದಯಾರಸ ಸಿಂಧೂ ಪ

ದಿವಿಜರ ಸಮುದಾಯವಿದ್ದರೇನು
ಅವನ ವ್ಯಾಳೆಗೆ ಒದಗಲಿಲ್ಲಾ
ಅವನಿವಲ್ಲಭ ಅವ್ಯಯವೆಂದರೆ
ಅವಸರಕ್ಕೊದಗಿ ಕಾಯದೇ ಕೃಷ್ಣಾ 1

ಭೂತ ಪರಿವಾರವಿದ್ದರೇನು
ಆತನ ಅಭಂಗಕ್ಕೆ ಒದಗಲಿಲ್ಲಾ
ಪೂತಾತ್ಮ ಪುರುಷೋತ್ತಮನೆಂದರೆ
ಚಾತುರ್ಯದಿಂದ ಸಲಹಿದೆ ಕೃಷ್ಣಾ 2

ಚತುರಾಸ್ಯಾದಿಗಳು ಇದ್ದರೇನು
ಶ್ರುತಿಯಹಾನಿರೆ ಒದಗಲಿಲ್ಲಾ
ಚತುರಾತ್ಮ ಸಿರಿಪತಿ ಉರಗಾದ್ರಿ
ಪತಿ ವಿಜಯವಿಠ್ಠಲನೇ ಕಾಯ್ದ ಕೃಷ್ಣಾ3
***********