Thursday 17 October 2019

ನೀನೇ ದೀನಜನ ಬಂಧೂ ದಯಾರಸ ಸಿಂಧೂ ankita vijaya vittala

ವಿಜಯದಾಸ
ನೀನೆ ದೀನಜನ ಬಂಧೂ ದಯಾರಸ ಸಿಂಧೂ ಪ

ದಿವಿಜರ ಸಮುದಾಯವಿದ್ದರೇನು
ಅವನ ವ್ಯಾಳೆಗೆ ಒದಗಲಿಲ್ಲಾ
ಅವನಿವಲ್ಲಭ ಅವ್ಯಯವೆಂದರೆ
ಅವಸರಕ್ಕೊದಗಿ ಕಾಯದೇ ಕೃಷ್ಣಾ 1

ಭೂತ ಪರಿವಾರವಿದ್ದರೇನು
ಆತನ ಅಭಂಗಕ್ಕೆ ಒದಗಲಿಲ್ಲಾ
ಪೂತಾತ್ಮ ಪುರುಷೋತ್ತಮನೆಂದರೆ
ಚಾತುರ್ಯದಿಂದ ಸಲಹಿದೆ ಕೃಷ್ಣಾ 2

ಚತುರಾಸ್ಯಾದಿಗಳು ಇದ್ದರೇನು
ಶ್ರುತಿಯಹಾನಿರೆ ಒದಗಲಿಲ್ಲಾ
ಚತುರಾತ್ಮ ಸಿರಿಪತಿ ಉರಗಾದ್ರಿ
ಪತಿ ವಿಜಯವಿಠ್ಠಲನೇ ಕಾಯ್ದ ಕೃಷ್ಣಾ3
***********

No comments:

Post a Comment