Showing posts with label ಪರಿಪಾಲಿಸೈ ವರ ವೆಂಕಟೇಶ ಚರಣಾಬ್ಜಯುಗ ಸ್ಮರಣೆಯನಿತ್ತು lakshmikanta. Show all posts
Showing posts with label ಪರಿಪಾಲಿಸೈ ವರ ವೆಂಕಟೇಶ ಚರಣಾಬ್ಜಯುಗ ಸ್ಮರಣೆಯನಿತ್ತು lakshmikanta. Show all posts

Sunday 1 August 2021

ಪರಿಪಾಲಿಸೈ ವರ ವೆಂಕಟೇಶ ಚರಣಾಬ್ಜಯುಗ ಸ್ಮರಣೆಯನಿತ್ತು ankita lakshmikanta

 ..

kruti by ಲಕ್ಷ್ಮೀನಾರಯಣರಾಯರು Lakshminarayanaru 


ಪರಿಪಾಲಿಸೈ ವರ ವೆಂಕಟೇಶ

ಚರಣಾಬ್ಜಯುಗ ಸ್ಮರಣೆಯನಿತ್ತು ಪ


ದುರಿತಾಧಿದೂರ ಪರತತ್ವಸಾರ

ಕಾರುಣ್ಯಪಾರ ವರನಿರ್ವಿಕಾರ ಅ.ಪ.


ಪರಮಾತ್ಮನೆ ಪೊರೆ ಎನ್ನುತ ಕರಿರಾಜ

ಮೊರೆಯಿಡುತಿರಲು ನೀ

ಗರುಡನ ಏರಿ ತ್ವರೆಯಿಂದ ಬಂದೆ

ಪರಮ ದಯಾಕರ ಶ್ರೀನಿವಾಸ 1


ಪಾಪಿಷ್ಠನು ಅಜಾಮಿಳನೆಂದು

ಕೋಪದಿ ಯಮ ಭಟರೆಳೆಯುತಿರೆ

ತಾಪಕೆ ತನ್ನ ಪುತ್ರನ ಕೂಗುತಲಿರೆ

ಕೃಪೆಯಿಂದ ನಿಜಪುರಕೆ ಒಯ್ದೆ 2


ಕನಕಾಚಲನಿಧಿ ಲಕ್ಷ್ಮೀಕಾಂತ

ಪ್ರಣತಾರ್ಥಿಹರ ಆನಂದಕರ

ವನಜಾಸನಾದಿ ಅಮಿಷಪಾಲ

ಸನಕಾದಿ ಯೋಗಿ ಮನ ಕುಮುದಲೋಲ 3

***