Showing posts with label ಈ ಪೆಸರಿಲೊಂಭತ್ತು ಮಂದಿ ರಘುಪತಿ pranesha vittala samsthana dieties. Show all posts
Showing posts with label ಈ ಪೆಸರಿಲೊಂಭತ್ತು ಮಂದಿ ರಘುಪತಿ pranesha vittala samsthana dieties. Show all posts

Saturday 1 May 2021

ಈ ಪೆಸರಿಲೊಂಭತ್ತು ಮಂದಿ ರಘುಪತಿ ankita pranesha vittala samsthana dieties

 dieties given to samsthana

"ಸಂಸ್ಥಾನಗಳಿಗೆ ಕೊಟ್ಟ ಪ್ರತಿಮೆಗಳು "

ಈ ಪೆಸರಿಲೊಂಭತ್ತು ಮಂದಿ ರಘುಪತಿ ।

ಕಾಳೀ ಮಥನ ವಿಠ್ಠಲನೆರಡೆರಡು ।

ಭೂಪತಿ ನರಸಿಂಹ ವಿಠಲ ಹೀಗೆ ।

ಒಂಭತ್ತು ಮೂರ್ತಿಗಳ ಕೊಟ್ಟು ।। 1 ।।

ಪದುಮನಾಭರಿಗೆ ರಾಮನ ಕೊಟ್ಟು ।

ಸಕಲ ದೇಶವ ನಾಳಿ ಧನವ ತಾ ಯೆನುತಲಿ ।

ಅದರ ತರುವಾಯ ಹೃಷಿಕೇಶ ತೀರ್ಥರಿ ।

ಗೊಂದು ರಾಮ ಮೂರ್ತಿಯನು ಕೊಟ್ಟು ।। 2 ।।


ಬುಧಜನಾರ್ಜಿಯ ನೃಸಿಂಹಾರ್ಯರಿಗೆ ।

ಕಾಳೀಯಮರ್ದನನಾದ ಶ್ರೀ ಕೃಷ್ಣಮೂರ್ತಿ ।

ಹೃದಯ ನಿರ್ಮಲ ಜನಾರ್ದನತೀರ್ಥರಿಗೆ ।

ಕಾಳೀ ಮಥನ ಶ್ರೀ ಕೃಷ್ಣಮೂರ್ತಿಯನು ಕೊಟ್ಟು ।। 3 ।।


ಯತಿವರ ಉಪೇಂದ್ರರಾಯರಿಗೆ ವಿಠಲನ ।

ವಾಮನ ತೀರ್ಥರಿಗೆ ವಿಠಲನಾ ।

ನಟ ಸುರದ್ರುಮ ವಿಷ್ಣುತೀರ್ಥರಿಗೆ ವರಾಹ ।

ಶ್ರೀ ರಾಮ ತೀರ್ಥರಿಗೆ ನರಸಿಂಹ ।। 4 ।।


ಅತಿ ಸುಗುಣ ಅಧೋಕ್ಷಜತೀರ್ಥರಿಗೆ ವಿಠಲ ।

ನಿಂತು ಒಂಭತ್ತು ಮೂರ್ತಿಗಳ ಕೊಟ್ಟು ।

ಕ್ಷಿತಿಯೊಳಗೆ ತ್ಯಾಪಪೇಹ ಪುರಸ್ಥ ।

ಪ್ರಾಣೇಶವಿಠ್ಠಲನ ಅರ್ಚನೆಗಿಟ್ಟರು ಕೇಳಿ ।। 5 ।।

****

" ಶ್ರೀಮದಾಚಾರ್ಯರಿಂದ ಸ್ಥಾಪಿಸಲ್ಪಟ್ಟ ಮೂಲ ಸಂಸ್ಥಾನಗಳಿಗೆ ನೀಡಿದ ಪ್ರತಿಮೆಗಳ ವಿವರ "

1. " ಶ್ರೀ ಪದ್ಮನಾಭತೀರ್ಥರು "

ಶ್ರೀಮದಾಚಾರ್ಯ ಕರಾರ್ಚಿತ ಶ್ರೀ ದಿಗ್ವಿಜಯರಾಮದೇವರು.

[ ಪ್ರಸ್ತುತ ಶ್ರೀ ದಿಗ್ವಿಜಯ ರಾಮದೇವರ ಪ್ರತಿಮೆ ಶ್ರೀ ರಾಯರ ಮಠದಲ್ಲಿ ವಿರಾಜಮಾನನಾಗಿದ್ದಾನೆ ]

2. ಶ್ರೀ ಹೃಷಿಕೇಶತೀರ್ಥರು - ಶ್ರೀ ರಾಮದೇವರು

3. ಶ್ರೀ ನರಸಿಂಹತೀರ್ಥರು - ಶ್ರೀ ಕಲೀಯಮರ್ದನ ಕೃಷ್ಣ ದೇವರು

4. ಶ್ರೀ ಜನಾರ್ದನತೀರ್ಥರು - ಶ್ರೀ ಕಲೀಯಮರ್ದನ ಕೃಷ್ಣ ದೇವರು

5. ಶ್ರೀ ಉಪೇಂದ್ರತೀರ್ಥರು - ಶ್ರೀ ವಿಠ್ಠಲದೇವರು

6. ಶ್ರೀ ವಾಮನತೀರ್ಥರು - ಶ್ರೀ ವಿಠ್ಠಲದೇವರು

7. ಶ್ರೀ ವಿಷ್ಣುತೀರ್ಥರು - ಶ್ರೀ ಭೂವರಾಹದೇವರು

8. ಶ್ರೀ ರಾಮತೀರ್ಥರು - ಶ್ರೀ ನರಸಿಂಹದೇವರು

8. ಶ್ರೀ ಅಧೋಕ್ಷಜತೀರ್ಥರು - ಶ್ರೀ ವಿಠ್ಠಲದೇವರು

" ವಿಶೇಷ ವಿಚಾರ "

1. ಶ್ರೀಮದಾಚಾರ್ಯ ಕರಾರ್ಚಿತ ಶ್ರೀ ದಿಗ್ವಿಜಯ ರಾಮದೇವರು - ಶ್ರೀ ರಾಯರ ಮಠ, ಮಂತ್ರಾಲಯ. 

2. ಶ್ರೀಮದಾಚಾರ್ಯರು ಉಡುಪಿಯ ಅಷ್ಟ ಮಠಗಳಿಗೆ ನೀಡಿದ ಸಂಸ್ಥಾನ ಪ್ರತಿಮೆಗಳು

******