Showing posts with label ಅದ್ವೈತ ಮತವನು vijaya vittala suladi ಮಧ್ವಮತ ಸ್ತೋತ್ರ ಸುಳಾದಿ ADVAITA MATAVANU MADHWAMATA SULADI. Show all posts
Showing posts with label ಅದ್ವೈತ ಮತವನು vijaya vittala suladi ಮಧ್ವಮತ ಸ್ತೋತ್ರ ಸುಳಾದಿ ADVAITA MATAVANU MADHWAMATA SULADI. Show all posts

Monday 9 December 2019

ಅದ್ವೈತ ಮತವನು vijaya vittala suladi ಮಧ್ವಮತ ಸ್ತೋತ್ರ ಸುಳಾದಿ ADVAITA MATAVANU MADHWAMATA SULADI

Audio by Mrs. Nandini Sripad

ಶ್ರೀ ವಿಜಯದಾಸಾರ್ಯ ವಿರಚಿತ ಮಧ್ವಮತ ಸ್ತೋತ್ರ ಸುಳಾದಿ 

 ರಾಗ ಕಲ್ಯಾಣಿ 

 ಧ್ರುವತಾಳ 

ಅದ್ವೈತ ಮತವನು ಅದ್ವರ ಮಾಡುವ | 
ನ ದ್ವೇಷವನ್ನು ಬಳಿಸು ಸದ್ವಚನವ ಕೇಳು 
ದ್ವೈತ ಮತದಲ್ಲಿ ಸದ್ವೈಷ್ಣೋತ್ತಮನಾಗು 
ಸದ್ವಿಚಾರದಲ್ಲಿ ತದ್ವಿಧಿಯಾಚರಿಸು
ಮಧ್ವರಾಯರ ಪಾದದ್ವಯವ ಭಜಿಸಿ 
ಊರ್ಧ್ವ ಲೋಕಕೆ ಪೋಗುವ ದ್ವಾರಮಾಡು | 
ಅದ್ವೈತ ಮಹಿಮ ದಾನವದ್ವಂಸಿ ವಿಜಯವಿಠ್ಠಲ 
ವಿದ್ವತ್ತಮನ ನೀ ಹೃದ್ವನಜದೊಳಗಿರಿಸೊ ॥ 1 ॥

ಮಟ್ಟತಾಳ 

ತೃಣ ಮೊದಲು ನೋಡು ವನಜಭವ ಸಹಿತ| 
ಗಣಿತ ಗುಣಿತ ಮಾಡೆ ಜನನ ಮರಣ ಉಂಟು| 
ವನಜನಾಭನ ದರುಶನದಿಂದವರವರ| 
ಮನುಜೋತ್ತಮ ವಿಡಿದು| 
ನಿನಗಿಂದೊಂದೆರಡು ಗುಣವಧಿಕದಿಂದ| 
ಗುಣದಿಂದಧಿಕರು ವನಜನಂದನನ| 
ತನಕ ನಮಿಸುತಿರು| 
ಜನ್ಮಜನ್ಮದ ನಾಮಾ ವಿಜಯವಿಠ್ಠಲನ್ನ 
ಅನುಸರಿಸಿ ಕಾಲನ ಪುರವಗೆಲ್ಲೊ ॥ 2 ॥

ತ್ರಿವಿಡಿತಾಳ 

ಪಯೋರತಿಯೇ ಯತ್ರ ತತ್ರಾಪಿ ಭಗವಾನ್| 
ಅಯೋರಿತ ಅನಾದ್ಯಾಯ ಆಗಮಗಣ ಸಂಖ್ಯಾತೇ| 
ಯಯೋ ಶ್ರದ್ಧಾಪುರುಷ ಯಿತಿ ಮುಕ್ತಿ ವಾಚಾ 
ವಾಯು ಮತವೇ ಮತವೆಂದು ಪೇಳುತಲಿವೆ| 
ಬಾಯ ಬಡಕನಾಗಿ ಭಯಭಕ್ತಿ ಇಲ್ಲದೆ| 
ದಾಯಾದ್ಯರಂತೆ ಕೊಂಡಾಡಿದರೆ| 
ನಾಯಿ ಬಾಯಿಗೆ ಬಿದ್ದ ಆ ಯಂಜಲ ಅರಿವೇ| 
ಘಾಯ ವಡದಂತೆ ಯಮನ ಬಳಿಯಾ 
ಕಾಯ ಖಂಡ್ರಿಸಿಕೊಂಡು ನೋಯುವದೆ ಸಿದ್ಧ| 
ಜಯಂತ ನಾಮ ಶ್ರೀವಿಜಯವಿಠ್ಠಲನ್ನ | 
ಪ್ರೀಯವಾದ ಮತ ಪೊಂದಿ ಜಯವಂತರಾಗಿರೋ ॥ 3 ॥

ಅಟ್ಟತಾಳ 

ಆಲೋಚಿಸಿ ನೋಡಿ ವೈಷ್ಣವರ ಮತ | 
ದಾಳುಗಳು ಬರುವ ಕಿರಣ ಮಾಲೆ| 
ತುಳಸಿ ಗಳದಲ್ಲಿ ಪದುಮಹಾರ| 
ಮೇಲೆ ದ್ವಾದಶ ಪುಂಢ್ರ ಚಕ್ರಾಂಕಿತ | 
ಬಾಲರವಿಯಂತೆ ಪೊಳೆಯುತ್ತ ಚರಿಸಲು| 
ಸೋಲುವದು ಸುಮನಸರ ಗಣ | 
ಆಳಾವಾದು ಇವರ ಇವರ ಮಹಿಮೆಗೆಂದು|
ಕಾಲನ್ನ ದೂತರು ನಡಗುವರು| 
ಹೇಳಲೆ ಇದಕೆ ಸಾಕ್ಷಿ ಪ್ರಲ್ಹಾದನು | 
ಶೂಲಿ ಭಕ್ತನ ಬಾಧಿಯ ಗೆದ್ದನು| 
ಹಾಳು ಮತವ ಬಿಡು ಹಗಲಿಳಿದ್ದರು| 
ಘಾಳಿಗಿಕ್ಕಿದ ದೀಪದೋಪಾದಿಯೊ| 
ಬಾಳು ಸರ್ವದಾ ವಿಜಯವಿಠ್ಠಲನ್ನ |
ಆಳಾಗಿ ಸೇವಿಸೊ ಅರಸಾಗಿ ಭುಂಜಿಸೊ ॥ 4 ॥

ಆದಿತಾಳ 

ಉದ್ದಕೆ ಪೋದಕೆ ಊರು ಸೇರುವ 
ಉದ್ದಿನಷ್ಟು ಭಯವಿಲ್ಲದೆ ಮುಗ್ಧ ನಡ್ಡ| 
ಬಿದ್ದು ಪೋದರೆ ಅದ್ವಾನ ಅಡಿವಿ ಸೇರುವ | 
ಕದ್ದು ತಿಂಬುವರೊಳಗಾಡಿ ಶುದ್ಧಿ ಇಲ್ಲದೆ ಮುಣುಗುವ| 
ಸಿದ್ಧವಿದು ಸರ್ವದಲ್ಲಿ ಬುದ್ಧಿವಂತರು ಕೇಳುವದು| 
ಛುದ್ರ ಮಾರ್ಗದೂರ ಕಳದು ಶ್ರದ್ಧಾ ಭಕುತಿಯಿಂದ| 
ಉದ್ಧವಾದುದನು ಕರಿಸಿ ಉದ್ಧಾರಾಗುವದು| 
ಸಿದ್ಧ ಸಾಧನ ವಿಜಯವಿಠ್ಠಲನ್ನ ತದ್ಧಾಸರ ವೊಡಗೂಡಿ| 
ಪೊದ್ದು ತೊರದು ನಡೆದರೆ ಗತಿಗೆ ಪದ್ಯೆಗಳೆವ ನಿತ್ಯವಾಗಿ ॥ 5 ॥

ಜತೆ

ಆಗ್ರಮತವ ಬಿಟ್ಟು ಅಘ್ಘವಾಗದಿರಿ| 
ಅಗ್ರಜನಾಮ ವಿಜಯವಿಠ್ಠಲನು ಮೆಚ್ಚ ॥
***********