Showing posts with label ಎಚ್ಚರಿಕೆ ಯಚ್ಚರಿಕೆ ಶ್ರೀ ಸೋದೆಪುರಯಚ್ಚರಿಕೆ gurutandevaradagopala vittala vadiraja stutih. Show all posts
Showing posts with label ಎಚ್ಚರಿಕೆ ಯಚ್ಚರಿಕೆ ಶ್ರೀ ಸೋದೆಪುರಯಚ್ಚರಿಕೆ gurutandevaradagopala vittala vadiraja stutih. Show all posts

Thursday 5 August 2021

ಎಚ್ಚರಿಕೆ ಯಚ್ಚರಿಕೆ ಶ್ರೀ ಸೋದೆಪುರಯಚ್ಚರಿಕೆ ankita gurutandevaradagopala vittala vadiraja stutih

 by ಗುರುತಂದೆವರದಗೋಪಾಲ ವಿಠಲ

ಯಚ್ಚರಿಕೆ ಯಚ್ಚರಿಕೆ ಶ್ರೀ ಸೋದೆಪುರಯಚ್ಚರಿಕೆ ಯಚ್ಚರಿಕೆ ಶ್ರೀ ಸೋದೆಪುರವಾಸಿ ಗುರುಪಾದ ಯಚ್ಚರಿಕೆ ಯಚ್ಚರಿಕೆ ಪ


ಶ್ರೀ ತ್ರಿವಿಕ್ರಮ ಲೋಕನಾಥನ ತಂದೆ ಶ್ರೀಪಾದಯಚ್ಚರಿಕೆ ಯಚ್ಚರಿಕೆ ಅ.ಪ.

ಗುರುಹಯವದನ ಮನಮುಟ್ಟಿ ಸ್ಮರಿಸಿ ಪೂಜಿಪಶ್ರೀ ಗುರುಪಾದ ಯಚ್ಚರಿಕೆ ಯಚ್ಚರಿಕೆ 1

ಶತಷಣ್ಣವತಿ ಸಪ್ತ ಬ್ರಹ್ಮ ಕಲ್ಪಗಳಲ್ಲಿ ಶ್ರೀಹರಿಯೆ ಮಹ ಮಾರೆತವ ಚರಿಸಿದ ಶ್ರೀಪಾದ ಯಚ್ಚರಿಕೆ ಯಚ್ಚರಿಕೆ 2

ತಪಚರಿನಿಯರ ಡೃವತ್ತೂ ಷಣ್ಣವತಿ ಲಿಷ್ಟನೇ ಕಲ್ಪದ-ಲಿಲಾತವ್ಯ ವಾಯುಸಾಧನ ಮಾಡುವಾನಂದ e್ಞÁನ ಯೋಗ ಸಿದ್ಧಿಸಿ ಕೊಡುವ ಉದಾರ ಶ್ರೀಪಾದ ಯಚ್ಚರಿಕೆ ಯಚ್ಚರಿಕೆ 3

ಗುರುಪಿತಾಮಹ ಸಹಿತ ನದಿ ವಿರಜತೆಯಲಿ ಪ್ರಥಮ ಸ್ನಾನವಗೈದು ಶತಷಣ್ಣವತಿ ನವಮ ಕಲ್ಪದಲಿ ಪ್ರಧಾನ ವಾಯು ಪದ ಸ್ವೀಕರಿಪ ಹಂಸವಾಹನ ಶ್ರೀಪಾದ ಯಚ್ಚರಿಕೆ ಯಚ್ಚರಿಕೆ4

ಹಿಂದೆ ವಿರಜಸ್ನಾನದಿ ಅe್ಞÁನಾತ್ಮಕ ಲಿಂಗದೋಷನಿಶ್ಶೇಷ ಹೊಂದಿದ ಗುರುವಿರಾಜರ ವಾದದ್ವಯ ಯಚ್ಚರಿಕೆ ಯಚ್ಚರಿಕೆ 5

ನಿರ್ಜೀವ ನಿಷ್ಕ್ರಿಯಾ ದಗ್ಧಪಟದಪ್ಪಂತಿರುವ ದೇಹ ಲಿಂಗವ ನಿಮಿತ್ತ ಮಾತ್ರಕೆ ಹರಿಯಿಭಯಿಂ ಧರಿಸಿರುವ ಲಾತವ್ಯ ಗುರುಪಾದ ಯಚ್ಚರಿಕೆ ಯಚ್ಚರಿಕೆ6

ಮುಕ್ತ ಅಮುಕ್ತಿ ಭೇದ ತೋರ್ಪದಕೆ ಶಿರಿಯಿಂದನದಿ ಶಾಲ್ಮಲ ವಾಸಿಯ ಶ್ರೀಪಾದ ಯಚ್ಚರಿಕೆ ಯಚ್ಚರಿಕೆ 7

ದ್ವಸ್ತ ದುರಾಗಮಿ ಶ್ರೀರಾಜಗುರು ಪಾದಕೆಚ್ಚರಿಕೆ 8

ಅe್ಞÁನ ಅಹಂಕಾರ ಭಯ ಮೋಹ ವಿಸ್ಮøತಿ ದುಃಖಾದಿಬಂಧನ ಕಳೆವ ಪ್ರಭುವಾದಕೆಚ್ಚರಿಕೆ 9

ಆನಂದ ಮಯದವುಷಾರಾಗಿದ ಭಾವಿ ಭಾರತಿ ಪತಿ ಶ್ರೀಪಾದ ಯಚ್ಚರಿಕೆ ಯಚ್ಚರಿಕೆ 10

ಬ್ರಹ್ಮಾಂಡಗತ ತ್ರಿವಿಧ ಜೀವರ ಚತುರ್ವಿಧಶರೀರದಿಯಿದ್ದವರ ಸಾಧನವಾ ಮಾಡಿಸಿ ಜೀವರ ಸುಖದುಃಖಗಳಿಂತಾ ಬದ್ಧರಾಗದೆ ಪೂರ್ಣ ನಿರ್ಲಿಪ್ತರಾಗಿರುವಶ್ರೀಪಾದ ಯಚ್ಚರಿಕೆ ಯಚ್ಚರಿಕೆ11

ತ್ರಿವಾರ ವಿರಜ ಸ್ನಾನವ ಮಾಡ್ವ ಸೌಭಾಗ್ಯ ಪ್ರಾರಬ್ಧಪೊಂದಿರುವ ಗುರು ವಾದಿರಾಜರ ಶ್ರೀಪಾದ ಯಚ್ಚರಿಕೆ ಯಚ್ಚರಿಕೆ 12

ಸತ್ವ ಜೀವರ ಮೋಕ್ಷ ಪ್ರಾಪ್ತಿಗೆ ವಿರಜ ನದಿಯಲಿಸ್ನಾನ ಮಾಡಿಸಿ ಜೀವಸತ್ವರ ಮೋಕ್ಷಕ್ಕಿಡುವ ನಿವ್ರ್ಯಾಜ ಶ್ರೀಪಾದ ಯಚ್ಚರಿಕೆ ಯಚ್ಚರಿಕೆ 13

ಸುಜೀವರ ಅನಾದಿ ಲಿಂಗ ಅe್ಞÁನ ಸ್ವರೂಪ ದೇಹ-ಭಂಗಿಸುವ ಶ್ರೀರಮಾತ್ಮಕ ವಿರಜ ನದಿಯಲಿ ಸ್ನಾನ-ಮಾಡಿ ಸ್ವಲಿಂಗ ವಿಶಿಷ್ಟವಾದ ಅe್ಞÁನದಿಂ-ವಿರಹಿತರಾದವರ ಶ್ರೀಪಾದ ಯಚ್ಚರಿಕೆ ಯಚ್ಚರಿಕೆ 14

ಆನಂದವ ವೃಷಭಾವಿ ಆನಂದ ತೀರ್ಥ ಶ್ರೀಪಾದ ಯಚ್ಚರಿಕೆ ಯಚ್ಚರಿಕೆ 15

ತ್ರಿವಿಧ ಜೀವರಲಿಯಿದ್ದು ತ್ರಿವಿಧಸಾಧನ ಮಾಡಿಸುವ ಭಾವಿ ವಾಯುನಾಮಕ ನತ್ತಾ ಪ್ರದ ಲಾತವ್ಯವಾಯು ವಾದಿರಾಜ ಮಧ್ವ ಮುನಿ ಶ್ರೀಪಾದ ಯಚ್ಚರಿಕೆ ಯಚ್ಚರಿಕೆ 16

ಆಯಾಯರ ಜೀವರ ಚಲನವಲನಾದಿ ವ್ಯಾಪಾರ ಮಾಡಿಸುವ ಭಾವಿ ಪ್ರಾಣನಾಮಕ ಭೀಷ್ಟಾಪ್ರದ ವಾದಿರಾಜಗುರುಪಾದಯಚ್ಚರಿಕೆ ಯಚ್ಚರಿಕೆ 17

ಚತುರ್ವಿದ ಶರೀರಗಳಲಿದ್ದು ಸಂರಕ್ಷಿಸುವ ಭಾವಿ ಧರ್ಮನಾಯಕಧಾರಣಪ್ರದ ಶ್ರೀ ಗುರುರಾಜರಶ್ರೀಪಾದ ಯಚ್ಚರಿಕೆ ಯಚ್ಚರಿಕೆ 18

ಪ್ರಭುತ್ವವಾರ್ತೈಸಿಜೀರರ ಅವರವರ ಸ್ವರೂಪಯೋಗ್ಯಗತಿ ಕೊಡುವ ಭಕ್ತಿ ಮುಕ್ತಿ ಪ್ರದ ಭಾವಿ ಭಾರತೀ ರಮಣ ಶ್ರೀಪಾದ ಯಚ್ಚರಿಕೆ ಯಚ್ಚರಿಕೆ 19

ದೇವೋತ್ತಮ ಲಾತ ವಾಯುಸ್ವನಾಮಕೆ ಭಗವಂತಗೇ ನಿತ್ಯನ್ವ ಭಕ್ತರ ಪಾಪ ಮನ್ನಿಸುವಂತೆ ಪ್ರಾರ್ಥಿಸಿ ತಾವು ಮನ್ನಿಸಿ ಕ್ಷಮಿಸುವಲ್ಲಿ ಕ್ಷಮಾ ಸಮುದ್ರರಾದ ಶ್ರೀಗುರುಪಾದಯಚ್ಚರಿಕೆ ಯಚ್ಚರಿಕೆ 20

ಪುಣ್ಯ ಪ್ರದಾನ ಮಾಡುವಲ್ಲಿ ಜೀವರಿಗೆ ಪರಮ ದಯಾಳು ಆರ್ತರಿಗೆ ದಯತೋರುವ ಕೃಪಾನಿಧಿ ಸಜ್ಜನರ ದೋಷ ವಿಚಾರದಿ ಮಹಾ ಸಹಿಷ್ಣುಗಳಾದವರ ಶ್ರೀಪಾದ ಯಚ್ಚರಿಕೆ ಯಚ್ಚರಿಕೆ 21

ಸಾತ್ವಿಕ ಶಿಖಾಮಣಿ ಸಕಲ ತಾತ್ವಿಕ ದೇವತಾ ರಂಜಕ ಆಹ್ಲಾದಕರ ದಾನವ ಭಂಜಕ ಸಂಹಾರ ಕರ್ತರಾದ ಕಾರಣ ಭಾವಿ ಪ್ರಭಂಜನ ವರವಾಜ್ಯರಾದವರ ಶ್ರೀಪಾದ ಯಚ್ಚರಿಕೆ ಯಚ್ಚರಿಕೆ 22

ಸರ್ವದಾ ಅನ್ಯ ಜೀವರು ಕಾಣದಾ ಅಸಾಧಾರಣ ಗುಣ ಕ್ರಿಯಾ ಸ್ವರೂಪರಾದ ವೇದ ಪ್ರತಿಪಾದ್ಯರಾದುದರಿಂದ ಮಹಂತರೆಂದು ಕರೆಸುವ ಭಾವಿ ವಾಯುವಿನ ಶ್ರೀಪಾದ ಯಚ್ಚರಿಕೆ ಯಚ್ಚರಿಕೆ23

ಅವರವರ ಸಾಧನಗಳ ಪೂರೈಸಿ ಕೊನೆಗವರ ನಿಜಗತಿ ಪ್ರವರಾದ ಸರ್ವ ಜೀವರಂತರ್ಯಾಮಿ ಸಕಲ ಗುಣ ಸದ್ಧಾಮ ಭಾವಿ ಮರುತ ಗುರುವಾದಿರಾಜರ ಶ್ರೀಪಾದ ಯಚ್ಚರಿಕೆ ಯಚ್ಚರಿಕೆ 24

ಬರುವ ಜಗತ್ತಿನ ಸರ್ವ ಜೀವರಿಗೆಲ್ಲ ಜೀವನ ಪ್ರಾಣ- ವಾಗಿರುವ ಜೀವೋತ್ತಮ ಶ್ರೀ ಭಾವಿ ಬ್ರಹ್ಮ ಮರುತ ವಾದಿರಾಜರ ಶ್ರೀಪಾದದ್ವಯ ಯಚ್ಚರಿಕೆ ಯಚ್ಚರಿಕೆ 25

ಸಕಲ ಜೀವರ ಸಂಜೀವರಾದ ಯಲ್ಲ ಜೀವರ ಜೀವ ಯಲ್ಲಪ್ರಾಣಿಗಳ ಪ್ರಾಣರಾಗಿ ಪ್ರಾಣೆಂದು ಕರೆಸುವ ಭಾವಿ ಮುಖ್ಯ ಪ್ರಾಣ ವಾದಿರಾಜರ ಗುರುಪಾದಕೆಚ್ಚರಿಕೆ 26

ಸದಾಸರ್ವತ್ರ ಭಗವದ್ರಷ್ಟøಗಳಾದ ಬ್ರಹ್ಮದೇವರ ಭೃತ್ಯಣ ಜೀವ ಪರ್ಯಂತ ವ್ಯಾಪ್ತರಾದ ಆಯಾ ಸ್ಥಳದಿದ್ದು ಆಯಾ ಜೀವರ ತಕ್ಕ ವ್ಯಾಪಾರ ಮಾಡುವ ಭಾವಿ ಪೂರ್ಣಪ್ರಜ್ಞರೆನಿಸಿರುವ ಶ್ರೀಪಾದ ಯಚ್ಚರಿಕೆ ಯಚ್ಚರಿಕೆ 27

ನಾರಾಯಣನ ತೆರದಿ ಬ್ರಹ್ಮಾಂಡದಲಿ ವಿಶಿಷ್ಟ ಚೇಷ್ಟಾದಿಗಳ ಮಾಡಿ ತದರ್ಥಾ ಅಂದರೆ ಅರ್ಥನಾರಾ-ಯಣನೆಂದು ಕರೆಸಿ ಆತ್ಮಾವೈಪುತ್ರ ನಾಮಾಸಿಯಂಬಶ್ರುತ್ಯೋಕ್ತಿಯಂತೆ ತನ್ನಿಂದ ಜನಿಸಿದ ಶ್ರೀ ವಾಸುದೇವ-ನೆಂಬ ಪ್ರಸಿದ್ಧ ನಾಮವ ಪಡೆದು ಶ್ರೀವಾಸುದೇವನು ತಾನೇ ಅಷ್ಟಾಂಶಗಳಿಂದ ಯಿವರಲ್ಲಿ ಸ್ಥಿರ ಸ್ಥಾಯಿಯಾಗಿದ್ದು ಇವರಿಂದ ಅಷ್ಟು ಕಾರ್ಯಗಳ ಮಾಡಿಸುವ ಮುಂದೆ ಭಾವಿ ವಾಯಾವೆನಿಸಿದವರ ಶ್ರೀವಾಸುದೇವಗೆಯಿವರು

ಸಾಕ್ಷಾತ್ರ್ಪತಿಬಿಂಬರಾದ ಕಾರಣ ಭಾವಿ ಮುಖ್ಯ ಪ್ರತಿಬಿಂಬ-ರೆಂದೆನಿಸಿಕೊಂಡ ಗುರುವಾದಿರಾಜ ವಿಭುಪಾದಕೆಯಚ್ಚರಿಕೆ ಯಚ್ಚರಿಕೆ 28

ಇಂಥ ಶ್ರೀ ಭಾವಿ ಮಸರುತ ಶ್ರೀ ವಾದಿರಾಜರ ಶ್ರೀ ಹರಿಯು ಇಂದಿರಾದೇವಿಯಲಿ ಬಹುಪ್ರೇಮದಿಂದಲಿ ಪಡದು ತನ್ನ ಬಲ ತೊಡೆಯ ಮೇಲೆ ಏರಿಸಿ ಕೊಂಡಿವರಿಗೆ ನಿತ್ಯ ಸಹ ಭೋಜನ ವೀವಾ ಈ ಸಹ ಭೋಜನ ಭಾವಿ- ವಾಯು ಬ್ರಹ್ಮಪದ ಪ್ರಾಪ್ತರಿಗೂ ಮೋಕ್ಷದಲಿ ಶ್ರೀಹರಿಯ ಸರ್ವಾಂಗ ಸಾಯುಜ್ಯಭೋಗ ಪೊಂದುವರಿಗೂ ಶ್ರೀಗುರು ವಾದಿರಾಜರಿಗೆ ಶ್ರುತಿಯಲ್ಲಿ ಈ ಚಿನ್ಹೆಕಂಡ ಕಾರಣದಿಂದ ಸರ್ವಾಂಗ ಸಾಯುಜ್ಯ ಸಹ ಭೋಜನದ ಭೋಗ ಹೊಂದುವ ಭಾವಿ ಮರುತ ಶ್ರೀಲಾತವ್ಯ ವಾಯು ಗುರು ಮಧ್ವ ಮುನಿಯ ಶ್ರೀಪಾದ ಯಚ್ಚರಿಕೆ ಯಚ್ಚರಿಕೆ 29

ಈ ಲಾತವ್ಯವಾಯು ಶ್ರೀ ಜಯಾವತಿ ಸಂಕರ್ಷಣ - ಸಂಭೂತ ರಾಗುವರು ಪಿತನಂತೆ ಅಸಾಧಾರಣ ಸೌಂದರ್ಯ ಶರೀರ ಉಳ್ಳವರು ಬಿಂಬ ಸೌಂದರ್ಯಗಳೆಲ್ಲ ಪ್ರತಿಬಿಂಬ - ದಲೀಲಿ ಪ್ರಕಾಶಮಾನವಾಗಿ ಸದದ ಕಂಗೊಳಿಸುವದು ಅದರಿಂದ ಭಗವದಪರೋಕ್ಷಗಳು ಶ್ರೀಮಾನ್ಮಧ್ವಮತ-ದ್ಧಾರಕರು ಗುರು ಸಾರ್ವಭೌಮರು ಧೀರರು ಸಂಪೂರ್ಣ ಲಕ್ಷಣ ಚಣ ಸೌಂದರ್ಯ ಸಮುದಯ ಸದನ ಪೂರ್ಣ ಚಂದ್ರವದನರು ಮೋಕ್ಷ ಸಾಮ್ರಾಜ್ಯ ನಿರ್ದುಷ್ಟ ಆನಂದ ಸುಖಸ್ವರೂಪರು ಪರಮ ಪುರುಷಾರ್ಥ ಪಾತ್ರಗಳು ಪುಣ್ಯ ಸ್ವರೂಪ ಪಂಚ ರೂಪಾತ್ಮಕ ಹರಿಯೆ ಪಂಚ ವೃಂದಾವನ ಸ್ವರೂಪದಿಯಿರುವ ರಂಜಪುಣ್ಯ ವೃಂದಾವನದಿ ವಿರಾಜಿಸಿ ಪಂಚ ಪುಣ್ಯ ಧಾರೆಯೆರೆವ ಪಂಚಪ್ರಾಣರಾದ ವಾದಿಗಳ ಪಲ್ಮುರಿವ ವಾದಿರಾಜಮಧ್ವ ಮುನಿಯ ಶ್ರೀ ಭಾವೀ ಭಾರತೀದೇವಿ ತನ್ನ ಮೃದು ಕೋಮಲ ತೊಡೆಯ ಮೇಲೆ ಪತಿಯ ಶ್ರೀಪಾದಪದ್ಮದ್ವಯವಿಟ್ಟು ವತ್ತೂವ ಅe್ಞÁನ ತಿಮಿರಕೆ ಮಾರ್ತಾಂಡ ವಾದ e್ಞÁನಾನಂದ ದಾಯಕ ಶ್ರೀಗುರುಪಾದ ಯಚ್ಚರಿಕೆ ಯಚ್ಚರಿಕೆ30

ಜಗಜ್ಜೀವನಗಳಿಗೆ ಮುಖ್ಯ ಕಾರಣ ಪ್ರಾಣ ಆ ಪ್ರಾಣವಿಲ್ಲದಿರೆ ಸ್ವತಃ ಚಲಿಸಲು ಅಸಮರ್ಥ ಸರ್ವ ಜಗತ್ತಿಗೆ ಪ್ರಾಣ ವಿe್ಞÁನ ಪ್ರಾಣಾಗ್ನಿ ಶಬ್ದವಾಜ್ಯ ಈ ಭಾವಿಮುಖ್ಯ ಪ್ರಾಣ ಜಗಜ್ಜೀವನಗಳಿಗೆ ತಾನೇ ಮುಖ್ಯ ಪ್ರಾಣರೂಪ ಹೀಗೆಂದು ಬಳಿತ್ಥಾ ಸೂಕ್ತ ಅಗ್ನಿ ಸೂಕ್ತದಲಿ ಉಕ್ತ ಈ ಸೂಕ್ತಿಗಳಿಂದ ಪ್ರತಿಪಾದ್ಯರಾದ ಜಗನ್ನೇತ್ರಜಗಜ್ಜೀವನರಾದ ಪಂಚಪ್ರಾಣ-ರೂಪಾತ್ಮಕ ಶ್ವಾಸನಿಯಾಮಕ ಸೋದೆಪುರವಾಸಿ ಭೂತರಾಜರ ಹೃನ್ಮಂದಿರ ವೇದ್ಯ ವೇದ್ಯನುತ ಅಹಿಪ ಖಗಪ ಉಮೇಶಾದಿ ಸುರರಿಗೆ ಚಿಂತಿಸಲು ಅಳವಲ್ಲದ ಅಗಮ್ಯ ಮಹಿಮ ಶ್ರೀ ಪ್ರಭು-ವಾದಿರಾಜರ ನಿರ್ದೋಷ ಶ್ರೀಪಾದ ಯಚ್ಚರಿಕೆ ಯಚ್ಚರಿಕೆ 31

ಜಿತಣಮ ಸರ್ವಜ್ಞ ಅಶೇಕ್ಷ ಸಂಪದ್ವಿಶಿಷ್ಟ ಸದ್ಗುಣ ಭರಿತ ಪೂರ್ಣ ತೃಪ್ತ ನಿಶ್ಚಲ ಭಕ್ತ ದೃಢವ್ಯೆರಾಗ್ಯಶಾಲಿಚಿರಂಜೀವಿ ಶ್ರೀ ಗುರುವಾದಿರಾಜರ ಶ್ರೀಪಾದ ಪದ್ಮ ನಖರೇಣುಗಳಿಗೆ ಯಚ್ಚರಿಕೆ ಯಚ್ಚರಿಕೆ 32

ಸರ್ವದಾ ಸ್ತ್ರೀರೂಪ ಧರಿಸಿ ಹರಿಯೊಡನೆ ಪರಿ ಪರಿ ಕ್ರೀಡೆ-ರಮಿಸಿ ಆ ಆನಂದ ಶ್ರೀ ಹರಿಗೆ ಅರ್ಪಿಪ ಗುರುವಾದಿರಾಜಶ್ರೀಪಾದಂಗಳ ಶ್ರೀಪಾದ ಯಚ್ಚರಿಕೆ ಯಚ್ಚರಿಕೆ 33

ಕರುಣಾಳು ತಾ ನಿತ್ಯ ತನ್ನ ಪದ ಜೀವಿಗಳಲಿ ಶ್ವಾಸೋಚ್ಛ್ವಾಸ ಚರಿಸಿ ಆಚರಿಸಿ ದಾರ್ವಾನಾತ್ಮಕ ಶ್ರೀ ತುಳಸಿದಳಗಳು ನಿತ್ಯ ಶ್ರೀವರ ಮಾಲೇಶೆಗೆ ಅರ್ಪಿಪ ಭಾವಿಲಾಳೂರ ಶ್ರೀ ಗುರುರಾಜರ ಪಾದಕೆ ಯಚ್ಚರಿಕೆ ಯಚ್ಚರಿಕೆ34

ತನ್ನ ಶ್ರೀಪಾದ ರಜ ಧೆಣಿಯಲಿ ಧರಿಸಿ ಜೀವಿವರ ಹಯವದನ ಪಾದಕರ್ಪಿಸುವೆನೆಂದು ಪಣತೊಟ್ಟು ಜೀವನ್ಮುಕ್ತರನು ಮಾಡಿ ಪರಿಪಾಲಿಪೆನೆಂದು ಧೀರ ವೃಂದಾವನದಿ ಮೆರೆವ ಶ್ರೀಗುರು-ವಾದಿರಾಜರ ಶ್ರೀಪಾದಕೆ ಯಚ್ಚರಿಕೆ ಯಚ್ಚರಿಕೆ 35

ಶ್ರೀ ತ್ರಿವಿಕ್ರಮನ ರಥೋತ್ಸವಕೆ ಬಂದವರಲಿ ಒಂದೊಂದಂಶ ಸುರರ ಪ್ರವೇಶಿಸಿ ಅವರಲ್ಲಿ ತನ್ನೊಂದಂಶದಿಂದ ಸುರರ ಸಾಧನ ಮಾಡಿ ಸುರನರರ ಕೃತ ಕೃತ್ಯರೆನಿಸಿ ಶಿರಿ ಹಯ-ವದನನ ಕಾಣ್ವ e್ಞÁನ ಭಕುತಿ ವೈರಾಗ್ಯ ನಿಷ್ಠಿಯನಿತ್ತು ಬ್ರಹ್ಮ ನಿಷ್ಯ್ಠೆ ಕರೆನು ಮಾಳ್ವ ಶ್ರೀ ಗುರು ಶ್ರೀಪಾದಕೆಯಚ್ಚರಿಕೆ ಯಚ್ಚರಿಕೆ 36

ಶ್ರೀ ಧವಳ ಗಂಗೆಯ ಸ್ನಾನ ಮಾಡುವ e್ಞÁನವೀವ ಶ್ರೀ ಗುರು-ಪಾದಕೆ ಯಚ್ಚರಿಕೆ ಯಚ್ಚರಿಕೆ 37

ಈ ಪದವ ಭಕ್ತಿ ಭರಿತದಿಂದಾರು ಪಠಣ ಮಾಡ್ವರೋಸತತ ಬರೆದ ಈ ವಾಲಿ ಆರಮನೆಯಲ್ಲಿಹುದೋ ಸತತನಿರುತ ಪಠಣೆ ವ್ರತ ಮಾಡಿದ ಪುಣ್ಯವು ದೊರೆವುದುಸಂಪೂರ್ಣ ಮನೋರಥ ಸಿದ್ಧಿಪುದು ವರ ಬ್ರಾಹ್ಮಣವೇದವೇದ್ಯ ಶ್ರೀಮಂತನಾಹೋನು ಧುರದಿ ಕಾದೂವ ಕ್ಷತ್ರಿಯನಿಗೆ ವರಪರಾಕ್ರಮ ಬರುವುದು. ವೈಶ್ಯನಿಗೆ ಧನದ ಕೋಶಲಭಿಸುವುದು, ಚರಣ ಶೂದ್ರನಿಗೆ ಮಹಾಕೃಷಿಧನ ಪ್ರಾಪ್ತಿಯಾಗುವುದು. ಮಹಾರೋಗಿ ನರ ಆರೋಗ್ಯನಾಗುವನು. ಪುತ್ರಾರ್ಥಿಗೆ ಪುತ್ರ ಲಾಭವಾಗುವದು. ಯೆರಡೊಂದು ಧರ್ಮಕ್ಕಿಲ್ಲ ಅನುಕೂಲವಾದ ದ್ರವ್ಯಆಗಮಿಸುವುದು. ಪರಮ ಮಂಗಳ ಮೋಕ್ಷಾರ್ಥಿಗೆ ಮೋಕ್ಷ ಲಭ್ಯವಾಗುವುದು. ಸ್ಮರಿಸುತ ವಾದಿರಾಜರ ಶ್ರೀಪಾದಅವರ ನಾಮವನು ಸ್ಮರಿಸುತ್ತ ಪ್ರಯಾಣ ಮಾಡಲು ಸರ್ವದಾವಿಜಯಪ್ರದನಾಗಿ ತಿರುಗಿ ತೀವ್ರದಿಂದ ಬರುವನು. ನರರು ಈ ಪರಿಭಕುತಿಯಿಂದ ಮೂರಾವರ್ತಿ ಓಂ ನಮೋ ಭಗವತೇ ಶ್ರೀ ವಾದಿರಾಜಾಯಯೆಂದು ವರಮಂತ್ರದಿಂದ ಗಂಧಲೇಪನ ಮಾಡಿ ಪಣೆಗೆ, ಸ್ಮರಿಸಿತಿಲಕವನಿಡಲು ಲೋಕರಾಜುವಳತ್ ನಿರುವ ಸದಾಚಾರಿಯಾಗುವನು. ಸರ್ವತ್ರ ಸಭೆಯಲ್ಲಿ ಜಯವು ಬರುವ ವ್ಯವಹಾರ ದ್ಯೂತಾದಿ ವ್ಯಸನದಿಂದ ಮುಕ್ತಾನಾಗುವನು. ಕರೆಕರೆಗೊಳಿಸುವ ಸಿಂಹ, ವ್ಯಾಘ್ರದುಷ್ಟ ಮೃಗಗಳ ಭಯದಿಂದ ದೂರವಿರುವ ಸರ್ವಕಾರ್ಯಗಳಿಂದಸರ್ವತ್ರ ವಿಜಯಶಾಲಿಯಾಗುವನು. ನಿಸ್ಸಂದೇಹವಾಗಿ ಸರ್ವಾಭೀಷ್ಟ ಶಿದ್ಧಿಯಾಗುವುದು. ವರ ಬ್ರಾಹ್ಮಣ ಕ್ಷತ್ರಿಯವೈಶ್ಯ ಶೂದ್ರರಿಗೆ ವಿಶೇಷ ಸಂಪತ್ಕರವಾಗುವುದು. ಪತಿವ್ರತಸ್ತ್ರೀಯರಿಗೆ ನಿರುತ e್ಞÁನ ಭಕ್ತಾದಿಗಳಯೀವುದು ಸತ್ಯ ಸತ್ಯಾ ಹರಿ, ವೇಷ ಧಾರಿ ಶ್ರೀವಾದಿಗುರುರಾಜರ ನಾಮ ಪಠಿಸಲು ಹರಿಯ ಮಂಗಳ ನಾಮದ ಮಹಿಮೆ ತಿಳಿಸಿ ನಿತ್ಯಾ ಹರಿ ವಲಿಮೆ ಯಾಚಿಸಿ ಹರಿಯ-ವಲಿಸುವುದು ಸತ್ಯ. ವರ ವಾಸುದೇವ ಗುರು ತಂದೆವರದಗೋಪಾಲವಿಠಲ ನಿರುತ ವಿe್ಞÁನದಲಿ ಚರಿಸಿದ ಈ ಪರಿ ಸ್ತೋತ್ರ ಮಾಡಿರೈ e್ಞÁನಿ-ಗಳಾದವರೆಲ್ಲ ಶ್ರೀ ಗುರುಪಾದದೆಚ್ಚರಿಕೆಯಲಿ ತಂದೆವರದಗೋಪಾಲವಿಠಲ 38

****