Showing posts with label ವೈಕುಂಠವಾಸ ಹರಿ ಶ್ರೀ ಕಂಠನುತ ನಿನ್ನ venkatesha stotra 2 gopalakrishna vittala. Show all posts
Showing posts with label ವೈಕುಂಠವಾಸ ಹರಿ ಶ್ರೀ ಕಂಠನುತ ನಿನ್ನ venkatesha stotra 2 gopalakrishna vittala. Show all posts

Monday 2 August 2021

ವೈಕುಂಠವಾಸ ಹರಿ ಶ್ರೀ ಕಂಠನುತ ನಿನ್ನ venkatesha stotra 2 ankita gopalakrishna vittala

 venkatesha stotra 2

ವೈಕುಂಠವಾಸ ಹರಿ ಶ್ರೀ ಕಂಠನುತ ನಿನ್ನ

ಸಾಕಾರರೂಪ ತೋರೋ

ಯಾಕಿಂತು ನಿರ್ದಯವು ಈ ಕುಮತಿ ಮೇಲಿನ್ನು

ನೀ ಕರುಣಿಸೀಗ ಕಾಯೊ 1

ಆಕಾಶರಾಜನ್ನ ವಾಕು ಲಾಲಿಸುತ ನೀ

ಬೇಕೆಂದು ಬೆಟ್ಟದಲ್ಲಿ

ಲೋಕದ ಜನರನ್ನು ಸಾಕುತ್ತ ನಿಂತಿರುವ

ಆಕಳ ಕಾಯ್ದ ದೇವಾ 2

ಕನಸು ಮನಸೀನಲ್ಲಿ ವನಜಾಕ್ಷ ನಿನ ದಿವ್ಯ

ಘನರೂಪವನ್ನೆ ತೋರೊ

ಅನುಮಾನವ್ಯಾಕಿನ್ನು ಮುನಿವಂದ್ಯ ಎನ್ನನೀ

ಅನುರಾಗದಿಂದ ಸಲಹೋ 3

ವೆಂಕಟಗಿರಿನಿಲಯ ಮಂಕುಮತಿಯ ಬಿಡಿಸಿ

ಸಂಕಟಗಳನೆ ಹರಿಸೊ

ಶಂಖಚಕ್ರಾಂಕಿತನೆ ಪಂಕಜಪಾದ ಮನ

ಪಂಕಜದೊಳಗೆ ತೋರೊ 4

ಪದ್ಮಾಕ್ಷ ಪದ್ಮಮುಖ ಪದ್ಮಾನಾಭನೆ ನಿನ್ನ

ಪದ್ಮ ಪಾದವೆ ಗತಿಯೊ

ಪದ್ಮಾವತಿಪ್ರಿಯ ಪದ್ಮಹಸ್ತಾನೆ ನಿನ್ನ

ಪದ್ಮಾದಿ ನಿನ್ನ ತೋರೊ 5

ಸೃಷ್ಟಿ ಸ್ಥಿತಿ ಲಯಕೆ ಕರ್ತಾನೆ ಎನ್ನ ಮನ

ದಿಷ್ಟಾವ ಸಲಿಸಿ ಕಾಯೋ

ಶಿಷ್ಟಾರ ಸಂಗವನು ಕೊಟ್ಟೂ ನಿನ್ನಯ e್ಞÁನ

ಥಟ್ಟಾನೆ ಮನಕೆ ತೋರೊ 6

ತತ್ವಾಧಿಪತಿಗಳೊಳು ವ್ಯಾಪ್ತಾನಾಗಿರುತಿರ್ದು

ಮತ್ತಲ್ಲ ಕರ್ಮ ಮಾಳ್ಪೆ

ಎತ್ತಾ ನೋಡಿದರು ಸುರರರ್ಥಿಯಿಂ ಸ್ತುತಿಸುವರೊ

ನಿತ್ಯಾಮೂರುತಿ ನೀ ಎಂದೂ 7

ನಿಗಮಾದಿ ವೇದದಿಂ ಬಗೆಬಾಗೆ ಸ್ತುತಿಸಿ ಕೊಂ

ಬಗಣೀತ ಮಹಿಮ ದೇವಾ

ಖಗರಾಜ ವಾಹನನೆ ನಗೆಮೊಗದ ಚೆಲುವ ಪ

ನ್ನಗಶಾಯಿ ಸಲಹೊ ಎನ್ನ 8

ನಿತ್ಯಾ ತೃಪ್ತಾನೆ ಹರಿ ನಿತ್ಯಾ ಪ್ರಾಪ್ತಾನೆ ಸಿರಿ

ನಿತ್ಯಾ ವಿಯೊಗಿ ದೇವಾ

ನಿತ್ಯಾ ಮುಕ್ತಾಶ್ರಯನೆ ನಿತ್ಯ ನಿರ್ವೀಕಾರ

ನಿತ್ಯಾ ಕಲ್ಯಾಣಪೂರ್ಣ 9

ಜೀವಾಂತರಾತ್ಮಕನೆ ಜೀವಾ ನಿಯಾಮಕನೆ

ಜೀವಾದಿ ಭಿನ್ನ ದೇವಾ

ಜೀವೇಶ ಜೀವರಿಂ ಸೇವ್ಯಾನೆಂದೆನಿಪ್ಪೆ

ಜೀವಾರ ಕರ್ಮಕರ್ತ 10

ಸತ್ವಾರಜೋತಮದಿ ನಿತ್ಯಾ ಸೃಷ್ಟೀಸುತಲಿ

ವ್ಯಾಪ್ತಾನಾಗಿರುವೆ ಜಗದಿ

ಸತ್ಯಾಮೂರುತಿ ಜಗತ್ಕರ್ತಾ ಕಾರಣರೂಪ

ಸತ್ಯಾಧಿಪತಿಯ ವಂದ್ಯ 11

ಆದಿಯಲಿ ಅಸುರ ತಾ ವೇದ ಕದ್ದೊಯ್ಯೆ

ಛೇದೀಸಿ ತಮನ ಕೊಂದೂ

ಮೋದದಲಿ ನಿಗಮ ತಂದಾದರದಿ ಸುತಗಿತ್ತೆ

ಶ್ರೀಧರನೆ ಮಚ್ಛರೂಪಿ 12

ಸುರರೆಲ್ಲ ಕಂಗೆಟ್ಟು ಮೊರೆ ಇಡಲು ನಿನ್ನ ಬಲು

ಕರುಣೆಯಿಂದಾಲಿ ಬಂದೂ

ಗಿರಿ ಎತ್ತಿ ಅಮೃತವ ಸುರರೀಗೆ ತಂದಿತ್ತ

ವರ ಕೂರ್ಮರೂಪಿ ಸಲಹೊ 13

ಆದಿಹಿರಣ್ಯಾಕ್ಷ ಮೇದಿನಿಯ ಕದ್ದೊಯ್ಯೆ

ಛೇದೀಸಿ ಅವನ ಕಾಯಾ

ಆದರಿಸಿ ಧರಣಿಯನು ಆ ದಿವಿಜರಿಗೆ ಇತ್ತೆ

ಆದಿ ವರಾಹ ಕಾಯೊ 14

ದುಷ್ಟಾದಾನವ ಸುತನು ಅಟ್ಟೂಳಿಪಡಿಸುತಿರೆ

ಸೃಷ್ಟೀಶ ಪೊರೆಯೊ ಎನಲು

ಪುಟ್ಟಿ ನೀ ಸ್ಥಂಭದಲಿ ಕುಟ್ಟೀ ಅಸುರನನ್ನು

ಪುಟ್ಟಾನ ಕಾಯ್ದ ನೃಹರಿ 15

ಇಂದ್ರಾಲೋಕಾವನು ಬಲೀಂದ್ರಾನಾಕ್ರಮಿಸಿರಲು

ಪೇಂದ್ರಾ ನೀನಾಗಿ ಬಂದೂ

ಇಂದ್ರಾರಿಗೇಸುತಲ ಚಂದಾದಿತ್ತು ನೀ

ನಿಂದ್ರಾಗೆ ಸ್ವರ್ಗವಿತ್ತೆ 16

ಪಿತನ ಆಜ್ಞೇಗೆ ಪತಿವ್ರತೆ ಮಾತೆ ಶಿರವಳಿದು

ಮತಿವಂತನೆನಿಸಿ ಮೆರೆದೇ

ಖತಿಯಿಂದ ಕ್ಷತ್ರಿಕುಲ ಹತಗೈಸಿ ಮೆರೆದ ಅ

ಪ್ರತಿ ಭಾರ್ಗವಾನೆ ಕಾಯೋ 17

ಸೇತು ಬಂಧನಗೈದು ಖ್ಯಾತ ರಾವಣನೊರಸಿ

ಸೀತೇಯ ತಂದ ರಾಮಾ

ಮಾತೆ ವಚನಕಾಯ್ದೆ ವಾತಾತ್ಮಜನ ಪೊರೆದೆ

ಪ್ರೀತಿಯಿಂದೆನ್ನ ಕಾಯೊ 18

ವನದಲ್ಲಿ ನಿಂತು ಘನಧ್ವನಿಯಿಂದ ಕೊಳಲೂದಿ

ವನಜಾಕ್ಷಿಯರನೆ ಕಾಯ್ದೆ

ಮುನಿವಂದ್ಯ ಶ್ರೀ ಕೃಷ್ಣ ಮುನಿನಾರದಗೊಲಿದೆ

ಸನಕಾದಿ ವಂದ್ಯ ಸಲಹೋ 19

ತ್ರಿಪುರಾಲಲನೆಯಾರ ವ್ರತಭಂಗವನೆಗೈದು

ನಿಪುಣಾನೆಂದೆನಿಸಿ ಮೆರೆದೆ

ಕೃಪಣಾವತ್ಸಲ ಬುದ್ಧ ತ್ರಿಪುರಾರಿ ವಂದ್ಯ ಹರಿ

ಕೃಪೆಮಾಡಿ ಸಲಹೊ ಎನ್ನ 20

ಕಲಿಬಾಧೆ ವೆಗ್ಗಳಿಸೆ ಛಲದಿಂದ ದುಷ್ಟರನು

ತಲೆಯಾ ಚೆಂಡಾಡಿ ಮೆರೆದೆ

ಬಲವಂತ ಹಯವೇರಿ ಕಲಿದೈತ್ಯರನು ಕೊಂದೆ

ನಳಿನಾಕ್ಷ ಕಲ್ಕಿ ಕಾಯೊ 21

ಭಕ್ತಾವತ್ಸಲನಾಗಿ ಮುಕ್ತಾಜೀವರ ಕಾಯ್ವೆ

ಶಕ್ತಾವಂತನೆ ಸ್ವಾಮಿ

ಮುಕ್ತೀದಾಯಕ ನೀನೆ ಮುಕ್ತಾಶ್ರಯನು ನೀನೆ

ಮುಕ್ತಾರಿಗೊಡೆಯ ನೀನೆ 22

ಬಂದೇಯೊ ಭಕ್ತರನು ಚಂದಾದಿಂದಲಿ ಪೊರೆಯ ಬೇ

ಕೆಂದೂ ನೀ ನಾಗಗಿರಿಗೆ

ನಂದಾಕಂದಾನೆ ಹರಿ ಇಂದಿರೆಯರಸ ಬಹು

ಸುಂದಾರ ಶ್ರೀನಿವಾಸ 23

ಹಿಂದೇ ಮಾಡೀದ ಪುಣ್ಯ ಬಂದೂ ತಾ ಒದಗಿಗೋ

ವಿಂದಾನ ಗಿರಿಯ ಯಾತ್ರೇ

ಸಂದೀಸೆ ವೇಂಕಟನ ಸಂದಾರುಶನದಿಂದ

ಬೆಂದೂ ಹೋಗುವುದು ದುರಿತ 24

ಜಯ ಗುರುಗಳಂತರ್ಯ ಜಯ ನಾಗಶಯನ ಹರೆ

ಜಯ ವೆಂಕಟಾದ್ರಿನಿಲಯ

ಜಯ ತಂದೆ ಮುದ್ದುಮೋಹನ ದಾಸವರದ ಜಯ

ಜಯ ಪದ್ಮನಾಭ ಜಯ ಭೋ 25

ಸ್ವಾಮೀ ಕಾಸಾರದತಿ ಪ್ರೇಮಾದಿ ನೆಲಸಿ ಸುರ

ಕಾಮೀತವೀವ ಪ್ರಭುವೇ

ಸ್ವಾಮಿ ಶ್ರೀ ವೇಂಕಟನೆ ನೇಮಾದಿಂದಲಿ ಭಜಿಪೆ

ಕಾಮೀತವೀಯೊ ದೇವಾ 26

ಇಷ್ಟೂ ಬಿನ್ನಪವನ್ನು ಕೃಷ್ಣಾಮೂರುತಿ ಕೇಳಿ

ಕಷ್ಟಾವ ಬಿಡಿಸಿ ಕಾಯೋ

ದಿಟ್ಟಾ ಶ್ರೀ ಗೋಪಾಲಕೃಷ್ಣವಿಠ್ಠಾಲಾನೆ

ಶ್ರೇಷ್ಠಾ ಶ್ರೀ ಗುರುವರದನೇ 27

ಸೀತಾಪತಿವಿಠಲ ದಾಸಳ ನಿರ್ಯಾಣ ಪದ

266

ಪೋದೆಯ ತಾಯಿ ನೀನೀಗ ದಿವ್ಯ

ಮಾಧವನಾ ಪುರ ಸೇರಲು ಬೇಗ ಪ.

ಪುಟ್ಟಿದಾರಭ್ಯದಿ ನಿಷ್ಟೆನೇಮದೊಳಿದ್ದು

ಕಷ್ಟಪರಂಪರೆ ಸಹಿಸುತ ಜಗದಿ

ಹರಿಯ ಕರುಣದಿ ಗುರುಕೃಪೆ ಪಡೆದಿ 1

ಹಿರಿಯೂರೆನ್ನುವ ಪುರ ವರ ವೇದಾವತಿ ತೀರ

ಪರಮ ಸಾತ್ವಿಕರಲ್ಲಿ ಜನುಮ ತಳೆದಿ

ತುಳಸಿಯ ವರದಿ ಮುದ್ದಿನಿಂ ಬೆಳೆದಿ 2

ಶಿಷ್ಟ ಸಂಪ್ರದಾಯ ಕಟ್ಟಿನೊಳಗೆ ನಿನ

ಗಷ್ಟಮ ವರುಷದಿ ಮದುವೆಯ ಮಾಡಿ

ಹರುಷವಗೂಡಿ ಹರಿಯ ಕೊಂಡಾಡಿ 3

ಪತಿ ಕೃಷ್ಣರಾಯರು ಸತಿ ರುಕ್ಮಿಣೀಬಾಯಿ

ಹೆಸರಿನಿಂ ಬಾಳ್ವೆಯ ಬಹು ಅಲ್ಪಕಾಲ

ಕೊಟ್ಟನೆ ಸಿರಿಲೋಲ ಮುಸುಕಿತು ಮಾಯಜಾಲ 4

ಸಂಸಾರ ಕೈಕೊಂಡು ವಂಶಕೊಬ್ಬನ ಪಡೆದು

ಕಂಸಾರಿ ಕರುಣದಿ ಇರುತಿರೆ ನೀನು

ಪತಿವಿಯೋಗವನು ವಿಧಿ ತಂದೊಡ್ಡಿದನು 5

ಎರಡು ವರ್ಷದ ಮಗುವ ಕರದಲ್ಲಿ ಕೈಕೊಂಡು

ಪರಿಪರಿ ಕಷ್ಟದಿ ಶಿಶುವ ಬೆಳೆಸಿದೆ

ವಿದ್ಯೆ ಕಲಿಸಿದೆ ಪುತ್ರಗ್ಹರಸಿದೆ 6

ಒಬ್ಬ ಆ ಮಗನರ್ಥಿ ಸಂಸಾರವನೆ ಕಂಡು

ಉಬ್ಬಿ ಹರುಷಾದಲ್ಲಿ ಇರುತಿರೆ ನೀನು

ಮೊಮ್ಮಕ್ಕಳನು ಪಡೆದೆ ನಾಲ್ವರನು 7

ಪಟುತರ ಪ್ರಾಣೇಶ ಘಟಿಕಾಚಲಾವಾಸ

ಘಟಿಸುತ ಸ್ವಪ್ನದಿ ಸೇವೆಗೈಯ್ಯೆಂದು

ಅಭಯವನಂದು ಕೊಡಲು ದಯಸಿಂಧು 8

ಮರುದಿನ ಮನೆಯಲ್ಲೆ ಭರದಿ ಸೇವೆಯ ಕೊಂಡು

ಹರಿವಾಯುಗಳನಿಟ್ಟು ಸುತ್ತುವರಿಯುತ್ತ

ಎಡವಿ ಬೀಳುತ್ತ ಪ್ರದಕ್ಷಿಣೆ ಬರುತಾ 9

ಒಲಿದು ಆ ಭಕ್ತಿಗೆ ವರನೇತ್ರವಿತ್ತನು

ನಳಿನನಾಭನ ಭಕ್ತ ಘಟಿಕಾಚಲನಿಲಯ

ಭಾರತಿಪ್ರೀಯ ದಿವಿಜರ ಒಡೆಯ 10

ಭಕ್ತಿ ವಿರಕ್ತಿ e್ಞÁನವು ಚಿತ್ತದಿ ಮೂಡಿ

ಸೋತ್ತಮರಾದ ಶ್ರೀ ವಿಬುಧರ ದಯದಿ

ಮೋಕ್ಷಸಾಧನದಿ ದಿನಗಳ ಕಳೆದಿ 11

ಶ್ರವಣ ಕೀರ್ತನ ಸ್ಮರಣೆ ಮನನಾದಿಗಳನೆಲ್ಲ

ತವಕದಿ ಕೈಕೊಂಡು ಮೋದದಿ ಮೆರೆದಿ

ಕಷ್ಟವ ಮೆರೆದಿ ಹರಿಗುರು ದಯದಿ 12

ಪ್ರಥಮ ಯಾಮದಲೆದ್ದು ಜಿತಮನದಿಂದ ಶ್ರೀ

ಪತಿಯ ಸ್ತೋತ್ರಗಳನ್ನು ವದನದಿ ಸತತ

ಪಾಡಿ ಪೊಗಳುತ್ತ ರಾತ್ರಿ ಪರಿಯಂತ 13

ಉಚ್ಛಸ್ವರದಿ ನೀನು ಪಾಡಿದ್ಹಾಡುಗಳಿಂದು

ಅಚ್ಚಳಿಯದೆ ನಮ್ಮ ಸ್ಮರಣೆಯೊಳ್ನಿಂತು

ಹರುಷವನಾಂತು ಮರೆಯುವುದೆಂತು 14

ವೃದ್ಧಾಪ್ಯ ತಲೆದೋರೆ ಇದ್ದೊಬ್ಬ ಪುತ್ರನು

ಪದ್ಮನಾಭನ ಪುರ ಸೇರಿ ನಿನ್ನಗಲಿ

ದುಃಖದಿ ಬಳಲಿ ತೊಳಲಿದೆ ಬಳಲಿ 15

ಪೌತ್ರರಿಬ್ಬರು ನಿನ್ನ ಹೆತ್ತಮ್ಮನಂದದಿ

ಚಿತ್ತದಿ ತಿಳಿದಿನ್ನು ಸಲಹುತ್ತಿರಲು

ಹರಿದಯ ಬರಲು ದುಃಖ ಮರೆಯಲು 16

ಕಲ್ಯಾಣನಗರದಿ ಕಿರಿಯ ಮೊಮ್ಮಗನಿರೆ

ಆಹ್ಲಾದದಿಂದ ನೀನವನಲ್ಲಿ ಇರಲು

ಸದ್ಗುರು ಬರಲು e್ಞÁನವೆರೆಯಲು 17

ಹರಿದಾಸಕೂಟದ ವರ ಅಂಕಿತವ ಕೊಂಡು

ಗುರುಕರುಣವ ಪೊಂದಿ ನೀ ನಮಗೆಲ್ಲ

ಸನ್ಮಾರ್ಗಕ್ಕೆಲ್ಲ ಮೊದಲಾದೆಯಲ್ಲ 18

ಶ್ರೀ ತಂದೆ ಮುದ್ದುಮೋಹನದಾಸರ ದಯದಿ

ಸೀತಾಪತಿವಿಠ್ಠಲನ್ನ ಒಲಿಸಿದೆ

ಧ್ಯಾನದೋಳ್ತಂದೆ ಆನಂದಪಡೆದೆ 19

ಕಂಚಿ ಕಾಳಹಸ್ತಿ ಶ್ರೀ ರಂಗಯಾತ್ರೆಯ

ಸಂಚಿಂತನೇಯಿಂದ ಗೈದೆಯೆ ನೀನು

ಗಳಿಸಿದೆ ಇನ್ನು ಭಕುತಿಯ ಪೊನ್ನು 20

ಉಡುಪಿ ಮಂತ್ರಾಲಯ ಸೇತು ರಾಮೇಶ್ವರ

ಕಡು ಭಕ್ತಿಯಲಿ ತಿರುಪತಿ ಕ್ಷೇತ್ರ ಚರಿಸಿ

ಕಷ್ಟವ ಸಹಿಸಿ ಶ್ರೀ ಹರಿಗೆ ಅರ್ಪಿಸಿ 21

ಕಡುಕೃಪೆಯಿಂದಂದು ಕಣ್ಣನ್ನೆ ಕೊಟ್ಟಂತ

ಮೃಡಪಿತ ಘಟಿಕಾಚಲೇಶನ್ನ ಕೂಡಿ

ಕಣ್ತುಂಬ ನೋಡಿ ತನುವನೀಡಾಡಿ 22

ಅಂತರಂಗದ ಬಿಂಬ ಸರ್ವಾಂತರ್ಯಾಮಿ ಎಂ

ತೆಂಬಂಥ ಚಿಂತನೆ ಸಂತತಗೈದೆ

ಅಭಿಮಾನ ತೊರೆದೆ ದ್ವಂದ್ವ ಸಹಿಸಿದೆ 23

ವ್ರತನೇಮ ಜಪತಪ ಸತತದಿಗೈಯ್ಯುತ್ತ

ಕ್ಷಿತಿವಾರ್ತೆಗೆಳಸಾದೆ ಮನವನ್ನೆ ಸೆಳೆದು

ಹರಿಪಾದಕ್ಕೆರದು ಹಿತವನ್ನೆ ಮರೆದು 24

ಭಾಗವತಾದಿ ಸಚ್ಛಾಶ್ತ್ರ ಶ್ರವಣಗೈದು

ಜಾಗ್ರತಳಾದಿ ಭೂಸುರರ ಸೇವೆಯಲಿ

ಸೂಕ್ಷ್ಮಧರ್ಮದಲಿ ಪುಣ್ಯಗಳಿಸುತಲಿ 25

ಸತತಬಿಂಬಕ್ರಿಯ ವ್ರತವಂದೆ ಕೈಕೊಂಡು

ಜತನದಿ ಮರೆಯದೆ ಪ್ರತಿಕಾರ್ಯದಲ್ಲಿ

ಅರ್ಪಿಸಿ ಹರಿಯಲ್ಲಿ ಇದ್ದೆ ಮೋದದಲಿ 26

ಮುಖ್ಯಪ್ರಾಣನ ದಯ ಮುಖ್ಯಮಾಡುತ ಇನ್ನು

ಅಕ್ಕರೆ ಭಕ್ತಿಯ ತೋರಿದೆ ನೀನು

ಬೆನ್ನು ಬಿಡದವನು ನಿನ್ನ ಸಲಹಿದನು 27

ಭಾರತಿಪತಿ ಮುಖ್ಯಪ್ರಾಣಾಂತರ್ಗತನೆಂಬ

ವಾರುತಿ ಇಲ್ಲದ ವಚನವೆ ಇಲ್ಲಾ

ನಿನ್ನ ಈ ಸೊಲ್ಲ ಮರೆಯಲೊಶವಲ್ಲ 28

ಶ್ರೀ ರಾಮಚಂದ್ರನ ಆರಾಧನೆಯಗೈದು

ಸಾರತತ್ವವ ತಿಳಿದು ಸಾಧಿಸಿ ಪಥವ

ಸಹಸ್ರಾರು ಜಪವ ಗೈದೆ ತಪವ 29

ನೀ ಹಾಡಿದ ಸ್ತೋತ್ರ ನಿನ್ನ ಸನ್ಮಾರ್ಗವ

ನನ್ನೆಯಿಂದಲಿ ಎರೆದೆ ಹೆಣ್ಣು ಮಕ್ಕಳಿಗೆ

ಸ್ಮರಿಸುವರೀಗೆ ಸತ್ಕೀರ್ತಿಯದಾಗೆ 30

ಹರಿ ಗುರು ವರತತ್ವ ದಿವಿಜರಭಿಮಾನಿಗಳ

ನಿರುತದಿ ಚಿಂತಿಸಿ ಸಾಧನಗೈದೆ

ಕಾಲವ ಕಳೆದೆ ಹರಿಪಾದಕ್ಕೆರೆದೆÀ 31

ಬಿಂಬಾನು ಸಂಧಾನ ಚತುರಳಾಗಿ ನೀನು

ಸಂಭ್ರಮದಿಂದ ಶ್ರೀ ಮಧ್ವಶಾಸ್ತ್ರದಲಿ

ಮನಸ ನೀಡುತಲಿ ಸುಖ ಸುರಿಯಲಿ 32

ಒದ್ದು ತಾಪತ್ರಯ ಸದ್ಗುರು ಕೃಪೆ ಪೊಂದಿ

ಗೆದ್ದೆ ನೀ ಸುಲಭದಿ ಭವದ ಬಂಧನವ ಪಡೆದೆ

ಹರಿ ದಯವ ಕೊಟ್ಟಿತೆ ಮುದವ 33

ಪೇಳಲೋಶವೆ ಹೇ ದಯಾಳು ನಿನ್ನಯ ಗುಣ

ಬಾಳಿದೆ ಧರೆಯೊಳು ತೊಂಬತ್ತೈದೊರುಷ

ವೃದ್ಧಾಪ್ಯದೋಷ ನಿನಗಿಲ್ಲ ಲೇಶ 34

ಇಂದ್ರಿಯಂಗಳು ಎಲ್ಲ ಒಂದು ಕುಗ್ಗದೆ ಒಬ್ಬ

ರಿಂದಲು ಸೇವೆಯ ಕೊಳದೆ ಲವಲವಿಕೆ

ಯಿಂದಿರುವ ಬಯಕೆ ಸಲಿಸೀತೆ ಮನಕೆ 35

ಕಿರಿಯ ಮೊಮ್ಮೊಗ ರಮಾಕಾಂತನಲ್ಲಿರುತಿರೆ

ಕರೆಹೇಳಿ ಕಳುಹಿದ ಹರಿ ತನ್ನ ಪುರಕೆ

ಕ್ಲಿಪ್ತಕಾಲಕ್ಕೆ ಆಗೆ ಮನವರಿಕೆ 36

****