Showing posts with label ಸಾಸಿರ ಜಿಹ್ವೆಗಳುಳ್ಳ ಶೇಷನೆ rangavittala SAASIRA JIVHEGALULLA SHESHANE. Show all posts
Showing posts with label ಸಾಸಿರ ಜಿಹ್ವೆಗಳುಳ್ಳ ಶೇಷನೆ rangavittala SAASIRA JIVHEGALULLA SHESHANE. Show all posts

Wednesday 11 December 2019

ಸಾಸಿರ ಜಿಹ್ವೆಗಳುಳ್ಳ ಶೇಷನೆ ankita rangavittala SAASIRA JIVHEGALULLA SHESHANE


ಶ್ರೀ ಶ್ರೀಪಾದರಾಜರ ಕೃತಿ

 ರಾಗ ಸಾರಮತಿ                ಏಕತಾಳ 

ಸಾಸಿರ ಜಿಹ್ವೆಗಳುಳ್ಳ ಶೇಷನೆ ಕೊಂಡಾಡಬೇಕು । 
ವ್ಯಾಸಮುನಿರಾಯರ ಸಂನ್ಯಾಸದಿರವ ॥ ಪ ॥

ಆಸೆಯಿಂದ ತಮ್ಮುದರ ಪೋಷಣಕಾಗಿ ।
ಛಪ್ಪನ್ನ ದೇಶವ ತಿರುಗಿ ಸಂಚಾರ ಮಾಡುತ ॥
ಮೀಸಲ ಮಡಿ ಬಚ್ಚಿಟ್ಟು ಮಿಂಚು ಕೂಳನುಂಡು ದಿನ ।
ಮೋಸ ಮಾಡಿ ಕಳೆವ ಸನ್ಯಾಸಿಗಳು ಸರಿಯೆ ॥ 1 ॥

ಕೆರೆ ಬಾವಿ ಪುರ ಅಗ್ರಹಾರಂಗಳ ಮಾಡಿ ಭೂ - ।
ಸುರರೊಂದು ಲಕ್ಷ ಕುಟುಂಬಗಳ ॥
ಪೊರೆವ ವೈಭವ ಕೀರ್ತಿಯಿಂದಲಿ ವ್ಯಾಸ - ।
ರಾಯರ ಗುಣಗಣ ಗಾಂಭೀರ್ಯಾದಿಗಳ ॥ 2 ॥

ಹಗಲಿರುಳೆನ್ನದೆ ಆವಾಗ ಶ್ರೀಹರಿ ಪದಪದ್ಮ - ।
ಯುಗಳವನರ್ಚಿಸಿ ಭಕುತಿಯಿಂದ ॥
ರಘುಪತಿ ಭಜಕ ಬ್ರಹ್ಮಣ್ಯತೀರ್ಥರ ಕುವರ ।
ರಂಗವಿಠಲ ನನ್ನು ಬಿಡೆಬಿಡೆನು ಎಂಬ ॥ 3 ॥
**********



ಮಾಳವಶ್ರೀ ರಾಗ , ಏಕತಾಳ

ಸಾಸಿರ ಜಿಹ್ವೆಗಳುಳ್ಳ ಶೇಷನೆ ಕೊಂಡಾಡಬೇಕು
ವ್ಯಾಸಮುನಿರಾಯರ ಸಂನ್ಯಾಸದಿರವ ||ಪ||

ಆಸೆಯಿಂದ ತಮ್ಮುದರ ಪೋಷಣಕಾಗಿ ಛಪ್ಪನ್ನ
ದೇಶವ ತಿರುಗಿ ಸಂಚಾರ ಮಾಡುತ
ಮೀಸಲ ಮಡಿ ಬಚ್ಚಿಟ್ಟು ಮಿಂಚುಕೂಳನುಂಡು ದಿನ
ಮೋಸಮಾಡಿ ಕಳೆವ ಸಂನ್ಯಾಸಿಗಳ ಸರಿಯೆ ||೧||

ಕೆರೆಬಾವಿ ಪುರ ಅಗ್ರಹಾರಂಗಳ ಮಾಡಿ ಭೂ-
ಸುರರೊಂದು ಲಕ್ಷ ಕುಟುಂಬಗಳ
ಪೊರೆವ ವೈಭವ ಕೀರ್ತಿಯಿಂದಲಿ ವ್ಯಾಸರಾ-
ಯರ ಗುಣಗಣ ಗಾಂಭೀರ್ಯಾದಿಗಳ ||೨||

ಹಗಲಿರುಳೆನ್ನದೆ ಆವಾಗ ಶ್ರೀಹರಿ ಪದಪದ್ಮ-
ಯುಗಳವನರ್ಚಿಸಿ ಭಕುತಿಯಿಂದ
ರಘುಪತಿಭಜಕ ಬ್ರಹ್ಮಣ್ಯತೀರ್ಥರ ಕುವರ
ರಂಗವಿಠಲನನ್ನು ಬಿಡೆಬಿಡೆನು ಎಂಬ ||೩||
*******