Showing posts with label ಹರಿಕೃಷ್ಣಾಚ್ಯುತ ಗೋವಿಂದ ವಾಸುದೇವ purandara vittala. Show all posts
Showing posts with label ಹರಿಕೃಷ್ಣಾಚ್ಯುತ ಗೋವಿಂದ ವಾಸುದೇವ purandara vittala. Show all posts

Saturday 7 December 2019

ಹರಿಕೃಷ್ಣಾಚ್ಯುತ ಗೋವಿಂದ ವಾಸುದೇವ purandara vittala

ಪುರಂದರದಾಸರು
ಹರಿ ಕೃಷ್ಣಾಚ್ಯುತ ಗೋವಿಂದ ವಾಸುದೇವ |ನರಹರಿ ಎನಬಾರದೆ ? ಪ.

ಉದಯಕಾಲದಿ ಏಳುತ - ಸಿರಿಯರಸನ |ಒದಗಿ ಸೇವೆಯ ಮಾಡುತ ||ತದನಂತರ ಭೋಜನದಲಿ ಸ್ಮರಿಸುತ |ಮದಗಜಗಮನೆಯೊಳ್ ಸರಸÀವಾಡುತಲೊಮ್ಮೆ 1

ಸಿರಿ ಬಂದಡಸಿದಾಗ - ಮೆರೆಯದಿರು |ಹಿರಿ ಹಿರಿ ಹಿಗ್ಗದಿರು ||ನೆರೆ ಬಡತನಕೆ ಜರ್ಜರಿತನಾದೆ ನೀನು ?ಹರಿನಾಮಸ್ಮರಣೆಯ ಮರೆಯದಿರೆಲೊ ಮನುಜ 2

ದುಷ್ಟರುಪದ್ರದೊಳಾಗಲಿ - ರಣರಂಗದ |ದಿಟ್ಟ ಸಮರದೊಳಾಗಲಿ ||ಕಟ್ಟಾರಣ್ಯದೊಳು ಹುಲಿಯು ಬಾಧಿಸುತಿರೆ |ಸೃಷ್ಟಿಗೊಡೆಯ ಪುರಂದರವಿಠಲ ಕಾಯ್ವ 3
**********