Showing posts with label ಧರ್ಮ ದೊರಕುವದೇ ದುಷ್ಕರ್ಮಿ purandara vittala. Show all posts
Showing posts with label ಧರ್ಮ ದೊರಕುವದೇ ದುಷ್ಕರ್ಮಿ purandara vittala. Show all posts

Thursday 5 December 2019

ಧರ್ಮ ದೊರಕುವದೇ ದುಷ್ಕರ್ಮಿ purandara vittala

ಪುರಂದರದಾಸರು
ರಾಗ ಕಲ್ಯಾಣಿ. ಅಟ ತಾಳ

ಧರ್ಮ ದೊರಕೊಂಬುವದೆ ಸಜ್ಜನರಿಗೆ ದು-
ಷ್ಕರ್ಮ ಸತಿಯರುಳ್ಳ ಪುರುಷೋತ್ತಮರಿಗೆ ||ಪ||

ಧನವಿದ್ದರೇನಯ್ಯ ಮನವಿಲ್ಲದವರಿಗೆ
ಮನವಿದ್ದರೇನಯ್ಯ ಧನವಿಲ್ಲವು
ಧನುವೂ ಮನವೂ ಎರಡುಳ್ಳ ಪುರುಷರಿಗೆ
ಅನುಕೂಲವಾದಂಥ ಸತಿಯಿಲ್ಲವಯ್ಯ ||

ನಿನ್ನ ಕಣ್ಣ ಮುಂದೆ ಹೋಗುವ ಜೀವನು
ಇನ್ನು ನಿನಗೆ ನಾಚಿಕೆಯಿಲ್ಲವು
ಎನ್ನದು ತನ್ನದು ಎಂಬ ಭ್ರಾಂತಿಯ ಬಿಟ್ಟು
ಇನ್ನೀ ದೇಹವ ನಂಬಿ ಕೆಡಬೇಡ ಮನುಜ ||

ಈಗ ಮಾಡುವ ಧರ್ಮ ನಾಳೆಯೆಂದೆನಬೇಡ
ನೀವಾರು ನಾವಾರು ಎಲೆ ಮನುಜ
ಊಳಿಗದವರೆಂಬ ಭಟರು ಬಂದೆಳೆವಾಗ
ನಾಳೆ ಮಾಳ್ಪೆನೆನೆ ಬಿಡುವರೆ ಮನುಜ ||

ಎಂದೆಂದು ಈ ಪರಿ ಅಲ್ಲಲ್ಲಿ ಬಳಲಿಕೆ
ಮುಂದೆ ಕಾಣೆನು ಸಾಧನವನು
ತಂದೆ ಶ್ರೀ ಪುರಂದರ ವಿಟ್ಠಲರಾಯನ
ಒಂದು ಸಾರಿಯು ನೀ ನೆನೆ ಕಂಡ್ಯ ಮನುಜ ||
*********

ಧರ್ಮ ದೊರಕುವದೇ | 
ದುಷ್ಕರ್ಮಿಸತ್ತಿಯೊಳುಪುರುಷಾಧಮನಿಗೆ 
ಧರ್ಮ ದೊರಕುವದೆ ಪ.

ಧನವಿದ್ದರೇನಯ್ಯ ಮನವಿಲ್ಲವು | ಮನವಿದ್ದರೇನಯ್ಯ ಧನವಿಲ್ಲವು |ಧನವು ಮನವು ಯರಡುಂಡ್ಯಾದ ಮನುಜಗೆಅನುಕೂಲವಾದಂಥ ಸತಿಯಿಲ್ಲವಯ್ಯ 1

ಧರ್ಮಯಾಗ ಮಾಡವ ಧರ್ಮ ನಾಳೆಯಾದೆನಬ್ಯಾಡನಾಳ್ಯಾರೊ ನಾವ್ಯಾರೊ ಯಲೊ ಮಾನವಾ | ಊಳಿಗದವ ಬಂದುಬಾಬಾರೆಂದೆಳವಾಗ ಆಗ ಮಾಡುವೆನೆಂದರೆ ದೊರಕುವುದೇ ಧರ್ಮ2

ಬಾಡಿಗೆ ಮನೆಯಂತೆಯೊ ದೇಹವ ನಚ್ಚಿ ಮಾಡುವೆಪರಿಪರಿಯಾಗವನು | ಈ ಬೀಡಬಿಟ್ಟು ಆ ಬೀಡ ಹೋದ ಮೇಲೆಆಗ ಮಾಡುವೆನೆಂದರೆ ದೊರಕುವದೆ 3

ತನ್ನ ಕಣ್ಣ ಮುಂದೆ ಹೋಹ ಜೀವವ ಕಂಡುಇನ್ನು ನಾಚಿಕೆಯಿಲ್ಲವೆ ತನಗೆ | ನನ್ನದು ನನ್ನದುವಂದಾನೊಂದು ಪರಿಯಲ್ಲಿ ತೊಳಲಿ ಬಳಲಿ ಜೀವಮುಂದನ ಜನ್ಮಕೆ ಸಾಧನವು ತಂದೆ ಶ್ರೀಪುರಂದರವಿಠಲರಾಯನನ ಸಂದೇಹವಿಲ್ಲದೆ ನೆನೆ ಕಂಡ್ಯಾ ಮನುಜ 5
*******