Showing posts with label ಸಿಂಹವಾಹನನಾಗಿ ನಿಂತಳೆ ಪಾರ್ವತಿಯು madhwesha krishna SIMHAVAAHANANAAGI NINTALE PAARVATIYU. Show all posts
Showing posts with label ಸಿಂಹವಾಹನನಾಗಿ ನಿಂತಳೆ ಪಾರ್ವತಿಯು madhwesha krishna SIMHAVAAHANANAAGI NINTALE PAARVATIYU. Show all posts

Sunday 5 December 2021

ಸಿಂಹವಾಹನನಾಗಿ ನಿಂತಳೆ ಪಾರ್ವತಿಯು ankita madhwesha krishna SIMHAVAAHANANAAGI NINTALE PAARVATIYU



 ಬಾದಾಮಿಯ ಬನಶಂಕರಿ ದೇವಿ


ಸಿಂಹವಾಹನನಾಗಿ  ನಿಂತಳೆ ಪಾರ್ವತಿಯು

 ಬಾದಾಮಿ ಕ್ಷೇತ್ರದಿ  ಬನಶಂಕರಿಯಾಗಿ||ಪಲ್ಲ||


 ಬಾಗಲಕೋಟೆಯ ಬಳಿ ಬಾದಾಮಿ  ಕ್ಷೇತ್ರದಿ 

 ನೆಲಸಿದ ಳು ತಾನು ಬನಶಂಕರಿ  ಆಗಿ

 ಮಳೆ ಬರದೆ ಬೆಳೆ ಇರದೆ ಕ್ಷಾಮ ಬಂದಿರಲು

ಬೇಡ ಬಂದರು ಪುರದ ಜನರು||೧||


ಯಜ್ಞ ಯಾಗಾದಿಗಳು ನಿಂತು ಹೋಗಿರಲು

ಬದುಕು ಕಷ್ಟವಾಗಿ ಜನ ಬಳಲುತಲಿರಲು

ಜಲನೀಡಿ ಕಾಪಾಡೆಂದು   ದೇವಿಯ ಬೇಡಲು

ಪ್ರಸನ್ನಳದ ದೇವಿ ಮಳೆಯನ ಸುರಿಸೆ||೨||


 ಭೂದೇವಿಗೆ ನೀರಿನ ದಾಹ ತೀರಿಸೆ

 ತನುವಿನ ಶಾಖದಿ ತರಕಾರಿ ಸೃಷ್ಟಿಸಿ

ಶಾಕಾಂಬರಿಯೆಂದು ಪ್ರಸಿಧ್ಧ ಹೆಸರು ಪೊಂದಿ

ವಿಜೃಂಭಿಸಿದಳು ಬಾದಿಮಿಯಲ್ಲಿ||೩||


 ಹರಿದ್ರ ತೀರ್ಥವು, ತೈಲತೀರ್ಥವು

ಪದ್ಮತೀರ್ಥ ಮತ್ತು ಕ್ಷಮತೀರ್ಥ ವೆಂದು

ಅನೇಕ ತೀರ್ಥಗಳು ಸೃಷ್ಟಿಯಾಗಿ

ಹಚ್ಚ ಹಸುರಿಂದ ಕಂಗೊಳಿಸದವು||೪||


 ಬನ ಶಂಕರಿ ಜಾತ್ರೆ ಪುಷ್ಯ ಮಾಸದ ಪೌರ್ಣಮಿ 

ಅದ್ದೂರಿಯಿಂದ ಜರುಗುವುದು

 108 ಬಗೆ ತರಕಾರಿಗಳ ಖಾದ್ಯ ಮಾಡಿ

 ದೇವಿಗೆ ಅರ್ಪಿಸಿ ನಮಿಸುವರು||೫||


 ವಿರಾಜಮಾನಳಾಗಿರುವ ಪಾರ್ವತಿ ದೇವಿಗೆ

ಶರಣು ಹೋದರೆ ಕಷ್ಟಗಳು ತೀರುವವು

 ಕರ್ನಾಟಕ  ಮಹರಾಷ್ಟ್ರ ಮುಂತಾದ ಕಡೆಯಿಂದ 

ಭಕ್ತಿಯಿಂದ ಜನರು ಬಂದು  ಸೇರುವರು ||೬||


  ಸುಂದರವಾದ  ಕೋಟೆ, ತುಂಬಿ ಹರಿವ ಕಲ್ಯಾಣಿ 

 ಚಾಳುಕ್ಯರ ಕಾಲದ ಶಿಲ್ಪ ಕಲಾಕೃತಿಗಳು

ತೆಂಗು ಬಾಳೆಯದೆಲೆ ವೀಳೆದೆಲೆಯ ತೋಟಗಳು

ಮಧ್ವೇಶಕೃಷ್ಣ ನ ದಯದಿ ಕಂಗೊಳಿಸುವವು||೭||

*******