Showing posts with label ಸ್ಮರಿಸಿ ಸುಖಿಸೊ ನರನೆ ಗುರುರಾಯರನನುದಿನ shyamasundara. Show all posts
Showing posts with label ಸ್ಮರಿಸಿ ಸುಖಿಸೊ ನರನೆ ಗುರುರಾಯರನನುದಿನ shyamasundara. Show all posts

Wednesday 1 September 2021

ಸ್ಮರಿಸಿ ಸುಖಿಸೊ ನರನೆ ಗುರುರಾಯರನನುದಿನ ankita shyamasundara

 ..

ಸ್ಮರಿಸಿ ಸುಖಿಸೊ ನರನೆ - ಗುರುರಾಯರನನುದಿನ ಪ


ಸ್ಮರಿಸಿ ಸುಖಿಸೆಲೊ ನರನೆ ನಂಬಿದೆ

ಶರಣು ಜನರಘÀ ತರಿದು ಕರುಣದಿ

ಪೊರೆವ ಗುರು ಸಹ್ಲಾದ ರಾಜರ

ಚರಣ ಸರಸಿಜ ಹರುಷದಿಂದಲಿ ಅ.ಪ


ನಳಿನ ಬಾಂಧವ ಕುಲದಿ ಅವತಾರ ಮಾಡಿದೆ

ಇಳಿಜರಮಣನಾಜ್ಞದಿ ಕಲಿಯುಗದಿ ದ್ವಿಜರನು

ಸಲಹಲೋಸುಗ ಜಗದಿ ಜನಿಸಿ ಗುರುಗಳ ||

ವಲಿಮೆಯನು ತಾಪಡೆದು ಕೊರಳಲಿ

ತುಲಸಿ ಮಾಲೆಯ ಧರಿಸಿ ಹರಿಯನು

ವಲಿಸಿ ಥಳ ಥಳ ಪೊಳೆವವ ಸ್ತಂಬದಿ

ಕುಳಿತ ಶ್ರೀರಂಗವಲಿದ ದಾಸರ 1


ಮಾನಿನಿಯಳ ಮಾನರಕ್ಷಿಸಿದೆ ಶ್ರೀ ಪವ

ಮಾನನಯ್ಯನ ಕರುಣವನು ಪಡೆದು ಸ್ತುತಿಸಿದಿ

ದೀನರಿಗನುದಿನ ಮಾಣದಲೆ ಸುಜ್ಞಾನ

ವನು ಪಾಲಿಸಿ ಗುರು ಭವ

ಕಾನನಕೆ ಕೃಶಾನುವೆನಿಸಿದ

ಮಾನವಿ ಪುರ ನಿಲಯರನು

ಅನುಮಾನವಿಲ್ಲದೆ ಮಾನಸದಿನೀ 2


ಶ್ರೀಮಧ್ವಾಚಾರ್ಯ ಸುಮತ ಶರಧಿಗೆ ಹಿಮ

ಧಾಮನೆನಿಸಿ ನಿರುತ ಸೇವಿಪರಿಗೆ

ಕಾಮಿತಾರ್ಥಗಳಿಗೆ ತ್ವರಿತ ನೀಡಿ ಶಿರಿವರ

ಶಾಮಸುಂದರ ಸ್ವಾಮಿ ಪರನೆಂಬೊ |

ಪ್ರೇಮದಿಂದಲಿ ಹರಿಕಥಾಮೃತ

ಈ ಮಹಾಸುಗ್ರಂಥ ರಚಿಸಿದ

ಹೇಮ ಕಶ್ಯಪ ತನಯರನುಜರ 3

***