Showing posts with label ಸತ್ಯಧ್ಯಾನರ ಪಾದ ಸ್ಮರಿಸುವ ಮನುಜಗೆ bhupati vittala satyadhyana teertha stutih. Show all posts
Showing posts with label ಸತ್ಯಧ್ಯಾನರ ಪಾದ ಸ್ಮರಿಸುವ ಮನುಜಗೆ bhupati vittala satyadhyana teertha stutih. Show all posts

Wednesday 1 September 2021

ಸತ್ಯಧ್ಯಾನರ ಪಾದ ಸ್ಮರಿಸುವ ಮನುಜಗೆ ankita bhupati vittala satyadhyana teertha stutih

by ಶ್ರೀ ಭೂಪತಿ ವಿಟಲ ದಾಸರು


ಸತ್ಯಧ್ಯಾನರ ಪಾದ ಸ್ಮರಿಸುವ ಮನುಜಗೆ

ಸತ್ಯವಾದ ಜ್ಞಾನ ಹುಟ್ಟುವುದು | ಪ |

ಶಕ್ತಿ ಭಕ್ತಿ ಯುಕ್ತಿ ಸೌಭಾಗ್ಯ ಸಂಪತ್ತು

ಧೈರ್ಯ ಔದಾರ್ಯ ಉತ್ಸಾಹ ಮೂರುತಿಯಾದ  | ಅ.ಪ |

ಹರಿಯೆ ಸರ್ವೋತ್ತಮ ಸರ್ವಗುಣ ಪರಿಪೂರ್ಣ

ಸರ್ವದೋಷ ವರ್ಜಿತನೆಂದು

ವರ ಮಧ್ವಮತವೆ ವೇದ್ಯವೆಂದು

ಧರೆಯೊಳು ಜಯಭೇರಿ ಹೊಡಿಸಿದ ಧೀರಾ | ೧ |

ಪರವಾದಿ ವಾಕ್ಯಾರ್ಥ ಪರರ ಕೊರಳಿಗೆ ಕಟ್ಟಿ

ದುರ್ವಾದಿಗಳ ಸದ್ದು ಆದಗಿಸುತಾ

ಸರ್ವ ಸಾಮಾನ್ಯರಿಗೆ ಸುಲಭ ತಿಳಿಯುವಂತ

ಪ್ರಶ್ನಾರ್ಹ ರೂಪಗಳ ಗ್ರಂಥ ರಹಿಸಿದಂಥಾ | ೨ |

ದಾನದಲಿ ಕರ್ಣ ಜ್ಞಾನದಿ ಶುಕಮುನಿ

ಮೌನಿ ಕುಲಕೆ ಸನ್ಮಾನ್ಯರಾಗಿ

ಧರ್ಮ ಸಾಮ್ರಾಜ್ಯಕೆ ಸಾರ್ವಭೌಮನಾದ

ಶ್ರೀನಿಧಿ ಭೂಪತಿವಿಠಲನ ದಾಸ |

***