Showing posts with label ಶ್ರೀಶಾ ಉದ್ಧರಿಸುವ ಅಶೇಷ ಪಾಲಕ ಕರುಣಾ ಸಮುದ್ರನೇ tandeshreepati vittala SHREESHA UDDHARISUVA ASHESHA PAALAKA KARUNA SAMUDRANE. Show all posts
Showing posts with label ಶ್ರೀಶಾ ಉದ್ಧರಿಸುವ ಅಶೇಷ ಪಾಲಕ ಕರುಣಾ ಸಮುದ್ರನೇ tandeshreepati vittala SHREESHA UDDHARISUVA ASHESHA PAALAKA KARUNA SAMUDRANE. Show all posts

Tuesday 5 October 2021

ಶ್ರೀಶಾ ಉದ್ಧರಿಸುವ ಅಶೇಷ ಪಾಲಕ ಕರುಣಾ ಸಮುದ್ರನೇ ankita tandeshreepati vittala SHREESHA UDDHARISUVA ASHESHA PAALAKA KARUNA SAMUDRANE


ಶ್ರೀಶಾ ಉದ್ಧರಿಸುವ ಅಶೇಷ ಪಾಲಕ । ಕರು ।

ಣಾ ಸಮುದ್ರನೇ ಶ್ರೀನಿವಾಸಾ ಕೃಷ್ಣಾ ।


ದೋಷ ದೂರನೇ ನಿಜ ದಾಸರ ಸನ್ಮನ ।

ತೋಷಕ ಕಲಿ ಕೃತ ದೋಷ ।

ನಾಶಕ ಸದ್ಗುಣ ಸುವನಧೀ ।।


ವೀಶಗಮನ ಫಣೀಶಶಾಯಿ । ಸು ।

ರೇಶ ಭಕುತರ ಪೋಷಕನೆ । ತ ।

ದ್ದಾಸ ಜನ ಸಹವಾಸ ಕೊಡು । ಮಹಿ ।

ದಾಸ ಈ ಭವ ಕ್ಲೇಶ ಕಳೆದು ।। ಪಲ್ಲವಿ ।।


ಕಮಲಾ ರಮಣನೇ ಹೃತ್ಕಮಲಸ್ಥ ತವ ಪಾದ ।

ಕಮಲ ನಂಬಿದೆ ಯೆನ್ನ ಶಮಲಾ ಕಳೆದೂ ।

ಕಮಲಜ ಪಿತ ನಿನ್ನ ವಿಮಲ ಗುಣವನಿತ್ಯಾ ।

ದಮದಿಂದ ಸಂಯುಕ್ತವಾದ । 

ಶಮದಿಂದ ಗ್ರಂಥೋಕ್ತ ದಿವ್ಯ ಕ್ರಮದಿಂದಾ ।

ಮಾನಸದಿ ಧ್ಯೇನಿಪ ವಿಪುಲ ಸಂಪದಾ ।

ಯನಗೆ ಕೊಡು ಯಂದು ಪ್ರಾರ್ಥಿಸುವೆ ನಿನಗೆ ।

ನಮಿಪ ಜನರಿಗೆ ಬದಿಗನ್ಯೆಂತೆಂದೂ ಈ ಪರಿಯ ತಿಳಿದು ।

ನಮಿಸುವೆನು ನೀಯನಗೆ ನಿಜ ಬಂಧು ।

ಆನಂದ ಸಿಂಧು ಸುಮನಸರ ಹೃತ್ಕುಮುದವೆನಿಸಿ ।

ಅಮಿತ ಕ್ರಿಯವನು ಮಾಡಿಸುವಿ ಸಂಯಮಿ ಜನ ವರ ।

ಅಮರ ರಿಪುಕುಲ ದಮನಯನಗೆ ಸುಮನವಿತ್ತು ।। ಚರಣ ।।


ಸಾರ ಹೃದಯರ ಉದ್ಧಾರ ಮಾಡುವಿ ನೀ । ಉ ।

ದಾರ ಯಾದವ ಕುಲ ವೀರಾ ಧೀರಾ ।

ಚಾರು ಸನ್ಮಹಿಮಾನೇ ಮಾರ ಜನಕನೇ ಸೃಷ್ಟಿ ಕಾರಣ । ಸಂ ।

ಸಾರ ವನಧಿಗೆ ತಾರಣ । 

ಕರಿರಾಜ ರಿಪು ನಿವಾರಣಾ ನಾ ನಿನ್ನ ಚರಣಕೆ ।

ಸಾರಿದೆನು ಮುರವೈರಿ ನರಹರಿಯೇ ಉದ್ಧವ ।

ವರದ ಸುಕುಮಾರ ಅನುಪಮ ಅಮಿತ ಮಹ ।

ಸಿರಿಯೇ ಇಂದ್ರಾತ್ಮಜಗೆ ನೀ ಸಾರಥಿ ವಿಬುಧೇಶರಿಗೆ ।

ಧೊರಿಯೇ ರಜನೀಶ ಕುಲಜನೆ ।

ವಾರಿಚರ ಕಿಟ ಮನುಜ ಮೃಗ ಬಲಿ ।

ವೈರಿ ಸ್ವರ್ಗದ ವನ್ಹಿಗನೇ ನಿಜ ।

ವೀರ ಪಾರ್ಥ ಪಸುಗತ ಕಲ್ಕಿಯೇ ।

ಸಾರ ತತ್ತ್ವ ವಿಚಾರಮತಿ ಕೊಡು ।। ಚರಣ ।\


ಮಂದಜಾನಸ ವಾಯು ನಂದಿವಾಹನ । ವಿಹ ।

ಗೇಂದ್ರ ಪ್ರಮುಖ ಸುರವೃಂದ ವಂದ್ಯಾ ।

ಇಂದಿರೆ ರಮಣನೇ ಮಂದಾಕಿನಿಯ ಪಿತ ।

ಯಿಂದೆನ್ನ ಬಿನ್ನಪವ ಕೇಳಿ ।

ಮಂದನ್ನ ದುಷ್ಕಾರ್ಯ ಕಾರಣ ।

ನಿಂದೆನ್ನ ದೂರಿ ಕೃತನ್ನಾ ।

ಚಂದದಿಂದಲೀ ಮಾಡುವನೆ ನೀನೆ ನಿನ್ಹೊರತು ಇನ್ನು ।

ಪೊಂದಿದವರನು ಪೊರೆವವರನಾ ಕಾಣೆ ಅಜಾಮಿಳ ಪ್ರಮುಖ ।

ರಾನಂದ ಬಡಿಸಿದ ಪರಮ ಪ್ರಭು ನೀನೆ । ಅರ ।

ವಿಂದ ನೇತ್ರನೇ ಹಿಂದೆ ಮುಂದೆ ಇಂದು ನೀ ಗತಿಯೆಂದು ।

ನಂಬಿದೆ ಕರವ ಪಿಡಿಯೋ ತಂದೆ ಶ್ರೀಪತಿ ವಿಠ್ಠಲಈ ಭವ ।

ಸಿಂಧುವಿನ ಗತಿಯೆಂದು ಶೀಘ್ರದಿ ।। ಚರಣ ।।

***

 ರಾಗ : ಮೋಹನ  ತಾಳ : ಅಟ್ಟ (raga, taala may differ in audio)