Tuesday 5 October 2021

ಶ್ರೀಶಾ ಉದ್ಧರಿಸುವ ಅಶೇಷ ಪಾಲಕ ಕರುಣಾ ಸಮುದ್ರನೇ ankita tandeshreepati vittala SHREESHA UDDHARISUVA ASHESHA PAALAKA KARUNA SAMUDRANE


ಶ್ರೀಶಾ ಉದ್ಧರಿಸುವ ಅಶೇಷ ಪಾಲಕ । ಕರು ।

ಣಾ ಸಮುದ್ರನೇ ಶ್ರೀನಿವಾಸಾ ಕೃಷ್ಣಾ ।


ದೋಷ ದೂರನೇ ನಿಜ ದಾಸರ ಸನ್ಮನ ।

ತೋಷಕ ಕಲಿ ಕೃತ ದೋಷ ।

ನಾಶಕ ಸದ್ಗುಣ ಸುವನಧೀ ।।


ವೀಶಗಮನ ಫಣೀಶಶಾಯಿ । ಸು ।

ರೇಶ ಭಕುತರ ಪೋಷಕನೆ । ತ ।

ದ್ದಾಸ ಜನ ಸಹವಾಸ ಕೊಡು । ಮಹಿ ।

ದಾಸ ಈ ಭವ ಕ್ಲೇಶ ಕಳೆದು ।। ಪಲ್ಲವಿ ।।


ಕಮಲಾ ರಮಣನೇ ಹೃತ್ಕಮಲಸ್ಥ ತವ ಪಾದ ।

ಕಮಲ ನಂಬಿದೆ ಯೆನ್ನ ಶಮಲಾ ಕಳೆದೂ ।

ಕಮಲಜ ಪಿತ ನಿನ್ನ ವಿಮಲ ಗುಣವನಿತ್ಯಾ ।

ದಮದಿಂದ ಸಂಯುಕ್ತವಾದ । 

ಶಮದಿಂದ ಗ್ರಂಥೋಕ್ತ ದಿವ್ಯ ಕ್ರಮದಿಂದಾ ।

ಮಾನಸದಿ ಧ್ಯೇನಿಪ ವಿಪುಲ ಸಂಪದಾ ।

ಯನಗೆ ಕೊಡು ಯಂದು ಪ್ರಾರ್ಥಿಸುವೆ ನಿನಗೆ ।

ನಮಿಪ ಜನರಿಗೆ ಬದಿಗನ್ಯೆಂತೆಂದೂ ಈ ಪರಿಯ ತಿಳಿದು ।

ನಮಿಸುವೆನು ನೀಯನಗೆ ನಿಜ ಬಂಧು ।

ಆನಂದ ಸಿಂಧು ಸುಮನಸರ ಹೃತ್ಕುಮುದವೆನಿಸಿ ।

ಅಮಿತ ಕ್ರಿಯವನು ಮಾಡಿಸುವಿ ಸಂಯಮಿ ಜನ ವರ ।

ಅಮರ ರಿಪುಕುಲ ದಮನಯನಗೆ ಸುಮನವಿತ್ತು ।। ಚರಣ ।।


ಸಾರ ಹೃದಯರ ಉದ್ಧಾರ ಮಾಡುವಿ ನೀ । ಉ ।

ದಾರ ಯಾದವ ಕುಲ ವೀರಾ ಧೀರಾ ।

ಚಾರು ಸನ್ಮಹಿಮಾನೇ ಮಾರ ಜನಕನೇ ಸೃಷ್ಟಿ ಕಾರಣ । ಸಂ ।

ಸಾರ ವನಧಿಗೆ ತಾರಣ । 

ಕರಿರಾಜ ರಿಪು ನಿವಾರಣಾ ನಾ ನಿನ್ನ ಚರಣಕೆ ।

ಸಾರಿದೆನು ಮುರವೈರಿ ನರಹರಿಯೇ ಉದ್ಧವ ।

ವರದ ಸುಕುಮಾರ ಅನುಪಮ ಅಮಿತ ಮಹ ।

ಸಿರಿಯೇ ಇಂದ್ರಾತ್ಮಜಗೆ ನೀ ಸಾರಥಿ ವಿಬುಧೇಶರಿಗೆ ।

ಧೊರಿಯೇ ರಜನೀಶ ಕುಲಜನೆ ।

ವಾರಿಚರ ಕಿಟ ಮನುಜ ಮೃಗ ಬಲಿ ।

ವೈರಿ ಸ್ವರ್ಗದ ವನ್ಹಿಗನೇ ನಿಜ ।

ವೀರ ಪಾರ್ಥ ಪಸುಗತ ಕಲ್ಕಿಯೇ ।

ಸಾರ ತತ್ತ್ವ ವಿಚಾರಮತಿ ಕೊಡು ।। ಚರಣ ।\


ಮಂದಜಾನಸ ವಾಯು ನಂದಿವಾಹನ । ವಿಹ ।

ಗೇಂದ್ರ ಪ್ರಮುಖ ಸುರವೃಂದ ವಂದ್ಯಾ ।

ಇಂದಿರೆ ರಮಣನೇ ಮಂದಾಕಿನಿಯ ಪಿತ ।

ಯಿಂದೆನ್ನ ಬಿನ್ನಪವ ಕೇಳಿ ।

ಮಂದನ್ನ ದುಷ್ಕಾರ್ಯ ಕಾರಣ ।

ನಿಂದೆನ್ನ ದೂರಿ ಕೃತನ್ನಾ ।

ಚಂದದಿಂದಲೀ ಮಾಡುವನೆ ನೀನೆ ನಿನ್ಹೊರತು ಇನ್ನು ।

ಪೊಂದಿದವರನು ಪೊರೆವವರನಾ ಕಾಣೆ ಅಜಾಮಿಳ ಪ್ರಮುಖ ।

ರಾನಂದ ಬಡಿಸಿದ ಪರಮ ಪ್ರಭು ನೀನೆ । ಅರ ।

ವಿಂದ ನೇತ್ರನೇ ಹಿಂದೆ ಮುಂದೆ ಇಂದು ನೀ ಗತಿಯೆಂದು ।

ನಂಬಿದೆ ಕರವ ಪಿಡಿಯೋ ತಂದೆ ಶ್ರೀಪತಿ ವಿಠ್ಠಲಈ ಭವ ।

ಸಿಂಧುವಿನ ಗತಿಯೆಂದು ಶೀಘ್ರದಿ ।। ಚರಣ ।।

***

 ರಾಗ : ಮೋಹನ  ತಾಳ : ಅಟ್ಟ (raga, taala may differ in audio)



No comments:

Post a Comment