Showing posts with label ಆರಿಗೆ ಆರಾಗರಯ್ಯ-ಶ್ರೀ ವಾಸುದೇವ ನೀನೊಬ್ಬನಲ್ಲದೇ uragadrivasa vittala. Show all posts
Showing posts with label ಆರಿಗೆ ಆರಾಗರಯ್ಯ-ಶ್ರೀ ವಾಸುದೇವ ನೀನೊಬ್ಬನಲ್ಲದೇ uragadrivasa vittala. Show all posts

Monday 2 August 2021

ಆರಿಗೆ ಆರಾಗರಯ್ಯ-ಶ್ರೀ ವಾಸುದೇವ ನೀನೊಬ್ಬನಲ್ಲದೇ ankita uragadrivasa vittala

ಆರಿಗೆ ಆರಾಗರಯ್ಯ-ಶ್ರೀ ವಾಸುದೇವ ನೀನೊಬ್ಬನಲ್ಲದೇ ಪ


ಮಾತೆ ಇದ್ದರು ದೃಢವ್ರತನಾದ ಧ್ರುವಗೆ ಶ್ರೀ-

ಪತಿ ನೀನೆ ಗತಿಯಾದೆ ಆರಾದರಯ್ಯ

ಪಿತನು ಹಿತನೆನ್ನೆ ಪ್ರಹ್ಲಾದಗಾದಂಥ

ಗತಿ ನೋಡಿ ನರಹರಿ ಗತಿ ಪ್ರದ ನೀನಾದೆ 1

ಭ್ರಾತರಾವಣನ ಸಹಜಾತ ವಿಭೀಷಣನ ನಿ-

ರ್ಭೀತನ ಮಾಡಿ ಕಾಯ್ದವÀರಾರಯ್ಯ

ಪತಿಗಳೈವರು ಸತಿಯಾ ಅತಿ ಖೇದ ಹರಿಸಿದರೆ

ಸಂತೈಸಿದಾನಾಥ ರಕ್ಷಕ ಹರಿಯಲ್ಲವೇ 2

ಬಂಧುಗಳಿರೆ ಗಜರಾಜನ ನಕ್ರವು

ಬಂದು ಬಾಧಿಸೆ ಬಂಧ ಬಂದು ಹರಿಸಿದರ್ಯಾರೋ

ಅಂದು ಇಂದು ಎಂದನಿಮಿತ್ತ ಬಂಧು ನೀ

ಬಂಧುವಲ್ಲದೆ ಎಲ್ಲರು ಬಂಧಕರಯ್ಯಾ3

ಸತಿಯಿಂದ ದಶರಥಪತಿಯು ಸುತನನಟ್ಟಿ

ಗತಿಕಾಣದೆ ತಾನೇನಾದನೋ - ಸತತ ಕುರುಪತಿ

ಅತಿಹಿತನಾದನೆ ಭೀಷ್ಮಗೆ

ಪತಿತಪಾವನ ನೀ ಅಂತ್ಯಕಾಲಕ್ಕಾದೆ 4

ಸುತರು ರಕ್ಷಕರೇನೊ - ಶತಸೂನುಗಳಿಗೆ ಪಿತ

ಧೃತರಾಷ್ಟ್ರಗೆ ಕೊನೆಗಾರಾದರಯ್ಯ

ಇತರರ ಪಾಡೇನೊ ಶ್ರೀ ವೇಂಕಟೇಶನೆ

ಗತಿ ಎಮಗೆ ಉರಗಾದ್ರಿವಾಸ ವಿಠಲನಲ್ಲವೆ 5

****